ಸ್ಕೂಟರ್ ಟ್ರೈನಿಂಗ್ ನೆಪದಲ್ಲಿ ಕೈಚಳಕ…ಟ್ರೈನರ್,ಬ್ಯೂಟಿಷಿಯನ್ ಸೇರಿದಂತೆ ಮೂವರು ಕತರ್ ನಾಕ್ ಕಳ್ಳಿಯರ ಬಂಧನ…7.5 ಲಕ್ಷ ಮೌಲ್ಯದ ಚಿನ್ನಾಭರಣ ವಶ…

ಸ್ಕೂಟರ್ ಟ್ರೈನಿಂಗ್ ನೆಪದಲ್ಲಿ ಕೈಚಳಕ…ಟ್ರೈನರ್,ಬ್ಯೂಟಿಷಿಯನ್ ಸೇರಿದಂತೆ ಮೂವರು ಕತರ್ ನಾಕ್ ಕಳ್ಳಿಯರ ಬಂಧನ…7.5 ಲಕ್ಷ ಮೌಲ್ಯದ ಚಿನ್ನಾಭರಣ ವಶ…

ಸ್ಕೂಟರ್ ಟ್ರೈನಿಂಗ್ ನೆಪದಲ್ಲಿ ಕೈಚಳಕ…ಟ್ರೈನರ್,ಬ್ಯೂಟಿಷಿಯನ್ ಸೇರಿದಂತೆ ಮೂವರು ಕತರ್ ನಾಕ್ ಕಳ್ಳಿಯರ ಬಂಧನ…7.5 ಲಕ್ಷ ಮೌಲ್ಯದ ಚಿನ್ನಾಭರಣ ವಶ…

ಮೈಸೂರು,ಜ3,Tv10 ಕನ್ನಡ
ಸ್ಕೂಟರ್ ರೈಡಿಂಗ್ ತರಬೇತಿ ನೀಡುವ ನೆಪದಲ್ಲಿ ಚಿನ್ನಾಭರಣ ದೋಚಿದ ಮೂವರು ಖತರ್ ನಾಕ್ ಕಳ್ಳಿಯರು ಮೈಸೂರು ಕುವೆಂಪುನಗರ ಠಾಣೆ ಪೊಲೀಸರ ಅತಿಥಿಯಾಗಿದ್ದಾರೆ.ಬಂಧಿತರಿಂದ 7.5 ಲಕ್ಷ ಮೌಲ್ಯದ 150 ಗ್ರಾಂ ಚಿನ್ನಾಭರಣ,12 ಸಾವಿರ ನಗದು,ಕೃತ್ಯಕ್ಕೆ ಬಳಸಿದ ಸ್ಕೂಟರ್ ಹಾಗೂ ಮೂರು ಮೊಬೈಲ್ ಗಳನ್ನ ವಶಪಡಿಸಿಕೊಂಡಿದ್ದಾರೆ.ಅಮೃತ(38),ಅಶ್ವಿನಿ(28) ಹಾಗೂ ಶೃತಿ (26) ಬಂಧಿತ ಆರೋಪಿಗಳು.

ಕುವೆಂಪುನಗರದ ಎ& ಬಿ ಬ್ಲಾಕ್ ನ ನಿವಾಸಿ ಪೂರ್ಣಿಮ ರವರು ತಮ್ಮ ಮಗಳ ಮದುವೆಗಾಗಿ 150 ಗ್ರಾಂ ಚಿನ್ನಾಭರಣ,20 ಸಾವಿರ ನಗದು ಇಟ್ಟಿದ್ದರು.ಪ್ರತಿದಿನ ಸ್ಕೂಟರ್ ರೈಡಿಂಗ್ ಕಲಿಯಲು ಮೊದಲ ಆರೋಪಿ ಅಮೃತ ಬಳಿ ಹೋಗುತ್ತಿದ್ದರು.ಅಮೃತ ಮನೆಗೇ ಬಂದು ಪೂರ್ಣಿಮಾರನ್ನ ಪಿಕ್ ಮಾಡುತ್ತಿದ್ದರು.ಮನೆಯಲ್ಲಿ ಒಡವೆಗಳು ಇರುವುದನ್ನ ಪತ್ತೆಹಚ್ಚಿದ ಅಮೃತ ತನ್ನ ಸ್ನೇಹಿತೆಯರೊಂದಿಗೆ ಸ್ಕೆಚ್ ಹಾಕಿ ಚಿನ್ನಾಭರಣ ದೋಚಲು ಸಂಚು ರೂಪಿಸಿದ್ದಳು.ಬ್ಯೂಟಿಷಿಯನ್ ಅಶ್ವಿನಿ ಹಾಗೂ ಮನೆಗೆಲಸ ಮಾಡುವ ಶೃತಿ ಜೊತೆ ಸೇರಿಕೊಂಡು ನಕಲಿ ಬೀಗ ಸಿದ್ದಪಡಿಸಿ ಡಿಸೆಂಬರ್ 31 ರಂದು 150 ಗ್ರಾಂ ಚಿನ್ನ ಹಾಗೂ 12 ಸಾವಿರ ನಗದು ಕಳುವು ಮಾಡಿದ್ದಾರೆ.ಪೂರ್ಣಿಮ ರವರು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಡಿಸಿಪಿ ಎಂ.ಎಸ್.ಗೀತಾ ರವರ ಮಾರ್ಗದರ್ಶನದಲ್ಲಿ,ಎಸಿಪಿ ಗಂಗಾಧರಸ್ವಾಮಿ ಉಸ್ತುವಾರಿಯಲ್ಲಿ ಕುವೆಂಪುನಗರ ಠಾಣೆ ಇನ್ಸ್ಪೆಕ್ಟರ್ ಅರುಣ್ ರವರ ನೇತೃತ್ವದಲ್ಲಿ ಪಿಎಸ್ಸೈ ಕು.ರಾಧಾ,ಎಎಸ್ಸೈ ಮಹದೇವ ಹಾಗೂ ಸಿಬ್ಬಂದಿಗಳಾದ ಮಂಜುನಾಥ್,ಪುಟ್ಟಪ್ಪ,ನಾಗೇಶ್,ಯೋಗೇಶ್,ಹಜರತ್,ಸುರೇಶ್,ಮಾದೇಶ,ಮಹಿಳಾ ಸಿಬ್ಬಂದಿಗಳಾದ ಮಂಜುಳಾ,ಅಭಿಲಾಷ,ಅಶ್ವಿನಿ,ಕೃಷ್ಣವೇಣಿ,ಸೌಭಾಗ್ಯ ರವರು ಆರೋಪಿಗಳನ್ನ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕುವೆಂಪುನಗರ ಠಾಣೆ ಪೊಲೀಸರ ಈ ಪತ್ತೆ ಕಾರ್ಯವನ್ನ ನಗರ ಪೊಲೀಸ್ ಆಯುಕ್ತರಾದ ಬಿ.ರಮೇಶ್,ಹಾಗೂ ಡಿಸಿಪಿ ಮುತ್ತುರಾಜ್ ರವರು ಪ್ರಶಂಸಿಸಿದ್ದಾರೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *