ಪೊಲೀಸಪ್ಪನ ಸೋಗಿನಲ್ಲಿ ವಸೂಲಿಗೆ ವಿಫಲ ಯತ್ನ…ರಿಯಲ್ ಪೊಲೀಸ್ ಹೆಸರೇಳಿದ ತಕ್ಷಣ ಎಸ್ಕೇಪ್…

ಪೊಲೀಸಪ್ಪನ ಸೋಗಿನಲ್ಲಿ ವಸೂಲಿಗೆ ವಿಫಲ ಯತ್ನ…ರಿಯಲ್ ಪೊಲೀಸ್ ಹೆಸರೇಳಿದ ತಕ್ಷಣ ಎಸ್ಕೇಪ್…

ಹುಣಸೂರು,ಏ7,Tv10 ಕನ್ನಡ

ಪೊಲೀಸಪ್ಪನ ಸೋಗಿನಲ್ಲಿ ಅಮಾಯಕರ ಬಳಿ ಹಣ ವಸೂಲಿಗೆ ಬಂದ ವ್ಯಕ್ತಿಯ ನಿಜ ಬಣ್ಣ ತಿಳಿದ ತಕ್ಷಣ ಪರಾರಿಯಾದ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಹಂದನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.ಹೆಚ್.ಡಿ.ಕೋಟೆ ಪೇದೆ ಸುರೇಶ್ ಎಂಬ ಹೆಸರಿನಲ್ಲಿ ಹಣ ವಸೂಲಿ ಮಾಡಲು ಬಂದ ಖದೀಮನ ವರ್ತನೆಯಿಂದ ಅನುಮಾನಗೊಂಡು ನಿಜವಾದ ಪೊಲೀಸರಿಗೆ ಫೋನ್ ಮಾಡಿದ ತಕ್ಷಣ ಖದೀಮ ಎಸ್ಕೇಪ್ ಆಗಿದ್ದಾನೆ.

ಹಂದನಹಳ್ಳಿಯ ಕುಟುಂಬವೊಂದರಲ್ಲಿ ವರದಕ್ಷಿಣೆ ಪ್ರಕರಣ ದಾಖಲಾಗಿದೆ.ಛಾಯಾದೇವಿ ಎಂಬುವರು ತಮ್ಮ ಪತಿ ಸಂಪತ್ ಕುಮಾರ್ ಮೇಲೆ ಮೈಸೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.ಈ ಮಾಹಿತಿ ಅರಿತ ಅಪರಿಚಿತ ವ್ಯಕ್ತಿ ತಾನು ಹೆಚ್.ಡಿ.ಕೋಟೆ ಠಾಣೆಯ ಪೇದೆ ನಿಮ್ಮ ಪತಿಯನ್ನ ಬಂಧಿಸುವಂತೆ ವಾರೆಂಟ್ ಆಗಿದೆ ಈ ಬಗ್ಗೆ ಹೇಳಿಕೆ ಪಡೆಯಬೇಕು ಎಂದು ಹೇಳಿಕೊಂಡು ಛಾಯಾದೇವಿ ರವರ ಮನೆಗೆ ಬಂದಿದ್ದಾನೆ.ಸಂಪತ್ ಕುಮಾರ್ ನ್ನ ಬಂಧಿಸುತ್ತಿದ್ದೇವೆ ಎಂದು ನಂಬಿಸಿ ಹೇಳಿಕೆ ಪಡೆಯವಂತೆ ನಟಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.ಈತನ ವರ್ತನೆ ಅನುಮಾನಾಸ್ಪದವಾಗಿ ಕಂಡುಬಂದಿದ್ದು ಸ್ಥಳೀಯರಾದ ನಿಶಾಂತ್ ಎಂಬುವರು ಹೆಚ್.ಡಿ.ಕೋಟೆ ಠಾಣೆ ಫೋನ್ ಮಾಡಿ ಈತನ ಬಗ್ಗೆ ವಿಚಾರಿಸಿದ್ದಾರೆ.ಈತನ ಫೋಟೋವನ್ನ ಹೆಚ್.ಡಿ.ಕೋಟೆ ಠಾಣೆಯ ನಿರೀಕ್ಷಕರಿಗೆ ಕಳುಹಿಸಿದಾಗ ಪೋಲೀಸ್ ಅಲ್ಲವೆಂದು ಖಚಿತವಾಗಿದೆ.ಈ ಬೆಳವಣಿಗೆ ನಡೆಯುತ್ತಿದ್ದಂತೆಯೇ ನಕಲಿ ಪೊಲೀಸ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ…

Spread the love

Related post

MDA ವಿಶೇಷ ಭೂ ಸ್ವಾಧೀನ ಇಲಾಖೆ ವ್ಯವಸ್ಥಾಪಕಿ ಬಿ.ಶೃತಿ ಎತ್ತಂಗಡಿ…ಕ್ರಿಮಿನಲ್ ಪ್ರಕರಣದಲ್ಲಿ ಭಾಗಿ ಆರೋಪ ಹಿನ್ನಲೆ…ಮಾತೃ ಇಲಾಖೆಗೆ ಹಿಂದಿರುಗುವಂತೆ ಸೂಚನೆ…ಸೇವೆಯಿಂದ ಬಿಡುಗಡೆ ಮಾಡಲು ಎಂಡಿಎ ಮೀನಾಮೇಷ…

MDA ವಿಶೇಷ ಭೂ ಸ್ವಾಧೀನ ಇಲಾಖೆ ವ್ಯವಸ್ಥಾಪಕಿ ಬಿ.ಶೃತಿ ಎತ್ತಂಗಡಿ…ಕ್ರಿಮಿನಲ್ ಪ್ರಕರಣದಲ್ಲಿ…

MDA ವಿಶೇಷ ಭೂ ಸ್ವಾಧೀನ ಇಲಾಖೆ ವ್ಯವಸ್ಥಾಪಕಿ ಬಿ.ಶೃತಿ ಎತ್ತಂಗಡಿ…ಕ್ರಿಮಿನಲ್ ಪ್ರಕರಣದಲ್ಲಿ ಭಾಗಿ ಆರೋಪ ಹಿನ್ನಲೆ…ಮಾತೃ ಇಲಾಖೆಗೆ ಹಿಂದಿರುಗುವಂತೆ ಸೂಚನೆ…ಸೇವೆಯಿಂದ ಬಿಡುಗಡೆ ಮಾಡಲು ಎಂಡಿಎ ಮೀನಾಮೇಷ… ಮೈಸೂರು,ಮಾ10,Tv10 ಕನ್ನಡ…
ಗುಡ್ ಲಕ್ ಇಂಡಿಯಾ…ಬ್ಲಾಕ್ ಕ್ಯಾಪ್ಸ್ ಗೆ ಮಣಿಸಿ ಗೆದ್ದು ಬರಲಿ ಬ್ಲೂ ಬಾಯ್ಸ್…ಅಭಿಮಾನಿಗಳ ಮುಖದ ಮೇಲೆ ರಾರಾಜಿಸಿದ ತ್ರಿವಣ ಧ್ವಜ…ಮೈಸೂರಿನಲ್ಲಿ ಹರಿದುಬಂದ ವಿಶಸ್ ಮಹಾಪೂರ…

ಗುಡ್ ಲಕ್ ಇಂಡಿಯಾ…ಬ್ಲಾಕ್ ಕ್ಯಾಪ್ಸ್ ಗೆ ಮಣಿಸಿ ಗೆದ್ದು ಬರಲಿ ಬ್ಲೂ…

ಗುಡ್ ಲಕ್ ಇಂಡಿಯಾ…ಬ್ಲಾಕ್ ಕ್ಯಾಪ್ಸ್ ಗೆ ಮಣಿಸಿ ಗೆದ್ದು ಬರಲಿ ಬ್ಲೂ ಬಾಯ್ಸ್…ಅಭಿಮಾನಿಗಳ ಮುಖದ ಮೇಲೆ ರಾರಾಜಿಸಿದ ತ್ರಿವಣ ಧ್ವಜ…ಮೈಸೂರಿನಲ್ಲಿ ಹರಿದುಬಂದ ವಿಶಸ್ ಮಹಾಪೂರ… ಮೈಸೂರು,ಮಾ8,Tv10 ಕನ್ನಡ ವಿಶ್ವಕಪ್…
ನದಿಪಾತ್ರದ ಮರಗಳ ಮಾರಣ ಹೋಮ…ಎಸ್ಕೇಪ್ ಆದ ಖದೀಮರು…ಸಚಿವ ಹೆಚ್.ಸಿ.ಮಹದೇವಪ್ಪ ಸಂಬಂಧಿಕರಿಂದ ಕೃತ್ಯ ಆರೋಪ…

ನದಿಪಾತ್ರದ ಮರಗಳ ಮಾರಣ ಹೋಮ…ಎಸ್ಕೇಪ್ ಆದ ಖದೀಮರು…ಸಚಿವ ಹೆಚ್.ಸಿ.ಮಹದೇವಪ್ಪ ಸಂಬಂಧಿಕರಿಂದ ಕೃತ್ಯ…

ನದಿಪಾತ್ರದ ಮರಗಳ ಮಾರಣ ಹೋಮ…ಎಸ್ಕೇಪ್ ಆದ ಖದೀಮರು…ಸಚಿವ ಹೆಚ್.ಸಿ.ಮಹದೇವಪ್ಪ ಸಂಬಂಧಿಕರಿಂದ ಕೃತ್ಯ ಆರೋಪ… ನಂಜನಗೂಡು,ಮಾ8,Tv10 ಕನ್ನಡ ನಂಜನಗೂಡು ಕಪಿಲಾ ನದಿ ಪಾತ್ರದ ಭಾರಿ ಮರಗಳ ಮಾರಣಹೋಮವಾಗಿದೆ.ಶ್ರೀಕಂಠೇಶ್ವರನ ದೇವಾಲಯ ಸಮೀಪ…

Leave a Reply

Your email address will not be published. Required fields are marked *