ಬಾವಿಗೆ ಬಿದ್ದು ದಂಪತಿ ಸಾವು…ಎಮ್ಮೆ ತೊಳೆಯುವ ವೇಳೆ ದುರ್ಘಟನೆ…
- TV10 Kannada Exclusive
- September 5, 2025
- No Comment
- 139
ಮಂಡ್ಯ,ಸೆ5,Tv10 ಕನ್ನಡ
ಎಮ್ಮೆ ತೊಳೆಯುವ ವೇಳೆ ಬಾವಿಗೆ ಬಿದ್ದು ದಂಪತಿ ಧಾರುಣ ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ
ಅರೆಬೊಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ವಸಂತಮ್ಮ(65) ಹಾಗೂ ಕಾಳೇಗೌಡ(70) ಮೃತ ದುರ್ದೈವಿಗಳು.
ಎಮ್ಮೆ ತೊಳೆಯಲು ಹೋಗಿದ್ದ ವೇಳೆ ಪತ್ನಿ ತೆರೆದ ಬಾವಿಗೆ ಬಿದ್ದಿದ್ದಾರೆ.
ಪತ್ನಿಯನ್ನ ರಕ್ಷಿಸಲು ಹೋದ ಪತಿ ಕೂಡ ಇಳಿದಿದ್ದಾರೆ.ಇಬ್ಬರೂ ಸಾವನ್ನಪ್ಪಿದ್ದಾರೆ.
ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ…