ಸ್ಕ್ರಾಪ್ ಐಟಂ ವ್ಯಾಪಾರಿಗೆ ಬೆದರಿಸಿ ರಾಬರಿ…10 ಲಕ್ಷ ಕ್ಯಾಶ್ ಕಸಿದ ಖದೀಮರು…ನಾಲ್ವರ ವಿರುದ್ದ ಪ್ರಕರಣ ದಾಖಲು…

ಸ್ಕ್ರಾಪ್ ಐಟಂ ವ್ಯಾಪಾರಿಗೆ ಬೆದರಿಸಿ ರಾಬರಿ…10 ಲಕ್ಷ ಕ್ಯಾಶ್ ಕಸಿದ ಖದೀಮರು…ನಾಲ್ವರ ವಿರುದ್ದ ಪ್ರಕರಣ ದಾಖಲು…

ಮೈಸೂರು,ಆ6,Tv10 ಕನ್ನಡ

ತಾಮ್ರ ಹಿತ್ತಾಳೆ ಸ್ಕ್ರಾಪ್ ವ್ಯಾಪಾರ ಮಾಡುವ ವ್ಯಾಪಾರಿಗೆ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿ 10 ಲಕ್ಷ ಕ್ಯಾಶ್ ಸುಲಿಗೆ ಮಾಡಿದ ಘಟನೆ ಮೈಸೂರಿನ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಬೆಂಗಳೂರಿನ ಜಯನಗರ ನಿವಾಸಿ ಅಬ್ದುಲ್ ಆಸಿಫ್ ಹಣ ಕಳೆದುಕೊಂಡವರು.ಮೈಸೂರು ನಿವಾಸಿ ಅಫ್ಸರ್ ಖಾನ್ ಹಾಗೂ ಮೂವರು ಸೇರಿ ಹಣ ಸುಲಿಗೆ ಮಾಡಿದ ಖದೀಮರು.

ಅಬ್ದುಲ್ ಲತೀಫ್ ರವರು ಆಗಾಗ ಮೈಸೂರಿಗೆ ಬಂದು ಸ್ಕ್ರಾಪ್ ಐಟಂ ಖರೀದಿಸುತ್ತಾರೆ.ಇತ್ತೀಚೆಗೆ ಅಬ್ದುಲ್ ಆಸಿಫ್ ಪರಿಚಯವಾಗಿದ್ದಾನೆ.800 ಕೆಜಿ ಸ್ಕ್ರಾಪ್ ಇದೆ ಕೆಜಿ ಗೆ 1500/- ರೂ ಎಂದು ಅಪ್ಸರ್ ಖಾನ್ ಆಮಿಷ ತೋರಿಸಿದ್ದಾನೆ.ಇದನ್ನ ನಂಬಿದ ಅಬ್ದುಲ್ ಲತೀಫ್ ತನ್ನ ಸಂಭಂಧಿಕರಾದ ಮೊಕ್ತಿಯಾರ್ ಪಾಷಾ ರವರನ್ನ ಜೊತೆಗೆ ಕರೆದುಕೊಂಡು ಓಮ್ನಿ ವ್ಯಾನ್ ನಲ್ಲಿ 10 ಲಕ್ಷ ಸಮೇತ ಮೈಸೂರಿಗೆ ಬಂದಿದ್ದಾರೆ.ಮಣಿಪಾಲ್ ಜಂಕ್ಷನ್ ಬಳಿ ಬಂದು ಅಪ್ಸರ್ ಖಾನ್ ಗೆ ಬರುವಂತೆ ತಿಳಿಸಿದ್ದಾರೆ.ಸ್ಥಳಕ್ಕೆ ಬಂದ ಅಪ್ಸರ್ ಓಮ್ನಿ ಹತ್ತಿ ಜೆಕೆ ಟೈರ್ಸ್ ಕಡೆಗೆ ಕರೆದೊಯ್ದಿದ್ದಾನೆ.ರಸ್ತೆ ಮಧ್ಯೆ ಮುಕ್ತಿಯಾರ್ ಪಾಷಾ ರನ್ನ ಇಳಿಸಿ ಸ್ಕ್ರಾಪ್ ತೋರಿಸುವುದಾಗಿ ತಾನೇ ಓಮ್ನಿ ಚಾಲನೆ ಮಾಡಿದ್ದಾನೆ.ಸ್ವಲ್ಪ ದೂರ ತೆರಳಿದ ನಂತರ ಕಾರ್ ನಿಲ್ಲಿಸಿ ಹಾರನ್ ಮಾಡಿದಾಗ ಮೂವರು ವ್ಯಕ್ತಿಗಳು ಪ್ರತ್ಯಕ್ಷವಾಗಿ ಕಾರನ್ನ ಸುತ್ತುವರೆದಿದ್ದಾರೆ.ಬಲವಂತವಾಗಿ ಅಫ್ಸರ್ ಖಾನ್ ನ್ನು ಪಕ್ಕದ ಸೀಟ್ ಗೆ ತಳ್ಳಿ ಮೂವರ ಪೈಕಿ ಓರ್ವ ಕಾರನ್ನ ಓಡಿಸಿದ್ದಾನೆ.ಉಳಿದಿಬ್ಬರು ಅಬ್ದುಲ್ ಆಸಿಫ್ ಗೆ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿ ಕ್ಯಾಶ್ ಬ್ಯಾಗ್ ಕಸಿದುಕೊಂಡಿದ್ದಾರೆ.ಸ್ವಲ್ಪ ದೂರ ತೆರಳಿದ ನಂತರ ಕಾರನ್ನ ಬಿಟ್ಟು ಓಡಿದ್ದಾರೆ.ಅಪ್ಸರ್ ಖಾನ್ ಪ್ಲಾನ್ ಮಾಡಿ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿರುವುದಾಗಿ ಅಬ್ದುಲ್ ಲತೀಫ್ ಆರೋಪಿಸಿದ್ದು ನಾಲ್ವರ ವಿರುದ್ದ ಎನ್.ಆರ್.ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಯೋಗ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಯಜುರುಪಾಕರ್ಮ…ಸಾಮೂಹಿಕ ಯಜ್ಞೋಪವೀತ ಬದಲಾವಣೆ…

ಯೋಗ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಯಜುರುಪಾಕರ್ಮ…ಸಾಮೂಹಿಕ ಯಜ್ಞೋಪವೀತ ಬದಲಾವಣೆ…

ಮೈಸೂರು,ಆ9,Tv10 ಕನ್ನಡ ಮೈಸೂರಿನ ವಿಜಯನಗರದ ಶ್ರೀ ಯೋಗಾನರಸಿಂಹ ದೇವಾಲಯದಲ್ಲಿ ಸಾಮೂಹಿಕವಾಗಿ ಋಗ್ವೇದ ಹಾಗೂ ಯಜುರುಪಾಕರ್ಮ ಕಾರ್ಯಕ್ರಮ ನೆರವೇರಿತು.ನೂರಾರು ವಿಪ್ರರು ಭಾಗವಹಿಸಿ ಜನಿವಾರ ಬದಲಾಯಿಸಿಕೊಂಡರು.ದೇವಸ್ಥಾನದ ಆಡಳಿತಾಧಿಕಾರಿ ಎನ್ ಶ್ರೀನಿವಾಸನ್ ನೇತೃತ್ವದಲ್ಲಿ…
ವಿಷ್ಣುವರ್ಧನ್ ಪುಣ್ಯಭೂಮಿ ಧ್ವಂಸ ಹಿನ್ನಲೆ…ಮೈಸೂರಿನಲ್ಲಿ ಅಭಿಮಾನಿಗಳಿಂದ ಪ್ರತಿಭಟನೆ…

ವಿಷ್ಣುವರ್ಧನ್ ಪುಣ್ಯಭೂಮಿ ಧ್ವಂಸ ಹಿನ್ನಲೆ…ಮೈಸೂರಿನಲ್ಲಿ ಅಭಿಮಾನಿಗಳಿಂದ ಪ್ರತಿಭಟನೆ…

ಮೈಸೂರು,ಆ8,Tv10 ಕನ್ನಡ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಡಾ.ವಿಷ್ಣುವರ್ಧನ್ ರವರ ಪುಣ್ಯಭೂಮಿಯನ್ನ ಧ್ವಂಸಗೊಳಿಸಿದ ಪ್ರಕರಣ ಮೈಸೂರಿನಲ್ಲಿ ಪ್ರತಿಧ್ವನಿಸಿದೆ. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ಡಾ. ವಿಷ್ಣುವರ್ಧನ್ ಉದ್ಯಾನವನ ಮುಂಭಾಗ…
ನಾಳೆ ಕೆ.ಆರ್.ಬ್ಯಾಂಕ್ ನವೀಕೃತ ಕಟ್ಟಡ ಉದ್ಘಾಟನೆ…ಸಿಎಂ ಆಗಮನ ಹಿನ್ನಲೆ…ಪೊಲೀಸ್ ಅಧಿಕಾರಿಗಳಿಂದ ಪರಿಶೀಲನೆ…

ನಾಳೆ ಕೆ.ಆರ್.ಬ್ಯಾಂಕ್ ನವೀಕೃತ ಕಟ್ಟಡ ಉದ್ಘಾಟನೆ…ಸಿಎಂ ಆಗಮನ ಹಿನ್ನಲೆ…ಪೊಲೀಸ್ ಅಧಿಕಾರಿಗಳಿಂದ ಪರಿಶೀಲನೆ…

ಮೈಸೂರು,ಆ8,Tv10 ಕನ್ನಡ ಅಗ್ರಹಾರ ವೃತ್ತದಲ್ಲಿರುವ ಶ್ರೀ ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ನ ನವೀಕೃತ ಕಟ್ಟಡ ಉದ್ಘಾಟನಾ ಸಮಾರಂಭ ನಾಳೆ ನೆರವೇರಲಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕಟ್ಟಡ ಉದ್ಘಾಟಿಸಲಿದ್ದಾರೆ.ಈ ಹಿನ್ನಲೆ ಭದ್ರತೆ…

Leave a Reply

Your email address will not be published. Required fields are marked *