ಫೋಟೋ ಎಡಿಟ್ ಮಾಡಿ ವಿವಾಹಿತೆಗೆ ಬ್ಲಾಕ್ ಮೇಲ್…ಯುವತಿ ಸೇರಿದಂತೆ ಮೂವರ ವಿರುದ್ದ FIR…ಯುವತಿ ಸುಸೈಡ್…ಮಹಿಳೆ ಸಂಸಾರದಲ್ಲಿ ಬಿರುಕು…

ಫೋಟೋ ಎಡಿಟ್ ಮಾಡಿ ವಿವಾಹಿತೆಗೆ ಬ್ಲಾಕ್ ಮೇಲ್…ಯುವತಿ ಸೇರಿದಂತೆ ಮೂವರ ವಿರುದ್ದ FIR…ಯುವತಿ ಸುಸೈಡ್…ಮಹಿಳೆ ಸಂಸಾರದಲ್ಲಿ ಬಿರುಕು…

ಮೈಸೂರು,ಜ28,Tv10 ಕನ್ನಡ

ಸಂಭಂಧಿಕನೊಬ್ಬ ವಿವಾಹಿತ ಮಹಿಳೆಯ ಫೋಟೋಸ್ ಕೆಟ್ಟದಾಗಿ ಎಡಿಟ್ ಮಾಡಿ ಬ್ಲಾಕ್ ಮೇಲ್ ಮಾಡಿದ ಪ್ರಕರಣಕ್ಕೆ ಸಂಭಂಧಿಸಿದಂತೆ ನೊಂದ ಮಹಿಳೆ ಯುವತಿ ಸೇರಿದಂತೆ ಮೂವರ ವಿರುದ್ದ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.FIR ದಾಖಲಾಗುತ್ತಿದ್ದಂತೆಯೇ ಯುವತಿ ನೇಣಿಗೆ ಶರಣಾಗಿದ್ದಾಳೆ.ಎಡಿಟ್ ಮಾಡಿದ ಫೋಟೋಗಳು ಗಂಡನ ಮೊಬೈಲ್ ಗೆ ರವಾನೆ ಆಗುತ್ತಿದ್ದಂತೆಯೇ ವಿವಾಹಿತ ಮಹಿಳೆಯ ಸಂಸಾದಲ್ಲಿ ಬಿರುಕು ಮೂಡಿದೆ.ಸಂಭಂಧಿಕನೊಬ್ಬನ ಜೊತೆ ಮಹಿಳೆ ಮಾಡಿದ ಸ್ನೇಹದ ಪರಿಣಾಮ ಆಕೆಯ ಸಂಸಾರ ಬಿರುಗಾಳಿಗೆ ಸಿಲುಕಿದ ಹಡಗಿನಂತಾದರೆ ಮತ್ತೊಂದೆಡೆ ಓರ್ವ ಅಮಾಯಕಿ ಸಾವಿಗೆ ಕಾರಣವಾಗಿದೆ.

ವಿಜಯನಗರ ನಿವಾಸಿ ಕಾವೇರಿ ಹಾಗೂ ಗುಂಡ್ಲುಪೇಟೆ ನಿವಾಸಿ ನಂದೀಶ್ ಕುಮಾರ್ ನಡುವಿನ ಸ್ನೇಹ ಸಾಕಷ್ಟು ಎಡವಟ್ಟುಗಳಿಗೆ ಕಾರಣವಾಗಿದೆ.ಕಾವೇರಿಗೆ ನಂದೀಶ್ ಕುಮಾರ್ ದೂರದ ಸಂಭಂಧಿಕ.ಪರಿಚಯದಿಂದಾಗಿ ಹಿಂದೆ ಇಬ್ಬರೂ ಕೆಲವು ಫೋಟೋಗಳನ್ನ ತೆಗೆದುಕೊಂಡಿದ್ದಾರೆ.2023 ರಲ್ಲಿ ಕಾವೇರಿ ಶಿವು ಎಂಬಾತನ ಜೊತೆ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ರು.ಮದುವೆ ನಂತರ ಕಾವೇರಿಗೆ ನಂದೀಶ್ ಕುಮಾರ್ ತನ್ನ ಜೊತೆ ದೈಹಿಕ ಸಂಪರ್ಕ ಹೊಂದುವಂತೆ ಪೀಡಿಸಿದ್ದಾನೆ.ಇದನ್ನ ನಿರಾಕರಿಸಿದಾಗ ಹಿಂದೆ ಜೊತೆ ಇದ್ದ ಫೋಟೋಗಳನ್ನ ಎಡಿಟ್ ಮಾಡಿ ಗಂಡನಿಗೆ ಕಳುಹಿಸಿದ್ದಾನೆ.ನಾನುಬಕರೆದಾಗ ಬರಲಿಲ್ಲ ಅಂದ್ರೆ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿದ್ದಾನೆ.ನಂದೀಶ್ವಕುಮಾರ್ ಟಾರ್ಚರ್ ಗೆ ಬೇಸತ್ತ ಕಾವೇರಿ ಕೆಲವು ದಿನಗಳ ಹಿಂದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ನಿನ್ನನ್ನು ಅನುಭವಿಸಲೇ ಬೇಕು ಇಲ್ಲದಿದ್ದಲ್ಲಿ ನಿನ್ನ ಗಂಡನ ಜೊತೆ ಸಂಸಾರ ಮಾಡಲು ಬಿಡುವುದಿಲ್ಲ ಎಂದು ಕಿರುಕುಳ ನೀಡುತ್ತಿದ್ದ ನಂದೀಶ್ ಕುಮಾರ್ ಹಾಗೂ ಬೆಂಬಲ ನೀಡುತ್ತಿರುವ ಮಹೇಶ್ ಮತ್ತು ಕೆಲವು ಫೋಟೋಗಳನ್ನ ನೀಡಿದ ಆರೋಪದ ಮೇಲೆ ಗುಂಡ್ಲುಪೇಟೆಯ ಕವನ ಎಂಬ ಯುವತಿ ಮೇಲೆ ಕಾವೇರಿ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

FIR ದಾಖಲಾಗುತ್ತಿದ್ದಂತೆಯೇ ಗುಂಡ್ಲುಪೇಟೆ ಚೆನ್ನಮಲ್ಲಿಪುರ ಗ್ರಾಮದಲ್ಲಿ ಯುವತಿ ಕವನ ನಾಲ್ಕು ಜನರ ಹೆಸರನ್ನ ಮನೆ ಬಾಗಿಲ ಮೇಲೆ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾಳೆ.ಈ ಸಂಭಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಕಾವೇರಿ ವಿರುದ್ದ ಪ್ರಕರಣ ದಾಖಲಾಗಿದೆ.ಒಟ್ಟಾರೆ ನಂದೀಶ್ ಕುಮಾರ್ ಎಡಿಟ್ ಮಾಡಿ ಬಿಟ್ಟ ಫೋಟೋಗಳು ತಂದ ಎಡವಟ್ಟು ಓರ್ವ ಯುವತಿಯನ್ನ ಬಲಿ ಪಡೆದಿದೆ.ಓರ್ವ ವಿವಾಹಿತ ಮಹಿಳೆ ಬಾಳಲ್ಲಿ ಬಿರುಗಾಳಿ ಬೀಸಿದಂತಾಗಿದೆ…

Spread the love

Related post

ಹಾಡು ಹಗಲು ರಸ್ತೆಯಲ್ಲಿ ಗಜರಾಜನ ಬಿಂದಾಸ್ ವಾಕ್… ಗ್ರಾಮಸ್ಥರಲ್ಲಿ ಆತಂಕ…

ಹಾಡು ಹಗಲು ರಸ್ತೆಯಲ್ಲಿ ಗಜರಾಜನ ಬಿಂದಾಸ್ ವಾಕ್… ಗ್ರಾಮಸ್ಥರಲ್ಲಿ ಆತಂಕ…

ಹಾಡು ಹಗಲು ರಸ್ತೆಯಲ್ಲಿ ಗಜರಾಜನ ಬಿಂದಾಸ್ ವಾಕ್… ಗ್ರಾಮಸ್ಥರಲ್ಲಿ ಆತಂಕ… ವಿರಾಜಪೇಟೆ,ಜೂ13,Tv10 ಕನ್ನಡ ಕಾಡಾನೆಗಳ ಹಿಂಡಿನಿಂದ ಬೇರ್ಪಟ್ಟ ಗಜರಾಜ ರಸ್ತೆಯಲ್ಲಿ ಸಂಚರಿಸಿ ಭಯದ ವಾತಾವರಣ ಮೂಡಿಸಿದ ಘಟನೆ ಕೊಡಗು…
ಕಾವೇರಿ ಆರತಿ,ಅಮ್ಯೂಸ್ ಮೆಂಟ್ ಪಾರ್ಕ್ ಗೆ ವಿರೋಧ…ರೈತರ ಪ್ರತಿಭಟನೆ…

ಕಾವೇರಿ ಆರತಿ,ಅಮ್ಯೂಸ್ ಮೆಂಟ್ ಪಾರ್ಕ್ ಗೆ ವಿರೋಧ…ರೈತರ ಪ್ರತಿಭಟನೆ…

ಮಂಡ್ಯ,ಜೂ12,Tv10 ಕನ್ನಡ ಕೆಆರ್ ಎಸ್ ನಲ್ಲಿ ಕಾವೇರಿ ಆರತಿ ಹಾಗೂ ಅಮ್ಯೂಸ್ಮೆಂಟ್ ಪಾರ್ಕ್ ಗೆ ತೀವ್ರ ವಿರೋಧ ವ್ಯಕ್ತವಾಗಿದೆ.ರೈತ ಸಂಘದಿಂದ ಬೃಹತ್ ಪ್ರತಿಭಟನೆ ನಡೆದಿದೆ.ಕೆಆರ್ ಎಸ್ ಬೃಂದಾವನದ ಬಳಿ…
ಮೈಸೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಇ ಆಫೀಸ್ ಕಚೇರಿ ಆರಂಭಕ್ಕೆ ಕ್ಷಣಗಣನೆ…ಸಿಬ್ಬಂದಿಗಳಿಗೆ ತರಬೇತಿ…

ಮೈಸೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಇ ಆಫೀಸ್ ಕಚೇರಿ ಆರಂಭಕ್ಕೆ ಕ್ಷಣಗಣನೆ…ಸಿಬ್ಬಂದಿಗಳಿಗೆ ತರಬೇತಿ…

ಮೈಸೂರು,ಜೂ11,Tv10 ಕನ್ನಡ ಸರ್ಕಾರದ ಆದೇಶದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಇ ಆಫೀಸ್ ವ್ಯವಸ್ಥೆ ಅನುಷ್ಠಾನಗೊಳಿಸುವುದು ಕಡ್ಡಾಯವಾಗಿದೆ.2021 ರಲ್ಲೇ ಸರ್ಕಾರ ಆದೇಶ ಹೊರಡಿಸಿದೆ.ಸರ್ಕಾರದ ಆದೇಶ ಅನುಷ್ಠಾನಗೊಳಿಸಲು ಮೈಸೂರು ಅಭಿವೃದ್ದಿ ಪ್ರಾಧಿಕಾರ…

Leave a Reply

Your email address will not be published. Required fields are marked *