TV10 Kannada Exclusive

ಯುಗಾದಿ ಸಂಭ್ರಮ…ರಂಗೋಲಿ ಸ್ಪರ್ಧೆ…ವಿಜೇತರಿಗೆ ಬಹುಮಾನ ವಿತರಣೆ…

ಮೈಸೂರು,ಏ12,Tv10 ಕನ್ನಡ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಂದ ಕ್ರೋಧಿನಾಮ ಸಂವತ್ಸರದ ಮೊದಲ ದಿನದ ಯುಗಾದಿ ಹಬ್ಬವನ್ನ ಕೆ.ಎಂ.ಪಿ.ಕೆ.ಟ್ರಸ್ಟ್ ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ಆಚರಿಸಿದೆ.ಆನ್ಲೈನ್ ನಲ್ಲಿ ಕರೆ ನೀಡಲಾಗಿದ್ದ ರಂಗೋಲಿ ಸ್ಪರ್ದೆ ಅದ್ದೂರಿಯಾಗಿ ನಡೆದಿದೆ.ಸುಮಾರು 350 ಕ್ಕೂ ಹೆಚ್ಚು ಸ್ಪರ್ಧಾಳಿಗಳು ಭಾಗವಹಿಸಿದ್ದು ಬಣ್ಣ ಬಣ್ಣದ ಚಿತ್ತಾಕರ್ಷಕ ರಂಗೋಲಿ ಬಿಡಿಸುವ ಮೂಲಕ ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಉತ್ತಮವಾಗಿ ಮೂಡಿಬಂದ ಹತ್ತು ರಂಗೋಲಿಗೆ ಬಹುಮಾನ ವಿತರಿಸಲಾಯಿತು.ನಗರದ ರಾಮಾನುಜ ರಸ್ತೆಯಲ್ಲಿರುವ ನಮೋ ಯೋಗ ಭವನದಲ್ಲಿ ಬಹುಮಾನ ವಿತರಿಸುವ
Read More

Tv10 ಸುದ್ದಿ ಇಂಪ್ಯಾಕ್ಟ್…ಕುಡುಕರ ಅಡ್ಡಾ ತೆರುವು…ವರದಿಯಾದ ಕೆಲವೇ ಗಂಟೆಗಳಲ್ಲಿ ಕ್ಲೀನ್…

ಮೈಸೂರು,ಏ12,Tv10 ಕನ್ನಡ ಕುಡುಕರ ತಾಣವಾಗಿದ್ದ ಫುಟ್ ಪಾತ್ ಫಾಸ್ಟ್ ಫುಡ್ ಸ್ಥಳಕ್ಕೆ ಮೈಸೂರು ನಗರ ಪಾಲಿಕೆ ಆಯುಕ್ತರು ಬ್ರೇಕ್ ಹಾಕಿದ್ದಾರೆ.Tv10 ಕನ್ನಡ ವಾಹಿನಿಯಲ್ಲಿ ಪ್ರಚಾರವಾದ ಕೆಲವೇ ಗಂಟೆಗಳಲ್ಲ ಪಾಲಿಕೆ ಆಯುಕ್ತರಾದ ಡಾ.ಮಧು ರವರು ಕುಡುಕರ ತಾಣಕ್ಕೆ ಮುಕ್ತಿ ನೀಡಿದ್ದಾರೆ.ಇದು Tv10 ಕನ್ನಡ ವಾಹಿನಿಯ ಇಂಪ್ಯಾಕ್ಟ್. ಮೈಸೂರಿನ ಪ್ರತಿಷ್ಠಿತ ಗೋಕುಲಂ ಬಾಡಾವಣೆಯ ಹಾಪ್ ಕಾಮ್ ಬಳಿ ಫುಟ್ ಪಾತ್ ನಲ್ಲಿ ತಲೆ ಎತ್ತಿದ್ದ ಫಾಸ್ಟ್ ಫುಡ್ ಬಳಿಯ ಸ್ಥಳವೊಂದು ಕುಡುಕರ ತಾಣವಾಗಿತ್ತು.ಹಾಪ್
Read More

ದಾಖಲಾತಿ ಇಲ್ಲದ 5.5 ಲಕ್ಷ ನಗದು ಜಪ್ತಿ…ಮಂಡಕಳ್ಳಿ ವಿಮಾನ ನಿಲ್ದಾಣ ಚೆಕ್ ಪೋಸ್ಟ್ ನಲ್ಲಿ ವಶ…

ಮೈಸೂರು,ಏ12,Tv10 ಕನ್ನಡ ಮೈಸೂರು ಕೊಡಗು ಲೋಕಸಭಾ ಚುನಾವಣೆ 2024 ರ ಸಂಬಂಧ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಸಬಾ ಹೋಬಳಿ ಮಂಡಕಳ್ಳಿ ವಿಮಾನ ನಿಲ್ದಾಣ ಚೆಕ್ ಪೋಸ್ಟ್ ನಲ್ಲಿ 5.5 ಲಕ್ಷ ದಾಖಲೆ ಇಲ್ಲದ ಹಣ ವಶಪಡಿಸಿಕೊಳ್ಳಲಾಗಿದೆ.ಎಸ್ ಎಸ್ ಟಿ ಅಧಿಕಾರಿ ಶಿವಕುಮಾರ್ ಹಾಗೂ ತಂಡದವರು ವಶಪಡಿಸಿಕೊಂಡಿದ್ದಾರೆ. ಹೈದರಾಬಾದ್ ಗೆ ತೆರಳುತ್ತಿದ್ದ ಮೊಹಮ್ಮದ್ ಜಾಸೀನ್ ರವರಿಂದ ಯಾವುದೇ ದಾಖಲಾತಿಗಳಿಲ್ಲದ 5,50,000 ಲಕ್ಷ ರೂಪಾಯಿಗಳನ್ನು ಸಾಗಿಸುತ್ತಿದ್ದ ವೇಳೆ ಜಪ್ತಿ ಮಾಡಲಾಗಿದೆ. ಸದರಿ
Read More

ದಾಖಲಾತಿ ಇಲ್ಲದ 5.5 ಲಕ್ಷ ಜಪ್ತಿ…ಮಂಡಕಳ್ಳಿ ವಿಮಾನ ನಿಲ್ದಾಣ ಚೆಕ್ ಪೋಸ್ಟ್ ನಲ್ಲಿ ವಶ…

ಮೈಸೂರು,ಏ12,Tv10 ಕನ್ನಡ ಮೈಸೂರು ಕೊಡಗು ಲೋಕಸಭಾ ಚುನಾವಣೆ 2024 ರ ಸಂಬಂಧ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಸಬಾ ಹೋಬಳಿ ಮಂಡಕಳ್ಳಿ ವಿಮಾನ ನಿಲ್ದಾಣ ಚೆಕ್ ಪೋಸ್ಟ್ ನಲ್ಲಿ 5.5 ಲಕ್ಷ ದಾಖಲೆ ಇಲ್ಲದ ಹಣ ವಶಪಡಿಸಿಕೊಳ್ಳಲಾಗಿದೆ.ಎಸ್ ಎಸ್ ಟಿ ಅಧಿಕಾರಿ ಶಿವಕುಮಾರ್ ಹಾಗೂ ತಂಡದವರು ವಶಪಡಿಸಿಕೊಂಡಿದ್ದಾರೆ. ಹೈದರಾಬಾದ್ ಗೆ ತೆರಳುತ್ತಿದ್ದ ಮೊಹಮ್ಮದ್ ಜಾಸೀನ್ ರವರಿಂದ ಯಾವುದೇ ದಾಖಲಾತಿಗಳಿಲ್ಲದ 5,50,000 ಲಕ್ಷ ರೂಪಾಯಿಗಳನ್ನು ಸಾಗಿಸುತ್ತಿದ್ದ ವೇಳೆ ಜಪ್ತಿ ಮಾಡಲಾಗಿದೆ. ಸದರಿ
Read More

ಅಂಚೆ ಮತದಾನ ಕುರಿತು ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳ ಸಭೆ…

ಮೈಸೂರು,ಏ11,Tv10 ಕನ್ನಡ ಮೈಸೂರು-ಕೊಡಗು ಲೋಕಸಭಾ ಚುನಾವಣೆ ಸನಿಹವಾಗುತ್ತಿದೆ.ಶಾಂತಿಯುತ ಹಾಗೂ ಮುಕ್ತ ಚುನಾವಣೆಗಾಗಿ ಚುನಾವಣಾಧಿಕಾರಿಗಳು ಸಿದ್ದತೆ ನಡೆಸುತ್ತಿದ್ದಾರೆ.ಪ್ರತಿದಿನ ಮತದಾನದ ಬಗ್ಗೆ ಮತದಾರರಿಗೆ ವಿವಿದ ರೀತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.ಇಂದು ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾ ವಿಶೇಷಾಧಿಕಾರಿಗಳೂ ಆದ ಡಾ.ಕೆ.ವಿ.ರಾಜೇಂದ್ರ ರವರು ಮನೆ ಮನೆ ಮತದಾನದ ಬಗ್ಗೆ ಪ್ರಸೀಡಿಂಗ್ ಅಧಿಕಾರಿ ವರ್ಗದ ಜೊತೆ ಸಭೆ ನಡೆಸಿ ತರಬೇತಿ ನೀಡುವ ಮೂಲಕ ಹಲವು ಸೂಚನೆಗಳನ್ನ ನೀಡಿದ್ದಾರೆ…
Read More

ಮೋಹನ್ ಕುಮಾರ್ ಎಮ್ . 573 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ -ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ನಂಜನಗೂಡು

ನಂಜನಗೂಡಿನ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಈ ವರುಷದ ದ್ವಿತೀಯ ಪಿಯುಸಿ ಯ ಫಲಿತಾಂಶ ಶೇಕಡ 60 ಬಂದಿದೆ. 21 ವಿದ್ಯಾರ್ಥಿಗಳು ಉನ್ನತ ಶ್ರೇಣಿ , 211 ಪ್ರಥಮ ಶ್ರೇಣಿ ,101 ದ್ವಿತೀಯ ಶ್ರೇಣಿ , 61 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.ವಾಣಿಜ್ಯ ಶೇಕಡ 73, ವಿಜ್ಞಾನ ಶೇಕಡ 61 ಮತ್ತು ಕಲಾ ವಿಭಾಗದಲ್ಲಿ ಶೇಕಡ 48 ರಷ್ಟು ಫಲಿತಾಂಶ ಬಂದಿದೆ.ಕಲಾ ವಿಭಾಗದಲ್ಲಿ ಮೋಹನ್ ಕುಮಾರ್ M 573, ವಾಣಿಜ್ಯ
Read More

ಕುವೆಂಪುನಗರ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…ಬೈಕ್ ಕಳ್ಳನ ಬಂಧನ…6.14 ಲಕ್ಷ ಮೌಲ್ಯದ 8 ಬೈಕ್ ಗಳು ವಶ…

ಮೈಸೂರು,ಏ10,Tv10 ಕನ್ನಡ ಕುವೆಂಪುನಗರ ಠಾಣೆ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಓರ್ವ ಬೈಕ್ ಕಳುವು ಆರೋಪಿ ಸಿಕ್ಕಿಬಿದ್ದಿದ್ದಾನೆ.ಬಂಧಿತನಿಂದ 6.14 ಲಕ್ಷ ಮೌಲ್ಯದ 8 ಬೈಕ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.ಕಡಕೊಳ ನಿವಾಸಿ ರಂಗಸ್ವಾಮಿ(26) ಸಿಕ್ಕಿಬಿದ್ದ ಆರೋಪಿ.ಮೈಸೂರು,ಕೆ.ಆರ್.ಪೇಟೆ,ಬನ್ನೂರು,ನಂಜನಗೂಡು,ಮೈಸೂರು ಗ್ರಾಮಾಂತರ,ಬಿಳಿಕೆರೆ,ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳುವು ಮಾಡಿದ ಪ್ರಕರಣಗಳು ಪತ್ತೆಯಾದಂತಾಗಿದೆ. ಅಪರಾಧ ಮತ್ತು ಸಂಚಾರ ಡಿಸಿಪಿ ರವರಾದ ಎಸ್.ಜಾಹ್ನವಿ ರವರ ಮಾರ್ಗದರ್ಶನದಲ್ಲಿ ಕೆ.ಆರ್.ಎಸಿಪಿ ರಮೇಶ್ ಕುಮಾರ್ ಉಸ್ತುವಾರಿಯಲ್ಲಿ ಕುವೆಂಪುನಗರ ಠಾಣೆಯ ಇನ್ಸ್ಪೆಕ್ಟರ್ ಯೋಗೇಶ್ ರವರ ನೇತೃತ್ವದಲ್ಲಿ
Read More

ಮೈಸೂರು-ಬೆಂಗಳೂರು ಹೆದ್ದಾರಿ ಚೆಕ್ ಪೋಸ್ಟ್ ನಲ್ಲಿ ಒಂದು ಲಕ್ಷ ಸೀಜ್…

ಮೈಸೂರು,ಏ10,Tv10 ಕನ್ನಡ ಲೋಕಸಭಾ ಚುನಾವಣೆ ಹಿನ್ನಲೆ ನಡೆಯುತ್ತಿರುವ ತಪಾಸಣೆ ವೇಳೆ ಮೈಸೂರು-ಬೆಂಗಳೂರು ಹೆದ್ದಾರಿಯ ಚೆಕ್ ಪೋಸ್ಟ್ ನಲ್ಲಿ ಇಂದು ಒಂದು ಲಕ್ಷ ನಗದು ಸೀಜ್ ಮಾಡಲಾಗಿದೆ. ಸುರೇಶ್ ಬಾಬು ಎಂಬುವರು ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ಹಣ ಪತ್ತೆಯಾಗಿದೆ.ವ್ಯವಸಾಯದ ವಿಚಾರಕ್ಕೆ ಹಣ ಸಾಗಿಸುತ್ತಿದ್ದುದಾಗಿ ಸುರೇಶ್ ಬಾಬು ಹೇಳಿಕೆ ನೀಡಿದ್ದಾರೆ.ಆದರೆ ಈ ಸಂಭಂಧ ಯಾವುದೇ ದಾಖಲೆ ಇರಲಿಲ್ಲ.ಸಹಾಯಕ ಚುನಾವಣಾಧಿಕಾರಿಗಳು ಹಾಗೂ ತಹಸೀಲ್ದಾರ್ ನಿರ್ದೇಶನದಂತೆ ನೂಡಲ್ ಅಧಿಕಾರಿಗಳಾದ ಎಸ್.ವಿಶ್ವನಾಥ್ ಮತ್ತು ಸಿಬ್ಬಂದಿಗಳಾದ ಗುರುಚೇತನ್,ಸತೀಶ್ ಪಾಲ್
Read More

ಮಂಡ್ಯ:ಹಳೇಧ್ವೇಷ ಹಿನ್ನಲೆ ರೌಡಿಶೀಟರ್ ಬರ್ಬರ ಕೊಲೆ…

ಮಂಡ್ಯ,ಏ10,Tv10 ಕನ್ನಡ ಯುಗಾದಿ ದಿನದಂದೇ ಮಂಡ್ಯಾದಲ್ಲಿ ರೌಡಿ ಶೀಟರ್ ಬರ್ಬರ ಕೊಲೆಯಾಗಿದೆ. ಮಧ್ಯರಾತ್ರಿ ವೇಳೆ ದುಷ್ಕರ್ಮಿಗಳು ಕೃತ್ಯವೆಸಗಿದ್ದಾರೆ.ಹಳೆ ದ್ವೇಷ ಹಿನ್ನಲೆ ಹತ್ಯೆ ನಡೆದಿದೆ ಎನ್ನಲಾಗಿದೆ.ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿ ಘಟನೆ ನಡೆದಿದೆ.ಅಕ್ಷಯ್( 24 )ಹತ್ಯೆಯಾದ ಯುವಕ.ಫೋನ್ ಮಾಡಿ ಕರೆಸಿಕೊಂಡು ನಡು ಬೀದಿಯಲ್ಲಿ ಕೊಚ್ಚಿ ಕೊಲೆ ಮಾಡಲಾಗಿದೆ.ಹಲವು ಪ್ರಕರಣಗಳಲ್ಕಿ ಭಾಗಿಯಾಗಿದ್ದ ಹಿನ್ನೆಲೆ ಅಕ್ಷಯ್ ವಿರುದ್ಧ ರೌಡಿಶೀಟರ್ ಪ್ರಕರಣ ತೆರೆಯಲಾಗಿತ್ತು.ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ
Read More

ಪಬ್ಲಿಕ್ ಪ್ರಾಸಿಕ್ಯೂಟರ್ ಮೇಲೆ ಹಲ್ಲೆ…ವ್ಯಕ್ತಿ ವಿರುದ್ದ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…

ಮೈಸೂರು,ಏ9,Tv10 ಕನ್ನಡ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ಕ್ರಿಮಿನಲ್ ಪ್ರಕರಣಗಳಿಗೆ ಸಂಭಂಧಿಸಿದಂತೆ ಕ್ಯಾತೆ ತೆಗೆದ ವ್ಯಕ್ತಿಯೋರ್ವ ಸರ್ಕಾರಿ ಅಭಿಯೋಜಕನ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನ ಕೆ.ಆರ್.ಠಾಣಾ ವ್ಯಾಪ್ತಿಯ ಬಸವೇಶ್ವರ ರಸ್ತೆಯಲ್ಲಿ ನಡೆದಿದೆ.ಪಿರಿಯಾಪಟ್ಟಣ ಹಾಗೂ ಹುಣಸೂರಿನಲ್ಲಿ ಪ್ರಭಾರ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಪ್ರಸಾದ್ ಗಾಂವ್ಕರ್ ರವರೇ ಹಲ್ಲೆಗೆ ಒಳಗಾದವರು.ಕಿರಣ್ ಕೌಶಿಕ್ ಎಂಬಾತ ಹಲ್ಲೆ ನಡೆಸಿದ್ದು ಸದರಿ ವ್ಯಕ್ತಿ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಶಿಪ್ರಸಾದ್ ಗಾಂವ್ಕರ್ ಪ್ರಕರಣ ದಾಖಲಿಸಿದ್ದಾರೆ.
Read More