
ಛಳಿ…ಛಳಿ…ನಿರಾಶ್ರಿತರಿಗೆ ಕಂಬಳಿ…ಕೆಎಂಪಿಕೆ ಟ್ರಸ್ಟ್ ನ ಮುಂದುವರೆದ ಸಾಮಾಜಿಕ ಕಳಕಳಿ…
- TV10 Kannada Exclusive
- December 9, 2024
- No Comment
- 62

ಮೈಸೂರು,ಡಿ9,Tv10 ಕನ್ನಡ

ಡಿಸೆಂಬರ್ ಬಂತೆಂದರೆ ಮೈಕೊರೆವ ಛಳಿ ಆರಂಭವಾದಂತೆ. ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣ ಸುತ್ತಮುತ್ತ ರಾತ್ರಿವೇಳೆ ಫುಟ್ ಪಾತ್ ಗಳನ್ನ ಆಶ್ರಯಿಸುವ ನಿರಾಶ್ರಿತರಿಗೆ ಮೈಕೊರೆವ ಛಳಿಯ ಹೊಡೆತ ಸಹಜ.ಇವರ ನೆರವಿಗೆ ಸರ್ಕಾರ ಬಂತೋ ಇಲ್ವೋ ಗೊತ್ತಿಲ್ಲ.ಆದ್ರೆ ಮೈಸೂರಿನ ಕೆಎಂಪಿಕೆ ಟ್ರಸ್ಟ್ ಅಂತೂ ಪ್ರತಿವರ್ಷ ಆಸರೆಯಾಗಿ ನಿಲ್ಲುತ್ತಿದೆ.ರಾತ್ರಿವೇಳೆ ಛಳಿಗೆ ಮೈಯೊಡ್ಡಿ ಮಲಗುವ ಈ ಮಂದಿಯನ್ನ ಗುರುತಿಸಿ ಕಂಬಳಿಗಳನ್ನ ನೀಡುವ ಮೂಲಕ ಸಾಮಾಜಿಕ ಕಳಕಳಿ ತೋರುತ್ತಿದೆ.ಕಳೆದ ನಾಲ್ಕಾರು ವರ್ಷಗಳಿಂದ ಇಂತಹ ಕಾರ್ಯ ಮುಂದುವರೆಸಿಕೊಂಡು ಬಂದಿರುವ ಟ್ರಸ್ಟ್ ಈ ವರ್ಷವೂ ಸಹ ನಿರಾಶ್ರಿತರ ನೆರವಿಗೆ ಧಾವಿಸಿದೆ.
ಟ್ರಸ್ಟ್ ನ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಅವರ ನೇತೃತ್ವದಲ್ಲಿ ಹೊದಿಕೆ ವಿತರಣೆ ಕಾರ್ಯ ನಡೆದಿದೆ.ಇದೇ ವೇಳೆ ಆರೋಗ್ಯದ ಬಗ್ಗೆ ಜಾಗೃತಿಯನ್ನೂ ಮೂಡಿಸಲಾಗಿದೆ.
ಈ ಒಂದು ಸೇವಾ ಕಾರ್ಯಕ್ಕೆ ರಾಷ್ಟ್ರೀಯ ವಿಶೇಷ ಚೇತನ ಕ್ರೀಡಾಪಟು ಅಲೋಕ್ ಆರ್.ಜೈನ್ ಮಹಾನ್ ಶ್ರೆಯಸ್ , ಬೈರತಿ ಲಿಂಗರಾಜು, ಮಂಜುನಾಥ್, ಸಚಿನ್ ನಾಯಕ್, ಸೇರಿದಂತ ಇನ್ನಿತರರು ಕೈ ಜೋಡಿಸಿದ್ದಾರೆ…