ಹಗಲಿನಲ್ಲಿ ರಂಗುರಂಗಿನ ಚಾಲನೆ…ರಾತ್ರಿ ಕಗ್ಗತ್ತಲೆ…ವಿಷ್ಣು ಸ್ಮಾರಕ ಬಳಿ ಅವ್ಯವಸ್ಥೆ…ಅಭಿಮಾನಿಗಳಿಂದ ಸರ್ಕಾರಕ್ಕೆ ಛೀಮಾರಿ…

ಹಗಲಿನಲ್ಲಿ ರಂಗುರಂಗಿನ ಚಾಲನೆ…ರಾತ್ರಿ ಕಗ್ಗತ್ತಲೆ…ವಿಷ್ಣು ಸ್ಮಾರಕ ಬಳಿ ಅವ್ಯವಸ್ಥೆ…ಅಭಿಮಾನಿಗಳಿಂದ ಸರ್ಕಾರಕ್ಕೆ ಛೀಮಾರಿ…

ಹಗಲಿನಲ್ಲಿ ರಂಗುರಂಗಿನ ಚಾಲನೆ…ರಾತ್ರಿ ಕಗ್ಗತ್ತಲೆ…ವಿಷ್ಣು ಸ್ಮಾರಕ ಬಳಿ ಅವ್ಯವಸ್ಥೆ…ಅಭಿಮಾನಿಗಳಿಂದ ಸರ್ಕಾರಕ್ಕೆ ಛೀಮಾರಿ…

ಮೈಸೂರು,ಜ29,Tv10 ಕನ್ನಡ
ಡಾ.ವಿಷ್ಣುವರ್ಧನ್ ಅಭಿಮಾನಿಗಳ ಬಹುದಿನಗಳ ಕನಸು ನನಸಾಗಿದೆ.ಸಾಹಸಸಿಂಹ ನ ಸ್ಮಾರಕ ಅದ್ದೂರಿಯಾಗಿ ಲೋಕಾರ್ಪಣೆಯಾಗಿದೆ.ಆದ್ರೆ ಅಭಿಮಾನಿಗಳಿಗೆ ಸರ್ಕಾರ ಮೊದಲ ದಿನವೇ ಬೇಸರ ತರಿಸಿದೆ.ವಿಷ್ಣು ಸ್ಮಾರಕದ ಬಳಿ ಅವ್ಯವಸ್ಥೆ ಬಗ್ಗೆ ಅಭಿಮಾನಿಗಳು ಛೀಮಾರಿ ಹಾಕಿದ್ದಾರೆ.ಉದ್ಭೂರಿನ ಹಾಲಾಳು ಗ್ರಾಮದಲ್ಲಿ ಬೆಳಿಗ್ಗೆ ಸ್ಮಾರಕವನ್ನ ಆಡಂಬರದಿಂದ ರಂಗುರಂಗಾಗಿ ಲೋಕಾರ್ಪಣೆ ಮಾಡಿದೆ.ದೂರದ ಸ್ಥಳಗಳಿಂದ ಸ್ಮಾರಕವನ್ನ ಕಣ್ತುಂಬಿಕೊಳ್ಳಲು ಆಗಮಿಸಿದ ಅಭಿಮಾನಿಗಳಿಗೆ ನಿರಾಸೆ ತರಿಸಿದೆ.ಮೊದಲ ದಿನವೇ ಸ್ಮಾರಕ ಕಗ್ಗತ್ತಿಲಿನಲ್ಲಿ ಮುಳುಗಿದೆ.ಬಣ್ಣ ಬಣ್ಣದ ದೀಪಗಳಿಂದ ಕಂಗೊಳಿಸಬೇಕಿದ್ದ ಸ್ಮಾರಕ ಕತ್ತಲಿನಲ್ಲಿ ಲೀನವಾಗಿದೆ.ನೀರಿನ ವ್ಯವಸ್ಥೆ ಇಲ್ಲವಾಗಿದೆ.ನೆಚ್ಚಿನ ನಾಯಕ ನಟನ ನೆನಪುಗಳನ್ನ ಮೆಲುಕು ಹಾಕಲು ಬಂದ ಅಭಿಮಾನಿಗಳಿಗೆ ಅವ್ಯವಸ್ಥೆ ಸ್ವಾಗತಿಸಿದೆ.ಕೆಲವು ದಿನಗಳಾದ್ರೂ ದೀಪಗಳಿಂದ ಅಲಂಕರಿಸುವ ಸೌಜನ್ಯ ತೋರದ ಸರ್ಕಾರದ ವಿರುದ್ದ ಅಭಿಮಾನಿಗಳು ಛೀಮಾರಿ ಹಾಕಿದ್ದಾರೆ.13 ವರ್ಷಗಳ ನಿರಂತರ ಹೋರಾಟದಿಂದ ಸಂದ ಜಯಕ್ಕೆ ಮೊದಲ ದಿನವೇ ತಣ್ಣೀರು ಸುರಿದಂತಾಗಿದೆ.ಚುನಾವಣೆ ಹಿನ್ನಲೆ ಕಾಟಾಚಾರಕ್ಕೆ ಉದ್ಘಾಟಿಸಿರುವ ಸರ್ಕಾರದ ಕ್ರಮವನ್ನ ಅಭಿಮಾನಿಗಳು ತೀವ್ರವಾಗಿ ಖಂಡಿಸಿದ್ದಾರೆ…

Spread the love

Related post

ಕಳುವು ಮಾಲು ಮಾರಾಟ ಮಾಡಲು ಸಹಕರಿಸಿದ ಪ್ರಕರಣ…ಅಶೋಕಾಪುರಂ ಠಾಣೆ ಮುಖ್ಯಪೇದೆ ರಾಜು ಸಸ್ಪೆಂಡ್…

ಕಳುವು ಮಾಲು ಮಾರಾಟ ಮಾಡಲು ಸಹಕರಿಸಿದ ಪ್ರಕರಣ…ಅಶೋಕಾಪುರಂ ಠಾಣೆ ಮುಖ್ಯಪೇದೆ ರಾಜು…

ಮೈಸೂರು,ಸೆ7,Tv10 ಕನ್ನಡ ಕಳುವು ಮಾಡಿದ ಚಿನ್ನಾಭರಣಗಳನ್ನ ಮಾರಾಟ ಮಾಡಲು ಸಹಕರಿಸಿದ ಆರೋಪದ ಮೇಲೆ ಅಶೋಕಾಪುರಂ ಠಾಣೆ ಮುಖ್ಯಪೇದೆ ರಾಜು ಅಮಾನತುಪಡಿಸಿ ಆದೇಶ ಹೊರಡಿಸಲಾಗಿದೆ.ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್…
ಕೊಲೆ ಆರೋಪಿ ಅಂದರ್…ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…

ಕೊಲೆ ಆರೋಪಿ ಅಂದರ್…ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…

ನಂಜನಗೂಡು,ಸೆ7,Tv10 ಕನ್ನಡ ಅಕ್ರಮ ಸಂಭಂಧ ಹಿನ್ನಲೆ ವ್ಯಕ್ತಿಯನ್ನ ಮೊಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನ ಸೆರೆ ಹಿಡಿಯುವಲ್ಲಿ ನಂಜನಗೂಡು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.ಮಹದೇವ ಶೆಟ್ಟಿ (45) ಬಂಧಿತ…
ಗೌರಿಗಣೇಶ ಹಬ್ಬ ಹಿನ್ನೆಲೆ: ದಸರಾ ಆನೆಗಳಿಗೆ ವಿಶೇಷ ಪೂಜೆ …

ಗೌರಿಗಣೇಶ ಹಬ್ಬ ಹಿನ್ನೆಲೆ: ದಸರಾ ಆನೆಗಳಿಗೆ ವಿಶೇಷ ಪೂಜೆ …

ಮೈಸೂರು,ಸೆ7,Tv10 ಕನ್ನಡಗೌರಿ ಗಣೇಶ ಹಬ್ಬವಾದ ಇಂದು ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡಿರುವ ದಸರಾ ಗಜಪಡೆಗೆ ವಿಶೇಷ ಪೂಜೆ ನೆರವೇರಿಸಲಾಯಿತು.ಅಭಿಮನ್ಯು ನೇತೃತ್ವದ ಎಲ್ಲಾ ಹದಿನಾಲ್ಕು ಆನೆಗಳಿಗೂ ಪೂಜೆ ನೆರವೇರಿಸಲಾಯಿತು.ಮೈಸೂರು ಜಿಲ್ಲಾಧಿಕಾರಿ…

Leave a Reply

Your email address will not be published. Required fields are marked *