ಮೈಸೂರು ನಗರ ಸಿವಿಲ್ ಪೊಲೀಸರಿಗೆ ಇನ್ನೂ ಬಾರದ ಹೆಚ್ಚುವರಿ ONE MONTH EXTRA SALARY…ಸಿಬ್ಬಂದಿಗಳ ಪರದಾಟ…

ಮೈಸೂರು ನಗರ ಸಿವಿಲ್ ಪೊಲೀಸರಿಗೆ ಇನ್ನೂ ಬಾರದ ಹೆಚ್ಚುವರಿ ONE MONTH EXTRA SALARY…ಸಿಬ್ಬಂದಿಗಳ ಪರದಾಟ…

ಮೈಸೂರು ನಗರ ಸಿವಿಲ್ ಪೊಲೀಸರಿಗೆ ಇನ್ನೂ ಬಾರದ ಹೆಚ್ಚುವರಿ ONE MONTH EXTRA SALARY…ಸಿಬ್ಬಂದಿಗಳ ಪರದಾಟ…

ಮೈಸೂರು,ಜ21,Tv10 ಕನ್ನಡ
ಹಬ್ಬ ಹರಿದಿನಗಳಲ್ಲಿ ಹಾಗೂ ರಜೆ ದಿನಗಳಲ್ಲಿ ಕರ್ತವ್ಯ ನಿರ್ವಹಿಸಿದ ಮೈಸೂರು ನಗರ ಸಿವಿಲ್ ಪೊಲೀಸ್ ಸಿಬ್ಬಂದಿಗಳ ಹೆಚ್ಚುವರಿ ಒಂದು ತಿಂಗಳ ಸಂಬಳ ಇನ್ನೂ ಪಾವತಿಯಾಗಿಲ್ಲ.ವರ್ಷ ಆರಂಭವಾಗುವ ಜನವರಿ ತಿಂಗಳ 10 ರೊಳಗೆ ಹೆಚ್ಚುವರಿ ಸಂಬಳ ಪಾವತಿಯಾಗುತ್ತಿತ್ತು.ಈ ವರ್ಷ 20 ದಾಟಿದರೂ ಸಂಬಳ ಪಾವತಿಯಾಗಿಲ್ಲ.ಇದು ನಗರ ಸಿವಿಲ್ ಪೊಲೀಸ್ ಸಿಬ್ಬಂದಿಗಳಿಗೆ ಮಾತ್ರ ಈ ತೊಂದರೆಯಾಗಿರುವುದು ಬೆಳಕಿಗೆ ಬಂದಿದೆ.ಈಗಾಗಲೇ ಬೇರೆ ಜಿಲ್ಲೆಗಳಲ್ಲಿ EXTRA ONE MONTH SALARY ಯನ್ನ ಸಿಬ್ಬಂದಿಗಳು ಪಡೆದಿದ್ದಾರೆ.ಆದರೆ ಮೈಸೂರು ನಗರ ಪೊಲೀಸ್ ಸಿಬ್ಬಂದಿಗಳಿಗೆ ಮಾತ್ರ ಪಾವತಿಯಾಗಿಲ್ಲ.ನಗರ ಪೊಲೀಸ್ ವ್ಯಾಪ್ತಿಯಲ್ಲಿ ಬರುವ ಸುಮಾರು 1500 ಅಧಿಕಾರಿ ಸಿಬ್ಬಂದಿಗಳಿಗೆ ಸಂಬಳ ಪಾವತಿಯಾಗಿಲ್ಲ.ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸಿಎಂ ಆಗಿದ್ದ ವೇಳೆ ಪೊಲೀಸರಿಗೆ ಇಂತಹ ಸೌಲಭ್ಯ ಕಲ್ಪಿಸಿದ್ದರು.ಹಬ್ಬದ ರಜೆ ದಿನಗಳಲ್ಲಿ ಕರ್ತವ್ಯ ನಿರ್ವಹಿಸುವುದರಿಂದ ಒಂದು ತಿಂಗಳ ಸಂಬಳ ನೀಡುವ ಆದೇಶ ಹೊರಡಿಸಿದ್ದರು.ಇದುವರೆಗೆ ಯಾವುದೇ ಅಡೆ ತಡೆ ಇಲ್ಲದೆ ಪ್ರತಿವರ್ಷ ಸಂಬಳ ಪಾವತಿಯಾಗಿದೆ.ಈ ವರ್ಷ 20 ನೇ ತಾರೀಖು ದಾಟಿದ್ದರೂ ಹೆಚ್ಚುವರಿಯಾಗಿ ಬರಬೇಕಿದ್ದ ಸಂಬಳ ಪಾವತಿಯಾಗಿಲ್ಲವೆಂದು ತಿಳಿದುಬಂದಿದೆ.ಹೆಚ್ಚುವರಿಯಾಗಿ ಬರುವ ಸಂಬಳಕ್ಕಾಗಿ ಕಾದಿರುವ ಸಿಬ್ಬಂದಿಗಳಿಗೆ ನಿರಾಸೆ ತರುತ್ತಿದೆ.ಜಿಲ್ಲಾ ಪೊಲೀಸ್,ಸಿಎಆರ್,ಕೆಎಸ್ ಆರ್ ಪಿ ವಿಭಾಗದ ಸಿಬ್ಬಂದಿಗಳು ಈಗಾಗಲೇ ಸಂಬಳ ಪಡೆದಿದ್ದಾರೆ.ನಗರ ವ್ಯಾಪ್ತಿಯ ಸಿಬ್ಬಂದಿಗಳಿಗೆ ಮಾತ್ರ ಇನ್ನೂ ಪಾವತಿಸದೆ ವಿಳಂಬವಾಗಿದೆ.ಇದಕ್ಕೆ ಕಾರಣ ಗೊತ್ತಿಲ್ಲ.ಆದ್ರೆ ರಜೆ ದಿನಗಳಲ್ಲೂ ಕರ್ತವ್ಯ ನಿರ್ವಹಿಸಿದ ಪೊಲೀಸರಿಗೆ ಇದೆಂತಹ ಪರದಾಟ.ಇನ್ನಾದ್ರೂ ಸಂಭಂಧಪಟ್ಟವರು ಇತ್ತ ಗಮನ ಹರಿಸಿ ಹೆಚ್ಚುವರಿ ಸಂಬಳ ತಲುಪಿಸಲು ನೆರವಾಗಲಿ…

Spread the love

Related post

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…
ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಕೊಳ್ಳೇಗಾಲ,ಜೂ26,Tv10 ಕನ್ನಡ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ಮೂರು ಮರಿಗಳು ಅಸಹಜ ಸಾವಿಗೀಡಾಗಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ…
ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025 ಕಿರೀಟ…

ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025…

ಮೈಸೂರು,ಜೂ26,Tv10 ಕನ್ನಡ ಮೈಸೂರಿನ ಪೀಡಿಯಾಟ್ರಿಕ್ ನ್ಯೂರಾಲಜಿಸ್ಟ್ ಡಾ.ಅನೂಷಾ ರಾಜ್ ರವರು ಮಿಸ್ ಮೆಡಿಕ್ವೀನ್ 2025 ಸ್ಪರ್ಧೆಯಲ್ಲಿ ವಿಜಯಿಯಾಗಿ ಹೊರಹೊಮ್ಮಿದ್ದಾರೆ. ಜೂನ್ 22 ರಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಸ್ಪರ್ಧೆಯಲ್ಲಿ…

Leave a Reply

Your email address will not be published. Required fields are marked *