TV10 Kannada Exclusive

ಕಾಂಬೋಡಿಯಾ ಸಾರ್ವತ್ರಿಕ ಚುನಾವಣೆ…ಮೈಲ್ಯಾಕ್ ನಿಂದ ಶಾಯಿ ರವಾನೆ…

ಮೈಸೂರು,ಮೇ30,Tv10 ಕನ್ನಡಕಾಂಬೋಡಿಯಾದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ಹಿನ್ನಲೆ ಮೈಸೂರಿನ ಮೈಲ್ಯಾಕ್ ನಿಂದ ೫೨ ಸಾವಿರ ಬಾಟಲ್ ಅಳಿಸಲಾಗದ ಶಾಯಿ ರವಾನೆಯಾಗಿದೆ. ಮೈಸೂರು ಅರಗು ಮತ್ತು ‌ಬಣ್ಣದ ಕಾರ್ಖಾನೆಯಿಂದ ಅಳಿಸಲಾಗದ ಶಾಯಿ ರವಾನಿಸಲಾಯಿತು.ಬೇಡಿಕೆಯಂತೆ ೭೦ ಮಿ.ಲೀ ಅಳತೆಯ ೫೨,೦೦೦ ಬಾಟಲ್‌ ಅಳಿಸಲಾಗದ ಶಾಯಿಯನ್ನು ಮಂಗಳವಾರ ರಫ್ತು ಮಾಡಲಾಯಿತು.ಸದರಿ ಸಾಮಗ್ರಿಯನ್ನು ರಫ್ತು ಮಾಡುವಾಗ ವಿಶ್ವೇಶ್ವರಯ್ಯ ರಫ್ತು ಉತ್ತೇಜನಾ ಕೇಂದ್ರದ‌ ನಿರ್ದೇಶಕ ಸತೀಶ್‌, ಎಂಪಿವಿಎಲ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ. ಕುಮಾರಸ್ವಾಮಿ, ಪ್ರಧಾನ ವ್ಯವಸ್ಥಾಪಕ
Read More

ಸರಸ್ವತಿಪುರಂ ರೈಲ್ವೆ ಅಂಡರ್ ಬ್ರಿಡ್ಜ್ ಗೆ ಮೇಯರ್ ಭೇಟಿ…ಮಳೆ ನೀರು ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ…

ಸರಸ್ವತಿಪುರಂ ರೈಲ್ವೆ ಅಂಡರ್ ಬ್ರಿಡ್ಜ್ ಗೆ ಮೇಯರ್ ಭೇಟಿ…ಮಳೆ ನೀರು ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ… ಮೈಸೂರು,ಮೇ30,Tv10 ಕನ್ನಡಇಂದು ಸರಸ್ವತಿ ಪುರಂನ ರೈಲ್ವೆ ಅಂಡರ್ ಬ್ರಿಡ್ಜ್ ರಸ್ತೆಗೆ ಮೇಯರ್ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆ ಬಂದಾಗ ನೀರು ಸರಾಗವಾಗಿ ಹರಿದು ಹೋಗದ ಹಿನ್ನಲೆ ವಾಹನ ಸವಾರರಿಗೆ ಕಿರಿಕಿರಿ ಆಗುತ್ತಿರುವ ಬಗ್ಗೆ ದೂರುಗಳು ಕೇಳಿಬಂದ ಹಿನ್ನಲೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬೆಂಗಳೂರಿನಲ್ಲಿ ನಡೆದ ದುರಂತದ ನಂತರ
Read More

