ಯುಗಾದಿ ಸಂಭ್ರಮ…ರಂಗೋಲಿ ಸ್ಪರ್ಧೆ…ವಿಜೇತರಿಗೆ ಬಹುಮಾನ ವಿತರಣೆ…
- TV10 Kannada Exclusive
- April 12, 2024
- No Comment
- 163

ಮೈಸೂರು,ಏ12,Tv10 ಕನ್ನಡ
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಂದ ಕ್ರೋಧಿನಾಮ ಸಂವತ್ಸರದ ಮೊದಲ ದಿನದ ಯುಗಾದಿ ಹಬ್ಬವನ್ನ ಕೆ.ಎಂ.ಪಿ.ಕೆ.ಟ್ರಸ್ಟ್ ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ಆಚರಿಸಿದೆ.ಆನ್ಲೈನ್ ನಲ್ಲಿ ಕರೆ ನೀಡಲಾಗಿದ್ದ ರಂಗೋಲಿ ಸ್ಪರ್ದೆ ಅದ್ದೂರಿಯಾಗಿ ನಡೆದಿದೆ.ಸುಮಾರು 350 ಕ್ಕೂ ಹೆಚ್ಚು ಸ್ಪರ್ಧಾಳಿಗಳು ಭಾಗವಹಿಸಿದ್ದು ಬಣ್ಣ ಬಣ್ಣದ ಚಿತ್ತಾಕರ್ಷಕ ರಂಗೋಲಿ ಬಿಡಿಸುವ ಮೂಲಕ ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಉತ್ತಮವಾಗಿ ಮೂಡಿಬಂದ ಹತ್ತು ರಂಗೋಲಿಗೆ ಬಹುಮಾನ ವಿತರಿಸಲಾಯಿತು.
ನಗರದ ರಾಮಾನುಜ ರಸ್ತೆಯಲ್ಲಿರುವ ನಮೋ ಯೋಗ ಭವನದಲ್ಲಿ ಬಹುಮಾನ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 10 ಸ್ಪರ್ಧಿಗಳಾದ
ಕುವೆಂಪು ನಗರ ನಿವಾಸಿ ಗೀತಾ, ಕುಂಬಾರಕೊಪ್ಪಲಿನ ವಿಜಯಲಕ್ಷ್ಮಿ, ದೇವರಮ್ಮಣಿ ಅಗ್ರಹಾರದ ವಿಜಯಲಕ್ಷ್ಮಿ ಕುಲಕರ್ಣಿ, ಹಿನಕಲ್ ನ ದೇವಕಿ, ಶ್ರೀರಾಂಪುರದ ವಿಮಲಾ ಪರಿಶಿವಮೂರ್ತಿ, ಸರಸ್ವತಿಪುರಂನ ಸಾನ್ವಿ. ಸಿ, ಕುವೆಂಪು ನಗರದ ಸುಧಾ ಪ್ರಸಾದ್, ವಿದ್ಯಾನಗರ ವಿಜಯ. ಆರ್, ಜೆ ಸಿ ನಗರದ ಜೆ ನಾಗು ಬಾಯ್, ಕೃಷ್ಣಮೂರ್ತಿಪುರಂನ ಉಷಾರಾಣಿ ರವರಿಗೆ ಬಹುಮಾನ ವಿತರಿಸಲಾಯಿತು.ಜಿಲ್ಲಾ ಭ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ.ಪ್ರಕಾಶ್ ರವರು ಬಹುಮಾನ ವಿತರಿಸಿ ಮಾತನಾಡಿ ಯುಗಾದಿ ಹಬ್ಬವನ್ನ ಸಂಭ್ರಮಿಸಿದಂತೆ ಚುನಾವಣಾ ಹಬ್ಬವನ್ನೂ ಆಚರಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಚಕ್ರಪಾಣಿ, ಶ್ರೀಕಾಂತ್ ಕಶ್ಯಪ್, ನಾಗಶ್ರೀ ಸುಚಿಂದ್ರ, ಮಿರ್ಲೆ ಪಣೀಶ್, ಹಾಗೂ ಇನ್ನಿತರರು ಭಾಗವಹಿಸಿದ್ದರು…