ಸೀಮೆಸುಣ್ಣ ಮುರಿದ ವಿಧ್ಯಾರ್ಥಿಗೆ ಇದೆಂತಹ ಶಿಕ್ಷೆ…ಹೆಚ್.ಡಿ.ಕೋಟೆಯಲ್ಲೊಬ್ಬ ಕ್ರೂರಿ ಶಿಕ್ಷಕ…
- CrimeMysore
- November 26, 2022
- No Comment
- 126
ಸೀಮೆಸುಣ್ಣ ಮುರಿದ ವಿಧ್ಯಾರ್ಥಿಗೆ ಇದೆಂತಹ ಶಿಕ್ಷೆ…ಹೆಚ್.ಡಿ.ಕೋಟೆಯಲ್ಲೊಬ್ಬ ಕ್ರೂರಿ ಶಿಕ್ಷಕ…
ಎಚ್.ಡಿ.ಕೋಟೆ,ನ26,Tv10 ಕನ್ನಡ
ಸೀಮೆಸುಣ್ಣ ಮುರಿದುಹಾಕಿ ಆಟವಾಡುತ್ತಿದ್ದ ವಿಧ್ಯಾರ್ಥಿಗೆ ಸ್ಟೀಲ್ ಸ್ಕೇಲ್ ನಿಂದ ಹೊಡೆದ ಶಿಕ್ಷಕ ಗಾಯಗೊಳಿಸಿರುವ ಘಟನೆ ಹೆಚ್.ಡು.ಕೋಟೆಯಲ್ಲಿ ಬೆಳಕಿಗೆ ಬಂದಿದೆ.ಶಿಕ್ಷಕನ ವಿರುದ್ದ ಪೋಷಕರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಷ ವ್ಯಕ್ತಪಡಿಸಿದ್ದಾರೆ.ಶಿಕ್ಷಕನ ವಿರುದ್ದ ಕ್ರಮ ಕೈಗೊಳ್ಳುವಂತೆ ಪೋಷಕರು ಆಗ್ರಹಿಸಿದ್ದಾರೆ.
ಸಧ್ಯ ವಿದ್ಯಾರ್ಥಿಯ ಬಲಭಾಗದ ಅಂಗೈ ಕತ್ತರಿಸಿ ಹೋಗಿ ಸೀಳಿದ ಗಾಯಕ್ಕೆ 6 ಸ್ಟಿಚ್ ಹಾಕಲಾಗಿದೆ.
ಎಚ್.ಡಿ.ಕೋಟೆ ಪಟ್ಟಣದ ಶಾಂತಿಪುರ ಸಮೀಪದ ಟ್ರೂಶಫರ್ಡ್ ಪಬ್ಲಿಕ್ ಶಾಲೆಯಲ್ಲಿ ಅಮಾನವೀಯ ಘಟನೆ ನಡೆದಿದೆ.8 ನೇ ತರಗತಿ ವಿಧ್ಯಾರ್ಥಿ ಅಮೃತ್ ಗಾಯಗೊಂಡವನು.
ಬಿಡುವಿನ ವೇಳೆಯಲ್ಲಿ ಶಾಲಾ ಕೊಠಡಿಯಲ್ಲಿ ಸೀಮೆಸುಣ್ಣ ಮುರಿದು ಆಟವಾಡುತ್ತಿದ್ದ.ಕ್ಷುಲ್ಲಕ ಕಾರಣಕ್ಕೆ ಶಿಕ್ಷಕ ಸಿದ್ದರಾಜು ತೀವ್ರವಾಗಿ ಥಳಿಸಿದ್ದಾನೆ.ನಂತರ
ಪೋಷಕರಿಗೆ ಕರೆ ಮಾಡಿ ಅಮೃತ್ ಕಟ್ಟರ್ ನಿಂದ ಕೈ ಕಟ್ ಮಾಡಿಕೊಂಡಿರುವುದಾಗಿ ಸುಳ್ಳು ಮಾಹಿತಿ ನೀಡಿದ್ದಾನೆ. ಸೌಜನ್ಯಕ್ಕೂ ಆಡಳಿತ ಮಂಡಳಿ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿ ಆರೋಗ್ಯ ವಿಚಾರಿಸಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.
ಶಾಲೆಗೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಉದಯ್ ಕುಮಾರ್ ಮಾಹಿತಿ ಪಡೆದುಕೊಂಡು ತಪ್ಪಿತಸ್ಥ ಶಿಕ್ಷಕ ಸಿದ್ದರಾಜು ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ…