ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಗೆ ನುಗ್ಗುವ ಯತ್ನ…ನೂರಾರು ಹಿಂದೂ ಕಾರ್ಯಕರ್ತರಿಂದ ಪ್ರತಿಭಟನೆ…
- Temples
- December 10, 2022
- No Comment
- 79
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಗೆ ನುಗ್ಗುವ ಯತ್ನ…ನೂರಾರು ಹಿಂದೂ ಕಾರ್ಯಕರ್ತರಿಂದ ಪ್ರತಿಭಟನೆ…
ಶ್ರೀರಂಗಪಟ್ಟಣ,ಡಿ10,Tv10 ಕನ್ನಡ
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಗೆ ನೂರಾರು ಹಿಂದೂ ಕಾರ್ಯಕರ್ತರು ನುಗ್ಗಲು ಯತ್ನಿಸಿದ್ದಾರೆ.ಪೊಲೀಸರು ಯತ್ನ ವಿಫಲಗೊಳಿಸಿದ್ದಾರೆ.ಈ ವೇಳೆ ಕಾರ್ಯಕರ್ತರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.
ತುಂತುರು ಮಳೆಯನ್ನೂ ಲೆಕ್ಕಿಸದೆ ನೂರಾರು ಹಿಂದು ಕಾರ್ಯಕರ್ತರ ಪ್ರತಿಭಟನೆ ನಡೆಸಿದ್ದಾರೆ.
ಅಮಾಯಕ ಬಾಲಕನನ್ನು ಬಂಧಿಸಿ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಸಿರು ಬಾವುಟ ಕಿತ್ತು ಕೇಸರಿ ಬಾವುಟ ಹಾಕಿದ ಪ್ರಕರಣದಲ್ಲಿ ಬಾಲಕನ ಬಂಧನವಾಗಿತ್ತು.
ಡಿ.4ರಂದು ನಡೆದ ಸಂಕೀರ್ತನಾ ಯಾತ್ರೆ ವೇಳೆ ನಡೆದಿದ್ದ ಘಟನೆಗರ ಸಂಬಂಧಿಸಿದಂತೆ ಪಾಂಡವಪುರದ ಗ್ರಾಮವೊಂದರ ಅಪ್ರಾಪ್ತನನ್ನು ಬಂಧಿಸಿದ್ದ ಶ್ರೀರಂಗಪಟ್ಟಣ ಪೊಲೀಸರು.
ಬಳಿಕ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ದರು.ಪ್ರಕರಣಕ್ಕೆ ಸಂಬಂಧವಿಲ್ಲದಿದ್ದರೂ ಮಧ್ಯ ರಾತ್ರಿ ಟೆರೆರಿಸ್ಟ್ ರೀತಿ ಬಂಧಿಸಿದ್ದಾರೆ ಹಾಗೂ
ಬಂಧಿಸಿದ ಬಳಿಕ ರುಂಡ ಮುಂಡ ಕತ್ತರಿಸುತ್ತಾರೆಂದು ಹೆದರಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಬಾಲಕನನ್ನು ಹೆದರಿಸಿದ ಪೊಲೀಸ್ ಅಧಿಕಾರಿಯನ್ನ ತತಕ್ಷಣ ಸಸ್ಪೆಂಡ್ ಮಾಡೋದಕ್ಕೆ ಆಗ್ರಹಿಸಿದರು.
ಮೊದಲು ಪೊಲೀಸ್ ಠಾಣೆ ಪ್ರತಿಭಟನೆ ಆರಂಭಿಸಿದ್ದ ಹಿಂದೂ ಕಾರ್ಯಕರ್ತರು ನಂತರ ಮುಂದೆ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿ ಪ್ರತಿಭಟನೆ ಆರಂಭಿಸಿದರು.
ತಕ್ಷಣವೇ ಕ್ರಮಕ್ಕೆ ನಿರಾಕರಿಸಿದ್ದಕ್ಕೆ ಜಾಮಿಯಾ ಮಸೀದಿ ಬಳಿಗೆ ತೆರಳಿ ಪ್ರತಿಭಟನೆ ನಡೆಸಿದರು.
ಈ ವೇಳೆ ಹಿಂದೂ ಕಾರ್ಯಕರ್ತರಿಂದ ಮಸೀದಿಗೆ ನುಗ್ಗಲು ಯತ್ನಿಸಿದರು.
ಪೊಲೀಸರು ಹಾಗೂ ಪ್ರತಿಭಟನೆಕಾರರ ನಡುವೆ ತಳ್ಳಾಟ ನೂಕಾಟ ನಡೆಯಿತು.
ಸ್ಥಳಕ್ಕೆ ಎಸ್ಪಿ ಯತೀಶ್ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.
ಸದ್ಯ ಮಸೀದಿ ಮುಂದೆ ಕುಳಿತು ಭಜನೆ ಮಾಡುವ ಮೂಲಕ ಪ್ರತಿಭಟನೆ ಮುಂದುವರೆದಿದೆ…