ಮೈಸೂರು ವಲಯ ಕ್ರಿಕೆಟ್ ಗೆ ನೂತನ ಸಾರಥಿ ಹರಿಕೃಷ್ಣಕುಮಾರ್…ಇಂದು ಸಂಚಾಲಕರಾಗಿ ಅಧಿಕಾರ ಸ್ವೀಕಾರ…
- Mysore
- November 24, 2022
- No Comment
- 90
ಮೈಸೂರು ವಲಯ ಕ್ರಿಕೆಟ್ ಗೆ ನೂತನ ಸಾರಥಿ ಹರಿಕೃಷ್ಣಕುಮಾರ್…ಇಂದು ಸಂಚಾಲಕರಾಗಿ ಅಧಿಕಾರ ಸ್ವೀಕಾರ…
ಮೈಸೂರು,ನ25,Tv10 ಕನ್ನಡ
ಮೈಸೂರು ವಲಯ ಕ್ರಿಕೆಟ್ ಸಂಚಾಲಕರಾಗಿ ಆರ್.ಕೆ.ಹರಿಕೃಷ್ಣಕುಮಾರ್ ಇಂದು ಅಧಿಕಾರ ಸ್ವೀಕರಿಸಿದರು.ಮುಂದಿನ ಮೂರು ವರ್ಷದ ಅವಧಿಗೆ ಸಂಚಾಲಕರಾಗಲಿರುವ ಹರಿಕೃಷ್ಣಕುಮಾರ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.ಎನ್.ಸಿ.ಸಿ.ತಂಡದ ಕಾರ್ಯದರ್ಶಿಯಾಗಿರುವ ಹರಿಕೃಷ್ಣಕುಮಾರ್ ಮೈಸೂರು ವಲಯ ಕ್ರಿಕೆಟ್ ನ ನೂತನ ಸಾರಥಿಯಾಗಿದ್ದಾರೆ.ನಿರ್ಗಮಿತ ಸಂಚಾಲಕರಾದ ಸುಧಾಕರ್ ರೈ ರವರು ತಮ್ಮ ಕಚೇರಿಯಲ್ಲಿ ಹರಿಕೃಷ್ಣಕುಮಾರ್ ಗೆ ಅಧಿಕಾರ ಹಸ್ತಾಂತರಿಸಿದರು.ಮೈಸೂರು ವಲಯ ಕ್ರಿಕೆಟ್ ಪ್ರಗತಿಯ ಜವಾಬ್ದಾರಿಯನ್ನ ಹೊತ್ತಿರುವ ಹರಿಕೃಷ್ಣಕುಮಾರ್ ತಮ್ಮ ಮುಂದಿರುವ ಸವಾಲುಗಳನ್ನ ಸಮರ್ಥವಾಗಿ ಎದುರಿಸಲೆಂದು Tv10 ಕನ್ನಡ ವಾಹಿನಿ ಶುಭ ಹಾರೈಸುತ್ತಿದೆ…