TV10 Kannada Exclusive

ಪ್ಯಾಲೇಸ್ ಬಳಿಯ ಮೈದಾನದಲ್ಲಿ ಆಕಸ್ಮಿಕ ಬೆಂಕಿ…ಅಗ್ನಿಶಾಮಕ ಸಿಬ್ಬಂದಿಗಳಿಂದ ನಂದಿಸುವ ಕಾರ್ಯ…

ಮೈಸೂರು,ಏ5,Tv10 ಕನ್ನಡ ಹಾರ್ಡಿಂಗ್ ವೃತ್ತದ ಬಳಿ ಅರಮನೆ ಗೋಡೆಗೆ ಹೊಂದಿಕೊಂಡಂತಿರುವ ಖಾಲಿ ಮೈದಾನದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.ನರ್ಸರಿ ಆವರಣದಲ್ಲಿ ಬೆಳೆದಿರುವ ಒಣ ಹುಲ್ಲು ಹೊತ್ತಿಉರಿದಿದೆ.ಮಾಹಿತಿ ಅರಿತ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನ ನಂದಿಸಿದ್ದಾರೆ.ಅಗ್ನಿಶಾಮಕ ಸಿಬ್ಬಂದಿಗಳ ಕ್ಷಿಪ್ರ ಕಾರ್ಯಾಚರಣೆಯಿಂದ ಬೆಂಕಿಯನ್ನ ಹತೋಟಿಗೆ ತರಲಾಗಿದೆ.ಸುಮಾರು ಹತ್ತಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ…
Read More

ಆರ್ ಡಿಂಗ್ ಅಥವಾ ಹಾರ್ಡಿಂಗ್…? ನಾಮಫಲಕದಲ್ಲಿ ವೃತ್ತದ ಹೆಸರೇ ಬದಲು…ಎಡವಟ್ಟು ಯಾರದು…?

ಮೈಸೂರು,ಏ5,Tv10 ಕನ್ನಡ ಮೈಸೂರಿನ ಹೃದಯಭಾಗದಲ್ಲಿರುವ ಹಾರ್ಡಿಂಗ್ ವೃತ್ತ ಪಾರಂಪರಿಕತೆಗೂ ಸೇರಿದೆ.ಆರು ರಸ್ತೆಗಳು ಕೂಡುವ ಹಾರ್ಡಿಂಗ್ ವೃತ್ತಕ್ಕೆ ಮತ್ತೊಂದು ಹೆಸರು ಆರ್ಗೇಟ್ ಸರ್ಕಲ್ ಎಂದೇ ಜನರಬಾಯಲ್ಲಿ ಹೊರಳುತ್ತದೆ.ಆದರೆ ಯಾರು ಮಾಡಿದ ಎಡವಟ್ಟೋ ಏನೋ ಗೊತ್ತಿಲ್ಲ ವೃತ್ತದ ಬಳಿ ಇತ್ತೀಚೆಗೆ ನಿರ್ಮಿಸಲಾದ ತಂಗದಾಣದ ನಾಮಫಲಕದಲ್ಲಿ ಹಾರ್ಡಿಂಗ್ ಬದಲು ಆರ್ ಡಿಂಗ್ ಎಂದು ಮುದ್ರಣವಾಗಿದೆ.ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ ನಿರ್ಮಾಣವಾದ ತಂಗುದಾಣದ ಮೇಲೆ ನಾಮಫಲಕ ಹಾಕಲಾಗಿದೆ.ಆರ್ ಡಿಂಗ್ ವೃತ್ತ ಎಂದು ತಪ್ಪಾಗಿ ಮುದ್ರಣವಾಗಿದ್ದರೂ ಇದನ್ನೇ
Read More

ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ವೆನ್ಷನ್ ಹಾಲ್ ವಶಕ್ಕೆ ಪಡೆಯಲು ಮುಂದಾದ ಮುಡಾ…ಗುತ್ತಿಗೆದಾರನಿಗೆ ನೋಟೀಸ್…

ಮೈಸೂರು,ಏ4,Tv10 ಕನ್ನಡ ನಿಯಮಾನುಸಾರ ಅವಧಿಯೊಳಗೆ ಗುತ್ತಿಗೆ ಹಣ ಪಾವತಿಸುವಲ್ಲಿ ವಿಫಲವಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ವೆನ್ಷನ್ ಹಾಲ್ ಗುತ್ತಿಗೆದಾರನಿಗೆ ಮುಡಾ ಅಧಿಕಾರಿಗಳು ನೋಟೀಸ್ ನೀಡಿದ್ದಾರೆ.ಗುತ್ತಿಗೆ ಹಣ ಪೂರ್ಣವಾಗಿ ಪಾವತಿಸಿ ಕನ್ವೆನ್ಷನ್ ಹಾಲ್ ನ್ನ ವಶಕ್ಕೆ ನೀಡುವಂತೆ ನೋಟೀಸ್ ನಲ್ಲಿ ಸೂಚಿಸಲಾಗಿದೆ.ಬೆಂಗಳೂರು ಮೂಲದ ಸರ್ಕಾರ್ ಕನ್ಸ್ಟ್ರಕ್ಷನ್ ನ ಮಾಲೀಕರಾದ ಸಿದ್ದರಾಜಪ್ಪ ಎಂಬುವರಿಗೆ ಮೈಸೂರಿನ ಹೆಬ್ಬಾಳ್ ಬಡಾವಣೆಯಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ವೆನ್ಷನ್ ಹಾಲ್ ನ್ನ ಮದುವೆ ಮುಂತಾದ ಕಾರ್ಯಕ್ರಮಗಳನ್ನ ನಡೆಸಲು ಗುತ್ತಿಗೆ
Read More

ಅಪರಿಚಿತ ಗಂಡಸಿನ ಶವ ಪತ್ತೆ…ಮಾಹಿತಿಗಾಗಿ ಪತ್ರಿಕಾ ಪ್ರಕಟಣೆ…

ಮೈಸೂರು,ಏ4,Tv10 ಕನ್ನಡ ದಿನಾಂಕ 01/04/24 ರಂದು ಸಂಜೆ 6.00 ಗಂಟೆಯ ಸಮಯದಲ್ಲಿ ಮೈಸೂರು ನಗರ ಆಲನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಲಲಿತಾದ್ರಿಪುರ ಮುಖ್ಯ ರಸ್ತೆಯ ಪಕ್ಕದಲ್ಲಿ ಮರದ ಕೆಳಗೆ ಸುಮಾರು 40 ವರ್ಷ ವಯಸ್ಸಿನ ಅಪರಿಚಿತ ಗಂಡಸಿನ ಶವ ಪತ್ತೆಯಾಗಿರುತ್ತದೆ.ಮೃತದೇಹದ ಬಲಗೈನಲ್ಲಿ ಲಕ್ಷ್ಮಮ್ಮ ಎಂಬ ಹೆಸರು ಎಡಗೈನಲ್ಲಿ ಕಾಂತರಾಜು & ಮುಷ್ಟಿಯಲ್ಲಿ ಹೂ ಹಿಡಿದಿರುವ ಹಚ್ಚೆಯ ಗುರತು ಇರುತ್ತದೆ.ಈ ಗುರುತು ಚಹರೆಯ ಹೋಲಿಕೆಯುಳ್ಳ ವ್ಯಕ್ತಿಯ ಬಗ್ಗೆ ಯಾವುದಾದರು ಪೊಲೀಸ್ ಠಾಣೆಯಲ್ಲಿ
Read More

98.52 ಕೋಟಿ ಬಿಯರ್ ಕಚ್ಚಾ ವಸ್ತುಗಳು ಸೀಜ್…ಅಬಕಾರಿ ಅಧಿಕಾರಿಗಳ ಭರ್ಜರಿ ಬೇಟೆ…ಯುನೈಟೆಡ್ ಬ್ರೆವರೀಸ್ ನ 17 ಆರೋಪಿಗಳು ನಾಪತ್ತೆ…ಚುನಾವಣೆ ಹಿನ್ನಲೆ

ನಂಜನಗೂಡು,ಏ3,Tv10 ಕನ್ನಡ ನಂಜನಗೂಡು ತಾಲೂಕು ಇಮ್ಮಾವು ಗ್ರಾಮ ತಾಂಡ್ಯಾ ಪ್ರದೇಶದಲ್ಲಿರುವ ಯುನೈಟೆಡ್ ಬ್ರೆವರೀಸ್ ಕಂಪನಿ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 98.52 ಕೋಟಿ ಮೊತ್ತದ ಬಿಯರ್ ಕಚ್ಚಾ ವಸ್ತುಗಳನ್ನ ಸೀಜ್ ಮಾಡಿದ್ದಾರೆ.ಘಟನೆಗೆ ಸಂಭಂಧಿಸಿದಂತೆ 17 ಮಂದಿ ಆರೋಪಿಗಳು ನಾಪತ್ತೆಯಾಗಿದ್ದಾರೆ.ಚಾಮರಾಜನಗರ ಲೋಕಸಭಾ ಕ್ಷೇತ್ರದ ಹಾಗೂ ಮೈಸೂರು ಜಿಲ್ಲೆ ವ್ಯಾಪ್ತಿಯ ತಾಂಡ್ಯಾ ಕೈಗಾರಿಕಾ ಪ್ರದೇಶದಲ್ಲಿರುವ ಯುನೈಟೆಡ್ ಬ್ರೆವರೀಸ್ ಕಂಪನಿಯಲ್ಲಿ ಅಕ್ರಮ ದಾಸ್ತಾನು ಬೆಳಕಿಗೆ ಬಂದಿದೆ.ಚಾಮರಾಜನಗರ ಜಿಲ್ಲಾಧಿಕಾರಿಗಳು
Read More

ಹೆಚ್.ಡಿ.ಕೆಗೆ ಸುಮಲತಾ‌ ಬೆಂಬಲ ಘೋಷಣೆ…ಸಧ್ಯದಲ್ಲೇ ಬಿಜೆಪಿಗೆ ಸೇರ್ಪಡೆ

ಮಂಡ್ಯ,ಏ3,Tv10 ಕನ್ನಡ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಬಿಜೆಪಿ,ಜೆಡಿಎಸ್ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿಯವರಿಗೆ ಪೂರ್ಣ ಬೆಂಬಲ ನೀಡುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಘೋಷಿಸಿದ್ದಾರೆ.ಮಂಡ್ಯದಲ್ಲಿ ಇಂದು ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ ನಂತರ ತಮ್ಮ ನಿರ್ಧಾರವನ್ನು ಅವರು ಪ್ರಕಟಿಸಿದರು.ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸುಮಲತಾ, ನಾನು ಸದ್ಯದಲ್ಲಿಯೇ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಳ್ಳುತ್ತೇನೆ. ನಾನು ಖಂಡಿತ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಬಿಜೆಪಿಯ ನಾಯಕರುಗಳು ಹೇಳಿದಂತೆ ನಡೆಯುತ್ತೇನೆ ಎಂದು ತಿಳಿಸಿದರು.ಇದುವರೆಗೆ ನನ್ನನ್ನು ಪ್ರೀತಿಸಿದ ಮಂಡ್ಯ
Read More

ಕ್ಯಾಟರಿಂಗ್ ಟೆಂಡರ್ ಬಿಲ್ ಬಿಡುಗಡೆ ಮಾಡಲು ಲಂಚ…ಪ್ರಾದೇಶಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತರಬೇತಿ ಕೇಂದ್ರ FDA ಲೋಕಾ

ಮೈಸೂರು,ಏ3,Tv10 ಕನ್ನಡ ಶಿಬಿರಾರ್ಥಿಗಳಿಗೆ ಊಟ ಸಿದ್ದಪಡಿಸಿದ ಟೆಂಡರ್ ಬಿಲ್ ಬಿಡುಗಡೆ ಮಾಡಲು 50 ಸಾವಿರ ಲಂಚ ಪಡೆಯುತ್ತಿದ್ದ ಪ್ರಾದೇಶಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತರಬೇತಿ ಕೇಂದ್ರದ FDA ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಮಹೇಶ್ ಲೋಕಾಯುಕ್ತ ದಾಳಿಗೆ ಸಿಲುಕಿದ ಆರೋಪಿ.ಮೈಸೂರಿನ ಶ್ರೀ ವಿನಾಯಕ ಕ್ಯಾಟರಿಂಗ್ ನ ಶಿವನಾಗ ಎಂಬುವರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು.ಈ ಕಾರ್ಯಾಚರಣೆಲೋಕಾಯುಕ್ತ ಎಸ್ಪಿ ಸಜಿತ್ ಮಾರ್ಗ ದರ್ಶನ ದಲ್ಲಿ ಡಿವೈಎಸ್ಪಿ ಕೃಷ್ಣಯ್ಯ. ವಿ ಹಾಗೂ ಲೋಕಾಯುಕ್ತ
Read More

