
ಪಂಡರಾಪುರದಲ್ಲಿ ವಿಠಲನ ದರುಶನ ಪಡೆದು ಹಿಂದಿರುಗಿದ ದಂಪತಿಗೆ ಶಾಕ್…ಕಾರು,ಬೆಳ್ಳಿ ಪದಾರ್ಥಗಳು ಕಳ್ಳರ ಪಾಲು…
- TV10 Kannada Exclusive
- November 26, 2024
- No Comment
- 215
ಮೈಸೂರು,ನ26,Tv10 ಕನ್ನಡ
ಮಹಾರಾಷ್ಟ್ರ ಪಂಡರಾಪುರದ ವಿಠಲನ ದರುಶನ ಪಡೆದು ಮನೆಗೆ ಹಿಂದಿರುಗಿದ ದಂಪತಿಗೆ ಕಳ್ಳರು ಶಾಕ್ ಕೊಟ್ಟಿದ್ದಾರೆ.ಮನೆಯಲ್ಲಿದ್ದ ಬೆಳ್ಳಿ ಪದಾರ್ಥ,ಕಂಚಿನ ಪದಾರ್ಥ ಹಾಗೂ ಕಾರನ್ನ ದೋಚಿ ಪರಾರಿಯಾಗಿದ್ದಾರೆ.ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕೃತಿ ಬಡಾವಣೆಯಲ್ಲಿ ಘಟನೆ ನಡೆದಿದೆ.ವಿದ್ಯುತ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀನಿವಾಸ ಮೂರ್ತಿ ಎಂಬುವರ ಮನೆಯಲ್ಲಿ ಕಳ್ಳರು ಕೈಚಳಕ ನಡೆಸಿದ್ದಾರೆ.
ಶ್ರೀನಿವಾಸ ಮೂರ್ತಿ ಹಾಗೂ ಇವರ ಪತ್ನಿ ಸಂಗೀತಾ ರವರು ನಂಜನಗೂಡಿನಲ್ಲಿ ಮೀಟರ್ ರೀಡಿಂಗ್ ಕೆಲಸ ಮಾಡುತ್ತಿದ್ದಾರೆ.ನಂಜನಗೂಡಿನಲ್ಲೂ ಸಹ ಮನೆ ಬಾಡಿಗೆ ಪಡೆದು ವಾರದಲ್ಲಿ 4 ದಿನ ನಂಜನಗೂಡು 3 ದಿನ ಮೈಸೂರಿನಲ್ಲಿ ಇರುತ್ತಾರೆ.ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಪಂಡರಾಪುರದಲ್ಲಿರುವ ವಿಠಲನ ದರುಶನ ಪಡೆಯಲು ತೆರಳಿದ ದಂಪತಿ ಮೈಸೂರಿನ ನಾಡನಹಳ್ಳಿ ಮನೆಗೆ ಹಿಂದಿರುಗಿದಾಗ ಬಾಗಿಲು ತೆರೆದಿತ್ತು.ಒಳಗೆ ಪ್ರವೇಶಿಸಿ ಪರಿಶಿಲಿಸಿದಾಗ ಬೆಳ್ಳಿ ಪದಾರ್ಥಗಳು,ಕಂಚಿನ ಪದಾರ್ಥಗಳು ಹಾಗೂ ಟಾಟಾ ಇಂಡಿಕಾ ಕಾರನ್ನ ದೋಚಿ ಪರಾರಿಯಾಗಿದ್ದಾರೆ.ಕಳುವಾಗಿರುವ ಪದಾರ್ಥಗಳ ಒಟ್ಟು ಮೌಲ್ಯ 81,600/- ರೂಗಳೆಂದು ಅಂದಾಜಿಸಲಾಗಿದ್ದು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಶ್ರೀನಿವಾಸ ಮೂರ್ತಿ ಪ್ರಕರಣ ದಾಖಲಿಸಿದ್ದಾರೆ…