ಲಾಡ್ಜ್ ನಲ್ಲಿ ಹೆತ್ತಮಗನನ್ನ ಬಿಟ್ಟು ಎಸ್ಕೇಪ್ ಆದ ಮಹಿಳೆ…ಕೆಲವೇ ಗಂಟೆಗಳಲ್ಲಿ ಪತ್ತೆ ಮಾಡಿದ ಲಷ್ಕರ್ ಠಾಣಾ ಪೊಲೀಸರು…ಈಕೆ ಹೀಗೆ ಮಾಡಿದ್ದು ಯಾಕೆ ಗೊತ್ತಾ…?

ಲಾಡ್ಜ್ ನಲ್ಲಿ ಹೆತ್ತಮಗನನ್ನ ಬಿಟ್ಟು ಎಸ್ಕೇಪ್ ಆದ ಮಹಿಳೆ…ಕೆಲವೇ ಗಂಟೆಗಳಲ್ಲಿ ಪತ್ತೆ ಮಾಡಿದ ಲಷ್ಕರ್ ಠಾಣಾ ಪೊಲೀಸರು…ಈಕೆ ಹೀಗೆ ಮಾಡಿದ್ದು ಯಾಕೆ ಗೊತ್ತಾ…?

ಮೈಸೂರು,ಏ16,Tv10 ಕನ್ನಡ

ಲಾಡ್ಜ್ ನಲ್ಲಿ ಹೆತ್ತಮಗನನ್ನ ಒಂಟಿಯಾಗಿ ಬಿಟ್ಟ ಮಹಿಳೆ ಮಧ್ಯರಾತ್ರಿ ಧಢೀರ್ ನಾಪತ್ತೆಯಾದ ಘಟನೆ ಮೈಸೂರಿನ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.ಘಟನೆ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಬಾಲಕನನ್ನ ತಮ್ಮ ವಶಕ್ಕೆ ಪಡೆದ ಪೊಲೀಸರು ಮಹಿಳೆಯನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ತುಮಕೂರು ಮೂಲದ ಭಾರ್ಗವಿ ಮಗನನ್ನ ಲಾಡ್ಜ್ ನಲ್ಲಿ ಬಿಟ್ಟುಹೋದ ಮಹಿಳೆ.ಎರಡು ದಿನಗಳ ಹಿಂದೆ ಭಾರ್ಗವಿ ತನ್ನ ಮಗ ಶಶಾಂಕ್ ಜೊತೆ ಮೈಸೂರಿಗೆ ಬಂದು ವೈಶಾಖ್ ಹೋಟೆಲ್ ನಲ್ಲಿ ತಂಗಿದ್ದಾರೆ.ಇಂದು ಬೆಳಿಗ್ಗೆ ಚೆಕ್ ಔಟ್ ಇದ್ದ ಕಾರಣ ವ್ಯವಸ್ಥಾಪಕರಾದ ಅರುಣ್ ಕುಮಾರ್ ಕೊಠಡಿಗೆ ಬಂದಾಗ ಶಶಾಂಕ್ ಒಬ್ಬನೇ ಇರುವುದು ಬೆಳಕಿಗೆ ಬಂದಿದೆ.ತಾಯಿ ಹೊರಗೆ ಹೋಗಿರುವ ಬಗ್ಗೆ ಮಾಹಿತಿ ಇಲ್ಲದ ಕಾರಣ ಲಾಡ್ಜ್ ನ ಸಿಸಿ ಕ್ಯಾಮರಾದಲ್ಲಿ ಪರಿಶೀಲನೆ ಮಾಡಿದಾಗ ಭಾರ್ಗವಿ ರವರು ಮುಂಜಾನೆ 3 ಗಂಟೆ ವೇಳೆಯಲ್ಲಿ ಸೆಲ್ಲಾರ್ ಮೂಲಕ ನಿರ್ಗಮಿಸಿರುವ ದೃಶ್ಯ ಸೆರೆಯಾಗಿದೆ.ಕೂಡಲೇ ಬಾಲಕ ಶಶಾಂಕ್ ನ್ನ ಲಷ್ಕರ್ ಠಾಣೆಗೆ ಕರೆತಂದು ಪೊಲೀಸರ ವಶಕ್ಕೆ ನೀಡಿದ್ದಾರೆ.ಭಾರ್ಗವಿ ರವರ ಬಗ್ಗೆ ಹುಡುಕಾಟ ನಡೆಸಿದ ಪೊಲೀಸರಿಗೆ ಮಧ್ಯಾಹ್ನದ ವೇಳೆ ಪತ್ತೆಯಾಗಿದ್ದಾರೆ.

ಭಾರ್ಗವಿ ತಮ್ಮ ಗಂಡನಿಂದ ವಿಚ್ಛೇದನ ಪಡೆದಿದ್ದು ಮೈಸೂರಿನ ಯುವಕನೊಬ್ಬನೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದಾಳೆ.ಯುವಕನ ಮನೆಗೆ ತೆರಳಿ ಭಾರ್ಗವಿ ರಂಪಾಟ ಮಾಡಿದ್ದಾಳೆಂದು ಹೇಳಲಾಗಿದೆ.ನಂತರ ಭಾರ್ಗವಿ ರವರ ಪೋಷಕರಿಗೆ ಪೊಲೀಸರು ವಿಚಾರ ಮುಟ್ಟಿಸಿದ್ದಾರೆ.ಬಾಲಕ ಶಶಾಂಕ್ ನ್ನ ಪೊಲೀಸರು ಬಾಲ ಮಂದಿರ ವಶಕ್ಕೆ ನೀಡಿದ್ದು ಇದೀಗ ಭಾರ್ಗವಿ ಹಾಗೂ ಶಶಾಂಕ್ ನ್ನ ಸುರಕ್ಷಿತವಾಗಿ ಪೋಷಕರನ್ನ ಸೇರಿಸಲು ಲಷ್ಕರ್ ಠಾಣೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ…

Spread the love

Related post

ಮುಡಾ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ಸಸ್ಪೆಂಡ್…ಕರ್ತವ್ಯ ಲೋಪ ಸಾಬೀತಾದ ಹಿನ್ನಲೆ ಸರ್ಕಾರದ ಆದೇಶ…RTI ಕಾರ್ಯಕರ್ತ ನಾಗೇಂದ್ರ ನೀಡಿದ ದೂರು…

ಮುಡಾ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ಸಸ್ಪೆಂಡ್…ಕರ್ತವ್ಯ ಲೋಪ ಸಾಬೀತಾದ ಹಿನ್ನಲೆ ಸರ್ಕಾರದ…

ಮುಡಾ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ಸಸ್ಪೆಂಡ್…ಕರ್ತವ್ಯ ಲೋಪ ಸಾಬೀತಾದ ಹಿನ್ನಲೆ ಸರ್ಕಾರದ ಆದೇಶ…RTI ಕಾರ್ಯಕರ್ತ ನಾಗೇಂದ್ರ ನೀಡಿದ ದೂರು… ಮೈಸೂರು,ಅ27,Tv10 ಕನ್ನಡ ಕ್ರಮಬದ್ದವಲ್ಲದ ವ್ಯಕ್ತಿಗಳಿಗೆ ಅಕ್ರಮವಾಗಿ ಕ್ರಯಪತ್ರ ನೀಡಿದ…
ದೇವಸ್ಥಾನಕ್ಕೆ ತೆರಳುವ ಮಾರ್ಗ ಪ್ರವೇಶ ಮುಖ್ಯ ದ್ವಾರ ಹಾಗೂ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಎಂ ಆರ್ ಮಂಜುನಾಥ್.

ದೇವಸ್ಥಾನಕ್ಕೆ ತೆರಳುವ ಮಾರ್ಗ ಪ್ರವೇಶ ಮುಖ್ಯ ದ್ವಾರ ಹಾಗೂ ರಸ್ತೆ ನಿರ್ಮಾಣಕ್ಕೆ…

ದೇವಸ್ಥಾನಕ್ಕೆ ತೆರಳುವ ಮಾರ್ಗ ಪ್ರವೇಶ ಮುಖ್ಯ ದ್ವಾರ ಹಾಗೂ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಎಂ ಆರ್ ಮಂಜುನಾಥ್. ಹನೂರು:ಶ್ರೀ ಬೈಯಮ್ಮತಾಯಿ ಹಾಗೂ ಶ್ರೀಆಂಜನೇಯ ಸ್ವಾಮಿ…
ವರುಣ ನಾಲೆ ಜಾಗ ಭೂ ಪರಿವರ್ತನೆ ಆರೋಪ ಸಾಬೀತು…ವಿಎ ಪ್ರಾಸಿಕ್ಯೂಷನ್‌ಗೆ ಜಿಲ್ಲಾಧಿಕಾರಿ ಅನುಮತಿ…Tv10 ಇಂಪ್ಯಾಕ್ಟ್

ವರುಣ ನಾಲೆ ಜಾಗ ಭೂ ಪರಿವರ್ತನೆ ಆರೋಪ ಸಾಬೀತು…ವಿಎ ಪ್ರಾಸಿಕ್ಯೂಷನ್‌ಗೆ ಜಿಲ್ಲಾಧಿಕಾರಿ…

ವರುಣ ನಾಲೆ ಜಾಗ ಭೂ ಪರಿವರ್ತನೆ ಆರೋಪ ಸಾಬೀತು…ವಿಎ ಪ್ರಾಸಿಕ್ಯೂಷನ್‌ಗೆ ಜಿಲ್ಲಾಧಿಕಾರಿ ಅನುಮತಿ…Tv10 ಇಂಪ್ಯಾಕ್ಟ್ ಶ್ರೀರಂಗಪಟ್ಟಣ,ಅ25,Tv10 ಕನ್ನಡ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಸರ್ವೇ ನಂ. 44ರಲ್ಲಿ 2.13…

Leave a Reply

Your email address will not be published. Required fields are marked *