ಶೇ 50-50 ರಂತೆ ಭೂ ಪರಿಹಾರ ವಿತರಣೆಯಲ್ಲಿ ಅಕ್ರಮ ವಾಸನೆ…ಮುಡಾಗೆ ಚಾಟಿ ಬೀಸಿದ ಸರ್ಕಾರ…

ಶೇ 50-50 ರಂತೆ ಭೂ ಪರಿಹಾರ ವಿತರಣೆಯಲ್ಲಿ ಅಕ್ರಮ ವಾಸನೆ…ಮುಡಾಗೆ ಚಾಟಿ ಬೀಸಿದ ಸರ್ಕಾರ…

ಶೇ 50-50 ರಂತೆ ಭೂ ಪರಿಹಾರ ವಿತರಣೆಯಲ್ಲಿ ಅಕ್ರಮ ವಾಸನೆ…ಮುಡಾಗೆ ಚಾಟಿ ಬೀಸಿದ ಸರ್ಕಾರ…

ಮೈಸೂರು,ಮಾ17,Tv10 ಕನ್ನಡ
ಭೂ ಮಾಲೀಕರಿಗೆ ಶೇ.50-50 ರಂತೆ ಭೂ ಪರಿಹಾರ ನೀಡುವ ವಿಚಾರದಲ್ಲಿ ನಿಯಮಗಳನ್ನ ಹಾಗೂ ಕಾಯ್ದೆಗಳನ್ನ ಗಾಳಿಗೆ ತೂಗುತ್ತಿರುವ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸರ್ಕಾರ ಚಾಟಿ ಬೀಸಿದೆ.ಬದಲಿ ನಿವೇಶನ ಮಂಜೂರು ಮಾಡುವ ನೆಪದಲ್ಲಿ ನಿಯಮಗಳನ್ನ ಉಲ್ಲಂಘಿಸಿ ಅಭಿವೃದ್ದಿ ಹೊಂದಿದ ಜಾಗಗಳಲ್ಲಿ ಶೇ 50-50 ರಂತೆ ಆಸ್ತಿಗಳನ್ನ ನೀಡುತ್ತಿರುವ ಮುಡಾ ಕ್ರಮಕ್ಕೆ ಬ್ರೇಕ್ ಹಾಕಿದೆ.ಅಗತ್ಯ ಮಾರ್ಗಸೂಚಿ ಸಿದ್ದವಾಗುವವರೆಗೆ ಸಭೆಗಳಲ್ಲಿ ಇಂತಹ ನಿರ್ಣಯ ಕೈಗೊಳ್ಳಬಾರದೆಂದು ಮುಡಾ ಆಯುಕ್ತರಿಗೆ ನಗರಾಭಿವೃದ್ದಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಸತೀಶ್ ಕಬಾಡಿ ಸೂಚನೆ ನೀಡಿದ್ದಾರೆ.

2019 ರಿಂದ 2022 ರವರೆಗೆ ಮುಡಾ ದಲ್ಲಿ ನಡೆದ ಕೆಲವು ಸಭೆಗಳಲ್ಲಿ ಭೂ ಪರಿಹಾರವಾಗಿ ಬದಲಿ ನಿವೇಶನ ಮಂಜೂರು ಮಾಡಲು ತೀರ್ಮಾನಿಸಿ ನಿರ್ಣಯಗಳನ್ನ ಕೈಗೊಂಡಿದೆ.ನಿಯಮ 16(1) ಅನ್ವಯದಂತೆ ಬದಲಿ ನಿವೇಶನ ನೀಡಲು ಅವಕಾಶವಿರುತ್ತದೆ.ಆದ್ರೆ ಕಾಯ್ದೆಗಳನ್ನ ಉಲ್ಲಂಘಿಸಿ ನೀಡುತ್ತಿರುವುದು ಸಹ ಸರ್ಕಾರದ ಗಮನಕ್ಕೆ ಬಂದಿದೆ.ಬದಲಿ ನಿವೇಶನ ಮಂಜೂರು ಮಾಡುವಾಗ ಯಾವ ನಿಯಮಗಳನ್ನ ಅನುಸರಿಸಲಾಗಿದೆ ಎಂಬ ಬಗ್ಗೆ ಟಿಪ್ಪಣಿಯಲ್ಲಿ ಉಲ್ಲೇಖಿಸಿರುವುದಿಲ್ಲ.ಹೀಗಾಗಿ ನಿಯಮಗಳು ಉಲ್ಲಂಘನೆಯಾಗಿದೆ ಎಂಬ ಸರ್ಕಾರಕ್ಕೆ ಧೃಢವಾಗಿರುವ ಹಿನ್ನಲೆ ಅಗತ್ಯ ಮಾರ್ಗಸೂಚಿ ತಯಾರಿಸುವ ವರೆಗೂ ಮುಂದಿನ ಸಭೆಗಳಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಬಾರದೆಂದು ಸೂಚನೆ ನೀಡಿ ಮುಡಾ ಆಯುಕ್ತರಿಗೆ ಪತ್ರ ರವಾನಿಸಿದೆ….