ರಿವರ್ ಸ್ವಿಮ್ಮಿಂಗ್ ಸ್ಪರ್ಧೆ…ಮೈಸೂರು ವಿವಿ ಈಜುಪಟುಗಳ ಸಾಧನೆ…

ಮಡಿಕೇರಿ,ಮೇ28,Tv10 ಕನ್ನಡಮಡಿಕೇರಿ ನಾಪೋಕ್ಲು ತಾಲೂಕಿನಲ್ಲಿ ನಡೆದ ರಾಜ್ಯಮಟ್ಟದ ರಿವರ್ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಈಜು ಪಟುಗಳು ಅಮೋಘ ಸಾಧನೆ ಮಾಡಿದ್ದಾರೆ.ಕಕ್ಕಬ್ಬೆ ಹೊಳೆಯಲ್ಲಿ ನಡೆದ ರಿವರ್ ಸ್ವಿಮ್ಮಿಂಗ್ ಕ್ಲಬ್ ವತಿಯಿಂದ ಏರ್ಪಡಿಸಲಾಗಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿ ಮೈಸೂರಿಗೆ ಹೆಮ್ಮೆ ತಂದಿದ್ದಾರೆ.ಬೆಂಗಳೂರು,ಮಂಗಳೂರು,ಮೈಸೂರಿನಿಂದ ಆಗಮಿಸಿದ್ದ 80 ಈಜುಪಟುಗಳ ಪೈಕಿ ಮೈಸೂರಿನ ಪಟುಗಳು ಬಹುಮಾನಗಳನ್ನ ಬಾಚಿದ್ದಾರೆ. 15 ವರ್ಷದೊಳಗಿನ ವಿಭಾಗದಲ್ಲಿ ರಾಹುಲ್.ಕೆ 400 ಮೀಟರ್,200 ಮೀಟರ್ ಹಾಗೂ 50 ಮೀಟರ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ಶ್ರೀಹರಿ
Read More

ಅಯೋಧ್ಯೆಯಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಶಾಖೆಗೆ ಭೂಮಿಪೂಜೆ‌…81 ನೇ ಜನ್ಮದಿನಾಚರಣೆ ಸಂಭ್ರಮ…

ಅಯೋದ್ಯೆ,ಮೇ27, Tv10 ಕನ್ನಡಮೈಸೂರಿನ ಶ್ರೀ ಅವಧೂತ ದತ್ತಪೀಠ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಪೀಠಾಧೀಶರಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಗೆ 81ನೇ ಜನ್ಮದಿನದ ಸಂಭ್ರಮ ಮನೆ ಮಾಡಿದೆ.ಸಾಮಾನ್ಯವಾಗಿ ಸ್ವಾಮೀಜಿಯವರ ಜನ್ಮದಿನ ಆಚರಣೆಯನ್ನು ಮೈಸೂರಿನ ಅವಧೂತ ದತ್ತಪೀಠದಲ್ಲಿ ನೆರವೇರಿಸಲಾಗುತಿತ್ತು. ಈ ಸಂದರ್ಭದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು,ಆಶ್ರಮದ ಆವರಣದಲ್ಲಿರುವ ದೇವಾಲಯಗಳಲ್ಲಿ ದೇವರುಗಳಿಗೆ ವಿಶೇಷ ಪೂಜೆಗಳು ನಡೆಯುತ್ತಿದ್ದವು.ಈ ಬಾರಿ ಸ್ವಾಮೀಜಿಯವರ ಅನುಪಸ್ಥಿತಿಯಲ್ಲಿ ಅವಧೂತ ದತ್ತಪೀಠದಲ್ಲಿಶ್ರೀಗಳ ಜನ್ಮದಿನದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಗಳು ನೆರವೇರಿವೆ.ಆದರೆ ಈ
Read More

ಕುಕ್ಕರಹಳ್ಳಿ ಕೆರೆಗೆ ಜಿಲ್ಲಾಧಿಕಾರಿ ಭೇಟಿ… ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ..

ಕುಕ್ಕರಹಳ್ಳಿ ಕೆರೆಗೆ ಜಿಲ್ಲಾಧಿಕಾರಿ ಭೇಟಿ… ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ.. ಮೈಸೂರು,ಮೇ27,Tv10 ಕನ್ನಡಮೈಸೂರಿನ ಹೃದಯ ಭಾಗದಲ್ಲಿರುವ ಕುಕ್ಕರಹಳ್ಳಿ ಕೆರೆಗೆ ಜಿಲ್ಲಾಧಿಕಾರಿಗಳಾದ ಡಾ ಕೆ.ವಿ.ರಾಜೇಂದ್ರ ಅವರು ಭೇಟಿ ನೀಡಿ, ಕೆರೆ ಅಭಿವೃದ್ಧಿ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿದರು. ಮೈಸೂರಿನ ಹೃದಯ ಭಾಗದಲ್ಲಿರುವ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿ ಮಾಡುವುದು ಅಗತ್ಯವಾಗಿದೆ. ಕೆರೆಯ ಆವರಣದಲ್ಲಿರುವ ಜಾಗಿಂಗ್‌ ಟ್ರ್ಯಾಕ್‌ ಅಭಿವೃದ್ಧಿಗೆ, ಕಸ, ಬಲೆ ಹಾಗೂ ತ್ಯಾಜ್ಯ ವಿಲೇವಾರಿ, ವಾಸನೆ ಬರುತ್ತಿರುವ ಭಾಗದಲ್ಲಿ ಹೂಳೆತ್ತುವುದು ಹಾಗೂ ಕೆರೆ ಸ್ವಚ್ಛಗೊಳಿಸಲು,
Read More

ನಾನು ಸಚಿವ ಸ್ಥಾನ ಆಕಾಂಕ್ಷಿಯಲ್ಲ…ನೂತನ ಶಾಸಕ ಹರೀಶ್ ಗೌಡ…

ಮೈಸೂರು,ಮೇ26,Tv10 ಕನ್ನಡನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲಮೈಸೂರು‌ ಜಿಲ್ಲೆಯ ಮೂವರು ಹಿರಿಯ ಶಾಸಕರಿಗೆ ಸಚಿವ ಸ್ಥಾನ‌ ಕೊಡಬೇಕು ಎಂಬುದು ನನ್ನ ಆಗ್ರಹ ಎಂದುಮೈಸೂರಿನ ಚಾಮರಾಜ ಕ್ಷೇತ್ರದಿಂದ ಆಯ್ಕೆಯಾದ ಶಾಸಕ ಹರೀಶ್ ಗೌಡ ಹೇಳಿಕೆ ನೀಡಿದ್ದಾರೆ.ಶಾಸಕರಾಗಿರುವ ಮಹದೇವಪ್ಪ, ತನ್ವೀರ್ ಸೇಠ್, ವೆಂಕಟೇಶ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.ನಾಯಕತ್ವ ಬದಲಾವಣೆ ವಿಚಾರ ಅಧಿಕಾರ ಹಂಚಿಕೆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ.ಹೈಕಮಾಂಡ್ ಮಟ್ಟದಲ್ಲಿ ಏನು ಮಾತುಕತೆ ನಡೆದಿದೆ ಎಂಬುದು ನನಗೆ ಗೊತ್ತಿಲ್ಲ.ಮುಂದಿನ ಇಪ್ಪತ್ತು
Read More

ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಆಂಜಿಯೋ ಪ್ಲಾಸ್ಟ್ ಉಚಿತ ಕಾರ್ಯಾಗಾರ…200 ಬಡರೋಗಿಗಳಿಗ ಉಚಿತ ಸ್ಟಂಟ್ ಅಳವಡಿಕೆ…

ಮೈಸೂರು,ಮೇ24,Tv10 ಕನ್ನಡಜಯದೇವ ಹೃದ್ರೋಗ ವಿಜ್ಞನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಆಂಜಿಯೋ ಪ್ಲಾಸ್ಟ್ ಕಾರ್ಯಾಗಾರ ಹಾಗೂ 200 ಬಡ ರೋಗಿಗಳಿಗೆ ಉಚಿತ ಸ್ಟಂಟ್ ಅಳವಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಜೂನ್ 12 ರಿಂದ ಜೂನ್ 18 ರವರೆಗೆ ಕಾರ್ಯಕ್ರಮ ನಡೆಯಲಿದೆ.ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಜೂನ್ 12 ರಂದ 14 ರವರೆಗೆ,ಮೈಸೂರು ಶಾಖೆಯಲ್ಲಿ ಜೂನ್ 15 ಮತ್ತು 16 ಹಾಗೂ ಕಲಬುರಗಿ ಶಾಖೆಯಲ್ಲಿಜೂನ್ 17 ಮತ್ತು 18 ರಂದು ನಡೆಯಲಿದೆ. ಸೌಲಭ್ಯ ಪಡೆದುಕೊಳ್ಳುವ ರೋಗಿಗಳು ದಾಖಲಾತಿ
Read More

ಮುಡಾ ಅಧ್ಯಕ್ಷರಾಗಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧಿಕಾರ ಸ್ವೀಕಾರ…ದಾಖಲೆ ಪತ್ರಗಳನ್ನ ರವಾನಿಸುವಂತೆ ಎಲ್ಲಾ ಇಲಾಖೆ ಮುಖ್ಯಸ್ಥರಿಗೆ ಮನವಿ …

ಮೈಸೂರು,ಮೇ23,Tv10 ಕನ್ನಡಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಇಂದು ಅಧಿಕಾರ ಸ್ವೀಕರಿಸಿದ್ದಾರೆ.ಪ್ರಾಧಿಕಾರದ ಕೆಲಸ ಕಾರ್ಯಗಳಿಗೆ ಸಂಭಂಧಿಸಿದಂತೆ ನನ್ನ ಗಮನಕ್ಕೆ ಬರಬೇಕಾದಂತಹ ಅರೆಸರ್ಕಾರಿ ಪತ್ರಗಳು,ಗೌಪ್ಯ ಪತ್ರಗಳು ಹಾಗೂ ಇತರೆ ದಾಖಲೆಗಳನ್ನ ಪ್ರಾಧಿಕಾರದ ಅಧ್ಯಕ್ಷರ ಕಚೇರಿಗೆ ಹಾಜರು ಪಡಿಸುವಂತೆ ಸರ್ಕಾರದ ವಿವಿದ ಇಲಾಖೆಗಳ ಮುಖ್ಯಸ್ಥರಿಗೆ ಮನವಿ ಮಾಡಿದ್ದಾರೆ…
Read More

ಭಾರಿ ಮಳೆಗಾಳಿಗೆ ತತ್ತರಿಸಿದ ಸರಗೂರು ಜನತೆ…ಬೆಳೆ ನಾಶ…

ಭಾರಿ ಮಳೆಗಾಳಿಗೆ ತತ್ತರಿಸಿದ ಸರಗೂರು ಜನತೆ…ಬೆಳೆ ನಾಶ… ಮೈಸೂರು,ಮೇ23,Tv10 ಕನ್ನಡಭಾರೀ ಗಾಳಿ ಮಳೆಸರಗೂರಿನಲ್ಲಿ ಅಪಾರ ಹಾನಿಯಾಗಿದೆ.ಬಿರುಗಾಳಿ ಸಹಿತ ಸುರಿದ ಮಳೆಗೆ ಸರಗೂರಿನ ಜನ ತತ್ತರಿಸಿದ್ದಾರೆ. ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಬಿರುಗಾಳಿಗೆ ಹಂಚಿಪುರ ಗ್ರಾಮ ಪಂಚಾಯತಿ ಕಚೇರಿಯ ಮೇಲ್ಚಾವಣಿ ನೆಲಕಚ್ಚಿದೆ.ಕಚೇರಿಯ ಪೀಠೋಪಕರಣಗಳು, ಕಂಪ್ಯೂಟರ್‌ಗಳು, ಲ್ಯಾಪ್ಟಾಪ್ ಗಳು, ಯುಪಿಎಸ್ ಗೆ ಹಾನಿಯಾಗಿದೆ.ಹಂಚಿಪುರದ ನಂದೀಶ್ ಎಂಬಯವರ ಜಮೀನಿನಲ್ಲಿ ಬಿರುಗಾಳಿಗೆ ಬಾಳೆ ಬೆಳೆ, ತೆಂಗಿನ ಮರಗಳು ಸಂಪೂರ್ಣ ನಾಶವಾಗಿದೆ.ಸಿದ್ದಾಪುರ ಗ್ರಾಮದಲ್ಲಿ ಮಹದೇವಸ್ವಾಮಿ ಎಂಬುವರ ಜಮೀನಿನಲ್ಲಿ
Read More

ನಿಗಮ ಮಂಡಳಿ ನಾಮ ನಿರ್ದೇಶನ ಸ್ಥಾನಗಳಿಗೆ ಕೊಕ್…ರದ್ದುಗೊಳಿಸುವಂತೆ ಸರ್ಕಾರದಿಂದ ಆದೇಶ…

ನಿಗಮ ಮಂಡಳಿ ನಾಮ ನಿರ್ದೇಶನ ಸ್ಥಾನಗಳಿಗೆ ಕೊಕ್…ರದ್ದುಗೊಳಿಸುವಂತೆ ಸರ್ಕಾರದಿಂದ ಆದೇಶ… ಬೆಂಗಳೂರು,ಮೇ23,Tv10 ಕನ್ನಡಹಿಂದಿನ ಸರ್ಕಾರದ ಅವಧಿಯಲ್ಲಿ ವಿವಿದ ನಿಗಮ ಮಂಡಳಿಗಳು,ಸ್ವಾಯತ್ಥ ಸಂಸ್ಥೆಗಳು,ಇತರೆ ಸರ್ಕಾರಿ,ಅರೆ ಸರ್ಕಾರಿ ಹಾಗೂ ಇತರೆ ಎಲ್ಲಾ ಅಧ್ಯಕ್ಷರು,ನಿರ್ದೇಶಕ ಸದಸ್ಯರುಗಳ ನಾಮ ನಿರ್ದೇಶನವನ್ನ ರದ್ದುಗೊಳಿಸಲಾಗಿದೆ.ಮೇ 22 ರಿಂದ ಪಾಲನೆ ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ರಾವ್ ರವರು ಎಲ್ಲಾ ಇಲಾಖೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.ಮುಖ್ಯಮಂತ್ರಿಗಳ ಟಿಪ್ಪಣಿ ಆಧರಿಸಿ ಹೊರಡಿಸಲಾಗಿದೆ…
Read More