ಸಾಲ ವಸೂಲಿಗೆ ಯುವಕನ ಕಿಡ್ನಾಪ್…30 ಜನರ ತಂಡದಿಂದ ಕೃತ್ಯ ಆರೋಪ..7 ಮಂದಿ ಅರೆಸ್ಟ್…

ಸಾಲ ವಸೂಲಿಗೆ ಯುವಕನ ಕಿಡ್ನಾಪ್…30 ಜನರ ತಂಡದಿಂದ ಕೃತ್ಯ ಆರೋಪ..7 ಮಂದಿ ಅರೆಸ್ಟ್…

ಮೈಸೂರು,ಜು17,Tv10 ಕನ್ನಡಕೊಟ್ಟ ಸಾಲ ವಸೂಲಿ ಮಾಡಲು ಯುವಕನನ್ನ ಮಾರಕಾಸ್ತ್ರಗಳನ್ನ ತೋರಿಸಿ ಬಲವಂತವಾಗಿ ಎಳೆದೊಯ್ದು ಅಕ್ರಮವಾಗಿ ಬಂಧನದಲ್ಲಿರಿಸಿದ ಘಟನೆ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನಡೆದಿದೆ.ಸುಮಾರು 30 ಮಂದಿ ತಂಡದಿಂದ ಕೃತ್ಯ ನಡೆದಿದೆ.ಪ್ರಕರಣ ದಾಖಲಿಸಿಕೊಂಡ ಕುವೆಂಪುನಗರ ಪೊಲೀಸರು ಪ್ರಮುಖ ಆರೋಪಿ ಸೇರಿದಂತೆ 7 ಮಂದಿಯನ್ನ ಬಂಧಿಸಿದ್ದಾರೆ.ವಾಜಮಂಗಲ ನಿವಾಸಿ ಹಾಗೂ ಆದಿಚುಂಚನಗಿರಿ ಕಾಲೇಜಿನ ವಿಧ್ಯಾರ್ಥಿಯಾಗಿದ್ದ ದರ್ಶನ್(20) ಅಪಹರಣಕ್ಕೆ ಒಳಗಾದ ಯುವಕ.ಪವನ್ ಹಾಗೂ ಈತನ ಸ್ನೇಹಿತರು ಅಪಹರಿಸಿದ ಆರೋಪಿಗಳು.ಜುಲೈ 13 ರಂದು ದರ್ಶನ್ ದಟ್ಟಗಳ್ಳಿಯ ಲೆಮೆನ್ ಟ್ರೀ ಹೋಟೆಲ್ ಬಳಿ ಇದ್ದಾಗ ಏಕಾಏಕಿ ಬಂದ ಪವನ್ ಹಾಗೂ 30 ಮಂದಿ ತಂಡ ಮಾರಕಾಸ್ತ್ರಗಳನ್ನ ತೋರಿಸಿ ಬೆದರಿಸಿ ವಾಹನವೊಂದರಲ್ಲಿ ಬಲವಂತವಾಗಿ ಕರೆದೊಯ್ದಿದ್ದಾರೆ.ಪವನ್ ನಿಂದ ದರ್ಶನ್ ಸಾಲ ಪಡೆದಿದ್ದ ಎನ್ನಲಾಗಿದೆ.ಸಮಯಕ್ಕೆ ಸರಿಯಾಗಿ ದರ್ಶನ್ ಹಣ ಹಿಂದಿರುಗಿಸಿಲ್ಲ.ಇದೇ ವಿಚಾರದಲ್ಲಿ ಪವನ್ ತನ್ನ ಸ್ನೇಹಿತರ ಜೊತೆ ಸೇರಿ ದರ್ಶನ್ ನ ಬಲವಂತವಾಗಿ ಕರೆದೊಯ್ದಿದ್ದಾನೆ.ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಣ ಪೀಕಲು ಯತ್ನಿಸಿದ್ದಾನೆ.ಸುಮಾರು 3 ಗಂಟೆಗಳ ಕಾಲ ಬಂಧನದಲ್ಲಿರಿಸಿ ಹಿಂಸೆ ನೀಡಿದ್ದಾನೆ ಎನ್ನಲಾಗಿದೆ.ಪವನ್ ಕಪಿಮುಷ್ಠಿಯಿಂದ ದರ್ಶನ್ ತಪ್ಪಿಸಿಕೊಂಡು ಬಂದಿದ್ದಾನೆ.ಈ ವಿಚಾರ ಮನೆಯಲ್ಲಿ ಹೇಳಿದ್ರೆ ಕೊಲೆ ಮಾಡುವುದಾಗಿ ಪವನ್ ಎಚ್ಚರಿಕೆ ನೀಡಿದ್ದಾನೆ.ಈ ಸಂಭಂಧ ದರ್ಶನ್ ತಂದೆ ಉಮೇಶ್ ರವರು ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಘಟನೆ ನಡೆದ 24 ಗಂಟೆಯಲ್ಲಿ ಪವನ್ ಸೇರಿದಂತೆ 7 ಮಂದಿಯನ್ನ ಕುವೆಂಪುನಗರ ಪೊಲೀಸರು ಬಂಧಿಸಿದ್ದಾರೆ…

