TV10 Kannada Exclusive

ಅಪರಾಧತಡೆ ಮಾಸಾಚರಣೆ…ಜಾಥಾ ಮೂಲಕ ಅರಿವು ಮೂಡಿಸಿದ ಕುವೆಂಪುನಗರ ಠಾಣೆ ಪೊಲೀಸರು…

ಅಪರಾಧತಡೆ ಮಾಸಾಚರಣೆ…ಜಾಥಾ ಮೂಲಕ ಅರಿವು ಮೂಡಿಸಿದ ಕುವೆಂಪುನಗರ ಠಾಣೆ ಪೊಲೀಸರು… ಮೈಸೂರು,ಡಿ20,Tv10 ಕನ್ನಡಅಪರಾಧತಡೆ ಮಾಸಾಚರಣೆ ಹಿನ್ನಲೆ ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜ್ಞಾನಗಂಗಾ ಶಾಲೆಯಲ್ಲಿ ಜಾಥ ಏರ್ಪಡಿಸಲಾಗಿತ್ತು. ಕೆ ಆರ್ ಉಪವಿಭಾಗದ ಎಸಿಪಿ ಗಂಗಾಧರ ಸ್ವಾಮಿ ರವರ ನೇತೃತ್ವದಲ್ಲಿ ಜಾಥಾ ನಡೆಯಿತು. ಕೆ ಆರ್ ವಿಭಾಗದ ಎಲ್ಲ ಪೊಲೀಸ್ ನಿರೀಕ್ಷಕರು ಹಾಗೂ ಪೊಲೀಸ್ ಉಪನಿರೀಕ್ಷಕರು ಹಾಗೂ ಸಿಬ್ಬಂದಿಗಳನ್ನು ಒಳಗೊಂಡಂತೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಅಪರಾಧ ತಡೆಯ ಬಗ್ಗೆ ಸಾರ್ವಜನಿಕರಿಗೆ ಜಾಥ
Read More

ರಸ್ತೆಗುಂಡಿ ಮುಚ್ಚಿದ ಲೇಡಿ PSI ಯಾಸ್ಮಿನ್ ತಾಜ್… ಸಾಮಾಜಿಕ ಕಳಕಳಿಗೆ ಸಾರ್ವಜನಿಕರು ಫಿದಾ…

ರಸ್ತೆಗುಂಡಿ ಮುಚ್ಚಿದ ಲೇಡಿ PSI ಯಾಸ್ಮಿನ್ ತಾಜ್… ಸಾಮಾಜಿಕ ಕಳಕಳಿಗೆ ಸಾರ್ವಜನಿಕರು ಫಿದಾ… ನಂಜನಗೂಡು,ಡಿ17,Tv10 ಕನ್ನಡನಂಜನಗೂಡು- ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗುಂಡಿಯನ್ನ ಮಹಿಳಾ ಪಿಎಸ್ಸೈ ಯಾಸ್ಮಿನ್ ತಾಜ್ ರವರು ಖುದ್ದಾಗಿ ಮುಚ್ಚುವ ಮೂಲಕ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಬಳಿ ರಸ್ತೆಯನ್ನು ಅಡ್ಡಲಾಗಿ ಅಗೆದ ಟೆಂಡರ್ ದಾರ ಸರಿಯಾಗಿ ಮುಚ್ಚಿರಲಿಲ್ಲ.ಇದರ ಪರಿಣಾಮ ಆಗಾಗ ಅಪಘಾತಗಳು ಸಂಭವಿಸುತ್ತಿತ್ತು.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದಿಂದ ಇಂದು
Read More

ವಿದ್ಯಾರ್ಥಿಗಳಲ್ಲಿ ಕಲಿಕಾ ಹಂತದಲ್ಲೇ ಗ್ರಾಹಕ ಹಕ್ಕುಗಳು ಹಾಗೂ ದಿನನಿತ್ಯದ ವ್ಯವಹಾರಗಳ ಬಗ್ಗೆ ಅರಿವು ಮೂಡಿಸಲು ಪೋಷಕರು ಮುಂದಾಗಬೇಕು : ಪವಿತ್ರ

ವಿದ್ಯಾರ್ಥಿಗಳಲ್ಲಿ ಕಲಿಕಾ ಹಂತದಲ್ಲೇ ಗ್ರಾಹಕ ಹಕ್ಕುಗಳು ಹಾಗೂ ದಿನನಿತ್ಯದ ವ್ಯವಹಾರಗಳ ಬಗ್ಗೆ ಅರಿವು ಮೂಡಿಸಲು ಪೋಷಕರು ಮುಂದಾಗಬೇಕು : ಪವಿತ್ರ ಆರ್‌ ಎಚ್, ಮೈಸೂರು,ಡಿ16,Tv10 ಕನ್ನಡ ವಿದ್ಯಾರಣ್ಯಪುರಂನಲ್ಲಿರುವ ವಿದ್ಯಾರಣ್ಯ ಕೋಚಿಂಗ್ ಸೆಂಟರ್ ಆವರಣದಲ್ಲಿಅಖಿಲ ಭಾರತೀಯ ಗ್ರಾಹಕ ಪಂಚಾಯಿತಿ, ಮೈಸೂರು ಘಟಕ ವತಿಯಿಂದಗ್ರಾಹಕ ಜಾಗರಣ ಪಾಕ್ಷಿಕ 2022ರ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಗ್ರಾಹಕರಿಗೆ ಗ್ರಾಹಕ ಹಕ್ಕುಗಳ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಲಾಯಿತು.ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಮುಕ್ತ ಗಂಗೋತ್ರಿಅರ್ಥಶಾಸ್ತ್ರ ಸಂಶೋಧನಾ ಮತ್ತು ಅಧ್ಯಯನ ವಿಭಾಗದ
Read More

ಶೈಕ್ಷಣಿಕ ಪ್ರವಾಸದ ಬಸ್ ಪಲ್ಟಿ…ಹುಣಸೂರಿನ ವಿಧ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರು…

ಶೈಕ್ಷಣಿಕ ಪ್ರವಾಸದ ಬಸ್ ಪಲ್ಟಿ…ಹುಣಸೂರಿನ ವಿಧ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರು… ಹುಣಸೂರು,ಡಿ15,Tv10 ಕನ್ನಡಶೈಕ್ಷಣಿಕ ಪ್ರವಾಸಕ್ಕೆ ತೆರಳಿದ ಬಸ್ ಪಲ್ಟಿಯಾಗಿದೆ.ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಧರ್ಮಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಗಂದೂರಿನ ದೇವಸ್ಥಾನ ಕ್ಕೆ ತಲುಪುವ ವೇಳೆ ಮಾರ್ಗ ಮದ್ಯ ವಕ್ಕೊಡಿ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಉರುಳಿದೆ.ಬಸ್ಸಿನಲ್ಲಿ ಸುಮಾರು 63 ಮಕ್ಕಳು ಪ್ರಾಯಣಿಸುತ್ತಿದ್ದು 5 ಮಕ್ಕಳಿಗೆ ಗಾಯಗಳಾಗಿದೆ ಎನ್ನಲಾಗಿದೆ…
Read More

ಪ್ರೇಯಸಿಯನ್ನ ಕೊಂದು ಕಬ್ಬಿನಗದ್ದೆಯಲ್ಲಿ ಹೂತುಹಾಕಿದ ಪ್ರಿಯಕರ…ಕಾರಣ ಏನು ಗೊತ್ತಾ…?

ಪ್ರೇಯಸಿಯನ್ನ ಕೊಂದು ಕಬ್ಬಿನಗದ್ದೆಯಲ್ಲಿ ಹೂತುಹಾಕಿದ ಪ್ರಿಯಕರ…ಕಾರಣ ಏನು ಗೊತ್ತಾ…? ಹಾಸನ,ಡಿ14,Tv10 ಕನ್ನಡಪ್ರೇಯಸಿಯ ಶವವನ್ನು ಪ್ರೀಯಕರನೇ ಕಬ್ಬಿನ ಗದ್ದೆಯಲ್ಲಿ ಹೂತು ಹಾಕಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಪಾರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.‌ ಕಾವ್ಯ (25) ಮೃತಪಟ್ಟ ಯುವತಿಯಾಗಿದ್ದು, ಕಾವ್ಯಳನ್ನು ಕೊಲೆ ಮಾಡಿ ಹೂತು ಹಾಕಿದ ಪ್ರಿಯಕರ ಅವಿನಾಶ್ ಪೊಲೀಸರ ಅತಿಥಿಯಾಗಿದ್ದಾನೆ.ಅವಿನಾಶ್ ವಿರುದ್ಧ ಪೋಷಕರು ಕೊಲೆ ಆರೋಪ ಮಾಡುದ್ದಾರೆ. ಅವಿನಾಶ್‌ನನ್ನು ವಶಕ್ಕೆ ಪಡೆದಿರುವ ಹೊಳೆನರಸೀಪುರ ನಗರ ಠಾಣೆ ಪೊಲೀಸರು ತಹಸೀಲ್ದಾರ್ ಕೃಷ್ಣಮೂರ್ತಿ
Read More

ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ 1 ಲಕ್ಷ ರೂ ಸ್ವಯಂ ಉದ್ಯೋಗ ಸಾಲ ವಿತರಣೆ…EWS ರಾಜ್ಯದಲ್ಲೂ ಅನುಷ್ಠಾನದ ಭರವಸೆ…ನಗರ ಬಿಜೆಪಿ ಅಧ್ಯಕ್ಷ

ಮೈಸೂರು,ಡಿ13,Tv10 ಕನ್ನಡವಿಪ್ರಸಹಾಯವಾಣಿ ವತಿಯಿಂದ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಪುರುಷೋತ್ತ ಸ್ವಯಂ ಉದ್ಯೋಗ ಸಾಲ ಯೋಜನೆಯ ಅನುಮೋದನೆ ಪತ್ರಗಳನ್ನು ಫಲಾನುಭವಿಗಳಿಗೆ ನಗರದ ರಾಮಾನುಜ ರಸ್ತೆಯಲ್ಲಿರುವ ಜನ ಸೇವಾ ಕೇಂದ್ರದಲ್ಲಿ ವಿತರಿಸಲಾಯಿತು.ಮೈಸೂರು ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್. ಶ್ರೀವತ್ಸ ಫಲಾನುಭವಿಗಳಿಗೆ ಸಾಲದ ಅನುಮೋದನೆ ಪತ್ರ ಹಾಗು ಸಿಹಿ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಮಾತನಾಡಿದ ಟಿ.ಎಸ್. ಶ್ರೀವತ್ಸ ರವರು ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರನ್ನು ಆರ್ಥಿಕವಾಗಿ ಪುನಶ್ಚೇತನ ಗೊಳಿಸಿ, ಸ್ವಯಂ ಉದ್ಯೋಗಸ್ಥರನ್ನಾಗಿ
Read More

ಪಾಲಿಕೆ ಗುತ್ತಿಗೆದಾರರೊಂದಿಗೆ ಮೇಯರ್ ಸಭೆ…ಬಾಕಿ ಉಳಿದ ಕಾಮಗಾರಿಗಳನ್ನ ಪೂರೈಸುವಂತೆ ಮನವಿ…

ಪಾಲಿಕೆ ಗುತ್ತಿಗೆದಾರರೊಂದಿಗೆ ಮೇಯರ್ ಸಭೆ…ಬಾಕಿ ಉಳಿದ ಕಾಮಗಾರಿಗಳನ್ನ ಪೂರೈಸುವಂತೆ ಮನವಿ… ಮೈಸೂರು,ಡಿ13,Tv10 ಕನ್ನಡಮೈಸೂರು ಮಹಾನಗರ ಪಾಲಿಕೆ ಗುತ್ತಿಗೆದಾರರ ಜೊತೆ ಇಂದು ಪಾಲಿಕೆ ಸಭಾಂಗಣದಲ್ಲಿ ಮೇಯರ್ ಶಿವಕುಮಾರ್ ಸಭೆ ನಡೆಸಿದರು.ಗುತ್ತಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳ ಮಾಹಿತಿ ಪಡೆದುಕೊಂಡರು.ಬಾಕಿ ಇರುವ ಬಿಲ್ ಪಾವತಿಗಳ ಬಗ್ಗೆ ಶೀಘ್ರದಲ್ಲೇ ಪರಿಹಾರ ಒದಗಿಸುವ ಭರವಸೆ ನೀಡಿದರು.ಅಲ್ಲದೆ ಬಾಕಿ ಇರುವ ಕಾಮಗಾರಿಗಳನ್ನ ಪೂರ್ಣಗೊಳಿಸುವಂತೆ ಮನವಿ ಮಾಡಿಕೊಂಡರು…
Read More

ಮಾಂಡೋಸ್ ಆಯ್ತು ಮತ್ತೊಂದು ಚಂಡಮಾರುತ ಅಪ್ಪಳಿಸುವ ಸೂಚನೆ…ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ…

ಮೈಸೂರು,ಡಿ13,Tv10 ಕನ್ನಡಈಗಾಗಲೇ ಮಾಂಡೋಸ್ ಚಂಡಮಾರುತ ಅಪ್ಪಳಿಸಿದೆ.ಮತ್ತೊಂದು ಚಂಡಮಾರುತ ಅಪ್ಪಳಿಸುವ ಸಾಧ್ಯತೆಯನ್ನ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಮತ್ತಷ್ಟು ದಿನಗಳ ಕಾಲ ಹವಾಮಾನ ವೈಪರೀತ್ಯ ಮುಂದುವರೆಯಲಿದೆ.ಇಂತಹ ಸಂಧರ್ಭದಲ್ಲಿ ಸಾರ್ವಜನಿಕರು ಆರೋಗ್ಯ ದೃಷ್ಟಿಯಿಂದ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಸಲಹೆಯನ್ನ ಬಿಡುಗಡೆ ಮಾಡಿದೆ. ಮಾಡಬೇಕಾದದ್ದು..1.ಬೆಚ್ಚಗಿನ ನೀರು ಸೇವಿಸುವುದು/ಆದಷ್ಟು ಸೂಪ್ ಗಳನ್ನ ಸೇವಿಸುವುದು.2.ಸುಲಭವಾಗಿ ಜೀರ್ಣಿಸುವ/ ಆಗತಾನೆ ತಯಾರಿಸಿದ ಶಹಾರ ಪದಾರ್ಥಗಳನ್ನ ಸೇವಿಸುವುದು3.ಸ್ವೆಟರ್,ಸಾಕ್ಸ್,ಕೈಗವಸುಗಳನ್ನ ಧರಿಸುವುದು4.ಹೊರಸಂಚಾರ ತಪ್ಪಿಸುವುದು5.ನೆಗಡಿ,ಕೆಮ್ಮು,ಜ್ವರ ಲಕ್ಷಣ ಇರುವವರಿಂದ ಅಂತರ ಕಾಯ್ದುಕೊಳ್ಳುವುದು6.ಸೀನುವಾಗ ಕರವಸ್ತ್ರ ಅಥವಾ ಟಿಶ್ಯೂ ಪೇಪರ್ ಅಡ್ಡ ಹಿಡಿಯುವುದು7.ಕೈಗಳನ್ನ
Read More

ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತನ ಬಂಧನ ಹಿನ್ನಲೆ…7 ಪೊಲೀಸರ ವಿರುದ್ದ FIR ದಾಖಲು…

*ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತನ ಬಂಧನ ಹಿನ್ನಲೆ…7 ಪೊಲೀಸರ ವಿರುದ್ದ FIR ದಾಖಲು…* *ಮಂಡ್ಯ,ಡಿ11,Tv1 0  ಕನ್ನಡ:* ಜಾಮೀಯ ಮಸೀದಿ ಮುಂಭಾಗ ಹಿಂದುಪರ ಸಂಘಟನೆ ಕಾರ್ಯಕರ್ತರ  ಪ್ರತಿಭಟನ ಒತ್ತಡಕ್ಕೆ ಮಂಡ್ಯ ಪೊಲೀಸ್ ಇಲಾಖೆ ಮಣಿದಿದೆ.7 ಜನ ಪೊಲೀಸರ ವಿರುದ್ದ FIR ದಾಖಲು ಮಾಡಲಾಗಿದೆ.*ಉಮೇಶ, ಪ್ರಕಾಶ, ಕೃಷ್ಣ, ವಿಜಯ್, ಶರತ್, ಹರೀಶ್ ಮತ್ತು ಮಂಜುನಾಥ್ ವಿರುದ್ದ FIR ದಾಖಲಾಗಿದೆ.ಮೊನ್ನೆ ತಡರಾತ್ರಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತನ ಮನೆಗೆ ಹೋಗಿದ್ದ ಈ 7
Read More

ರಸ್ತೆಗಳಲ್ಲಿ ಮುಜಗರ ತರುವಂತಹ ಬರವಣಿಗೆ…ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಒತ್ತಾಯ…

ರಸ್ತೆಗಳಲ್ಲಿ ಮುಜಗರ ತರುವಂತಹ ಬರವಣಿಗೆ…ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಒತ್ತಾಯ… ಮೈಸೂರು,ಡಿ8,Tv10 ಕನ್ನಡರಸ್ತೆಗಳ ಮಧ್ಯದಲ್ಲಿ ಮನಸೋ ಇಚ್ಛೆ ಬರೆಯುವ ಬೆಳವಣಿಗೆ ಶುರುವಾಗಿದೆ.ದಾರಿಮಧ್ಯದಲ್ಲಿ ಬರೆದಿರುವ ಬರಹಗಳು ಸ್ಥಳೀಯರಿಗೆ ಮುಜಗರ ತರುತ್ತಿದೆ.ಚಾಮುಂಡಿ ಪುರಂ ನ ಪ್ರಮುಖ ರಸ್ತೆಯಲ್ಲಿಪಾಪಿಗಳ ದುನಿಯಾ ತಟ್ಟೆಗೆ ವಿಷ ಹಾಕಿ ಬಿಡುತ್ತಾರೆ ಎಂಬ ಬರವಣಿಗೆ ಎದ್ದು ಕಾಣುತ್ತಿದೆ.ಯಾರನ್ನ ಕುರಿತು ಈ ಬರವಣಿಗೆ ಬಂದಿದೆಯೋ ಗೊತ್ತಿಲ್ಲ.ಒಟ್ಟಾರೆ ಒಂದೆಡೆ ಮುಜುಗರ ತಂದರೆ ಮತ್ತೊಂದೆಡೆ ರಸ್ತೆಗೆ ಹಾನಿ ಮಾಡಿದಂತೆಯೂ ಆಗುತ್ತದೆ.ಹೀಗೆ ಬರೆಯುವ ಕಿಡಿಗೇಡಿಗಳ ಮೇಲೆ ಪೊಲೀಸರಾಗಲಿ
Read More