ಮದ್ದೂರಿನಲ್ಲಿ ರೌಡಿ ಶೀಟರ್ ಯಶ್ವಂತ್ ಹತ್ಯೆ ಪ್ರಕರಣ…ಆರೋಪಿಗಳು ಅರೆಸ್ಟ್…ಎಸ್ಪಿ ಶೋಭಾರಾಣಿ ಪ್ರಸ್ ಮೀಟ್…
- TV10 Kannada Exclusive
- April 18, 2026
- No Comment
- 480



ಮದ್ದೂರಿನಲ್ಲಿ ರೌಡಿ ಶೀಟರ್ ಯಶ್ವಂತ್ ಹತ್ಯೆ ಪ್ರಕರಣ…ಆರೋಪಿಗಳು ಅರೆಸ್ಟ್…ಎಸ್ಪಿ ಶೋಭಾರಾಣಿ ಪ್ರಸ್ ಮೀಟ್…
ಮಂಡ್ಯ,ಏ18,Tv10 ಕನ್ನಡ
ಮದ್ದೂರಿನಲ್ಲಿ ರೌಡಿಶೀಟರ್ ಯಶ್ವಂತ್ ಕೊಲೆ ಪ್ರಕರಣ ಸಂಬಂಧಿಸಿದಂತೆ ಪೊಲೀಸರು ಹಂತಕರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏ.5 ರಂದು ಮದ್ದೂರಿನ ಪಟೇಲ್ ಸಾಮಿಲ್ ಬಳಿ ಹತ್ಯೆ ನಡೆದಿತ್ತು.
ಸಿಗರೇಟ್ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾಗಿತ್ತು.ಮಂಡ್ಯದಲ್ಲಿ ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಸಿಗರೇಟ್ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿ
ಮರಳಿಗ ಗ್ರಾಮದ ರೌಡಿಶೀಟರ್ ಯಶ್ವಂತ್@ ಕಚ್ಚಿಅಭಿ ಹತ್ಯೆಯಾಗಿದ್ದ.
ದರ್ಶನ್ ಹಾಗೂ ಸಚಿನ್ ಗೆ ಗಂಭೀರ ಗಾಯವಾಗಿತ್ತು.ಆರೋಪಿಗಳ ದಸ್ತಗಿರಿ ಮಾಡಿ ಕಾನೂನು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಸಿಗರೇಟ್ ವಿಚಾರದಲ್ಲಿ ಮಾತುಕತೆ ವೇಳೆ ಗಲಾಟೆ ಆಗಿ ಕೊಲೆ ಮಾಡಲಾಗಿತ್ತು.
136/109 ರೀತ್ಯ ಪ್ರಕರಣ ದಾಖಲು ಮಾಡಿಕೊಂಡಿದ್ದರು.
ಮೃತ ಯಶ್ವಂತ್ ರೌಡಿಶೀಟರ್, ಬೆಂಗಳೂರಿನಲ್ಲಿ ಆಟೋ ಡ್ರೈವರ್ ಆಗಿದ್ದ.ಎರಡು ಗುಂಪುಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿತ್ತು.
ಕೊಲೆ ಪ್ರಕರಣದಲ್ಲಿ ದರ್ಶನ್, ಸಚ್ಚಿನ್, ಧನುಷ್, ಸಿದ್ದರಾಜು, ಲೋಹಿತ್, ಮಹೇಶ್, ಸಚಿನ್@ಕಟ್ಟೆ, ಲಂಕೇಶ್, ಸಂಜಯ್ ಗೌಡ, ವಿಜಿ ಅರೆಸ್ಟ್ ಆಗಿದ್ದಾರೆ.
ಕೊಲೆ ಯತ್ನ ಪ್ರಕರಣದಡಿ ಮಾದೇಶ್, ಮನೋಜ್, ಮನ್ವಿತ್, ದರ್ಶನ್, ಹೇಮಂತ್, ಸಚ್ಚಿನ್, ಜಯಸೂರ್ಯ ಬಂಧನವಾಗಿದ್ದಾರೆ.
ಈ ಹಿಂದೆ ಯಶ್ವಂತ್ ಮೇಲೆ ಮೂರು ಪ್ರಕರಣ ಇತ್ತು.ಯಶ್ವಂತ್ ರೌಡಿಸಂನಲ್ಲಿ ಆ್ಯಕ್ಟಿವ್ ಇದ್ದ ಕಾರಣ ಗಡಿಪಾರಿಗೆ ಶಿಫಾರಸ್ಸು ಮಾಡಲಾಗಿತ್ತು.
ಎಲ್ಲಾ ಆರೋಪಿಗಳ ಬಂಧಿಸಿ ಕಾನೂನು ಕ್ರಮ ವಹಿಸಲಾಗಿದೆ ಎಂದ ಎಸ್ಪಿ ಶೋಭಾರಾಣಿ ತಿಳಿಸಿದ್ದಾರೆ…