TV10 Kannada Exclusive

ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯು ಮನೋವಿಕಲ್ಪ ಸಮಾಧಿ ಸ್ಥಿತಿಗೆ ತಲುಪುತ್ತಾನೆ-ಪೊಲೀಸ್ ಇನಸ್ಪೆಕ್ಟರ್ ಪ್ರಕಾಶ್

ಮಾದಕ ವಸ್ತುಗಳು ಯುವ ಪೀಳಿಗೆಯನ್ನು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತದೆ. ಇದರಿಂದ ಅನೇಕರು ಅಪಾಯಕ್ಕೆ ಸಿಲುಕಿ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ನಂಜನಗೂಡಿನ ಪೊಲೀಸ್ ಇನಸ್ಪೇಕ್ಟರ್ ಶ್ರೀ ಪ್ರಕಾಶ್ ರವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಮಾದಕ ವಸ್ತುಗಳ ಸೇವನೆಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಪಿಡುಗುವಿನಿಂದ ವ್ಯಕ್ತಿಯು ಮನೋವಿಕಲ್ಪ ಸಮಾಧಿ ಸ್ಥಿತಿಗೆ ತಲುಪುತ್ತಾನೆ.ಕಾಲೇಜಿನ ಪ್ರಾಂಶುಪಾಲರಾದ ಲಯನ್ ಸಿ.ಆರ್. ದಿನೇಶ್ ರವರು ಮಾತನಾಡಿ ಮಾದಕ ವಸ್ತುಗಳ
Read More

ರಾಮಕೃಷ್ಣ ಆಶ್ರಮದಲ್ಲಿ ಚಿರತೆ ಸೆರೆ…

ಮೈಸೂರು,ಡಿ19,Tv10 ಕನ್ನಡ ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಚಿರತೆ ಸೆರೆಯಾಗಿದೆ. ನಗರ ಪ್ರದೇಶಕ್ಕೆ ಚಿರತೆ ಬಂದಿರುವುದು ಆತಂಕ ಸೃಷ್ಟಿಸಿದೆ. ಮೈಸೂರು ಹೊರವಲಯದ ಕಾಡಂಚಿನ ಪ್ರದೇಶದ ಗ್ರಾಮಗಳಲ್ಲಿ ಕಾಣಿಸಿಕೊಂಡು ಉಪಟಳ ನೀಡುತ್ತಿದ್ದುದು ಸಹಜ. ಇದೀಗ ಮೈಸೂರು ನಗರದೊಳಗೇ ಚಿರತೆ ಸೆರೆಸಿಕ್ಕಿರುವುದರಿಂದ ಜನ ಗಾಬರಿಯಾಗಿದ್ದಾರೆ. ಅರಣ್ಯ ಇಲಾಖೆಯವರು ರಾಮಕೃಷ್ಣ‌ ಆಶ್ರಮದಲ್ಲಿ ಇರಿಸಿದ್ದ ಬೋನಿಗೆ ಬಿದ್ದಿದೆ.ನಾಲ್ಕು ದಿನದ ಹಿಂದೆ ಬೋನು ಇರಿಸಲಾಗಿತ್ತು.ಚಿರತೆಯನ್ನು ಅರಣ್ಯ ಇಲಾಖೆಯ ವಲಯ ಅಧಿಕಾರಿಗಳಾದ ಆರ್‌ಎಫ್ಒ ಸುರೇಂದ್ರ.ಕೆ ಮತ್ತು ಸಿಬ್ಬಂದಿ ಅರಣ್ಯಕ್ಕೆ ರವಾನಿಸಿದ್ದಾರೆ…
Read More

ಪ್ರತಾಪ್ ಸಿಂಹ ಪರ ಬಿಜೆಪಿ ಕಾರ್ಯಕರ್ತರ ಬ್ಯಾಟಿಂಗ್…

ಮೈಸೂರು,ಡಿ16,Tv10 ಕನ್ನಡ ಸಂಸದ ಪ್ರತಾಪ್ ಸಿಂಹ ಪರ ಬಿಜೆಪಿ ಕಾರ್ಯಕರ್ತರು ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.ಮೈಸೂರಿನ ಕಚೇರಿ ಮುಂಭಾಗ ಬಿಜೆಪಿ ಕಾರ್ಯಕರ್ತರುಪ್ರತಾಪ್ ಸಿಂಹ ಅವರೊಂದಿಗೆ ನಾವು ಎಂದು ಘೋಷಣೆ ಕೂಗಿದ್ದಾರೆ.ರಾಷ್ಟ್ರೀಯ ವಾದಿ ಪ್ರತಾಪ್ ಸಿಂಹ ಜೊತೆಗೆ ನಾವಿದ್ದೇವೆ.ಹಿಂದೂ ಹುಲಿ ಪ್ರತಾಪ್ ಸಿಂಹ ಎಂದು ಅವರ ಭಾವಚಿತ್ರದ ಮುಖವಾಡ ಹಾಕಿಕೊಂಡು ಘೋಷಣೆ ಕೂಗಿ ಬೆಂಬಲ ಸೂಚಿಸಿದ್ದಾರೆ…
Read More

ಪ್ರತಾಪ್ ಸಿಂಹ ಕುರಿತ ಅವಹೇಳನಾಕಾರಿ ಪೋಸ್ಟರ್ ಪ್ರಕರಣ…ಕೆ.ಶಿವರಾಮು ವಿರುದ್ದ ಬಿಜೆಪಿ ಮುಖಂಡ ದೂರು…

ಮೈಸೂರು,ಡಿ15,Tv10 ಕನ್ನಡ ಸಂಸತ್ ನಲ್ಲಿ ನಡೆದ ಬೆಳವಣಿಗೆ ಕುರಿತಂತೆ ಸಂಸದ ಪ್ರತಾಪ್ ಸಿಂಹ ರವರಿಗೆ ಅವಹೇಳನಾಕಾರಿಯಾಗಿ ಪೋಸ್ಟರ್ ಅಳವಡಿಸಿದ ಕರ್ನಾಟಕ ರಾಜ್ಯ ಹಿಂದುಳಿದ ವೇದಿಕೆ ಅಧ್ಯಕ್ಷ ಕೆ.ಶಿವರಾಮು ವಿರುದ್ದ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡ ಆನಂದ್ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಯಾವುದೇ ಅನುಮತಿ ಪಡೆಯದೆ ಪ್ರತಾಪ್ ಸಿಂಹ ರನ್ನ ದೃಶದ್ರೋಹಿ ಎಂದು ಬಿಂಬಿಸುವಂತೆ ಪೋಸ್ಟರ್ ಅಳವಡಿಸಿ ತೇಜೋವಧೆ ಮಾಡಿರುವ ಕೆ.ಶಿವರಾಮು ವಿರುದ್ದ ಕ್ರಮ ಕೈಗೊಳ್ಳುವಂತೆ
Read More

ಸುಭ್ರಹ್ಮಣ್ಯ ಷಷ್ಠಿ: ಸಿದ್ದಲಿಂಗಪುರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಇಲ್ಲ…

ಸುಭ್ರಹ್ಮಣ್ಯ ಷಷ್ಠಿ: ಸಿದ್ದಲಿಂಗಪುರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಇಲ್ಲ… ಮೈಸೂರು,ಡಿ15,Tv10 ಕನ್ನಡ ಡಿಸೆಂಬರ್ 18 ರಂದು ಸುಬ್ರಹ್ಮಣ್ಯ ಷಷ್ಠಿ ಆಚರಣೆ ಇದೆ.ಸಿದ್ದಲಿಂಗಪುರದ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಅಂಗವಾಗಿ ಪ್ರತಿ ವರ್ಷ ವಿಜೃಂಬಣೆಯಿಂದ ಜಾತ್ರಾ ಮಹೋತ್ಸವ ನಡೆಯುತ್ತಿತ್ತು.ದೇವಾಲಯದ ಅಭಿವೃದ್ದಿ ಕಾಮಗಾರಿ ನಡೆಯುತ್ತಿರುವ ಹಿನ್ನಲೆ ಈ ಬಾರಿ ಜಾತ್ರಾಮಹೋತ್ಸವ ರದ್ದುಪಡಿಸಲಾಗಿದೆ.ಅದ್ದೂರಿ ಪೂಜಾ ಕೈಂಕರ್ಯಗಳು ನಡೆಯುವುದಿಲ್ಲ.ಹೀಗಾಗಿ ಸಾರ್ವಜನಿಕರಿಗೆ,ಸುತ್ತಮುತ್ತಲಿನ ಗ್ರಾಮಸ್ಥರಿಗೆ ಮಾಹಿತಿ ನೀಡುವಂತೆ ಮೇಟಗಳ್ಳಿ ಠಾಣೆ ನಿರೀಕ್ಷಕರು ಸಿದ್ದಲಿಂಗಪುರ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗೆ ಪತ್ರ
Read More

ಕಾವೇರಿಗಾಗಿ ಹೋರಾಟ…ಮಂಗಳಮುಖಿಯರ ಬೆಂಬಲ…

ಮೈಸೂರು,ಡಿ14,Tv10 ಕನ್ನಡ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಮೈಸೂರಿನ ದೊಡ್ಡಗಡಿಯಾರ ವೃತ್ತದಲ್ಲಿ ನಡೆಯುತ್ತಿರುವ ನಿರಂತರ ಪ್ರತಿಭಟನೆಗೆ ಇಂದು ಮಂಗಳಮುಖಿಯರು ಸಾಥ್ ನೀಡಿದ್ದಾರೆ.ತಮಿಳುನಾಡಿಗೆ ಬಿಡುಗಡೆ ಮಾಡುತ್ತಿರುವ ಕಾವೇರಿ ನೀರನ್ನ ಸ್ಥಗಿತಗೊಳಿಸುವಂತೆ ಕಾವೇರಿ ಕ್ರಿಯಾ ಸಮಿತಿ ವತಿಯಿಂದ ನಿರಂತರ ಹೋರಾಟ ಹಮ್ಮಿಕೊಳ್ಳಲಾಗಿದೆ.ಪ್ರತಿದಿನ ