ಮೆಡಿಕಲ್ ಸೀಟ್ ಕೊಡಿಸುವುದಾಗಿ ನಂಬಿಸಿ ವಂಚನೆ..ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಮಂಜೇಗೌಡ ವಿರುದ್ದ FIR…
- Crime
- November 25, 2022
- No Comment
- 100
ಮೆಡಿಕಲ್ ಸೀಟ್ ಕೊಡಿಸುವುದಾಗಿ ನಂಬಿಸಿ ವಂಚನೆ..ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಮಂಜೇಗೌಡ ವಿರುದ್ದ FIR…
ಮೈಸೂರು,ನ25, Tv10 ಕನ್ನಡ
ಕಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ 35 ಲಕ್ಷ ರೂ. ವಂಚನೆ ಮಾಡಿದ ಆರೋಪದ ಹಿನ್ನಲೆ
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕನ ಮೇಲೆ ಎಫ್ಐಆರ್ ದಾಖಲಾಗಿದೆ.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಂ.ಬಿ. ಮಂಜೇಗೌಡ.
ಹಾಗೂ ಪತ್ನಿ ಮೀನಾ ವಿರುದ್ಧ ಬೆಂಗಳೂರಿನ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಪರಿಚಿತ ಗುತ್ತಿಗೆದಾರ ಕೆ.ಆರ್. ಶ್ರೀನಿವಾಸ್ ಎಂಬುವರಿಂದ 35 ಲಕ್ಷ ರೂ. ಪಡೆದಿದ್ದರು.
ತಮ್ಮಸಂಬಂಧಿಕರ ಮಗನಿಗೆ ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಕಾಲೇಜಿನಲ್ಲಿ ಸೀಟಿಗಾಗಿ ಮಂಜೇಗೌಡ ಬಳಿ ಶ್ರೀನಿವಾಸ್ ಮನವಿ ಮಾಡಿದ್ದರು.
ಕಿಮ್ಸ್ ಅಧ್ಯಕ್ಷರು ನನಗೆ ತುಂಬಾ ಆಪ್ತರೆಂದು ಹೇಳಿ ಮಂಜೇಗೌಡ 35 ಲಕ್ಷ ಪಡೆದಿದ್ದರು.
ಕಳೆದ ಮಾರ್ಚ್ 7 ರಂದು ಶಾಂಗ್ರಿಲಾ ಹೋಟೆಲ್ ನಲ್ಲಿ ಶ್ರೀನಿವಾಸ್ ರಿಂದ 35 ರೂ. ನಗದು ಪಡೆದಿದ್ದರು.
ಹಣ ಪಡೆದ ಮೇಲೆ ಸೀಟು ಕೊಡಿಸದೆ, ಹಣವನ್ನು ಹಿಂತಿರುಗಿಸದೆ ವಂಚಿಸಿದ್ದಾರೆ. ಮಂಜೇಗೌಡ
ಮೈಸೂರಿನ ಜೆ.ಪಿ. ನಗರದ ಮನೆಗೆ ಹೋಗಿದ್ದ ಶ್ರೀನಿವಾಸ್
ಯಾವ ಹಣವನ್ನು ಕೊಡಬೇಕಾಗಿಲ್ಲವೆಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆಂದು ಶ್ರೀನಿವಾಸ್ ದೂರಿನಲ್ಲಿ ದಾಖಲಿಸಿದ್ದಾರೆ.
ಶ್ರೀನಿವಾಸ್ ನೀಡಿದ ದೂರು ದಾಖಲಿಸಿಕೊಂಡ ಹೈ ಗ್ರೌಂಡ್ಸ್ ಪೊಲೀಸರು FIR ದಾಖಲಿಸಿದ್ದಾರೆ…