ಸ್ಕ್ರಾಪ್ ಐಟಂ ವ್ಯಾಪಾರಿಗೆ ಬೆದರಿಸಿ ರಾಬರಿ…10 ಲಕ್ಷ ಕ್ಯಾಶ್ ಕಸಿದ ಖದೀಮರು…ನಾಲ್ವರ ವಿರುದ್ದ ಪ್ರಕರಣ ದಾಖಲು…

ಸ್ಕ್ರಾಪ್ ಐಟಂ ವ್ಯಾಪಾರಿಗೆ ಬೆದರಿಸಿ ರಾಬರಿ…10 ಲಕ್ಷ ಕ್ಯಾಶ್ ಕಸಿದ ಖದೀಮರು…ನಾಲ್ವರ ವಿರುದ್ದ ಪ್ರಕರಣ ದಾಖಲು…

ಮೈಸೂರು,ಆ6,Tv10 ಕನ್ನಡ

ತಾಮ್ರ ಹಿತ್ತಾಳೆ ಸ್ಕ್ರಾಪ್ ವ್ಯಾಪಾರ ಮಾಡುವ ವ್ಯಾಪಾರಿಗೆ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿ 10 ಲಕ್ಷ ಕ್ಯಾಶ್ ಸುಲಿಗೆ ಮಾಡಿದ ಘಟನೆ ಮೈಸೂರಿನ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಬೆಂಗಳೂರಿನ ಜಯನಗರ ನಿವಾಸಿ ಅಬ್ದುಲ್ ಆಸಿಫ್ ಹಣ ಕಳೆದುಕೊಂಡವರು.ಮೈಸೂರು ನಿವಾಸಿ ಅಫ್ಸರ್ ಖಾನ್ ಹಾಗೂ ಮೂವರು ಸೇರಿ ಹಣ ಸುಲಿಗೆ ಮಾಡಿದ ಖದೀಮರು.

ಅಬ್ದುಲ್ ಲತೀಫ್ ರವರು ಆಗಾಗ ಮೈಸೂರಿಗೆ ಬಂದು ಸ್ಕ್ರಾಪ್ ಐಟಂ ಖರೀದಿಸುತ್ತಾರೆ.ಇತ್ತೀಚೆಗೆ ಅಬ್ದುಲ್ ಆಸಿಫ್ ಪರಿಚಯವಾಗಿದ್ದಾನೆ.800 ಕೆಜಿ ಸ್ಕ್ರಾಪ್ ಇದೆ ಕೆಜಿ ಗೆ 1500/- ರೂ ಎಂದು ಅಪ್ಸರ್ ಖಾನ್ ಆಮಿಷ ತೋರಿಸಿದ್ದಾನೆ.ಇದನ್ನ ನಂಬಿದ ಅಬ್ದುಲ್ ಲತೀಫ್ ತನ್ನ ಸಂಭಂಧಿಕರಾದ ಮೊಕ್ತಿಯಾರ್ ಪಾಷಾ ರವರನ್ನ ಜೊತೆಗೆ ಕರೆದುಕೊಂಡು ಓಮ್ನಿ ವ್ಯಾನ್ ನಲ್ಲಿ 10 ಲಕ್ಷ ಸಮೇತ ಮೈಸೂರಿಗೆ ಬಂದಿದ್ದಾರೆ.ಮಣಿಪಾಲ್ ಜಂಕ್ಷನ್ ಬಳಿ ಬಂದು ಅಪ್ಸರ್ ಖಾನ್ ಗೆ ಬರುವಂತೆ ತಿಳಿಸಿದ್ದಾರೆ.ಸ್ಥಳಕ್ಕೆ ಬಂದ ಅಪ್ಸರ್ ಓಮ್ನಿ ಹತ್ತಿ ಜೆಕೆ ಟೈರ್ಸ್ ಕಡೆಗೆ ಕರೆದೊಯ್ದಿದ್ದಾನೆ.ರಸ್ತೆ ಮಧ್ಯೆ ಮುಕ್ತಿಯಾರ್ ಪಾಷಾ ರನ್ನ ಇಳಿಸಿ ಸ್ಕ್ರಾಪ್ ತೋರಿಸುವುದಾಗಿ ತಾನೇ ಓಮ್ನಿ ಚಾಲನೆ ಮಾಡಿದ್ದಾನೆ.ಸ್ವಲ್ಪ ದೂರ ತೆರಳಿದ ನಂತರ ಕಾರ್ ನಿಲ್ಲಿಸಿ ಹಾರನ್ ಮಾಡಿದಾಗ ಮೂವರು ವ್ಯಕ್ತಿಗಳು ಪ್ರತ್ಯಕ್ಷವಾಗಿ ಕಾರನ್ನ ಸುತ್ತುವರೆದಿದ್ದಾರೆ.ಬಲವಂತವಾಗಿ ಅಫ್ಸರ್ ಖಾನ್ ನ್ನು ಪಕ್ಕದ ಸೀಟ್ ಗೆ ತಳ್ಳಿ ಮೂವರ ಪೈಕಿ ಓರ್ವ ಕಾರನ್ನ ಓಡಿಸಿದ್ದಾನೆ.ಉಳಿದಿಬ್ಬರು ಅಬ್ದುಲ್ ಆಸಿಫ್ ಗೆ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿ ಕ್ಯಾಶ್ ಬ್ಯಾಗ್ ಕಸಿದುಕೊಂಡಿದ್ದಾರೆ.ಸ್ವಲ್ಪ ದೂರ ತೆರಳಿದ ನಂತರ ಕಾರನ್ನ ಬಿಟ್ಟು ಓಡಿದ್ದಾರೆ.ಅಪ್ಸರ್ ಖಾನ್ ಪ್ಲಾನ್ ಮಾಡಿ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿರುವುದಾಗಿ ಅಬ್ದುಲ್ ಲತೀಫ್ ಆರೋಪಿಸಿದ್ದು ನಾಲ್ವರ ವಿರುದ್ದ ಎನ್.ಆರ್.ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಬಿಸಿ ನೀರಿನ ಪಾತ್ರೆಯಲ್ಲಿ ಬಿದ್ದು ಮಗು ಸಾವು…

ಬಿಸಿ ನೀರಿನ ಪಾತ್ರೆಯಲ್ಲಿ ಬಿದ್ದು ಮಗು ಸಾವು…

ಬಿಸಿ ನೀರಿನ ಪಾತ್ರೆಯಲ್ಲಿ ಬಿದ್ದು ಮಗು ಸಾವು… ಹುಣಸೂರು,ಡಿ20,Tv10 ಕನ್ನಡ ಸುಡುತ್ತಿರುವ ಬಿಸಿನೀರಿನ ಪಾತ್ರೆಗೆ ಬಿದ್ದು ಹೆಣ್ಣುಮಗು ಸಾವನ್ನಪ್ಪಿದ ಘಟನೆ ಹುಣಸೂರು ತಾಲೂಕಿನ ವಿಜಯಗಿರಿ ಹಾಡಿಯಲ್ಲಿ ನಡೆದಿದೆ. ಆದಿವಾಸಿ…
ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ…

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ…

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ… ಹುಣಸೂರು,ಡಿ19,Tv10 ಕನ್ನಡ ಕ್ಲುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಹುಣಸೂರು ನಗರದಲ್ಲಿ ನಡೆದಿದೆ.ನಿಜಾಂ ಮೊಹಲ್ಲಾದ ನಿವಾಸಿ ಖಾಜಾಪೀರ್(44)ಕೊಲೆಯಾದ…
ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಪುತ್ರನ ಗೂಂಡಾಗಿರಿ…ಆಸ್ತಿ ವಿಚಾರದಲ್ಲಿ ದರ್ಪ…ಮೊಬೈಲ್ ನಲ್ಲಿ ಸೆರೆಯಾದ ಬೆದರಿಕೆ…

ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಪುತ್ರನ ಗೂಂಡಾಗಿರಿ…ಆಸ್ತಿ ವಿಚಾರದಲ್ಲಿ ದರ್ಪ…ಮೊಬೈಲ್ ನಲ್ಲಿ…

ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಪುತ್ರನ ಗೂಂಡಾಗಿರಿ…ಆಸ್ತಿ ವಿಚಾರದಲ್ಲಿ ದರ್ಪ…ಮೊಬೈಲ್ ನಲ್ಲಿ ಸೆರೆಯಾದ ಬೆದರಿಕೆ… ಮಂಡ್ಯ,ಡಿ19,Tv10 ಕನ್ನಡ ಜಮೀನು ವಿಚಾರದಲ್ಲಿ ಮಾಜಿ ಶಾಸಕ ಹಾಗೂ ಪುತ್ರ ವ್ಯಕ್ತಿ ಮೇಲೆ…

Leave a Reply

Your email address will not be published. Required fields are marked *