TV10 Kannada Exclusive

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ…ಶೇ70.14 ರಷ್ಟು ಮತದಾನ…

ಮೈಸೂರು,ಏ26,Tv10 ಕನ್ನಡ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿಶೇ.70.14ರಷ್ಟು ಮತದಾನ ನಡೆದಿದೆ.ಸಂಜೆ 6 ಗಂಟೆ ವೇಳೆಗೆ ಮತದಾನ ನಡೆದಿದೆ. ವಿಧಾನಸಭಾ ಕ್ಷೇತ್ರವಾರು ವಿವರ ನರಸಿಂಹರಾಜ ಶೇ.65.40ಕೃಷ್ಣರಾಜ ಶೇ.61.00ಚಾಮರಾಜ ಶೇ.60.67ಚಾಮುಂಡೇಶ್ವರಿ ಶೇ.73.00ಹುಣಸೂರು ಶೇ.76.90ಪಿರಿಯಾಪಟ್ಟಣ ಶೇ.79.93ಮಡಿಕೇರಿ ಶೇ.73.53ವಿರಾಜಪೇಟೆ ಶೇ.73.75ರಷ್ಟು ಮತದಾನ.
Read More

ಮತದಾನ ಮಾಡಿ ತೆರಳುತ್ತಿದ್ದ ವ್ಯಕ್ತಿಗೆ ದ್ವಿಚಕ್ರ ವಾಹನ ಡಿಕ್ಕಿ… ಸ್ಥಳದಲ್ಲಿಯೇ ಇಬ್ಬರ ಸಾವು…

ನಂಜನಗೂಡು,ಏ26,Tv10 ಕನ್ನಡ ಪಾದಚಾರಿಗೆ ದ್ವಿಚಕ್ರ ವಾಹನ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟ ಘಟನೆ ನಂಜನಗೂಡು ತಾಲೂಕಿನ ತಾಂಡವಪುರ ಬಳಿ ನಡೆದಿದೆ.ಶಿವಣ್ಣ(40) ಹಾಗೂ ಬೈಕ್ ಸವಾರ ಮಿಥುನ್(19) ಮೃತ ದುರ್ದೈವಿಗಳು. ಬೈಕ್ ನಲ್ಲಿದ್ದ ಮತ್ತೋರ್ವ ಸವಾರ ಅನಿಲ್ ಪಟೇಲ್ ಗಾಯಗೊಂಡಿದ್ದಾನೆ.ಶಿವಣ್ಣ ಮತ ಚಲಾಯಿಸಿ ಮನೆಗೆ ತೆರಳುತ್ತಿದ್ದರು.ಈ ವೇಳೆ ಬೈಕ್ ನಲ್ಲಿ ವೇಗವಾಗಿ ಬಂದ ಯುವಕರು ನಡೆದು ತೆರಳುತ್ತಿದ್ದ ಶಿವಣ್ಣಗೆ ಢಿಕ್ಕಿ ಹೊಡೆದಿದ್ದಾರೆ.ಶಿವಣ್ಣ ಹಾಗೂ ಮಿಥುನ್ ಸ್ಥಳದಲ್ಲೇ ಸಾವನ್ನಪ್ಪಿದರೆ ಅನಿಲ್
Read More

ದಾಖಲೆ ಇಲ್ಲದ 81.90 ಲಕ್ಷ ಹಣ ಸೀಜ್…ರಮ್ಮನಹಳ್ಳಿ ಚೆಕ್ ಪೋಸ್ಟ್ ನಲ್ಲಿ ವಶ…

ಮೈಸೂರು,ಏ25,Tv10 ಕನ್ನಡ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 81,90,900/- ರೂ ನಗದು ವಶಪಡಿಸಿಕೊಳ್ಳಲಾಗಿದೆ.ರಮ್ಮನಹಳ್ಳಿ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದ ವೇಳೆ ದಾಖಲೆ ಇಲ್ಲದ ಹಣ ದೊರೆತಿದೆ.ಮೂರು ಮಂದಿ KA 09 MB 4996 ನೊಂದಣೆ ಸಂಖ್ಯೆಯ ಕಾರಿನಲ್ಲಿ ಸಾಗಿಸಲಾಗುತ್ತಿದ್ದರು.ದಾಖಲೆಗಳನ್ನ ಒದಗಿಸದ ಕಾರಣ ಹಣ ಸೀಜ್ ಮಾಡಲಾಗಿದೆ.ಖಾಸಗಿ ಸಂಸ್ಥೆಯ ಹಣ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಆದ್ರೆ ಇದಕ್ಕೆ ಸೂಕ್ತ ದಾಖಲೆಗಳು ಒದಗಿಸುವಲ್ಲಿ ವಿಫಲರಾಗಿದ್ದಾರೆ.ಎಟಿಎಂ ನಲ್ಲಿ ಹಣ ಡೆಪಾಸಿಟ್ ಮಾಡಲು ಹಣ
Read More

ಡಾ.ಹೆಚ್.ಸಿ.ಎಂ.ಹಾಗೂ ಸುನಿಲ್ ಬೋಸ್ ಮತದಾನ…

ನಂಜನಗೂಡು,ಏ26,Tv10 ಕನ್ನಡ ನಂಜನಗೂಡಿನ ಹದಿನಾರು ಗ್ರಾಮದಲ್ಲಿ ಸಚಿವ ಡಾ.ಎಚ್ ಸಿ ಮಹದೇವಪ್ಪ ಹಾಗೂ ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಮತಚಲಾಯಿಸಿದರು.ಹೆಚ್ಚು ಬಹುಮತಗಳಿಂದ ಸುನಿಲ್ ಬೋಸ್ ಗೆಲುವು ಖಚಿತ ಎಂದು ಡಾ.ಹೆಚ್.ಸಿ.ಮಹದೇವಪ್ಪ ವಿಶ್ವಾಸ ವ್ಯಕ್ತಪಡಿಸಿದರು.ಗ್ರಾಮದ ಸರ್ಕಾರಿ ಶಾಲೆಯಲ್ಲಿರುವ ಮತಗಟ್ಟೆಗೆ ಅಪ್ಪ ಮತ್ತು ಮಗ ಇಬ್ಬರು ಒಟ್ಟಿಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದರು…
Read More

ಚುನಾವಣೆ ರಾಯಭಾರಿ ಹಾಗೂ ಹಿರಿಯ ಕ್ರಿಕೆಟ್ ಆಟಗಾರ ಜವಾಗಲ್ ಶ್ರೀನಾಥ್ ಮತದಾನ…

ಮೈಸೂರು ,ಏ26,Tv10 ಕನ್ನಡ ಮೈಸೂರು ಕೊಡಗು ಲೋಕಸಭಾ ಚುನಾವಣೆಯ ರಾಯಭಾರಿ ಹಾಗೂ ಹಿರಿಯ ಕ್ರಿಕೆಟ್ ಆಟಗಾರ ಜವಾಗಲ್ ಶ್ರೀನಾಥ್ ರವರು ಮತದಾನದಲ್ಲಿ ಭಾಗವಹಿಸಿ ತಮ್ಮ ಹಕ್ಕು ಚಲಾಯಿಸಿದರು. ನಗರದ ಜ್ಞಾನ ಗಂಗಾ ಪಿಯು ಕಾಲೇಜಿನ ಮತಗಟ್ಟೆಯಲ್ಲಿ ಮತದಾನ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿ ಜನರು ಬೇಗ ಬೇಗ ಬಂದು ಮತದಾನ ಮಾಡುವಂತೆ ಮನವಿ ಮಾಡಿದರು.ಈಗಾಗಲೇ ಮೈಸೂರು ಜಿಲ್ಲಾ ಸ್ವೀಪ್ ಸಮಿತಿ ವತಿತಿಂದ ಸಾಕಷ್ಟು ಮತದಾನ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಮೈಸೂರು ಜಿಲ್ಲೆಯ
Read More

ರಂಗೋಲಿ ಮೂಲಕ ಮತದಾನ ಜಾಗೃತಿ…ಗಮನ ಸೆಳೆದ ಗೃಹಿಣಿ…

ಮೈಸೂರು,ಏ26,Tv10 ಕನ್ನಡ ಲೋಕಸಭಾ ಚುನಾವಣೆ ಮತದಾನ ಭರದಿಂದ ಸಾಗುತ್ತಿದೆ.ಮತದಾರರು ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ಮತ ಹಾಕುವ ಮೂಲಕ ತಮ್ಮ ಹಕ್ಕನ್ನ ಚಲಾಯಿಸುತ್ತಿದ್ದಾರೆ.ಒಂದೆಡೆ ಮತದಾರರು ಚುನಾವಣಾ ಹಬ್ಬದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರೆ ಮತ್ತೊಂದೆಡೆ ಕೆಲವರು ಮತದಾನದಿಂದ ದೂರ ಉಳಿಯುತ್ತಿದ್ದಾರೆ.ಈ ಹಿನ್ನಲೆ ಮತದಾನದ ಬಗ್ಗೆ ನಿರಂತರವಾಗಿ ವಿಭಿನ್ನವಾಗಿ ಜಾಗೃತಿ ಮೂಡಿಸಲಾಗುತ್ತಿದೆ.ಮೈಸೂರಿನ ಗೃಹಿಣಿಯೊಬ್ಬರು ತಮ್ಮ ಮನೆಯ ಮುಂದೆ ಆಕರ್ಷಕ ರಂಗೋಲಿ ಬಿಡಿಸಿ ಮತದಾನ ಜಾಗೃತಿ ಮೂಡಿಸಿದ್ದಾರೆ.ಕುವೆಂಪುನಗರ ಇ ಅಂಡ್ ಎಫ್ ಬ್ಲಾಕ್ ನ ಸುಧಾ ಪ್ರಸಾದ್
Read More

ಯದುವೀರ್ ರಿಂದ ಮತದಾನ…ತ್ರಿಷಿಕಾ,ಪ್ರಮೋದ ದೇವಿ ಒಡೆಯರ್ ಸಾಥ್…

ಮೈಸೂರು,ಏ26,Tv10 ಕನ್ನಡ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ ಚಲಾಯಿಸಿದರು.ಅಗ್ರಹಾರದಲ್ಲಿರುವ ಶ್ರೀಕಾಂತ ಶಾಲೆಯ ಮತಗಟ್ಟೆಯಲ್ಲಿ ಮತಚಲಾಯಿಸಿದರು.ಯದುವೀರ್ ಜೊತೆಗೆ ಪತ್ನಿ ತ್ರಿಷಿಕಾ ಹಾಗೂ ತಾಯಿ ಪ್ರಮೋದದೇವಿ ಒಡೆಯರ್ ಸಹ ಮತಚಲಾಯಿಸಿದರು…
Read More

ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್ಧ್ ವಿಷ್ಣುವರ್ಧನ್ ರಿಂದ ಮತದಾನ….

ಲೋಸಭಾ ಚುನಾವಣೆ ಹಿನ್ನಲೆ ಚಿತ್ರರಂಗದ ಹಿರಿಯ ಕಲಾವಿದರು ತಮಗಮ ಹಕ್ಕನ್ನ ಚಲಾಯಿಸಿದ್ದಾರೆ.ಸಾಹಸ ಸಿಂಹ ದಿ.ಡಾ.ವಿಷ್ಣುವರ್ಧನ್ ರವರ ಧರ್ಮಪತ್ನಿ ಹಾಗೂ ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್ಧ್ ವಿಷ್ಣುವರ್ಧನ್ ಮತಚಲಾಯಿಸುವ ಮೂಲಕ ಚುನಾವಣಾ ಹಬ್ಬದಲ್ಲಿ ಭಾಗಿಯಾಗಿದ್ದಾರೆ.ಬೆಂಗಳೂರಿನ ಜಯನಗರ 4 th T ಬ್ಲಾಕ್ ನ ಮತಗಟ್ಟೆ ಸಂಖ್ಯೆ 50 ರಲ್ಲಿ ಭಾರತಿ ವಿಷ್ಣುವರ್ಧನ್ ರವರು ಮತ ಚಲಾಯಿಸಿದರೆ.ಅನಿರುದ್ಧ್ ವಿಷ್ಣುವರ್ಧನ್ ರವರು ಜೆಪಿ ನಗರ ಎರಡನೇ ಹಂತದ ಬೂತ್
Read More

ಸುತ್ತೂರು ಶ್ರೀಗಳಿಂದ ಮತದಾನ…ಕಡ್ಡಾಯವಾಗಿ ಮತ ಚಲಾಯಿಸುವಂತೆ ಕರೆ…

ನಂಜನಗೂಡು,ಏ26,Tv10 ಕನ್ನಡ ವರುಣ ವಿಧಾನಸಭಾ ಕ್ಷೇತ್ರದ ಸುತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಗಳು ಮತಚಲಾಯಿಸಿದರು.ನಂತರ ಮಾತನಾಡಿ ದೇಶದ ಪ್ರಜೆಗಳಾದ ನಾವು ಕಡ್ಡಾಯವಾಗಿ ಮತದಾನ ಮಾಡಬೇಕು ಉತ್ತಮ ನಾಯಕನನ್ನು ಆಯ್ಕೆ ಮಾಡಬೇಕು ಎಂದು ಕರೆ ನೀಡಿದರು.ಶ್ರೀಮಠದಿಂದ ನೇರವಾಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆ ಕೇಂದ್ರಕ್ಕೆ ತೆರಳಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡರು.ಐದು ವರ್ಷಗಳಿಗೊಮ್ಮೆ ಬರುವ ಚುನಾವಣೆಯಲ್ಲಿ ನಾವು ಉತ್ತಮ ವ್ಯಕ್ತಿಯನ್ನು
Read More

ಅಭ್ಯರ್ಥಿಗಳ ಪಟ್ಟಿಯಲ್ಲಿ ಎಡವಟ್ಟು…ಕನ್ನಡಕ್ಕೆ ಅಪಮಾನ…

ಮೈಸೂರು,ಏ26,Tv10 ಕನ್ನಡ ಮೈಸೂರು ಕೊಡಗು ಲೋಸಭಾ ಕ್ಷೇತ್ರದ ಉಮೇದುದಾರರ ಪಟ್ಟಿಯಲ್ಲಿ ಅಧಿಕಾರಿಗಳ ಎಡವಟ್ಟು ಬೆಳಕಿಗೆ ಬಂದಿದೆ.ಅಕ್ಷರಗಳ ಬಳಕೆ ಸರಿಯಾಗದೆ ಕನ್ನಡಕ್ಕೆ ಅಪಮಾನ ಮಾಡಲಾಗಿದೆ. ಕಾಂಗ್ರೆಸ್ ಎಂಬ ಪದಕ್ಕೆ ಬದಲಾಗಿ ಕಾಂಗ್ರೆ ಷ್ ಎಂದು ನಮೂದಿಸಲಾಗಿದೆ.ಮತ್ತೊಂದೆಡೆ ಕಾಂಗ್ರೆಸ್ ಬದಲಾಗಿ ಕಾಂಗ್ರೆ ಶ್.ಮತ್ತೊಂದೆಡೆ ಹಲಸಿನ ಹಣ್ಣು ಪದಕ್ಕೆ ಹ ಳ ಸಿನ ಹಣ್ಣು ಎಂದು ದಾಖಲಾಗಿದೆ.ಇವೆಲ್ಲಾ ಕೈಬರಹದಲ್ಲಿ ದಾಖಲಾಗಿರುವ ಎಡವಟ್ಟು.ಕನ್ನಡ ಬಾರದ ಅಧಿಕಾರಿ ಅಥವಾ ಸಿಬ್ಬಂದಿಯಿಂದ ದಾಖಲಾದ ಕೈಬರವಣಿಗೆಯಲ್ಲಿ ಎಡವಟ್ಟುಗಳಿದ್ದರೂ ಕನ್ನಡ ಬಲ್ಲ
Read More