ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಹಸ್ರ ಚಂದ್ರ ದರ್ಶನ ಸಂಭ್ರಮ…ಅದ್ದೂರಿ ಚಾಲನೆ…

ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಹಸ್ರ ಚಂದ್ರ ದರ್ಶನ ಸಂಭ್ರಮ…ಅದ್ದೂರಿ ಚಾಲನೆ…

ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಹಸ್ರ ಚಂದ್ರ ದರ್ಶನ ಸಂಭ್ರಮ…ಅದ್ದೂರಿ ಚಾಲನೆ…

ಮೈಸೂರು,ಫೆ1,Tv10 ಕನ್ನಡ
ಮೈಸೂರು-ಊಟಿ ರಸ್ತೆಯಲ್ಲಿರುವ ಶ್ರೀ ‌ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ‌ಸ್ವಾಮೀಜಿಯ ವರ ಸಹಸ್ರ ಚಂದ್ರ‌ ದರ್ಶನ‌ ಶಾಂತಿ ಮಹೋತ್ಸವದ ಸಂಭ್ರಮ‌ ಮನೆ ಮಾಡಿದೆ.ಗಣಪತಿ ಶ್ರೀಗಳು ಇಂದು ವೈಭವಯುತ ಚಾಲನೆ

ನೀಡಿದ್ದಾರೆ.ಶಾಂತಿ ಮಹೋತ್ಸವ ಸಂಗವಾಗಿ ಶ್ರೀ ದತ್ತ ವೆಂಕಟೇಶ್ವರ ‌ದೇವಸ್ಥಾನದಲ್ಲಿ‌‌ ವಿಶೇಷ ಪೂಜೆ ನೆರವೇರಿಸಿ ನಂತರ ವಿಷ್ಣು ಸಹಸ್ರ ಪಠಣ‌ ನಡೆಯಿತು.ನಂತರ ಶ್ರೀಗಳನ್ನ ಭಕ್ತರು ಶ್ರೀ ದತ್ತ ವೆಂಕಟೇಶ್ವರ ‌ಸ್ವಾಮಿ‌‌ ದೇವಾಲಯದಿಂದ‌ ಸಾಲಂಕೃತ ರಥದಲ್ಲಿ ಭವ್ಯ ಮೆರವಣಿಗೆ ಮೂಲಕ ನಾದ‌ ಮಂಟಪಕ್ಕೆ‌

ಕರೆತಂದರು.ಗಾರುಡಿ ಗೊಂಬೆಗಳು, ಪೂಜಾ‌ ಕುಣಿತ, ಪಟದ ಕುಣಿತ‌‌, ಡೊಳ್ಳು‌ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ಮೇಳ ಮೆರವಣಿಗೆಗೆ ಮೆರುಗು ನೀಡಿತು.ಪೂರ್ಣಕುಂಬ ‌ಹೊತ್ತ ಮಹಿಳೆಯರು, ಶ್ರೀ‌ ಲಕ್ಷ್ಮೀ ಸಮೇತ ಶ್ರೀ ‌ದತ್ತ ವೆಂಕಟೇಶ್ವರ, ಶ್ರೀ ‌ಆಂಜನೇಯ, ಪಾರ್ವತಿ‌ದೇವಿಯ, ಉತ್ಸವ ಮೂರ್ತಿಯೊಂದಿಗೆ ಗೋವು, ಕುದರೆ ಮೆರವಣಿಗೆಯಲ್ಲಿ ಸಾಗಿದವು.ಅಲಂಕೃತಗೊಂಡ ರಥದಲ್ಲಿ ಆಸೀನರಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರನ್ನು‌ ಋತ್ವಿಕರುಗಳು ಹಾಗೂ ಅವಧೂತ‌ ದತ್ತಪೀಠದ ಕಿರಿಯ ಸ್ವಾಮೀಜಿಗಳಾದ‌ ಶ್ರೀ ದತ್ತ‌ ವಿಜಯಾನಂದ ತೀರ್ಥ ಸ್ವಾಮೀಜಿಯವರು ನಾದ ಮಂಟಪಕ್ಕೆ ಕರೆತಂದರು. ಹಲವು‌ ದೇವಾಲಯಗಳಿಂದ‌ ಆಗಮಿಸಿದ್ದ ಋತ್ವಿಕರನ್ನು ಹಾಗೂ ವಿದ್ವಾಂಸರನ್ನು ಸ್ವಾಮೀಜಿಯವರು ಗೌರವಿಸಿದರು.ನಂತರ ಕೃಚುರಾಛರಣ, ದಾನಸಂಕಲ್ಪದೊಂದಿಗೆ ಕೂಷ್ಮಾಂಡ ಹೋಮಕ್ಕೆ ಚಾಲನೆ ನೀಡಲಾಯಿತು.ಈ ವೇಳೆ ಕಿರಿಯ ಶ್ರೀಗಳಾದ ಶ್ರೀ ದತ್ತ ‌ವಿಜಯಾನಂದ ತೀರ್ಥ ‌ಸ್ವಾಮೀಜಿ ಅವರು ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿ ಈ ಸಹಸ್ರ ಚಂದ್ರ ‌ದರ್ಶನ ಶಾಂತಿ ಮಹೋತ್ಸವದಲ್ಲಿ ಪಾಲ್ಗೊಳ್ಳುವುದು‌ ಪುಣ್ಯದ ಕೆಲಸ ಎಂದು ಹೇಳಿದರು.ಸಾಮಾನ್ಯ ಮನುಷ್ಯರು ಮಾಡಿಕೊಳ್ಳುವ ಸಹಸ್ರ‌‌ ಚಂದ್ರ ದರ್ಶನ ಶಾಂತಿಯಲ್ಲಿ ಭಾಗವಹಿಸುವುದೇ ಇಷ್ಟು ಪುಣ್ಯದ ಕೆಲಸ.ಅಂತಹುದರಲ್ಲಿ‌ ಆಧ್ಯಾತ್ಮಿಕ ‌ಮೇರು ಪರ್ವತದಂತಿರುವ ಗುರು ನಮ್ಮ ಗಣಪತಿ‌ ಸಚ್ಚಿದಾನಂದ ಸ್ವಾಮೀಜಿಯವರ ಸಹಸ್ರ ಚಂದ್ರ ದರ್ಶನ ಶಾಂತಿ ಮಹೋತ್ಸವದಲ್ಲಿ ಪಾಲ್ಗೊಳ್ಳುವುದು ನಿಜಕ್ಕೂ ಅತ್ಯಂತ ಪುಣ್ಯ ಎಂದು ತಿಳಿಸಿದರು.ಸಹಸ್ರ ಚಂದ್ರ ದರ್ಶನ ಶಾಂತಿ ಮಹೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು…

Spread the love

Related post

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…
ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಕೊಳ್ಳೇಗಾಲ,ಜೂ26,Tv10 ಕನ್ನಡ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ಮೂರು ಮರಿಗಳು ಅಸಹಜ ಸಾವಿಗೀಡಾಗಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ…
ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025 ಕಿರೀಟ…

ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025…

ಮೈಸೂರು,ಜೂ26,Tv10 ಕನ್ನಡ ಮೈಸೂರಿನ ಪೀಡಿಯಾಟ್ರಿಕ್ ನ್ಯೂರಾಲಜಿಸ್ಟ್ ಡಾ.ಅನೂಷಾ ರಾಜ್ ರವರು ಮಿಸ್ ಮೆಡಿಕ್ವೀನ್ 2025 ಸ್ಪರ್ಧೆಯಲ್ಲಿ ವಿಜಯಿಯಾಗಿ ಹೊರಹೊಮ್ಮಿದ್ದಾರೆ. ಜೂನ್ 22 ರಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಸ್ಪರ್ಧೆಯಲ್ಲಿ…

Leave a Reply

Your email address will not be published. Required fields are marked *