ಸರ್ಕಾರದ ಬೊಕ್ಕಸಕ್ಕೆ ಕನ್ನ…ಭೂಕಂದಾಯ ರಸೀತಿಯಲ್ಲಿ ವಂಚನೆ…ಕಚೇರಿ ಕಾಪಿಯಲ್ಲಿ ಒಂದು ಮೊತ್ತ…ರೈತರಿಗೆ ಕೊಟ್ಟ ರಸೀತಿಯಲ್ಲಿ ಒಂದು ಮೊತ್ತ…ಗೋಲ್ಮಾಲ್ ಗ್ರಾಮ ಲೆಕ್ಕಿಗ ಆಂಥೋನಿ ಸುನಿಲ್ ರಾಜ್…

ಸರ್ಕಾರದ ಬೊಕ್ಕಸಕ್ಕೆ ಕನ್ನ…ಭೂಕಂದಾಯ ರಸೀತಿಯಲ್ಲಿ ವಂಚನೆ…ಕಚೇರಿ ಕಾಪಿಯಲ್ಲಿ ಒಂದು ಮೊತ್ತ…ರೈತರಿಗೆ ಕೊಟ್ಟ ರಸೀತಿಯಲ್ಲಿ ಒಂದು ಮೊತ್ತ…ಗೋಲ್ಮಾಲ್ ಗ್ರಾಮ ಲೆಕ್ಕಿಗ ಆಂಥೋನಿ ಸುನಿಲ್ ರಾಜ್…

ಸರ್ಕಾರದ ಬೊಕ್ಕಸಕ್ಕೆ ಕನ್ನ…ಭೂಕಂದಾಯ ರಸೀತಿಯಲ್ಲಿ ವಂಚನೆ…ಕಚೇರಿ ಕಾಪಿಯಲ್ಲಿ ಒಂದು ಮೊತ್ತ…ರೈತರಿಗೆ ಕೊಟ್ಟ ರಸೀತಿಯಲ್ಲಿ ಒಂದು ಮೊತ್ತ…ಗೋಲ್ಮಾಲ್ ಗ್ರಾಮ ಲೆಕ್ಕಿಗ ಆಂಥೋನಿ ಸುನಿಲ್ ರಾಜ್…

ಟಿ.ನರಸೀಪುರ,ಜ31,Tv10 ಕನ್ನಡ
ರೈತರು ಜಮೀನುಗಳಿಗೆ ಪಾವತಿಸಿರುವ ಭೂಕಂದಾಯ ಸರ್ಕಾರಿ ಬೊಕ್ಕಸಕ್ಕೆ ಸೇರುವ ಬದಲು ಗ್ರಾಮಲೆಕ್ಕಿಗನ ಜೇಬಿಗೆ ಸೇರಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಮೂಗೂರು ಹೋಬಳಿಯ ಮಾಡ್ರಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.ಮಾಡ್ರಹಳ್ಳಿ ಗ್ರಾಮದ ಗ್ರಾಮ ಲೆಕ್ಕಿಗ ಅಂಥೋನಿ ಸುನಿಲ್ ರಾಜ್ ಮೇಲೆ ಇಂತಹ ಆರೋಪ ಕೇಳಿ ಬಂದಿದೆ.ಕಂದಾಯದ ಹಣ ಪಾವತಿಸಿದ ಭೂ ಮಾಲೀಕರಿಗೆ ವಂಚಿಸಿರುವುದಲ್ಲದೆ ಸರ್ಕಾರದ ಬೊಕ್ಕಸಕ್ಕೂ ನಷ್ಟ ಉಂಟು ಮಾಡಿದ್ದಾರೆ.ಮೂಲ ಪ್ರತಿಯಲ್ಲೇ ಒಂದು ಮೊತ್ತ ರೈತರಿಗೆ ನೀಡಿದ ರಸೀತಿಯಲ್ಲೇ ಒಂದು ಮೊತ್ತ ನಮೂದಾಗಿದೆ.ಒಂದೇ ಸೀರಿಯಲ್ ನಂಬರ್ ರಸೀತಿಯಲ್ಲಿ ಎರಡು ಮೊತ್ತ ದಾಖಲಾಗಿದೆ.ಒಂದೇ ದಿನಾಂಕದಲ್ಲಿ 7 ರೈತರಿಂದ ಹಣ ಪಾವತಿಸಿಕೊಂಡಿರುವ ಅಂಥೋನಿ ಸುನಿಲ್ ರಾಜ್ ಸರ್ಕಾರಕ್ಕೆ ಸೇರಬೇಕಾದ ಹಣವನ್ನ ತಮ್ಮ ಕಿಸೆಗೆ ಸೇರಿಸಿಕೊಂಡಿದ್ದಾರೆ.

ದಿನಾಂಕ 1-8-2022 ರಂದು 7 ಮಂದಿ ರೈತರು ತಮ್ಮ ಜಮೀನಿಗೆ ಭೂಕಂದಾಯ ಪಾವತಿಸಿದ್ದಾರೆ. 7 ರೈತರಿಗೆ ನೀಡಿರುವ ರಸೀತಿಯ ಮೊತ್ತಕ್ಕೂ ಹಾಗೂ ಸರ್ಕಾರದ ಕಚೇರಿಯ ಪ್ರತಿಯಲ್ಲಿರುವ ಮೊತ್ತಕ್ಕೂ ವೆತ್ಯಾಸ ಕಂಡು ಬಂದಿದೆ.ಒಟ್ಟು ಮೊತ್ತ 8162/- ರೂ ಸಂದಾಯವಾಗಿದೆ.ಸರ್ಕಾರ ಬೊಕ್ಕಸಕ್ಕೆ ಕೇವಲ 440/- ರೂ ಮಾತ್ರ ಸೇರಿದೆ.7722/- ರೂ ಗ್ರಾಮ ಲೆಕ್ಕಿಗನ ಜೇಬು ಸೇರಿದೆ.ಅಂಥೋನಿ ಸುನಿಲ್ ರಾಜ್ ಮಾಡಿರುವ ಗೋಲ್ಮಾಲ್ ವಿವರ ಇಲ್ಲಿದೆ…

ಅಂಥೋನಿ ಸುನಿಲ್ ರಾಜ್ ನ ವಂಚನೆಯನ್ನ ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ದಾಖಲೆ ಸಮೇತ ಬಯಲು ಮಾಡಿದ್ದಾರೆ.ಕೂಡಲೇ ಈತನ ವಿರುದ್ದ ಕಾನೂನು ರೀತಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ…

Spread the love

Related post

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…
ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಕೊಳ್ಳೇಗಾಲ,ಜೂ26,Tv10 ಕನ್ನಡ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ಮೂರು ಮರಿಗಳು ಅಸಹಜ ಸಾವಿಗೀಡಾಗಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ…
ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025 ಕಿರೀಟ…

ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025…

ಮೈಸೂರು,ಜೂ26,Tv10 ಕನ್ನಡ ಮೈಸೂರಿನ ಪೀಡಿಯಾಟ್ರಿಕ್ ನ್ಯೂರಾಲಜಿಸ್ಟ್ ಡಾ.ಅನೂಷಾ ರಾಜ್ ರವರು ಮಿಸ್ ಮೆಡಿಕ್ವೀನ್ 2025 ಸ್ಪರ್ಧೆಯಲ್ಲಿ ವಿಜಯಿಯಾಗಿ ಹೊರಹೊಮ್ಮಿದ್ದಾರೆ. ಜೂನ್ 22 ರಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಸ್ಪರ್ಧೆಯಲ್ಲಿ…

Leave a Reply

Your email address will not be published. Required fields are marked *