ಮೈಸೂರು ನಗರ ಸಿವಿಲ್ ಪೊಲೀಸರಿಗೆ ಇನ್ನೂ ಬಾರದ ಹೆಚ್ಚುವರಿ ONE MONTH EXTRA SALARY…ಸಿಬ್ಬಂದಿಗಳ ಪರದಾಟ…

ಮೈಸೂರು ನಗರ ಸಿವಿಲ್ ಪೊಲೀಸರಿಗೆ ಇನ್ನೂ ಬಾರದ ಹೆಚ್ಚುವರಿ ONE MONTH EXTRA SALARY…ಸಿಬ್ಬಂದಿಗಳ ಪರದಾಟ…

ಮೈಸೂರು ನಗರ ಸಿವಿಲ್ ಪೊಲೀಸರಿಗೆ ಇನ್ನೂ ಬಾರದ ಹೆಚ್ಚುವರಿ ONE MONTH EXTRA SALARY…ಸಿಬ್ಬಂದಿಗಳ ಪರದಾಟ…

ಮೈಸೂರು,ಜ21,Tv10 ಕನ್ನಡ
ಹಬ್ಬ ಹರಿದಿನಗಳಲ್ಲಿ ಹಾಗೂ ರಜೆ ದಿನಗಳಲ್ಲಿ ಕರ್ತವ್ಯ ನಿರ್ವಹಿಸಿದ ಮೈಸೂರು ನಗರ ಸಿವಿಲ್ ಪೊಲೀಸ್ ಸಿಬ್ಬಂದಿಗಳ ಹೆಚ್ಚುವರಿ ಒಂದು ತಿಂಗಳ ಸಂಬಳ ಇನ್ನೂ ಪಾವತಿಯಾಗಿಲ್ಲ.ವರ್ಷ ಆರಂಭವಾಗುವ ಜನವರಿ ತಿಂಗಳ 10 ರೊಳಗೆ ಹೆಚ್ಚುವರಿ ಸಂಬಳ ಪಾವತಿಯಾಗುತ್ತಿತ್ತು.ಈ ವರ್ಷ 20 ದಾಟಿದರೂ ಸಂಬಳ ಪಾವತಿಯಾಗಿಲ್ಲ.ಇದು ನಗರ ಸಿವಿಲ್ ಪೊಲೀಸ್ ಸಿಬ್ಬಂದಿಗಳಿಗೆ ಮಾತ್ರ ಈ ತೊಂದರೆಯಾಗಿರುವುದು ಬೆಳಕಿಗೆ ಬಂದಿದೆ.ಈಗಾಗಲೇ ಬೇರೆ ಜಿಲ್ಲೆಗಳಲ್ಲಿ EXTRA ONE MONTH SALARY ಯನ್ನ ಸಿಬ್ಬಂದಿಗಳು ಪಡೆದಿದ್ದಾರೆ.ಆದರೆ ಮೈಸೂರು ನಗರ ಪೊಲೀಸ್ ಸಿಬ್ಬಂದಿಗಳಿಗೆ ಮಾತ್ರ ಪಾವತಿಯಾಗಿಲ್ಲ.ನಗರ ಪೊಲೀಸ್ ವ್ಯಾಪ್ತಿಯಲ್ಲಿ ಬರುವ ಸುಮಾರು 1500 ಅಧಿಕಾರಿ ಸಿಬ್ಬಂದಿಗಳಿಗೆ ಸಂಬಳ ಪಾವತಿಯಾಗಿಲ್ಲ.ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸಿಎಂ ಆಗಿದ್ದ ವೇಳೆ ಪೊಲೀಸರಿಗೆ ಇಂತಹ ಸೌಲಭ್ಯ ಕಲ್ಪಿಸಿದ್ದರು.ಹಬ್ಬದ ರಜೆ ದಿನಗಳಲ್ಲಿ ಕರ್ತವ್ಯ ನಿರ್ವಹಿಸುವುದರಿಂದ ಒಂದು ತಿಂಗಳ ಸಂಬಳ ನೀಡುವ ಆದೇಶ ಹೊರಡಿಸಿದ್ದರು.ಇದುವರೆಗೆ ಯಾವುದೇ ಅಡೆ ತಡೆ ಇಲ್ಲದೆ ಪ್ರತಿವರ್ಷ ಸಂಬಳ ಪಾವತಿಯಾಗಿದೆ.ಈ ವರ್ಷ 20 ನೇ ತಾರೀಖು ದಾಟಿದ್ದರೂ ಹೆಚ್ಚುವರಿಯಾಗಿ ಬರಬೇಕಿದ್ದ ಸಂಬಳ ಪಾವತಿಯಾಗಿಲ್ಲವೆಂದು ತಿಳಿದುಬಂದಿದೆ.ಹೆಚ್ಚುವರಿಯಾಗಿ ಬರುವ ಸಂಬಳಕ್ಕಾಗಿ ಕಾದಿರುವ ಸಿಬ್ಬಂದಿಗಳಿಗೆ ನಿರಾಸೆ ತರುತ್ತಿದೆ.ಜಿಲ್ಲಾ ಪೊಲೀಸ್,ಸಿಎಆರ್,ಕೆಎಸ್ ಆರ್ ಪಿ ವಿಭಾಗದ ಸಿಬ್ಬಂದಿಗಳು ಈಗಾಗಲೇ ಸಂಬಳ ಪಡೆದಿದ್ದಾರೆ.ನಗರ ವ್ಯಾಪ್ತಿಯ ಸಿಬ್ಬಂದಿಗಳಿಗೆ ಮಾತ್ರ ಇನ್ನೂ ಪಾವತಿಸದೆ ವಿಳಂಬವಾಗಿದೆ.ಇದಕ್ಕೆ ಕಾರಣ ಗೊತ್ತಿಲ್ಲ.ಆದ್ರೆ ರಜೆ ದಿನಗಳಲ್ಲೂ ಕರ್ತವ್ಯ ನಿರ್ವಹಿಸಿದ ಪೊಲೀಸರಿಗೆ ಇದೆಂತಹ ಪರದಾಟ.ಇನ್ನಾದ್ರೂ ಸಂಭಂಧಪಟ್ಟವರು ಇತ್ತ ಗಮನ ಹರಿಸಿ ಹೆಚ್ಚುವರಿ ಸಂಬಳ ತಲುಪಿಸಲು ನೆರವಾಗಲಿ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *