TV10 Kannada Exclusive

ಸಹರಾ…ಮಹಿಳಾ ಕ್ರಿಕೆಟ್ ಆಧಾರಿತ ಸಿನಿಮಾ ರೆಡಿ…ಜೂನ್ 7 ಬಿಡುಗಡೆ…

ಮೈಸೂರು,ಜೂ6,Tv10 ಕನ್ನಡ ಮಹಿಳಾ ಕ್ರಿಕೆಟ್ ಆಧಾರಿತ ಸಹಾರಾ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ.ಇದೇ ಜೂ. 7 ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಕ್ರಿಕೆಟ್ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆ ಬಗ್ಗೆ ಎಳೆಎಳೆಯಾಗಿ ವೀಕ್ಷಕರ ಮನಮುಟ್ಟುವಂತೆ ಚಿತ್ರಿಸಿರುವ ಸಹರಾ ನಿಜಕ್ಕೂ ವಿಶೇಷತೆ ಹೊಂದಿದೆ ಎಂದು ನಾಯಕನಟಿಯಾಗಿರುವ ಸಾರಿಕಾ ರಾವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜನತೆ ಚಿತ್ರಮಂದಿರಗಳಿಗೆ ಧಾವಿಸಿ ವೀಕ್ಷಿಸುವ ಮೂಲಕ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದ್ದಾರೆ.ಪುರುಷರ ಕ್ರಿಕೆಟ್‌ಗೆ ಹೆಚ್ಚು ಪ್ರಾಧಾನ್ಯತೆ ನೀಡಿ, ಮಹಿಳಾ ಕ್ರಿಕೆಟ್ ಕಡೆಗಣಿಸಲಾಗಿದೆ. ಹೀಗಾಗಿ
Read More

ಸೋರುತಿಹುದು ನಾಡಕಚೇರಿ ಮಾಳಿಗೆ…ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಕಟ್ಟಡ…ಜೀವಭಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ…

ಹುಣಸೂರು,ಜೂ6,Tv10 ಕನ್ನಡ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಜವಾಬ್ದಾರಿ ಹೊತ್ತ ಸರ್ಕಾರಿ ಕಚೇರಿಯ ಕಟ್ಟಡವೇ ದುಃಸ್ಥಿತಿಯಲ್ಲಿದೆ.ಶಿಥಿಲಗೊಂಡ ಕಟ್ಟಡದಲ್ಲಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಇಲ್ಲಿನ ಸಿಬ್ಬಂದಿಗಳು ಜೀವಭಯದಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಕಟ್ಟಡವನ್ನ ಸುಸ್ಥಿತಿಗೆ ತರುವ ಗೋಜಿಗೆ ಹಿರಿಯ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.ಯಾವಾಗ ಬೇಕಿದ್ರೂ ಕುಸಿಯುವ ಹಂತದಲ್ಲಿರುವ ಈ ನಾಡಕಚೇರಿಗೆ ಕಾಯಕಲ್ಪ ಬೇಕಿದೆ. ಇದು ಹುಣಸೂರು ತಾಲೂಕು ಬಿಳಿಕೆರೆ ಹೋಬಳಿಯ ನಾಡಕಚೇರಿಯ ದುಃಸ್ಥಿತಿ.ಮಳೆ ಬಂದರೆ ಕಚೇರಿಯ ಒಳಗೆ ಸೋರುತ್ತದೆ.ಗೋಡೆಗಳು ಅಲ್ಲಲ್ಲಿ ಉದುರಿಹೋಗಿದೆ.ಶಿಥಿಲಗೊಂಡ
Read More

ಮೈಸೂರು-ಕೊಡಗು ಸಂಸತ್ ಸದಸ್ಯ ಯದುವೀರ್ ಗೆ ಪ್ರಮಾಣಪತ್ರ ವಿತರಣೆ…ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ರಿಂದ ಸ್ವೀಕಾರ…

ಮೈಸೂರು,ಜೂ4,Tv10 ಕನ್ನಡ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ ಚುನಾಯಿತರಾದ ಬಿಜೆಪಿ ಜೆಡಿಎಸ್ ಮೈತ್ರಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರಿಗೆ ಚುನಾವಣಾಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ ರವರು ಪ್ರಮಾಣಪತ್ರ ವಿತರಿಸಿದರು.ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ವಿರುದ್ದ 1,39,262 ಮತಗಳ ಅಂತರದಿಂದ ಜಯಭೇರಿ ಭಾರಿಸಿದ ಯದುವೀರ್ ಪ್ರಮಾಣಪತ್ರ ಸ್ವೀಕಾರ ವೇಳೆ ತಾಯಿ ಪ್ರಮೋದಾದೇವಿ ಹಾಜರಿದ್ದರು…
Read More

ಯದುವೀರ್ ಗೆಲುವು…ಮೈಸೂರಿನಲ್ಲಿ ವಿಜಯೋತ್ಸವ… 

ಮೈಸೂರು,ಜೂ4,Tv10 ಕನ್ನಡ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ಗೆಲುವಿನ ಹಿನ್ನಲೆ ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ಯರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ ಎಸ್ ಶ್ರೀವತ್ಸರವರ ನೇತೃತ್ವದಲ್ಲಿ ನೂರೊಂದು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನ ನೆರವೇರಿಸಿ ಸಾರ್ವಜನಿಕರಿಗೆ ಸಿಹಿವಿತರಿಸಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಮುಖಂಡರು ಹಾಗೂ ಕಾರ್ಯಕರ್ತರುಗಳು ಉಪಸ್ಥಿತರಿದ್ದರು…
Read More

ಬಿಜೆಪಿ ಅಭ್ಯರ್ಥಿಗೆ ಮೊದಲ ಮತ…

ಮೈಸೂರು,ಜೂ4,Tv10 ಕನ್ನಡ ಅಂಚೆ ಮತದಾನದ ಎಣಿಕೆ ಆರಂಭ.ಆರಂಭದ ಮೊದಲ ಮತ ಬಿಜೆಪಿಗೆ ಮಡಿಲಿಗೆ.ಯದುವೀರ್ ಒಡೆಯರ್ ಗೆ ಮೊದಲ ಮತ.ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ.ಅಂಚೆಮತದಾನ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಮುನ್ನಡೆ.ಸಿಎಂ ತವರು ಕ್ಷೇತ್ರದಲ್ಲಿ ಕಾಂಗ್ರೆಸ್ ಹಿನ್ನಡೆ
Read More

ಮೈಸೂರು ಪೊಲೀಸ್ ಪ್ರೀಮಿಯರ್ ಲೀಗ್…ಸಿಎಆರ್ ಕಿಂಗ್ಸ್ XI ವಿನ್ನರ್ಸ್…ಲಕ್ಷ್ಮಿಪುರಂ ಫೀನಿಕ್ಸ್ ರನ್ನರ್ ಅಪ್…

ಮೈಸೂರು ಪೊಲೀಸ್ ಪ್ರೀಮಿಯರ್ ಲೀಗ್…ಸಿಎಆರ್ ಕಿಂಗ್ಸ್ XI ವಿನ್ನರ್ಸ್…ಲಕ್ಷ್ಮಿಪುರಂ ಫೀನಿಕ್ಸ್ ರನ್ನರ್ ಅಪ್… ಮೈಸೂರು,ಜೂ2,Tv10 ಕನ್ನಡ ಮೈಸೂರು ಪೊಲೀಸ್ ಪ್ರೀಮಿಯರ್ ಲೀಗ್ ನ ಫೈನಲ್ ಮ್ಯಾಚ್ ಇಂದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಫೈರಿಂಗ್ ರೇಂಜ್ ಮೈದಾನದಲ್ಲಿ ರೋಚಕವಾಗಿ ನಡೆಯಿತು.ಫೈನಲ್ ತಲುಪಿದ ಸಿಎಆರ್ ಕಿಂಗ್ಸ್ ಇಲೆವೆನ್ ತಂಡ ಗೆಲುವು ಸಾಧಿಸುವ ಮೂಲಕ MPL ಟ್ರೋಫಿಯನ್ನ ತನ್ನ ಮುಡಿಗೇರಿಸಿಕೊಂಡಿತು.ಲಕ್ಷ್ಮೀಪುರಂ ಪೊಲೀಸ್ ಠಾಣೆಯ ಫೀನಿಕ್ಸ್ ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿತು.ಸುಮಾರು ಮೂರು ತಿಂಗಳಿಂದ
Read More

ಮಾಜಿ ಬದಲು ನಿಕಟಪೂರ್ವ ಆದ ಯಶಸ್ವಿನಿ ಸೋಮಶೇಖರ್…

ಮೈಸೂರು,ಜೂ2,Tv10 ಕನ್ನಡ ಮಾಜಿ ಬದಲು ನಿಕಟಪೂರ್ವ ಅಧ್ಯಕ್ಷ ಆದ ಯಶಸ್ವಿನಿ ಸೋಮಶೇಖರ್…! ತಮ್ಮ ನಿವಾಸದ ಮುಂದೆ ಮುಡಾ ಅಧ್ಯಕ್ಷ ಎಂಬ ನಾಮಫಲಕ ಹಾಕಿದ್ದ ಯಶಸ್ವಿನಿ ಸೋಮಶೇಖರ್ ಇದೀಗ ಮತ್ತೊಂದು ಎಡವಟ್ಟು ಮಾಡಿದ್ದಾರೆ.ಮಾಜಿ ಎಂದು ಬದಲಾವಣೆ ಮಾಡುವ ಬದಲು ನಿಕಟಪೂರ್ವ ಎಂದು ಬದಲಾಯಿಸಿ ಎಡವಟ್ಟು ಮಾಡಿಕೊಂಡಿದ್ದಾರೆ.ಮಾಜಿಗೂ ನಿಕಟಪೂರ್ವಕ್ಕೂ ಅರ್ಥ ತಿಳಿಯದೆ ಎಡವಟ್ಟು ಮಾಡಿಕೊಂಡಿದ್ದಾರೆ.ಮುಡಾ ಅಧ್ಯಕ್ಷರಾಗಿ ಅಧಿಕಾರ ತ್ಯಜಿಸಿ ಮೂರು ವರ್ಷ ಕಳೆದರೂ ತಮ್ಮ ನಿವಾಸದ ಮುಂದಿನ ಗೇಟ್ ಮೇಲೆ ಮುಡಾ ಅಧ್ಯಕ್ಷರೆಂದೇ
Read More

ಪಾಲಿಕೆ ಸಿಬ್ಬಂದಿಗಳ ಕಾರ್ಯಾಚರಣೆ…ನಿಷೇಧಿತ ಪ್ಲಾಸ್ಟಿಕ್ ವಶ…50 ಸಾವಿರ ದಂಡ…

ಮೈಸೂರು,ಜೂ1,Tv10 ಕನ್ನಡ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಪರಿಸರ ಅಧಿಕಾರಿಗಳು ಮತ್ತು ಆರೋಗ್ಯ ನಿರೀಕ್ಷಕರು ಇಂದು ವಲಯ ಕಚೇರಿ 6 ರ ವಾರ್ಡ್ ನಂ 26 ರ ವ್ಯಾಪ್ತಿಯಲ್ಲಿ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ.ಜಗನ್ಮೋಹನ ಅರಮನೆ ಬಳಿ ಇರುವ RGC ಟ್ರಾನ್ಸ್ಪೋರ್ಟ್ ಹಾಗೂ ನಾಲ್ಕು ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಂಡಿರುವುದಲ್ಲದೆ ತಲಾ 10 ಸಾವಿರದಂತೆ 50 ಸಾವಿರ ದಂಡ ವಿಧಿಸಿದ್ದಾರೆ.ನಗರಪಾಲಿಕೆ ಆಯುಕ್ತರಾದ ಮಧು ರವರ
Read More

ಡೀಸಲ್ ಇಂಜಿನ್ ಮತ್ತು ಜನರೇಟರ್ ಮೆಕ್ಯಾನಿಕ್ ಸಿದ್ದರಾಜು ಗೆ ಅತ್ಯುತ್ತಮ ಕಾರ್ಮಿಕ ಪ್ರಶಸ್ತಿ…

ಮೈಸೂರು,ಜೂ1,Tv10 ಕನ್ನಡ ಮೈಸೂರು ಲಯನ್ಸ್ ಅಂಬಾಸಿಡರ್ಸ್ ಸಂಸ್ಥೆಯ ವತಿಯಿಂದ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಪ್ರಯುಕ್ತ ಇಂದು ಅತ್ಯುತ್ತಮ ಕಾರ್ಮಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ವತಿಯಿಂದ ಕಾರ್ಮಿಕರನ್ನು ಸನ್ಮಾನಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು.ಮಕಾಳಾ ಮಾತೃ ಸಂಸ್ಥೆಯಾದ ಶಿಲ್ಪ ಎಂಟರ್‌ಪ್ರೈಸಸ್ ನಲ್ಲಿ ಡಿಸೇಲ್ ಇಂಜಿನ್ ಮತ್ತು ಜನರೇಟರ್ ಮ್ಯಾಕನಿಕ್ ಆಗಿ 25 ವರ್ಷದಿಂದ ನಿರಂತರವಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಸಿದ್ಧರಾಜು ರವರಿಗೆ ‘ಅತ್ಯುತ್ತಮ ಕಾರ್ಮಿಕ
Read More

ಬೋನಿಗೆ ಬಿದ್ದ ಚಿರತೆ…ಗ್ರಾಮಸ್ಥರಲ್ಲಿ ನಿರಾಳ…

ನಂಜನಗೂಡು,ಮೇ31,Tv10 ಕನ್ನಡ ಕುರಿ ಮೇಕೆಗಳನ್ನು ಹೊತ್ತೊಯ್ಯುತ್ತಿದ್ದ ಚಿರತೆ ಸೆರೆಯಾಗಿದೆ.ನಂಜನಗೂಡು ತಾಲೂಕಿನ ರಾಂಪುರ ಗ್ರಾಮದ ರೈತ ಗಣೇಶ ನಾಯಕ ಎಂಬುವರ ಜಮೀನಿನಲ್ಲಿ ಇರಿಸಲಾಗಿದ್ದ ಬೋನಿಗೆ ಬಿದ್ದಿದೆ. ರಾತ್ರೋ ರಾತ್ರಿ ಸಾಕು ಪ್ರಾಣಿಗಳನ್ನ ಬಲಿ ಪಡೆದು ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ ಹಿಡಿದ ಅರಣ್ಯಾಧಿಕಾರಿಗಳಾದ ನಿತಿನ್ ಮತ್ತು ಸಿಬ್ಬಂದಿಗಳು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ…
Read More