ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ…

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ…

  • Crime
  • December 19, 2025
  • No Comment
  • 62

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ…

ಹುಣಸೂರು,ಡಿ19,Tv10 ಕನ್ನಡ

ಕ್ಲುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಹುಣಸೂರು ನಗರದಲ್ಲಿ ನಡೆದಿದೆ.ನಿಜಾಂ ಮೊಹಲ್ಲಾದ ನಿವಾಸಿ ಖಾಜಾಪೀರ್(44)ಕೊಲೆಯಾದ ದುರ್ದೈವಿ. ಖಾಜಾಪೀರ್ ಸ್ನೇಹಿತ ನಗರದ ಮುಸ್ಲಿಂಬ್ಲಾಕ್‌ನ ಜಾವಿದ್ ಹಾಗೂ ಇನಾಯತುಲ್ಲಾ ಬಂಧಿತ ಕೊಲೆ ಆರೋಪಿಗಳು.
ಆಟೋ ಚಾಲಕ ಹಾಗೂ ಲೋಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಖಾಜಾಪೀರ್ ಆರೋಪಿಗಳಾದ ಜಾವಿದ್ ಹಾಗೂ ಇನಾಯತುಲ್ಲಾರವರು ಸ್ನೇಹಿತರಾಗಿದ್ದು ಕುಡಿತದ ದಾಸರಾಗಿದ್ದರು.ಜಾವಿದ್ ವ್ಯಕ್ತಿಯೊಬ್ಬರಿಂದ 15ಸಾವಿರ ರೂ ಸಾಲ ಪಡೆದಿದ್ದ.ಸಾಲ ಮರುಪಾವತಿಸಲು ವಿಫಲನಾದ ಕಾರಣ ಜಾವಿದ್‌ನ ಬೈಕನ್ನು ವಶಕ್ಕೆ ಪಡೆದು ಸಾಲ ತೀರಿಸಿ ವಾಪಸ್ ಪಡೆಯುವಂತೆ ವಾರ್ನಿಂಗ್ ಕೊಟ್ಟಿದ್ದರು.
ಬೈಕ್ ಕಿತ್ತುಕೊಳ್ಳಲು ಕೊಲೆಯಾದ ಖಾಜಾಪೀರ್ ಕಾರಣವಾಗಿದ್ದಾನೆಂದು ಗುರುವಾರ ಮದ್ಯ ರಾತ್ರಿ ಮಂಟಿ ಸರ್ಕಲ್ ಬಳಿಯಲ್ಲಿ ಮೂವರ ನಡುವೆ ಜಗಳವಾಗಿದೆ. ಕುಡಿದ ಮತ್ತಿನಲ್ಲಿ ಮರದ ರಿಪೀಸ್ ಪಟ್ಟಿಯಲ್ಲಿ ಬಡಿದಾಡಿಕೊಂಡಿದ್ದು, ತೀವ್ರ ಪೆಟ್ಟು ಬಿದ್ದಿದ್ದ ಖಾಜಾಪೀರ್ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಈ ಸಂಬಂಧ ಹುಣಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೃತ್ಯ ನಡೆದ ಸ್ಥಳಕ್ಕೆ ಎಸ್.ಪಿ.ವಿಷ್ಣುವರ್ಧನ್, ಡಿವೈಎಸ್‌ಪಿ. ರಾಜು, ಇನ್ಸ್ಫೆಕ್ಟರ್ ಸಂತೋಷ್ ಕಶ್ಯಪ್ ಭೇಟಿ ಇತ್ತು ಪರಿಶೀಲಿಸಿದರು. ಅರೋಪಿಗಳನ್ನು ನಗರದ ಎಪಿಎಂಸಿ ಮಾರುಕಟ್ಟೆ ಬಳಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ…

Spread the love

Related post

ನಾಗಮಲೆಯಲ್ಲಿ ಚಿರತೆ ದಾಳಿ: ಬೆಂಗಳೂರು ಮೂಲದ ಬಾಲಕ ಮೃತ.

