ಪೊಲೀಸಪ್ಪನ ಸೋಗಿನಲ್ಲಿ ವಸೂಲಿಗೆ ವಿಫಲ ಯತ್ನ…ರಿಯಲ್ ಪೊಲೀಸ್ ಹೆಸರೇಳಿದ ತಕ್ಷಣ ಎಸ್ಕೇಪ್…

ಪೊಲೀಸಪ್ಪನ ಸೋಗಿನಲ್ಲಿ ವಸೂಲಿಗೆ ವಿಫಲ ಯತ್ನ…ರಿಯಲ್ ಪೊಲೀಸ್ ಹೆಸರೇಳಿದ ತಕ್ಷಣ ಎಸ್ಕೇಪ್…

ಹುಣಸೂರು,ಏ7,Tv10 ಕನ್ನಡ

ಪೊಲೀಸಪ್ಪನ ಸೋಗಿನಲ್ಲಿ ಅಮಾಯಕರ ಬಳಿ ಹಣ ವಸೂಲಿಗೆ ಬಂದ ವ್ಯಕ್ತಿಯ ನಿಜ ಬಣ್ಣ ತಿಳಿದ ತಕ್ಷಣ ಪರಾರಿಯಾದ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಹಂದನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.ಹೆಚ್.ಡಿ.ಕೋಟೆ ಪೇದೆ ಸುರೇಶ್ ಎಂಬ ಹೆಸರಿನಲ್ಲಿ ಹಣ ವಸೂಲಿ ಮಾಡಲು ಬಂದ ಖದೀಮನ ವರ್ತನೆಯಿಂದ ಅನುಮಾನಗೊಂಡು ನಿಜವಾದ ಪೊಲೀಸರಿಗೆ ಫೋನ್ ಮಾಡಿದ ತಕ್ಷಣ ಖದೀಮ ಎಸ್ಕೇಪ್ ಆಗಿದ್ದಾನೆ.

ಹಂದನಹಳ್ಳಿಯ ಕುಟುಂಬವೊಂದರಲ್ಲಿ ವರದಕ್ಷಿಣೆ ಪ್ರಕರಣ ದಾಖಲಾಗಿದೆ.ಛಾಯಾದೇವಿ ಎಂಬುವರು ತಮ್ಮ ಪತಿ ಸಂಪತ್ ಕುಮಾರ್ ಮೇಲೆ ಮೈಸೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.ಈ ಮಾಹಿತಿ ಅರಿತ ಅಪರಿಚಿತ ವ್ಯಕ್ತಿ ತಾನು ಹೆಚ್.ಡಿ.ಕೋಟೆ ಠಾಣೆಯ ಪೇದೆ ನಿಮ್ಮ ಪತಿಯನ್ನ ಬಂಧಿಸುವಂತೆ ವಾರೆಂಟ್ ಆಗಿದೆ ಈ ಬಗ್ಗೆ ಹೇಳಿಕೆ ಪಡೆಯಬೇಕು ಎಂದು ಹೇಳಿಕೊಂಡು ಛಾಯಾದೇವಿ ರವರ ಮನೆಗೆ ಬಂದಿದ್ದಾನೆ.ಸಂಪತ್ ಕುಮಾರ್ ನ್ನ ಬಂಧಿಸುತ್ತಿದ್ದೇವೆ ಎಂದು ನಂಬಿಸಿ ಹೇಳಿಕೆ ಪಡೆಯವಂತೆ ನಟಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.ಈತನ ವರ್ತನೆ ಅನುಮಾನಾಸ್ಪದವಾಗಿ ಕಂಡುಬಂದಿದ್ದು ಸ್ಥಳೀಯರಾದ ನಿಶಾಂತ್ ಎಂಬುವರು ಹೆಚ್.ಡಿ.ಕೋಟೆ ಠಾಣೆ ಫೋನ್ ಮಾಡಿ ಈತನ ಬಗ್ಗೆ ವಿಚಾರಿಸಿದ್ದಾರೆ.ಈತನ ಫೋಟೋವನ್ನ ಹೆಚ್.ಡಿ.ಕೋಟೆ ಠಾಣೆಯ ನಿರೀಕ್ಷಕರಿಗೆ ಕಳುಹಿಸಿದಾಗ ಪೋಲೀಸ್ ಅಲ್ಲವೆಂದು ಖಚಿತವಾಗಿದೆ.ಈ ಬೆಳವಣಿಗೆ ನಡೆಯುತ್ತಿದ್ದಂತೆಯೇ ನಕಲಿ ಪೊಲೀಸ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ…

Spread the love

Related post

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ…

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು ಮೈಸೂರು, ಆ.4: ಮೈಸೂರಿನ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ…
ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ… ಹುಣಸೂರು,ಆ3,Tv10 ಕನ್ನಡ ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ನೇತೃತ್ವದ…
ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ… ಮೈಸೂರು,ಆ3,Tv10 ಕನ್ನಡ ಪೊಲೀಸ್ ಇಲಾಖೆಯ ಮಿಕ್ಕುಳಿದ ವೃಂದ ಹಾಗೂ ಸಿವಿಲ್ ಪೊಲೀಸ್ ನೇಮಕಾತಿಯ ಲಿಖಿತ ಪರೀಕ್ಷೆ ವೇಳೆ…

Leave a Reply

Your email address will not be published. Required fields are marked *