ಸದರನ್ ಸ್ಟಾರ್ ಹೋಟೆಲ್ ಮಾಲೀಕರ ಮನೆಯಲ್ಲಿ ಕಳ್ಳರ ಕೈಚಳಕ…ಕದಿಯಲು ಐನಾತಿಗಳು ಮಾಡಿದ ಪ್ಲಾನ್ ಏನು ಗೊತ್ತಾ…?

ಸದರನ್ ಸ್ಟಾರ್ ಹೋಟೆಲ್ ಮಾಲೀಕರ ಮನೆಯಲ್ಲಿ ಕಳ್ಳರ ಕೈಚಳಕ…ಕದಿಯಲು ಐನಾತಿಗಳು ಮಾಡಿದ ಪ್ಲಾನ್ ಏನು ಗೊತ್ತಾ…?

ಮೈಸೂರು,ನ29,Tv10 ಕನ್ನಡ

ಮನೆಯಲ್ಲಿರುವ ಗೃಹಪಯೋಗಿ ವಸ್ತುಗಳನ್ನ ಕಣ್ಣಮುಂದೆಯೇ ಚಾಲಾಕಿತನ ಬಳಸಿ ಕದ್ದೊಯ್ದ ಘಟನೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮನೆಯಲ್ಲಿ ವ್ಯಕ್ತಿಯೊಬ್ಬರು ಇದ್ದರೂ ಸಕ್ಕತ್ ಪ್ಲಾನ್ ಉಪಯೋಗಿಸಿ ಪದಾರ್ಥಗಳನ್ನ ಹೊತ್ತು ಸಾಗಿದ್ದಾರೆ.

ಜಯಲಕ್ಷ್ಮಿಪುರಂ 3 ನೇ ಹಂತ,8 ನೇ ಮುಖ್ಯರಸ್ತೆಯಲ್ಲಿ ಸದರನ್ ಸ್ಟಾರ್ ಹೋಟೆಲ್ ಮಾಲೀಕರ ಮನೆ ಇದೆ.ಹೋಟೆಲ್ ಸಿಬ್ಬಂದಿಗಳು ತಂಗಲು ಇಲ್ಲಿ ವ್ಯವಸ್ಥೆ ಮಾಡಿಕೊಡಲಾಗಿದೆ.ಸಿಬ್ಬಂದಿಗಳ ಅನುಕೂಲಕ್ಕಾಗಿ ಒಂದು ಟಿವಿ,ಟೀಪಾಯಿ,ಸ್ಟಡಿ ಟೇಬಲ್,ಮಿನಿ ಫ್ರಿಡ್ಜ್ ಇಡಲಾಗಿದೆ.ಮನೆಯಲ್ಲಿ ರೆಸ್ಟೋರೆಂಟ್ ಮ್ಯಾನೇಜರ್ ಬೋಲೇನಾಥ್ ಎಂಬುವರು ಇದ್ದಾಗ ಕೆಲವು ಯುವಕರು ಬಂದು ಹೋಟೆಲ್ ನವರು ಪದಾರ್ಥಗಳನ್ನ ತೆಗೆದುಕೊಂಡು ಬರುವಂತೆ ತಿಳಿಸಿರುವುದಾಗಿ ಹೇಳಿದ್ದಾರೆ.ಜೊತೆಗೆ ಫೋನ್ ಕಾಲ್ ಮಾಡಿ ಹೋಟೆಲ್ ನವರೇ ಮಾತನಾಡಿದಂತೆ ನಟಿಸಿ ಪದಾರ್ಥಗಳನ್ನ ನೀಡುವಂತೆ ವ್ಯಕ್ತಿಯೊಬ್ಬ ತಿಳಿಸಿದ್ದಾನೆ.ಕಿಲಾಡಿಗಳ ಪ್ಲಾನ್ ಅರಿಯದೆ ಬೋಲೇನಾಥ್ ಹೋಟೆಲ್ ನಿಂದಲೇ ಕಾಲ್ ಬಂದಿದೆ ಎಂದು ಅರಿತು ಪದಾರ್ಥಗಳನ್ನ ನೀಡಿದ್ದಾರೆ.ಬೋಲೇನಾಥ್ ರವರ ಕಣ್ಣಮುಂದೆಯೇ ನಯವಂಚಕರು ಐನಾತಿ ಪ್ಲಾನ್ ಮಾಡಿ ಗೃಹಪಯೋಗಿ ವಸ್ತುಗಳನ್ನ ಲಪಟಾಯಿಸಿದ್ದಾರೆ.ಈ ಸಂಭಂಧ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Spread the love

Related post

ಡಿಜಿಟಲ್ ಅರೆಸ್ಟ್ ಭೀತಿ ಸೃಷ್ಟಿ…ವೃದ್ದರೊಬ್ಬರಿಗೆ 8.50 ಲಕ್ಷ ವಂಚನೆ…ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…

ಡಿಜಿಟಲ್ ಅರೆಸ್ಟ್ ಭೀತಿ ಸೃಷ್ಟಿ…ವೃದ್ದರೊಬ್ಬರಿಗೆ 8.50 ಲಕ್ಷ ವಂಚನೆ…ಸೆನ್ ಪೊಲೀಸ್ ಠಾಣೆಯಲ್ಲಿ…

ಡಿಜಿಟಲ್ ಅರೆಸ್ಟ್ ಭೀತಿ ಸೃಷ್ಟಿ…ವೃದ್ದರೊಬ್ಬರಿಗೆ 8.50 ಲಕ್ಷ ವಂಚನೆ…ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು… ಮೈಸೂರು,ಮಾ20,Tv10 ಕನ್ನಡ ಡಿಜಿಟಲ್ ಅರೆಸ್ಟ್ ಭೀತಿ ಸೃಷ್ಟಿಸಿ ವೃದ್ದರೊಬ್ಬರಿಗೆ 8,50,047/- ರೂ ವಂಚಿಸಿದ…
ರಮ್ಯಾ ಆರ್. ಮಹಿಳೆ ನ್ಯಾಯಾಧೀಶರಾಗಿ ಆಯ್ಕೆ ಮಹಿಳಾ ಸಬಲೀಕರಣಕ್ಕೆ ಹೊಸ ಮೈಲುಗಲ್ಲುಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಿರಗುಂದ ಗ್ರಾಮದ ರಾಜೇಂದ್ರ ಪ್ರಸಾದ್ MD(ಜಾನಪದ ಕಲಾವಿದರು

ರಮ್ಯಾ ಆರ್. ಮಹಿಳೆ ನ್ಯಾಯಾಧೀಶರಾಗಿ ಆಯ್ಕೆ ಮಹಿಳಾ ಸಬಲೀಕರಣಕ್ಕೆ ಹೊಸ ಮೈಲುಗಲ್ಲುಮೈಸೂರು…

ರಮ್ಯಾ ಆರ್. ಮಹಿಳೆ ನ್ಯಾಯಾಧೀಶರಾಗಿ ಆಯ್ಕೆ ಮಹಿಳಾ ಸಬಲೀಕರಣಕ್ಕೆ ಹೊಸ ಮೈಲುಗಲ್ಲುಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಿರಗುಂದ ಗ್ರಾಮದ ರಾಜೇಂದ್ರ ಪ್ರಸಾದ್ MD(ಜಾನಪದ ಕಲಾವಿದರು ) ಪಾರ್ವತಮ್ಮ N…
ಮೈಸೂರು ನಗರ ನೂತನ ಡಿಸಿಪಿ ಯಾಗಿ ಡಾ.ಹರ್ಷ ಪ್ರಿಯಂವದ ನೇಮಕ…77 ದಿನಗಳ ನಂತರ ನಿಯೋಜನೆ…

ಮೈಸೂರು ನಗರ ನೂತನ ಡಿಸಿಪಿ ಯಾಗಿ ಡಾ.ಹರ್ಷ ಪ್ರಿಯಂವದ ನೇಮಕ…77 ದಿನಗಳ…

ಮೈಸೂರು ನಗರ ನೂತನ ಡಿಸಿಪಿ ಯಾಗಿ ಡಾ.ಹರ್ಷ ಪ್ರಿಯಂವದ ನೇಮಕ…77 ದಿನಗಳ ನಂತರ ನಿಯೋಜನೆ… ಮೈಸೂರು,ಮಾ18,Tv10 ಕನ್ನಡ ಮೈಸೂರು ನಗರ ಪೊಲೀಸ್‌ ಇಲಾಖೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ…

Leave a Reply

Your email address will not be published. Required fields are marked *