ಸ್ಕೂಟರ್ ಟ್ರೈನಿಂಗ್ ನೆಪದಲ್ಲಿ ಕೈಚಳಕ…ಟ್ರೈನರ್,ಬ್ಯೂಟಿಷಿಯನ್ ಸೇರಿದಂತೆ ಮೂವರು ಕತರ್ ನಾಕ್ ಕಳ್ಳಿಯರ ಬಂಧನ…7.5 ಲಕ್ಷ ಮೌಲ್ಯದ ಚಿನ್ನಾಭರಣ ವಶ…

ಸ್ಕೂಟರ್ ಟ್ರೈನಿಂಗ್ ನೆಪದಲ್ಲಿ ಕೈಚಳಕ…ಟ್ರೈನರ್,ಬ್ಯೂಟಿಷಿಯನ್ ಸೇರಿದಂತೆ ಮೂವರು ಕತರ್ ನಾಕ್ ಕಳ್ಳಿಯರ ಬಂಧನ…7.5 ಲಕ್ಷ ಮೌಲ್ಯದ ಚಿನ್ನಾಭರಣ ವಶ…

ಸ್ಕೂಟರ್ ಟ್ರೈನಿಂಗ್ ನೆಪದಲ್ಲಿ ಕೈಚಳಕ…ಟ್ರೈನರ್,ಬ್ಯೂಟಿಷಿಯನ್ ಸೇರಿದಂತೆ ಮೂವರು ಕತರ್ ನಾಕ್ ಕಳ್ಳಿಯರ ಬಂಧನ…7.5 ಲಕ್ಷ ಮೌಲ್ಯದ ಚಿನ್ನಾಭರಣ ವಶ…

ಮೈಸೂರು,ಜ3,Tv10 ಕನ್ನಡ
ಸ್ಕೂಟರ್ ರೈಡಿಂಗ್ ತರಬೇತಿ ನೀಡುವ ನೆಪದಲ್ಲಿ ಚಿನ್ನಾಭರಣ ದೋಚಿದ ಮೂವರು ಖತರ್ ನಾಕ್ ಕಳ್ಳಿಯರು ಮೈಸೂರು ಕುವೆಂಪುನಗರ ಠಾಣೆ ಪೊಲೀಸರ ಅತಿಥಿಯಾಗಿದ್ದಾರೆ.ಬಂಧಿತರಿಂದ 7.5 ಲಕ್ಷ ಮೌಲ್ಯದ 150 ಗ್ರಾಂ ಚಿನ್ನಾಭರಣ,12 ಸಾವಿರ ನಗದು,ಕೃತ್ಯಕ್ಕೆ ಬಳಸಿದ ಸ್ಕೂಟರ್ ಹಾಗೂ ಮೂರು ಮೊಬೈಲ್ ಗಳನ್ನ ವಶಪಡಿಸಿಕೊಂಡಿದ್ದಾರೆ.ಅಮೃತ(38),ಅಶ್ವಿನಿ(28) ಹಾಗೂ ಶೃತಿ (26) ಬಂಧಿತ ಆರೋಪಿಗಳು.