ನಾಗಮಲೆಯಲ್ಲಿ ಚಿರತೆ ದಾಳಿ: ಬೆಂಗಳೂರು ಮೂಲದ ಬಾಲಕ ಮೃತ.

ನಾಗಮಲೆಯಲ್ಲಿ ಚಿರತೆ ದಾಳಿ: ಬೆಂಗಳೂರು ಮೂಲದ ಬಾಲಕ ಮೃತ. ಹನೂರು Tv10 ಕನ್ನಡ. ಹನೂರು :ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ನಾಗಮಲೆಯಲ್ಲಿ ನಡೆದ ಚಿರತೆ ದಾಳಿ ಪ್ರಕರಣ ರಾಜ್ಯದ…
ಮೈಸೂರಿನ ವಾಹನ ಸವಾರರಿಗೆ ಹೊಸ ಪ್ರಾಬ್ಲಂ…ಭಿಕ್ಷೆ ಬೇಡುವ ನೆಪದಲ್ಲಿ ಬೀದಿ ಬಸವಣ್ಣಗಳ ಕಾಟ…ರಸ್ತೆ ಸುಗಮ ಸಂಚಾರಕ್ಕೆ ಅಡಚಣೆ…

ಮೈಸೂರಿನ ವಾಹನ ಸವಾರರಿಗೆ ಹೊಸ ಪ್ರಾಬ್ಲಂ…ಭಿಕ್ಷೆ ಬೇಡುವ ನೆಪದಲ್ಲಿ ಬೀದಿ ಬಸವಣ್ಣಗಳ…

ಮೈಸೂರಿನ ವಾಹನ ಸವಾರರಿಗೆ ಹೊಸ ಪ್ರಾಬ್ಲಂ…ಭಿಕ್ಷೆ ಬೇಡುವ ನೆಪದಲ್ಲಿ ಬೀದಿ ಬಸವಣ್ಣಗಳ ಕಾಟ…ರಸ್ತೆ ಸುಗಮ ಸಂಚಾರಕ್ಕೆ ಅಡಚಣೆ… ಮೈಸೂರು,ಏ28,Tv10 ಕನ್ನಡ ಮೈಸೂರಿನ ವಾಹನ ಸವಾರರಿಗೆ ಹೊಸ ಪ್ರಾಬ್ಲಂ ಶುರುವಾಗಿದೆ.ಭಿಕ್ಷೆ…
ಪ್ರಸಿದ್ಧ ಸ್ಕಿನ್ ಕೇರ್ ಬ್ರಾಂಡ್ ‘ಡಿಕನ್ಸ್ಟ್‌ರಕ್ಟ್’ ರಾಯಭಾರಿಯಾಗಿ ಸಂಗೀತ ಮಾಂತ್ರಿಕ ಅನಿರುದ್ಧ್ ರವಿಚಂದರ್ ಆಯ್ಕೆ

ಪ್ರಸಿದ್ಧ ಸ್ಕಿನ್ ಕೇರ್ ಬ್ರಾಂಡ್ ‘ಡಿಕನ್ಸ್ಟ್‌ರಕ್ಟ್’ ರಾಯಭಾರಿಯಾಗಿ ಸಂಗೀತ ಮಾಂತ್ರಿಕ ಅನಿರುದ್ಧ್…

ಪ್ರಸಿದ್ಧ ಸ್ಕಿನ್ ಕೇರ್ ಬ್ರಾಂಡ್ ‘ಡಿಕನ್ಸ್ಟ್‌ರಕ್ಟ್’ ರಾಯಭಾರಿಯಾಗಿ ಸಂಗೀತ ಮಾಂತ್ರಿಕ ಅನಿರುದ್ಧ್ ರವಿಚಂದರ್ ಆಯ್ಕೆ ಬೆಂಗಳೂರು: ತನ್ನ ವಿಭಿನ್ನ ಹಾಗೂ ಪರಿಣಾಮಕಾರಿ ಉತ್ಪನ್ನಗಳ ಮೂಲಕ ಗಮನ ಸೆಳೆದಿರುವ ಪ್ರಸಿದ್ಧ…

Leave a Reply

Your email address will not be published. Required fields are marked *