Spread the love

Related post

ರಮ್ಯಾ ಆರ್. ಮಹಿಳೆ ನ್ಯಾಯಾಧೀಶರಾಗಿ ಆಯ್ಕೆ ಮಹಿಳಾ ಸಬಲೀಕರಣಕ್ಕೆ ಹೊಸ ಮೈಲುಗಲ್ಲುಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಿರಗುಂದ ಗ್ರಾಮದ ರಾಜೇಂದ್ರ ಪ್ರಸಾದ್ MD(ಜಾನಪದ ಕಲಾವಿದರು

ರಮ್ಯಾ ಆರ್. ಮಹಿಳೆ ನ್ಯಾಯಾಧೀಶರಾಗಿ ಆಯ್ಕೆ ಮಹಿಳಾ ಸಬಲೀಕರಣಕ್ಕೆ ಹೊಸ ಮೈಲುಗಲ್ಲುಮೈಸೂರು…

ರಮ್ಯಾ ಆರ್. ಮಹಿಳೆ ನ್ಯಾಯಾಧೀಶರಾಗಿ ಆಯ್ಕೆ ಮಹಿಳಾ ಸಬಲೀಕರಣಕ್ಕೆ ಹೊಸ ಮೈಲುಗಲ್ಲುಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಿರಗುಂದ ಗ್ರಾಮದ ರಾಜೇಂದ್ರ ಪ್ರಸಾದ್ MD(ಜಾನಪದ ಕಲಾವಿದರು ) ಪಾರ್ವತಮ್ಮ N…
ಮೈಸೂರು ನಗರ ನೂತನ ಡಿಸಿಪಿ ಯಾಗಿ ಡಾ.ಹರ್ಷ ಪ್ರಿಯಂವದ ನೇಮಕ…77 ದಿನಗಳ ನಂತರ ನಿಯೋಜನೆ…

ಮೈಸೂರು ನಗರ ನೂತನ ಡಿಸಿಪಿ ಯಾಗಿ ಡಾ.ಹರ್ಷ ಪ್ರಿಯಂವದ ನೇಮಕ…77 ದಿನಗಳ…

ಮೈಸೂರು ನಗರ ನೂತನ ಡಿಸಿಪಿ ಯಾಗಿ ಡಾ.ಹರ್ಷ ಪ್ರಿಯಂವದ ನೇಮಕ…77 ದಿನಗಳ ನಂತರ ನಿಯೋಜನೆ… ಮೈಸೂರು,ಮಾ18,Tv10 ಕನ್ನಡ ಮೈಸೂರು ನಗರ ಪೊಲೀಸ್‌ ಇಲಾಖೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ…
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕೋರ್ಸ್‌ ಮುಚ್ಚುವಿಕೆ: ಪ್ರೊ. ಕೆ.ಎಸ್. ರಂಗಪ ತೀವ್ರ ಅಸಮಾಧಾನ

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕೋರ್ಸ್‌ ಮುಚ್ಚುವಿಕೆ: ಪ್ರೊ. ಕೆ.ಎಸ್. ರಂಗಪ ತೀವ್ರ ಅಸಮಾಧಾನ

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕೋರ್ಸ್‌ ಮುಚ್ಚುವಿಕೆ: ಪ್ರೊ. ಕೆ.ಎಸ್. ರಂಗಪ ತೀವ್ರ ಅಸಮಾಧಾನ ಮೈಸೂರು: 100 ವರ್ಷಗಳ ಇತಿಹಾಸ ಹೊಂದಿರುವ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಿವಿಧ ಕೋರ್ಸ್‌ಗಳನ್ನು ಹಂತ ಹಂತವಾಗಿ ಮುಚ್ಚಲಾಗುತ್ತಿರುವ…

Leave a Reply

Your email address will not be published. Required fields are marked *