ಕುವೆಂಪುನಗರದ ಎ& ಬಿ ಬ್ಲಾಕ್ ನ ನಿವಾಸಿ ಪೂರ್ಣಿಮ ರವರು ತಮ್ಮ ಮಗಳ ಮದುವೆಗಾಗಿ 150 ಗ್ರಾಂ ಚಿನ್ನಾಭರಣ,20 ಸಾವಿರ ನಗದು ಇಟ್ಟಿದ್ದರು.ಪ್ರತಿದಿನ ಸ್ಕೂಟರ್ ರೈಡಿಂಗ್ ಕಲಿಯಲು ಮೊದಲ ಆರೋಪಿ ಅಮೃತ ಬಳಿ ಹೋಗುತ್ತಿದ್ದರು.ಅಮೃತ ಮನೆಗೇ ಬಂದು ಪೂರ್ಣಿಮಾರನ್ನ ಪಿಕ್ ಮಾಡುತ್ತಿದ್ದರು.ಮನೆಯಲ್ಲಿ ಒಡವೆಗಳು ಇರುವುದನ್ನ ಪತ್ತೆಹಚ್ಚಿದ ಅಮೃತ ತನ್ನ ಸ್ನೇಹಿತೆಯರೊಂದಿಗೆ ಸ್ಕೆಚ್ ಹಾಕಿ ಚಿನ್ನಾಭರಣ ದೋಚಲು ಸಂಚು ರೂಪಿಸಿದ್ದಳು.ಬ್ಯೂಟಿಷಿಯನ್ ಅಶ್ವಿನಿ ಹಾಗೂ ಮನೆಗೆಲಸ ಮಾಡುವ ಶೃತಿ ಜೊತೆ ಸೇರಿಕೊಂಡು ನಕಲಿ ಬೀಗ ಸಿದ್ದಪಡಿಸಿ ಡಿಸೆಂಬರ್ 31 ರಂದು 150 ಗ್ರಾಂ ಚಿನ್ನ ಹಾಗೂ 12 ಸಾವಿರ ನಗದು ಕಳುವು ಮಾಡಿದ್ದಾರೆ.ಪೂರ್ಣಿಮ ರವರು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಡಿಸಿಪಿ ಎಂ.ಎಸ್.ಗೀತಾ ರವರ ಮಾರ್ಗದರ್ಶನದಲ್ಲಿ,ಎಸಿಪಿ ಗಂಗಾಧರಸ್ವಾಮಿ ಉಸ್ತುವಾರಿಯಲ್ಲಿ ಕುವೆಂಪುನಗರ ಠಾಣೆ ಇನ್ಸ್ಪೆಕ್ಟರ್ ಅರುಣ್ ರವರ ನೇತೃತ್ವದಲ್ಲಿ ಪಿಎಸ್ಸೈ ಕು.ರಾಧಾ,ಎಎಸ್ಸೈ ಮಹದೇವ ಹಾಗೂ ಸಿಬ್ಬಂದಿಗಳಾದ ಮಂಜುನಾಥ್,ಪುಟ್ಟಪ್ಪ,ನಾಗೇಶ್,ಯೋಗೇಶ್,ಹಜರತ್,ಸುರೇಶ್,ಮಾದೇಶ,ಮಹಿಳಾ ಸಿಬ್ಬಂದಿಗಳಾದ ಮಂಜುಳಾ,ಅಭಿಲಾಷ,ಅಶ್ವಿನಿ,ಕೃಷ್ಣವೇಣಿ,ಸೌಭಾಗ್ಯ ರವರು ಆರೋಪಿಗಳನ್ನ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕುವೆಂಪುನಗರ ಠಾಣೆ ಪೊಲೀಸರ ಈ ಪತ್ತೆ ಕಾರ್ಯವನ್ನ ನಗರ ಪೊಲೀಸ್ ಆಯುಕ್ತರಾದ ಬಿ.ರಮೇಶ್,ಹಾಗೂ ಡಿಸಿಪಿ ಮುತ್ತುರಾಜ್ ರವರು ಪ್ರಶಂಸಿಸಿದ್ದಾರೆ…

Spread the love

Related post

ಪ್ರಸಿದ್ಧ ಸ್ಕಿನ್ ಕೇರ್ ಬ್ರಾಂಡ್ ‘ಡಿಕನ್ಸ್ಟ್‌ರಕ್ಟ್’ ರಾಯಭಾರಿಯಾಗಿ ಸಂಗೀತ ಮಾಂತ್ರಿಕ ಅನಿರುದ್ಧ್ ರವಿಚಂದರ್ ಆಯ್ಕೆ

ಪ್ರಸಿದ್ಧ ಸ್ಕಿನ್ ಕೇರ್ ಬ್ರಾಂಡ್ ‘ಡಿಕನ್ಸ್ಟ್‌ರಕ್ಟ್’ ರಾಯಭಾರಿಯಾಗಿ ಸಂಗೀತ ಮಾಂತ್ರಿಕ ಅನಿರುದ್ಧ್…

ಪ್ರಸಿದ್ಧ ಸ್ಕಿನ್ ಕೇರ್ ಬ್ರಾಂಡ್ ‘ಡಿಕನ್ಸ್ಟ್‌ರಕ್ಟ್’ ರಾಯಭಾರಿಯಾಗಿ ಸಂಗೀತ ಮಾಂತ್ರಿಕ ಅನಿರುದ್ಧ್ ರವಿಚಂದರ್ ಆಯ್ಕೆ ಬೆಂಗಳೂರು: ತನ್ನ ವಿಭಿನ್ನ ಹಾಗೂ ಪರಿಣಾಮಕಾರಿ ಉತ್ಪನ್ನಗಳ ಮೂಲಕ ಗಮನ ಸೆಳೆದಿರುವ ಪ್ರಸಿದ್ಧ…
ಸ್ಥಗಿತಗೊಂಡಿರುವ ಮೈನಿಂಗ್ ನಲ್ಲಿ ಕೊಳ್ಳೆ…ಕೋಟ್ಯಾಂತರ ಮೌಲ್ಯದ ಸರ್ಕಾರಿ ಜಾಗಕ್ಕಿಲ್ಲ ರಕ್ಷಣೆ…ನಿವೇಶನಗಳಾಗಿ ಪರಿವರ್ತಿಸಿ ಮಾರಾಟ…ಬೆಲೆಬಾಳುವ ಖನಿಜಗಳು ಖದೀಮರ ಪಾಲು…ರಕ್ಷಣೆ ಮಾಡುವಂತೆ ದೂರು ಕೊಟ್ರೂ ಡೋಂಟ್ ಕೇರ್…ಕ್ರಮ ಕೈಗೊಳ್ಳಲು ಮೀನಾ ಮೇಷ…ಪ್ರಭಾವಿಗಳ ಕೈವಾಡವೇ…ಅಕ್ರಮದ ಹಿಂದಿರುವ ಕಾಣದ ಕೈಗಳು ಯಾವುದು…?

ಸ್ಥಗಿತಗೊಂಡಿರುವ ಮೈನಿಂಗ್ ನಲ್ಲಿ ಕೊಳ್ಳೆ…ಕೋಟ್ಯಾಂತರ ಮೌಲ್ಯದ ಸರ್ಕಾರಿ ಜಾಗಕ್ಕಿಲ್ಲ ರಕ್ಷಣೆ…ನಿವೇಶನಗಳಾಗಿ ಪರಿವರ್ತಿಸಿ…

ಸ್ಥಗಿತಗೊಂಡಿರುವ ಮೈನಿಂಗ್ ನಲ್ಲಿ ಕೊಳ್ಳೆ…ಕೋಟ್ಯಾಂತರ ಮೌಲ್ಯದ ಸರ್ಕಾರಿ ಜಾಗಕ್ಕಿಲ್ಲ ರಕ್ಷಣೆ…ನಿವೇಶನಗಳಾಗಿ ಪರಿವರ್ತಿಸಿ ಮಾರಾಟ…ಬೆಲೆಬಾಳುವ ಖನಿಜಗಳು ಖದೀಮರ ಪಾಲು…ರಕ್ಷಣೆ ಮಾಡುವಂತೆ ದೂರು ಕೊಟ್ರೂ ಡೋಂಟ್ ಕೇರ್…ಕ್ರಮ ಕೈಗೊಳ್ಳಲು ಮೀನಾ ಮೇಷ…ಪ್ರಭಾವಿಗಳ…
ಮದ್ದೂರಿನಲ್ಲಿ ರೌಡಿ ಶೀಟರ್ ಯಶ್ವಂತ್ ಹತ್ಯೆ ಪ್ರಕರಣ…ಆರೋಪಿಗಳು ಅರೆಸ್ಟ್…ಎಸ್ಪಿ ಶೋಭಾರಾಣಿ ಪ್ರಸ್ ಮೀಟ್…

ಮದ್ದೂರಿನಲ್ಲಿ ರೌಡಿ ಶೀಟರ್ ಯಶ್ವಂತ್ ಹತ್ಯೆ ಪ್ರಕರಣ…ಆರೋಪಿಗಳು ಅರೆಸ್ಟ್…ಎಸ್ಪಿ ಶೋಭಾರಾಣಿ ಪ್ರಸ್…

ಮದ್ದೂರಿನಲ್ಲಿ ರೌಡಿ ಶೀಟರ್ ಯಶ್ವಂತ್ ಹತ್ಯೆ ಪ್ರಕರಣ…ಆರೋಪಿಗಳು ಅರೆಸ್ಟ್…ಎಸ್ಪಿ ಶೋಭಾರಾಣಿ ಪ್ರಸ್ ಮೀಟ್… ಮಂಡ್ಯ,ಏ18,Tv10 ಕನ್ನಡ ಮದ್ದೂರಿನಲ್ಲಿ ರೌಡಿಶೀಟರ್ ಯಶ್ವಂತ್ ಕೊಲೆ ಪ್ರಕರಣ ಸಂಬಂಧಿಸಿದಂತೆ ಪೊಲೀಸರು ಹಂತಕರನ್ನ ಬಂಧಿಸುವಲ್ಲಿ…

Leave a Reply

Your email address will not be published. Required fields are marked *