ಗ್ಯಾಸ್ಟ್ರಿಕ್ ಟ್ರಬಲ್ ಗೆ ಬೇಸತ್ತ ವ್ಯಕ್ತಿ ನೇಣಿಗೆ ಶರಣು…
- TV10 Kannada Exclusive
- November 11, 2022
- No Comment
- 97
ಗ್ಯಾಸ್ಟ್ರಿಕ್ ಟ್ರಬಲ್ ಗೆ ಬೇಸತ್ತ ವ್ಯಕ್ತಿ ನೇಣಿಗೆ ಶರಣು…
ಮೈಸೂರು,ನ11,Tv10 ಕನ್ನಡ
ಗ್ಯಾಸ್ಟ್ರಿಕ್ ನಿಂದ ಬಳಲುತ್ತಿದ್ದ ವ್ಯಕ್ತಿ ಬೇಸತ್ತು ನೇಣಿಗೆ ಶರಣಾದ ಘಟನೆ ಉದಯಗಿರಿ ಕ್ಯಾತಮಾರನ ಹಳ್ಳಿಯಲ್ಲಿ ನಡೆದಿದೆ.ಸುನಿಲ್ (24) ಮೃತ ದುರ್ದೈವಿ.ಮೂರು ವರ್ಷಗಳ ಹಿಂದೆ ಕ್ಯಾತಮಾರನಹಳ್ಳಿ ನಿವಾಸಿ ಕಾವ್ಯ ಎಂಬಾಕೆಯನ್ನ ಪ್ರೀತಿಸಿ ಮದುವೆಯಾಗಿದ್ದ ಸುನಿಲ್.ಗ್ಯಾಸ್ಟ್ರಿಕ್ ನಿಂದ ಬಳಲುತ್ತಿದ್ದ ಸುನಿಲ್ ಹಲವು ದಿನಗಳಿಂದ ಆಹಾರವನ್ನೂ ತ್ಯಜಿಸಿದ್ದ.ಮಗುವಿನ ತಂದೆಯಾಗಿದ್ದ ಸುನಿಲ್ ಸಾಕಷ್ಟು ಚಿಕಿತ್ಸೆ ಪಡೆದಿದ್ದರೂ ಗುಣಮುಖನಾಗಿರಲಿಲ್ಲ.ನಿನ್ನೆ ಪತ್ನಿ ಹಾಗೂ ಮಗು ತವರು ಮನೆಗೆ ತೆರಳಿದ್ದ ಸಂಧರ್ಭದಲ್ಲಿ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…