ಹಗಲಿನಲ್ಲಿ ರಂಗುರಂಗಿನ ಚಾಲನೆ…ರಾತ್ರಿ ಕಗ್ಗತ್ತಲೆ…ವಿಷ್ಣು ಸ್ಮಾರಕ ಬಳಿ ಅವ್ಯವಸ್ಥೆ…ಅಭಿಮಾನಿಗಳಿಂದ ಸರ್ಕಾರಕ್ಕೆ ಛೀಮಾರಿ…

ಹಗಲಿನಲ್ಲಿ ರಂಗುರಂಗಿನ ಚಾಲನೆ…ರಾತ್ರಿ ಕಗ್ಗತ್ತಲೆ…ವಿಷ್ಣು ಸ್ಮಾರಕ ಬಳಿ ಅವ್ಯವಸ್ಥೆ…ಅಭಿಮಾನಿಗಳಿಂದ ಸರ್ಕಾರಕ್ಕೆ ಛೀಮಾರಿ…

ಹಗಲಿನಲ್ಲಿ ರಂಗುರಂಗಿನ ಚಾಲನೆ…ರಾತ್ರಿ ಕಗ್ಗತ್ತಲೆ…ವಿಷ್ಣು ಸ್ಮಾರಕ ಬಳಿ ಅವ್ಯವಸ್ಥೆ…ಅಭಿಮಾನಿಗಳಿಂದ ಸರ್ಕಾರಕ್ಕೆ ಛೀಮಾರಿ…

ಮೈಸೂರು,ಜ29,Tv10 ಕನ್ನಡ
ಡಾ.ವಿಷ್ಣುವರ್ಧನ್ ಅಭಿಮಾನಿಗಳ ಬಹುದಿನಗಳ ಕನಸು ನನಸಾಗಿದೆ.ಸಾಹಸಸಿಂಹ ನ ಸ್ಮಾರಕ ಅದ್ದೂರಿಯಾಗಿ ಲೋಕಾರ್ಪಣೆಯಾಗಿದೆ.ಆದ್ರೆ ಅಭಿಮಾನಿಗಳಿಗೆ ಸರ್ಕಾರ ಮೊದಲ ದಿನವೇ ಬೇಸರ ತರಿಸಿದೆ.ವಿಷ್ಣು ಸ್ಮಾರಕದ ಬಳಿ ಅವ್ಯವಸ್ಥೆ ಬಗ್ಗೆ ಅಭಿಮಾನಿಗಳು ಛೀಮಾರಿ ಹಾಕಿದ್ದಾರೆ.ಉದ್ಭೂರಿನ ಹಾಲಾಳು ಗ್ರಾಮದಲ್ಲಿ ಬೆಳಿಗ್ಗೆ ಸ್ಮಾರಕವನ್ನ ಆಡಂಬರದಿಂದ ರಂಗುರಂಗಾಗಿ ಲೋಕಾರ್ಪಣೆ ಮಾಡಿದೆ.ದೂರದ ಸ್ಥಳಗಳಿಂದ ಸ್ಮಾರಕವನ್ನ ಕಣ್ತುಂಬಿಕೊಳ್ಳಲು ಆಗಮಿಸಿದ ಅಭಿಮಾನಿಗಳಿಗೆ ನಿರಾಸೆ ತರಿಸಿದೆ.ಮೊದಲ ದಿನವೇ ಸ್ಮಾರಕ ಕಗ್ಗತ್ತಿಲಿನಲ್ಲಿ ಮುಳುಗಿದೆ.ಬಣ್ಣ ಬಣ್ಣದ ದೀಪಗಳಿಂದ ಕಂಗೊಳಿಸಬೇಕಿದ್ದ ಸ್ಮಾರಕ ಕತ್ತಲಿನಲ್ಲಿ ಲೀನವಾಗಿದೆ.ನೀರಿನ ವ್ಯವಸ್ಥೆ ಇಲ್ಲವಾಗಿದೆ.ನೆಚ್ಚಿನ ನಾಯಕ ನಟನ ನೆನಪುಗಳನ್ನ ಮೆಲುಕು ಹಾಕಲು ಬಂದ ಅಭಿಮಾನಿಗಳಿಗೆ ಅವ್ಯವಸ್ಥೆ ಸ್ವಾಗತಿಸಿದೆ.ಕೆಲವು ದಿನಗಳಾದ್ರೂ ದೀಪಗಳಿಂದ ಅಲಂಕರಿಸುವ ಸೌಜನ್ಯ ತೋರದ ಸರ್ಕಾರದ ವಿರುದ್ದ ಅಭಿಮಾನಿಗಳು ಛೀಮಾರಿ ಹಾಕಿದ್ದಾರೆ.13 ವರ್ಷಗಳ ನಿರಂತರ ಹೋರಾಟದಿಂದ ಸಂದ ಜಯಕ್ಕೆ ಮೊದಲ ದಿನವೇ ತಣ್ಣೀರು ಸುರಿದಂತಾಗಿದೆ.ಚುನಾವಣೆ ಹಿನ್ನಲೆ ಕಾಟಾಚಾರಕ್ಕೆ ಉದ್ಘಾಟಿಸಿರುವ ಸರ್ಕಾರದ ಕ್ರಮವನ್ನ ಅಭಿಮಾನಿಗಳು ತೀವ್ರವಾಗಿ ಖಂಡಿಸಿದ್ದಾರೆ…

Spread the love

Related post

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…
ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಕೊಳ್ಳೇಗಾಲ,ಜೂ26,Tv10 ಕನ್ನಡ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ಮೂರು ಮರಿಗಳು ಅಸಹಜ ಸಾವಿಗೀಡಾಗಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ…
ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025 ಕಿರೀಟ…

ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025…

ಮೈಸೂರು,ಜೂ26,Tv10 ಕನ್ನಡ ಮೈಸೂರಿನ ಪೀಡಿಯಾಟ್ರಿಕ್ ನ್ಯೂರಾಲಜಿಸ್ಟ್ ಡಾ.ಅನೂಷಾ ರಾಜ್ ರವರು ಮಿಸ್ ಮೆಡಿಕ್ವೀನ್ 2025 ಸ್ಪರ್ಧೆಯಲ್ಲಿ ವಿಜಯಿಯಾಗಿ ಹೊರಹೊಮ್ಮಿದ್ದಾರೆ. ಜೂನ್ 22 ರಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಸ್ಪರ್ಧೆಯಲ್ಲಿ…

Leave a Reply

Your email address will not be published. Required fields are marked *