ಮದುವೆ ಆಗುವಂತೆ ಇನ್ಫೋಸಿಸ್ ಉದ್ಯೋಗಿಗೆ ಟಾರ್ಚರ್…ಮನೆಗೆ ನುಗ್ಗಿ ರಂಪಾಟ,ಕೊಲೆ ಬೆದರಿಕೆ…ಯುವಕನ ವಿರುದ್ದ FIR ದಾಖಲು

ಮದುವೆ ಆಗುವಂತೆ ಇನ್ಫೋಸಿಸ್ ಉದ್ಯೋಗಿಗೆ ಟಾರ್ಚರ್…ಮನೆಗೆ ನುಗ್ಗಿ ರಂಪಾಟ,ಕೊಲೆ ಬೆದರಿಕೆ…ಯುವಕನ ವಿರುದ್ದ FIR ದಾಖಲು

ಮೈಸೂರು,ಡಿ9,Tv10 ಕನ್ನಡ

ಮದುವೆ ಆಗುವಂತೆ ಒತ್ತಾಯಿಸಿದ ಯುವಕನೊಬ್ಬ ಇನ್ಫೋಸಿಸ್ ಉದ್ಯೋಗಿಯ ಮನೆಗೆ ನುಗ್ಗಿ ಹಲ್ಲೆ ನಡೆಸಿ ರಂಪಾಟ ಮಾಡಿ ಕೊಲೆ ಬೆದರಿಕೆ ಹಾಕಿದ ಘಟನೆ ಮೈಸೂರಿನ ಮೇಟಗಳ್ಳಿ ಠಾಣೆ ವ್ಯಾಪ್ತಿಯ ಸುಭಾಷ್ ನಗರದಲ್ಲಿ ನಡೆದಿದೆ.ಟಾರ್ಚರ್ ನೀಡಿ ಹಲ್ಲೆ ನಡೆಸಿದ ಯುವಕನ ವಿರುದ್ದ ಇನ್ಫೋಸಿಸ್ ಉದ್ಯೋಗಿ ಕಾನೂನು ಕ್ರಮ ಕೈಗೊಳ್ಳುವಂತೆ FIR ದಾಖಲಿಸಿದ್ದಾರೆ.

ಇನ್ಫೋಸಿಸ್ ನಲ್ಲಿ ಟೆಕ್ನಿಕಲ್ ಸಪೋರ್ಟ್ ಸ್ಪೆಷಲಿಸ್ಟ್ ಆಗಿ ಕೆಲಸ ಮಾಡುತ್ತಿರುವ ಇಂದು ಎಂಬುವರು ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಬೆಂಗಳೂರಿನ ಕೆಂಗೇರಿಯ ಸುಂಕಲ್ ಪಾಳ್ಯ ನಿವಾಸಿ ಮಧುನಂದನ್ ವಿರುದ್ದ ಪ್ರಕರಣ ದಾಖಲಾಗಿದೆ.

ಇಂದು ಹಾಗೂ ಮಧುನಂದನ್ ರವರ ಮದುವೆಗೆ ಜೂನ್ ತಿಂಗಳಿನಲ್ಲಿ ಮಾತುಕತೆ ಆಗಿತ್ತು.ನಂತರದ ದಿನಗಳಲ್ಲಿ ಇಂದು ವಿಚಾರದಲ್ಲಿ ಅನಗತ್ಯವಾಗಿ ಸಂಶಯಪಡುವುದು,ನೀನು ವರ್ಜಿನಾ..?,ಫೋನ್ ಮಾಡಿದ್ರೆ ಯಾಕೆ ರಿಸೀವ್ ಮಾಡಿಲ್ಲ,ಎಲ್ಲಿಗೆ ಹೋಗಿದ್ದೆ ಹೀಗೆ ಪ್ರಶ್ನೆಗಳನ್ನ ಹಾಕಿ ಮಧುನಂದನ್ ಅನುಮಾನ ವ್ಯಕ್ತಪಡಿಸುತ್ತಿದ್ದ.ಇದರಿಂದ ಮನನೊಂದ ಇಂದು ತನ್ನ ಮನೆಯವರೊಂದಿಗೆ ಚರ್ಚಿಸಿ ಮದುವೆ ರದ್ದು ಮಾಡಿಕೊಂಡರು.ಇದರಿಂದ ದ್ವೇಷ ಬೆಳೆಸಿಕೊಂಡ ಮಧುನಂದನ್ ತನ್ನ ಅಕ್ಕ ಸರಿತಾ,ಅಕ್ಕನ ಮಗ ಚಿರು,ಭಾವ ಯೋಗೇಶ್ ಜೊತೆ ಮನೆಗೆ ಪ್ರವೇಶಿಸಿ ಮದುವೆ ಆಗುವಂತೆ ಪೀಡಿಸಿದ್ದಾನೆ.ಇದನ್ನ ನಿರಾಕರಿಸಿದಾಗ ಇಂದು ಮೇಲೆ ಹಲ್ಲೆ ನಡೆಸಿದ್ದಾನೆ.ಅಡ್ಡ ಬಂದ ತಂಗಿ ಮೇಲೂ ಹಲ್ಲೆ ನಡೆಸಿ ರಂಪಾಟ ಮಾಡಿದ್ದಾನೆ.ನನ್ನನ್ನ ಮದುವೆ ಆಗದಿದ್ದರೆ ಯಾರು ಮದುವೆ ಆಗದಂತೆ ಮಾಡುವುದಾಗಿ ಹೆದರಿಸಿ ಕೊಲೆ ಬೆದರಿಕೆ ಹಾಕಿದ್ದಾನೆ.ಮಧುನಂದನ್ ರಿಂದ ಹಲ್ಲೆಗೊಳಗಾದ ಇಂದು ಹಾಗೂ ಮನೆಯವರು ಚಿಕಿತ್ಸೆ ಪಡೆದು ನಂತರ ಆತನ ವಿರುದ್ದ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *