TV10 Kannada Exclusive

ತಹಸೀಲ್ದಾರ್ ಆದೇಶಕ್ಕೆ ಡೋಂಟ್ ಕೇರ್…ಅನುಮತಿ ಪಡೆಯದೆ ಜಲಕ್ರೀಡೆ…ಸ್ಥಳೀಯರ ಆಕ್ರೋಷ…

ತಹಸೀಲ್ದಾರ್ ಆದೇಶಕ್ಕೆ ಡೋಂಟ್ ಕೇರ್…ಅನುಮತಿ ಪಡೆಯದೆ ಜಲಕ್ರೀಡೆ…ಸ್ಥಳೀಯರ ಆಕ್ರೋಷ… ಮಂಡ್ಯ,ಸೆ16,Tv10 ಕನ್ನಡ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಬೋರೆದೇವರ ದೇವಸ್ಥಾನದ ಬಳಿ ಸಂಭಂಧಪಟ್ಟ ಯಾವುದೇ ಇಲಾಖೆ ಪೂರ್ವಾನುಮತಿ ಪಡೆಯದೆ ಕಾವೇರಿ ನದಿಯಲ್ಲಿ ಜಲಕ್ರೀಡೆ ನಡೆಯುತ್ತಿದೆ.ಈ ಕುರಿತಂತೆ ಸ್ಥಳೀಯರು ನೀಡಿದ ದೂರಿನನ್ವಯ ಜಿಲ್ಲಾಡಳಿತ ಇಲ್ಲಿ ಕ್ರೀಡೆ ನಡೆಸದಂತೆ ಆದೇಶ ಹೊರಡಿಸಿದ್ದರೂ ಡೋಂಟ್ ಕೇರ್ ಎಂದು ಜಲಕ್ರೀಡೆ ಆಯೋಜಿಸಿ ನಿಯಮಗಳನ್ನ ಉಲ್ಲಂಘಿಸಿರುವ ಆರೋಪ ಕೇಳಿ ಬಂದಿದೆ.ಕಳೆದ ಎರಡು ಮೂರು ದಿನಗಳಿಂದ ನಿರಂತರವಾಗಿ ಕ್ರೀಡೆಗಳು ನಡೆಯುತ್ತಿದ್ದರೂ
Read More

ದಸರಾ ಮಹೋತ್ಸವ 2023…ನವರಾತ್ರಿ ಪೂಜಾ ಕೈಂಕರ್ಯ ವಿವರ…

ಮೈಸೂರು,ಸೆ16,Tv10 ಕನ್ನಡ ವಿಶ್ವ ವಿಖ್ಯಾತ ದಸರಾ ಮಹೋತ್ಸವ 2023ನವರಾತ್ರಿ ಪೂಜಾ ಕೈಂಕರ್ಯಗಳ ವಿವರ.ಅಕ್ಟೋಬರ್‌ 15ರಿಂದ ಶರನ್ನವರಾತ್ರಿ ಪ್ರಾರಂಭ15-10-2023 ಪ್ರಥಮ-ಶೈಲಾ ವ್ರತ.ಚಾಮುಂಡಿ ಬೆಟ್ಟದಲ್ಲಿ ಅಧಿ ದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ.ಬೆಳಗ್ಗೆ 10.15ರಿಂದ ಬೆಳಗ್ಗೆ 10.36ರ ಶುಭ ವೃಶ್ಚಿಕ ಲಗ್ನದಲ್ಲಿ ಜಯಲಕ್ಷ್ಮಿ ವ್ರತ ದಸರಾ ಮಹೋತ್ಸವಕ್ಕೆ ಚಾಲನೆಸಂಜೆ 6.30ರಿಂದ ಅರಮನೆ ಪೂಜೆಗಳು ಆರಂಭಶುಭ ಮೇಷ ಲಗ್ನದಲ್ಲಿ ಅರಮನೆಯಲ್ಲಿನ ಪೂಜೆಗಳು. 16-10-2023ದ್ವಿತೀಯಾ-ಬ್ರಹ್ಮಚಾರಿಣೀ ವ್ರತ. 17-10-2023ತೃತಿಯಾ-ಚಂದ್ರಘಂಟಾ ಪೂಜೆ 18-10-2023ಚತುರ್ಥೀ-ಕೂಷ್ಮಾಂಡಾ ಪೂಜೆ 19-10-2023ಪಂಚಮೀ- ಸ್ಕಂದ ಮಾತಾ ಪೂಜೆ
Read More

ಕಾಡಾನೆ ದಾಳಿಗೆ ರೈತ ಬಲಿ…

ಸರಗೂರು,ಸೆ15,Tv10 ಕನ್ನಡ ಕಾಡಾನೆಯ ತುಳಿತಕ್ಕೆ ರೈತ ಬಲಿಯಾದ ಘಟನೆ ಸರಗೂರು ತಾಲೂಕಿನ ಚೆನ್ನಗುಂಡಿ ಗ್ರಾಮದಲ್ಲಿ ನಡೆದಿದೆ.ಬೆಳಗ್ಗೆ ತಮ್ಮ ಜಮೀನಿನಲ್ಲಿ ಹತ್ತಿ ಬಿಡಿಸಲು ತೆರಳಿದ ವೇಳೆ ದುರ್ಘಟನೆ ನಡೆದಿದೆ.ಚನ್ನಗುಂಡಿ ಗ್ರಾಮದ ಮಹೇಂದ್ರ (35) ಮೃತ ರೈತ.ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಚೆನ್ನಗುಂಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡಾನೆ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆಯಿಂದ ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳನಿರ್ಲಕ್ಷಕ್ಕೆ ರೈತ ಬಲಿಯಾಗಿದ್ದಾನೆಎಂದು ಆರೋಪಿಸಿದ್ದಾರೆ. ಸರಗೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…
Read More

ಸಂವಿಧಾನದ ಮೌಲ್ಯಗಳು ಪ್ರಜಾಪ್ರಭುತ್ವದ ಜೀವಾಳ. ಇಂದಿನ ಯುವ ಪೀಳಿಗೆಗೆ ಸಂವಿಧಾನದ ಮಹತ್ವವನ್ನು ತಿಳಿದುಕೊಳ್ಳುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಕೈಜೋಡಿಸುವಂತೆ ವಿದ್ಯಾರ್ಥಿಗಳಿಗೆ

ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾನ್ಯ ವ್ಯಕ್ತಿಗಳು ಉನ್ನತ ಮಟ್ಟಕ್ಕೆ ಏರಲು ಸಾಧ್ಯ . ಇದಕ್ಕೆ ಸಾಕ್ಷಿ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಹಾಲಿ ರಾಷ್ಟ್ರಪತಿ ದ್ರೌಪದಿ ಮುರ್ಮ ಇದಕ್ಕೆ ಸಾಕ್ಷಿಯಾಗಿದ್ದಾರೆ. ಇದೆಲ್ಲದಕ್ಕೆ ಕಾರಣ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರು. ಅವರು ರಚಿಸಿದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಇಂದ ಪ್ರತಿಯೊಬ್ಬರು ಉನ್ನತ ಮಟ್ಟಕ್ಕೆ ಇರಲು ಸಾಧ್ಯ.
Read More

ವಿಧಾನಸಭಾ ಕ್ಷೇತ್ರಾವಾರು ಆರಾಧನಾ ಸಮಿತಿ ರಚನೆಗೆ ಗ್ರೀನ್ ಸಿಗ್ನಲ್… ನಾಮನಿರ್ದೇಶಕರ ನೇಮಕಕ್ಕೆ ಜಿಲ್ಲಾಧಿಕಾರಿಗೆ ಸರ್ಕಾರದಿಂದ ಪತ್ರ

ಮೈಸೂರು,ಸೆ15,Tv10 ಕನ್ನಡ ಪ್ರತಿ ವಿಧಾನಸಭಾ ಕ್ಷೇತ್ರಾದಲ್ಲಿ ಆರಾಧನಾ ಸಮಿತಿ ರಚನೆಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ದೊರೆತಿದೆ.ಆರಾಧನಾ ಸಮಿತಿ ನಾಲ್ವರು ಅಧಿಕಾರಿಗಳು ಮತ್ತು ನಾಲ್ವರು ಅಧಿಕಾರೇತರ ಸದಸ್ಯರುಗಳನ್ನ ಹೊಂದಿರುತ್ತದೆ.ಅಧಿಕಾರೇತರ ಸದಸ್ಯರುಗಳನ್ನೊಳಗೊಂಡ ಸಮಿತಿ ರಚನೆಗೆ ಸರ್ಕಾರ ಈಗಾಗಲೇ ಮಾರ್ಗಸೂಚಿ ಬಿಡುಗಡೆ ಮಾಡಿದೆ.ಮಾರ್ಗಸೂಚಿಯಂತೆ ಅಧಿಕಾರೇತರ ಸದಸ್ಯರನ್ನ ನೇಮಕ ಮಾಡುವ ಜವಾಬ್ದಾರಿಯನ್ನ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಹೊರೆಸಿದೆ.ಅಧಿಕಾರೇತರ ಸದಸ್ಯರುಗಳಲ್ಲಿ ಓರ್ವ ಸಾಮಾನ್ಯ,ಓರ್ವ ಮಹಿಳೆ,ಓರ್ವ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ವರ್ಗದವರಿಗೆ ನೀಡಬೇಕಿದೆ.ಈ ಹಿನ್ನಲೆ ಅಧಿಕಾರೇತರ ನಾಮ ನಿರ್ದೇಶಕರನ್ನ
Read More

*ನಿಫಾ ವೈರಸ್ ಕುರಿತು ಆತಂಕ ಬೇಡ ಮುನ್ನೆಚ್ಚರಿಕೆ ಕ್ರಮ ವಹಿಸಿ…ಜಿಲ್ಲಾಧಿಕಾರಿಡಾ. ಕೆ ವಿ ರಾಜೇಂದ್ರ ಸೂಚನೆ…

ಮೈಸೂರು,ಸೆ14,Tv10 ಕನ್ನಡ ಕೇರಳ ಭಾಗದಲ್ಲಿ ನಿಫಾ ವೈರಸ್ ಕುರಿತು ಜನರು ಆತಂಕ ಬೇಡ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಎಂದು ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇಂದು ಹಳೆ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ನಿಫಾ ವೈರಸ್ ನಿಯಂತ್ರಣ ಕುರಿತು ಹಾಗೂ ಬರ ಘೋಷಣೆ ಕುರಿತು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿ ಗಳೊಂದಿಗೆ ಹಮ್ಮಿಕೊಂಡಿದ್ದ ವರ್ಚುವಲ್ ಸಭೆಯ ಅಧ್ಯಕ್ಷತೆ ವಹಿಸಿ ಅವರು
Read More

ಒತ್ತುವರಿ ತೆರುವು ಕಾರ್ಯಾಚರಣೆ ಯಶಸ್ವಿ ಹಿನ್ನಲೆ…ತಹಸೀಲ್ದಾರ್ ಬಿ.ಎನ್.ಗಿರೀಶ್ ಸೇರಿದಂತೆ ಮೂವರು ಅಧಿಕಾರಿಗಳಿಗೆ ಅಭಿನಂದನೆ…

ಮೈಸೂರು,ಸೆ13,Tv10 ಕನ್ನಡ ಇಲವಾಲ ಹೋಬಳಿ ಆನಂದೂರು ಗ್ರಾಮದಲ್ಲಿ ಕಳೆದ 30 ವರ್ಷಗಳಿಂದ ಒತ್ತುವರಿಯಾಗಿದ್ದ ಜಮೀನು ವಶಪಡಿಸಿಕೊಂಡ ಹಿನ್ನಲೆ ತಹಸೀಲ್ದಾರ್ ಬಿ.ಎನ್.ಗಿರೀಶ್,ಅಂದಿನ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ಹಾಗೂ ಸಹಾಯಕ ಭೂದಾಖಲೆಗಳ ನಿರ್ದೇಶಕ ಚಿಕ್ಕಣ್ಣ ರವರನ್ನ ರೈತರು ಅಭಿನಂದಿಸಿ ಗೌರವಿಸಿದ್ದಾರೆ.ಆಶ್ರಯ ಯೋಜನೆಗಾಗಿ ಮಂಜೂರಾಗಿದ್ದ ಜಮೀನು ಒತ್ತುವರಿ ಮಾಡಿಕೊಳ್ಳಲಾಗಿತ್ತು.ಇದನ್ನ ಮನಗಂಡ ತಹಸೀಲ್ದಾರ್ ಬಿ.ಎನ್.ಗಿರೀಶ್ ದಾಖಲೆಗಳನ್ನ ಪರಿಶೀಲಿಸಿ ಒತ್ತುವರಿಯನ್ನ ಖಚಿತಪಡಿಸಿಕೊಂಡು ತೆರವು ಕಾರ್ಯಾಚರಣೆ ಮಾಡಿದ್ದರು.ಈ ಹಿನ್ನಲೆ ರೈತ ಮುಖಂಡರು ಅಭಿನಂದಿಸಿ ಗೌರವಿಸಿದರು…
Read More

ಸ್ವಂತ ಸೂರಿಗಾಗಿ ಮುಖ್ಯಮಂತ್ರಿಗೆ ಪತ್ರ ಬರೆದ ಬಡ ಕುಟುಂಬ…

ಚಿತ್ರದುರ್ಗ,ಸೆ13,Tv10 ಕನ್ನಡ ಹತ್ತಾರು ವರ್ಷಗಳಿಂದ ಗುಡಿಸಿಲಿನಲ್ಲಿ ವಾಸಿಸುತ್ತಿರುವ ಬಡಕುಟುಂಬವೊಂದು ಸ್ವಂತ ಸೂರಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆ ಪತ್ರ ಬರೆದಿದೆ.ಚಿತ್ರದುರ್ಗ ಜಿಲ್ಲೆ ಭರಮಸಾಗರ ಗ್ರಾಮದ ಮಾರಪ್ಪ ಕುಟುಂಬ ಪತ್ರ ಬರೆದಿದೆ.ಮೀನು ಹಿಡಿಯುವ ಕಾಯಕ ಮಾಡುತ್ತಿರುವ ಮರಪ್ಪ 12 ಮಂದಿಯನ್ನ ಪೋಷಿಸುತ್ತಿದ್ದಾರೆ.ಸ್ವಂತ ನೆಲೆ ಇಲ್ಲದೆ ಗುಡಿಸಿಲಿನಲ್ಲಿ ಹಲವಾರು ವರ್ಷಗಳಿಂದ ಆಶ್ರಯ ಪಡೆದಿದ್ದಾರೆ.ಬಾಡಿಗೆ ಕಟ್ಟಲೂ ಸಹ ಶಕ್ತಿ ಇಲ್ಲದ ಮಾರಪ್ಪ ಮತ್ತೊಬ್ಬರ ಖಾಲಿ ಜಾಗದಲ್ಲಿ ಗುಡಿಸಿಲು ಕಟ್ಟಿಕೊಂಡು ವಾಸವಿದ್ದಾರೆ.ಜಾಗದ ಮಾಲೀಕರು ಗರಂ ಆದಾಗ ಮತ್ತೊಂದು
Read More

ತಮಿಳುನಾಡಿಗೆ ನೀರು ಬಿಟ್ಟ ಕ್ರಮಕ್ಕೆ ಖಂಡನೆ…ಬನ್ನೂರಿನಲ್ಲಿ ರೈತರ ಪ್ರತಿಭಟನೆ…

ತಮಿಳುನಾಡಿಗೆ ನೀರು ಬಿಟ್ಟ ಕ್ರಮಕ್ಕೆ ಖಂಡನೆ…ಬನ್ನೂರಿನಲ್ಲಿ ರೈತರ ಪ್ರತಿಭಟನೆ… ಬನ್ನೂರು,ಸೆ12,Tv10 ಕನ್ನಡ ತಮಿಳುನಾಡಿಗೆ ನೀರು ಹರಿಸಲು ಆದೇಶ ಖಂಡಿಸಿ‌ ರೈತರು ಬನ್ನೂರಿನಲ್ಲಿ ಪ್ರತಿಭಟನೆ ನಡೆಸಿದರು.ರಾಜ್ಯ ರೈತ ಸಂಘದಿಂದಮೈಸೂರು ಮಳವಳ್ಳಿ ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.ತಮಿಳುನಾಡಿಗೆ ರಾಜ್ಯ ಸರ್ಕಾರ ನೀರು ಹರಿಸದಂತೆಮೈಸೂರು ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ನೇತೃತ್ವದ ಪ್ರತಿಭಟನೆ ನಡೆಯಿತು…
Read More

ಆಟೋ ಚಾಲಕನ ಸಮಯಪ್ರಜ್ಞೆ…ತಪ್ಪಿಸಿಕೊಂಡಿದ್ದ ಬಾಲಕ ರಕ್ಷಣೆ…ದೇವರಾಜ ಠಾಣೆ ಪೊಲೀಸರಿಂದ ಅಭಿನಂದನೆ…

ಮೈಸೂರು,ಸೆ12,Tv10 ಕನ್ನಡ ಮನೆಯಿಂದ ತಪ್ಪಿಸಿಕೊಂಡು ಅಳುತ್ತಾ ನಿಂತಿದ್ದ ಬಾಲಕನೋರ್ವನನ್ನ ಆಟೋ ಚಾಲಕರೊಬ್ಬರು ರಕ್ಷಿಸಿದ ಘಟನೆ ಮೈಸೂರಿನ ನಗರ ಬಸ್ ನಿಲ್ದಾಣದ ಬಳಿ ನಡೆದಿದೆ.ಆಟೋಚಾಲಕನ ಸಮಯಪ್ರಜ್ಞೆಗೆ ದೇವರಾಜ ಠಾಣೆ ಪೊಲೀಸರು ಅಭಿನಂದಿಸಿದ್ದಾರೆ.ಮನೆಯಿಂದ ತಪ್ಪಿಸಿಕೊಂಡು ಬಂದಿದ್ದ ಬಾಲಕ ಪೋಷಕರನ್ನ ಸೇಫ್ ಆಗಿ ಸೇರಿದ್ದಾನೆ.ರಕ್ಷಣೆಗೆ ಒಳಗಾದ ಬಾಲಕ ಬೆಳಗಾವಿಯ ಶಿವರಾಜ್ ಮಹಾಲಿಂಗ್ ಮೇಲಮಟ್ಟಿ(14).ಬಾಲಕನ ರಕ್ಷಣೆಗೆ ಬಂದವರು ಆಟೋಚಾಲಕ ಹರೀಶ್ ಕುಮಾರ್. ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಮೈಸೂರು ನಗರ ಬಸ್ ನಿಲ್ದಾಣ ದ ಬಳಿ
Read More