Spread the love

Related post

ಪ್ರಿಯತಮೆಯನ್ನ ಕೊಲೆ ಮಾಡಿ ಚಿನ್ನಾಭರಣ ದೋಚಿ ತನ್ನ ಜಮೀನಿನಲ್ಲಿ ಶವ ಹೂತಿಟ್ಟ ಐನಾತಿ…ಪ್ರಿಯಕರ ಅಂದರ್…

ಪ್ರಿಯತಮೆಯನ್ನ ಕೊಲೆ ಮಾಡಿ ಚಿನ್ನಾಭರಣ ದೋಚಿ ತನ್ನ ಜಮೀನಿನಲ್ಲಿ ಶವ ಹೂತಿಟ್ಟ…

ಮಂಡ್ಯ,ಜೂ24,Tv10 ಕನ್ನಡ ವಿವಾಹಿತ ಮಹಿಳೆಯನ್ನ ಇನ್ಸ್ಟಾಗ್ರಾಂ ನಲ್ಲಿ ಪರಿಚಯಿಸಿಕೊಂಡು ಪ್ರೀತಿಸಿ ಚೆಕ್ಕಂದವಾಗಿ ವಿಹರಿಸಿ ಹತ್ತೇ ದಿನಗಳಲ್ಲಿ ಕೊಲೈಗೈದು ಶವವನ್ನ ತನ್ನ ಜಮೀನಿನಲ್ಲೇ ಬಚ್ಚಿಟ್ಟ ಪ್ರಿಯಕರ ಪೊಲೀಸರ ಅತಿಥಿಯಾದ ಘಟನೆ…
ಕಾವೇರಿ ನದಿ ಪಾತ್ರದ ಜನತೆಗೆ ಪ್ರವಾಹದ ಮುನ್ಸೂಚನೆ…ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ…

ಕಾವೇರಿ ನದಿ ಪಾತ್ರದ ಜನತೆಗೆ ಪ್ರವಾಹದ ಮುನ್ಸೂಚನೆ…ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ…

ಕೆ.ಆರ್.ಎಸ್,ಜೂ23,Tv10 ಕನ್ನಡ ಕೊಡಗಿನಲ್ಲಿ ಮಳೆ ಪ್ರಮಾಣ ಹೆಚ್ಚಾದ ಹಿನ್ನಲೆ ಕೆ ಆರ್ ಎಸ್ ಗೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದ ಈ ಹಿನ್ನಲೆ ಹೊರಹರಿವಿನ ಪ್ರಮಾಣವನ್ನ ಹೆಚ್ಚಿಸಲಾಗಿದೆ.5000 ಕ್ಯೂಸೆಕ್ಸ್ ನಿಂದ…
ನಿರ್ಲಕ್ಷ್ಯಕ್ಕೆ ಒಳಗಾದ ಕಳಲೆ ಲಕ್ಷ್ಮಿಕಾಂತ ದೇವಸ್ಥಾನ…ಶತಮಾನಗಳ ಇತಿಹಾಸವಿರುವ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ…

ನಿರ್ಲಕ್ಷ್ಯಕ್ಕೆ ಒಳಗಾದ ಕಳಲೆ ಲಕ್ಷ್ಮಿಕಾಂತ ದೇವಸ್ಥಾನ…ಶತಮಾನಗಳ ಇತಿಹಾಸವಿರುವ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ…

ನಂಜನಗೂಡು,ಜೂ23,Tv10 ಕನ್ನಡ ಶಿಥಿಲಗೊಂಡ ದೇವಾಲಯದ ಕಟ್ಟಡ,ಗೋಪುರಗಳ ಮೇಲೆ ಬೆಳೆದು ನಿಂತ ಸಸ್ಯಗಳು,ಬಿರುಕು ಬಿಟ್ಟ ಕಟ್ಟಡ,ಭಿನ್ನವಾಗಿರುವ ದೇವರ ಮೂರ್ತಿಗಳು,ಮುರಿದು ಮೂಲೆ ಸೇರಿರುವ ರಥದ ಚಕ್ರಗಳು,ಮಣ್ಣು ಹಿಡಿದ ರಥ ಎಳೆಯವ ಹಗ್ಗಗಳು,ಭಕ್ತರಿಗೆ…

Leave a Reply

Your email address will not be published. Required fields are marked *