ರಂಗೋಲಿ ಮೂಲಕ ಮತದಾನ ಜಾಗೃತಿ…ಗಮನ ಸೆಳೆದ ಗೃಹಿಣಿ…
- TV10 Kannada Exclusive
- April 26, 2024
- No Comment
- 22
ಮೈಸೂರು,ಏ26,Tv10 ಕನ್ನಡ
ಲೋಕಸಭಾ ಚುನಾವಣೆ ಮತದಾನ ಭರದಿಂದ ಸಾಗುತ್ತಿದೆ.ಮತದಾರರು ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ಮತ ಹಾಕುವ ಮೂಲಕ ತಮ್ಮ ಹಕ್ಕನ್ನ ಚಲಾಯಿಸುತ್ತಿದ್ದಾರೆ.ಒಂದೆಡೆ ಮತದಾರರು ಚುನಾವಣಾ ಹಬ್ಬದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರೆ ಮತ್ತೊಂದೆಡೆ ಕೆಲವರು ಮತದಾನದಿಂದ ದೂರ ಉಳಿಯುತ್ತಿದ್ದಾರೆ.ಈ ಹಿನ್ನಲೆ ಮತದಾನದ ಬಗ್ಗೆ ನಿರಂತರವಾಗಿ ವಿಭಿನ್ನವಾಗಿ ಜಾಗೃತಿ ಮೂಡಿಸಲಾಗುತ್ತಿದೆ.ಮೈಸೂರಿನ ಗೃಹಿಣಿಯೊಬ್ಬರು ತಮ್ಮ ಮನೆಯ ಮುಂದೆ ಆಕರ್ಷಕ ರಂಗೋಲಿ ಬಿಡಿಸಿ ಮತದಾನ ಜಾಗೃತಿ ಮೂಡಿಸಿದ್ದಾರೆ.ಕುವೆಂಪುನಗರ ಇ ಅಂಡ್ ಎಫ್ ಬ್ಲಾಕ್ ನ ಸುಧಾ ಪ್ರಸಾದ್ ರವರು ರಂಗೋಲಿ ಬಿಡಿಸಿ ಕಪ್ಪು ಶಾಯಿ ಹಚ್ಚಿದ ಬೆರಳನ್ನ ಚಿತ್ರಿಸಿ LET US ALL VOTE ಎಂಬ ಸಂದೇಶ ಹೊರಡಿಸಿ ಜಾಗೃತಿ ಮೂಡಿಸಿ ಗಮನ ಸೆಳೆದಿದ್ದಾರೆ…