ಕಾಳಜಿ ಕೇಂದ್ರಕ್ಕೆ ವಿಪ್ಪತ್ತು ನಿರ್ವಹಣೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಭೇಟಿ…ನಿರಾಶ್ರಿತರ ಸಮಸ್ಯೆಗೆ ಸ್ಪಂದನೆ…
- MysoreTV10 Kannada Exclusive
- July 31, 2024
- No Comment
- 323
ಮೈಸೂರು,ಜು31,Tv10 ಕನ್ನಡ
ಕಾವೇರಿ ಪ್ರವಾಹಕ್ಕೆ ಟಿ.ನರಸೀಪುರ ತಾಲೂಕಿನ ನದಿ ಪಾತ್ರದ ಜನತೆ ನಲುಗಿದ್ದಾರೆ.ಕಾವೇರಿಯ ಆರ್ಭಟಕ್ಕೆ ಸಾಕಷ್ಟು ಮಂದಿ
ನಿರಾಶ್ರಿತರಾಗಿದ್ದಾರೆ.ಜಿಲ್ಲಾಡಳಿತ ಸಮರೋಪಾದಿಯಲ್ಲಿ ನಿರಾಶ್ರಿತರ ನೆರವಿಗೆ ಧಾವಿಸಿದೆ.ಅಲ್ಲಲ್ಲಿ ಕಾಳಜಿ ಕೇಂದ್ರಗಳನ್ನ ಸ್ಥಾಪಿಸಿ ನಿರಶ್ರಿತರಿಗೆ ನೆರವಾಗಿದ್ದಾರೆ.ಟಿ.ನರಸೀಪುರ ತಾಲೂಕಿನ ತಲಕಾಡು ಹೋಬಳಿ ತಡಿಮಾಲಂಗಿ ಗ್ರಾಮದಲ್ಲಿ ಸ್ಥಾಪನೆಯಾದ ನಿರಾಶ್ರಿತರ ಕಾಳಜಿ ಕೇಂದ್ರಕ್ಕೆ ಇಂದು ಸರ್ಕಾರದ ವಿಪ್ಪತ್ತು ನಿರ್ವಹಣೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ರವರು ಭೇಟಿ ನೀಡಿ ಸಮಸ್ಯೆಗಳನ್ನ ಆಲಿಸಿದ್ದಾರೆ.ನಿರಶ್ರಿತರಿಗೆ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.ರಶ್ಮಿ ಮಹೇಶ್ ರವರಿಗೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ,ಉಪವಿಭಾಗಾಧಿಕಾರಿ ಎಸ್.ರಕ್ಷಿತ್,ತಾಲೂಕು ದಂಡಾಧಿಕಾರಿ ಸುರೇಶ್ ಆಚಾರ್,ಇಓ ಕೃಷ್ಣ ಸಾಥ್ ನೀಡಿದ್ದಾರೆ…