ಜಾತ್ರೆವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ…ಇಬ್ಬರು ಯುವಕರ ಬಂಧನ…

ನಂಜನಗೂಡು,ಏ3,Tv10 ಕನ್ನಡ ಜಾತ್ರೆ ವೇಳೆ ಜಗಳವಾಡುತ್ತಿದ್ದ ಎರಡು ಯುವಕರ ಗುಂಪನ್ನ ಸಮಾಧಾನ ಪಡಿಸಲು ಹೋದ ಪೊಲೀಸ್ ಪೇದೆ ಮೇಲೆ ಇಬ್ಬರು ಯುವಕರು ಹಲ್ಲೆ ನಡೆಸಿದ ಘಟನೆ ನಂಜನಗೂಡು ತಾಲೂಕಿನ ಹಾಡ್ಯಾ ಗ್ರಾಮದಲ್ಲಿ ನಡೆದಿದೆ.ಘಟನೆ ಸಂಭಂಧ ಹಲ್ಲೆ ನಡೆಸಿದ ಸಂತೋಷ್ ಹಾಗೂ ಆನಂದ ಎಂಬ ಯುವಕರನ್ನ ಹುಲ್ಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಹಲ್ಲೆಗೆ ಕುಮ್ಮಕ್ಕು ನೀಡಿದ ಇತರರ ಮೇಲೂ FIR ದಾಖಲಾಗಿದೆ. ಜಾತ್ರೆ ವೇಳೆ ಕಾಲಭೈರವೇಶ್ವರ ದೇವಸ್ಥಾನದ ಮುಂದೆ ಹುಲ್ಲಹಳ್ಳಿ ಠಾಣೆ ಪೇದೆ
Read More

ಹಾರೋಹಳ್ಳಿ ಚೆಕ್ ಪೋಸ್ಟ್ ನಲ್ಲಿ 9.53 ಲಕ್ಷ ವಶ…

ಮೈಸೂರು,ಏ2,Tv10 ಕನ್ನಡ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಾರೋಹಳ್ಳಿ ಚೆಕ್ ಪೋಸ್ಟ್ ನಲ್ಲಿ 9,53,100/- ರೂ ವಶಕ್ಕೆ ಪಡೆಯಲಾಗಿದೆ.ಮೈಸೂರು ಕೊಡಗು ಲೋಕಸಭಾ ಚುನಾವಣೆ -2024ರ ಸಂಬಂಧ ಚೆಕ್ ಪೋಸ್ಟ್ ಗಳಲ್ಲಿ ನಡೆಯುತ್ತಿರುವ ತಪಾಸಣೆ ವೇಳೆ ಹಣ ವಶಕ್ಕೆ ಪಡೆಯಲಾಗಿದೆ. ಎಚ್ ಡಿ ಕೋಟೆ ಮಾರ್ಗದಿಂದ ಮೈಸೂರು ಮಾರ್ಗವಾಗಿ ತೆರಳುತ್ತಿದ್ದ ಟಾಟಾ 510 ವಾಹನದಲ್ಲಿ ಹಣ ಸಾಗಿಸುತ್ತಿದ್ದ ವೇಳೆ ಎಸ್.ಎಸ್.ಟಿ.ತಂಡ 9,53,100 ಲಕ್ಷ ರೂಪಾಯಿಗಳನ್ನು ಜಪ್ತಿ ಮಾಡಿದೆ. ಸದರಿ ಹಣವನ್ನು ಸಹಾಯಕ
Read More

ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ ಗುರುವಂದನೆ…ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದಿಂದ ಅಭಿನಂದನೆ…

ಅಯೋಧೆಯ್ಯಿಂದ ಮರಳಿದ ಪೇಜಾವರ ಮೈಸೂರು,ಏ2,Tv10 ಕನ್ನಡ ಟಿ.ಕೆ ಲೇಔಟ್ ನಲ್ಲಿರುವ ಶ್ರೀ ಕೃಷ್ಣಧಾಮದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಅಯೋಧ್ಯೆಯಲ್ಲಿ ಬಾಲರಾಮಚಂದ್ರ ದೇವರನ್ನು ಪ್ರತಿಷ್ಠಾಪನೆ ಮಾಡಿ, 48 ದಿನಗಳ ಮಂಡಲೋತ್ಸವ ಹಾಗೂ ಮಂಗಳೋತ್ಸವ ಯಶಸ್ವಿಯಾಗಿ ಪೂರೈಸಿ ಮೈಸೂರಿಗೆ ಆಗಮಿಸಿದ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥರಿಗೆ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ರವರ ನೇತೃತ್ವದಲ್ಲಿ ಶ್ರೀಗಳಿಗೆ ಗುರುವಂದನೆ
Read More