
ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೊಂದು ಬಲಿ…ಕೂಲಿ ಕಾರ್ಮಿಕ ಆತ್ಮಹತ್ಯೆ…
- TV10 Kannada Exclusive
- January 30, 2025
- No Comment
- 87
ಪಿರಿಯಾಪಟ್ಟಣ,ಜ30,Tv10 ಕನ್ನಡ
ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೊಂದು ಬಲಿ ಆದ ಆರೋಪ ಕೇಳಿಬಂದಿದೆ.ವಿಷ ತೆಗದುಕೊಂಡು ಕೂಲಿ ಕಾರ್ಮಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ.ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರದ ಬಸವೇಶ್ವರ ಕಾಲೋನಿಯಲ್ಲಿ ಘಟನೆ ನಡೆದಿದೆ
ಸುಬ್ರಮಣ್ಯ (37) ಮೃತ ದುರ್ದೈವಿ.
ಎಚ್ ಎಫ್ ಸಿ ಎಲ್ ಫೈನ್ಯಾನ್ಸ್ ನಲ್ಲಿ 6 ಲಕ್ಷ ಸಾಲ ಹಾಗೂ ಕೈ ಸಾಲ ಪಡೆದಿದ್ದರು.
ಆಧಾರ ಕಾರ್ಡ್ ತೆಗೆದುಕೊಂಡು ಸಾಲ ನೀಡಿದ್ದರು.ಸಾಲ ತೀರಿಸಲಾಗದೆ ಸುಬ್ರಹ್ಮಣ್ಯ ಸಮಸ್ಯೆಗೆ ಸಿಲುಕಿದ್ದರೆಂದು ಹೇಳಲಾಗಿದೆ.
ಸುಬ್ರಮಣ್ಯ ಮನೆ ಮೇಲೆ ಸಾಲದ ನೀಡಿದ್ದ ಫೈನಾನ್ಸ್ This property belongs to HFCL finance ಎಂದು ಬರೆದಿದ್ದರು.ಇದರಿಂದ ಸುಭ್ರಹ್ಮಣ್ಯ ಮನನೊಂದಿದ್ದರೆಂದು ಹೇಳಲಾಗಿದೆ.
ಸ್ಥಳಕ್ಕೆ ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ…