ಲಾಡ್ಜ್ ನಲ್ಲಿ ಹೆತ್ತಮಗನನ್ನ ಬಿಟ್ಟು ಎಸ್ಕೇಪ್ ಆದ ಮಹಿಳೆ…ಕೆಲವೇ ಗಂಟೆಗಳಲ್ಲಿ ಪತ್ತೆ ಮಾಡಿದ ಲಷ್ಕರ್ ಠಾಣಾ ಪೊಲೀಸರು…ಈಕೆ ಹೀಗೆ ಮಾಡಿದ್ದು ಯಾಕೆ ಗೊತ್ತಾ…?

ಲಾಡ್ಜ್ ನಲ್ಲಿ ಹೆತ್ತಮಗನನ್ನ ಬಿಟ್ಟು ಎಸ್ಕೇಪ್ ಆದ ಮಹಿಳೆ…ಕೆಲವೇ ಗಂಟೆಗಳಲ್ಲಿ ಪತ್ತೆ ಮಾಡಿದ ಲಷ್ಕರ್ ಠಾಣಾ ಪೊಲೀಸರು…ಈಕೆ ಹೀಗೆ ಮಾಡಿದ್ದು ಯಾಕೆ ಗೊತ್ತಾ…?

ಮೈಸೂರು,ಏ16,Tv10 ಕನ್ನಡ

ಲಾಡ್ಜ್ ನಲ್ಲಿ ಹೆತ್ತಮಗನನ್ನ ಒಂಟಿಯಾಗಿ ಬಿಟ್ಟ ಮಹಿಳೆ ಮಧ್ಯರಾತ್ರಿ ಧಢೀರ್ ನಾಪತ್ತೆಯಾದ ಘಟನೆ ಮೈಸೂರಿನ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.ಘಟನೆ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಬಾಲಕನನ್ನ ತಮ್ಮ ವಶಕ್ಕೆ ಪಡೆದ ಪೊಲೀಸರು ಮಹಿಳೆಯನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ತುಮಕೂರು ಮೂಲದ ಭಾರ್ಗವಿ ಮಗನನ್ನ ಲಾಡ್ಜ್ ನಲ್ಲಿ ಬಿಟ್ಟುಹೋದ ಮಹಿಳೆ.ಎರಡು ದಿನಗಳ ಹಿಂದೆ ಭಾರ್ಗವಿ ತನ್ನ ಮಗ ಶಶಾಂಕ್ ಜೊತೆ ಮೈಸೂರಿಗೆ ಬಂದು ವೈಶಾಖ್ ಹೋಟೆಲ್ ನಲ್ಲಿ ತಂಗಿದ್ದಾರೆ.ಇಂದು ಬೆಳಿಗ್ಗೆ ಚೆಕ್ ಔಟ್ ಇದ್ದ ಕಾರಣ ವ್ಯವಸ್ಥಾಪಕರಾದ ಅರುಣ್ ಕುಮಾರ್ ಕೊಠಡಿಗೆ ಬಂದಾಗ ಶಶಾಂಕ್ ಒಬ್ಬನೇ ಇರುವುದು ಬೆಳಕಿಗೆ ಬಂದಿದೆ.ತಾಯಿ ಹೊರಗೆ ಹೋಗಿರುವ ಬಗ್ಗೆ ಮಾಹಿತಿ ಇಲ್ಲದ ಕಾರಣ ಲಾಡ್ಜ್ ನ ಸಿಸಿ ಕ್ಯಾಮರಾದಲ್ಲಿ ಪರಿಶೀಲನೆ ಮಾಡಿದಾಗ ಭಾರ್ಗವಿ ರವರು ಮುಂಜಾನೆ 3 ಗಂಟೆ ವೇಳೆಯಲ್ಲಿ ಸೆಲ್ಲಾರ್ ಮೂಲಕ ನಿರ್ಗಮಿಸಿರುವ ದೃಶ್ಯ ಸೆರೆಯಾಗಿದೆ.ಕೂಡಲೇ ಬಾಲಕ ಶಶಾಂಕ್ ನ್ನ ಲಷ್ಕರ್ ಠಾಣೆಗೆ ಕರೆತಂದು ಪೊಲೀಸರ ವಶಕ್ಕೆ ನೀಡಿದ್ದಾರೆ.ಭಾರ್ಗವಿ ರವರ ಬಗ್ಗೆ ಹುಡುಕಾಟ ನಡೆಸಿದ ಪೊಲೀಸರಿಗೆ ಮಧ್ಯಾಹ್ನದ ವೇಳೆ ಪತ್ತೆಯಾಗಿದ್ದಾರೆ.

ಭಾರ್ಗವಿ ತಮ್ಮ ಗಂಡನಿಂದ ವಿಚ್ಛೇದನ ಪಡೆದಿದ್ದು ಮೈಸೂರಿನ ಯುವಕನೊಬ್ಬನೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದಾಳೆ.ಯುವಕನ ಮನೆಗೆ ತೆರಳಿ ಭಾರ್ಗವಿ ರಂಪಾಟ ಮಾಡಿದ್ದಾಳೆಂದು ಹೇಳಲಾಗಿದೆ.ನಂತರ ಭಾರ್ಗವಿ ರವರ ಪೋಷಕರಿಗೆ ಪೊಲೀಸರು ವಿಚಾರ ಮುಟ್ಟಿಸಿದ್ದಾರೆ.ಬಾಲಕ ಶಶಾಂಕ್ ನ್ನ ಪೊಲೀಸರು ಬಾಲ ಮಂದಿರ ವಶಕ್ಕೆ ನೀಡಿದ್ದು ಇದೀಗ ಭಾರ್ಗವಿ ಹಾಗೂ ಶಶಾಂಕ್ ನ್ನ ಸುರಕ್ಷಿತವಾಗಿ ಪೋಷಕರನ್ನ ಸೇರಿಸಲು ಲಷ್ಕರ್ ಠಾಣೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ…

Spread the love

Related post

ಪ್ರಾಧಿಕಾರದ ಆಸ್ತಿ ಉಳಿಸಿ…ಡಿಎಸ್ ಎಸ್ ಮುಖಂಡರಿಂದ ತಮಟೆ ಚಳುವಳಿ…ಎಂಡಿಎ ಪ್ರಭಾರ ಆಯುಕ್ತ ಕೆ.ಎಸ್.ರಕ್ಷಿತ್ ಕಚೇರಿ ಬಳಿ ಪ್ರತಿಭಟನೆ…

ಪ್ರಾಧಿಕಾರದ ಆಸ್ತಿ ಉಳಿಸಿ…ಡಿಎಸ್ ಎಸ್ ಮುಖಂಡರಿಂದ ತಮಟೆ ಚಳುವಳಿ…ಎಂಡಿಎ ಪ್ರಭಾರ ಆಯುಕ್ತ…

ಪ್ರಾಧಿಕಾರದ ಆಸ್ತಿ ಉಳಿಸಿ…ಡಿಎಸ್ ಎಸ್ ಮುಖಂಡರಿಂದ ತಮಟೆ ಚಳುವಳಿ…ಎಂಡಿಎ ಪ್ರಭಾರ ಆಯುಕ್ತ ಕೆ.ಎಸ್.ರಕ್ಷಿತ್ ಕಚೇರಿ ಬಳಿ ಪ್ರತಿಭಟನೆ… ಮೈಸೂರು,ಮಾ31,Tv10 ಕನ್ನಡ ಮೈಸೂರು ಅಭಿವೃದ್ದಿ ಪ್ರಾಧಿಕಾರದ ಆಸ್ತಿ ಉಳಿಸುವಂತೆ ಆಗ್ರಹಿಸಿ…
ಮಹಾವೀರ್ ಜಯಂತಿ…ಪ್ರಾಣಿಪಕ್ಷಿಗಳಿಗೆ ನೀರಿನ ತೊಟ್ಟಿ…

ಮಹಾವೀರ್ ಜಯಂತಿ…ಪ್ರಾಣಿಪಕ್ಷಿಗಳಿಗೆ ನೀರಿನ ತೊಟ್ಟಿ…

ಮಹಾವೀರ್ ಜಯಂತಿ…ಪ್ರಾಣಿಪಕ್ಷಿಗಳಿಗೆ ನೀರಿನ ತೊಟ್ಟಿ… ಮೈಸೂರು,ಮಾ31,Tv10 ಕನ್ನಡ ಮಹಾವೀರವಜಯಂತಿ ಅಂಗವಾಗಿ ಪ್ರಾಣಿ ಪಕ್ಷಿಗಳಿಗೆ ನೀರಿನ ತೊಟ್ಟಿ ಅಳವಡಿಸಿ ಕೆಎಂಪಿಕೆ ಟ್ರಸ್ಟ್ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿದೆ.ಮೈಸೂರು ನಗರದ ಹಳೆ ಡಿಸಿ…
ನಂಜನಗೂಡಯಜಾತ್ರೆ ನೋಡಲು ವ್ಯಕ್ತಿ ಹೃದಯಾಘಾತದಿಂದ ಸಾವು…

ನಂಜನಗೂಡಯಜಾತ್ರೆ ನೋಡಲು ವ್ಯಕ್ತಿ ಹೃದಯಾಘಾತದಿಂದ ಸಾವು…

ನಂಜನಗೂಡಯಜಾತ್ರೆ ನೋಡಲು ವ್ಯಕ್ತಿ ಹೃದಯಾಘಾತದಿಂದ ಸಾವು… ನಂಜನಗೂಡು,ಮಾ30,Tv10 ಕನ್ನಡ ದಕ್ಷಿಣ ಕಾಶಿ ಖ್ಯಾತಿಯ ಶ್ರೀಕಂಠೇಶ್ವರ ಸ್ವಾಮಿ ದೊಡ್ಡಜಾತ್ರೆಗೆ ಬಂದಿದ್ದ ಭಕ್ತ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಂಜುಂಡಸ್ವಾಮಿ (58) ಮೃತ ದುರ್ದೈವಿ.ಬೆಂಗಳೂರು…

Leave a Reply

Your email address will not be published. Required fields are marked *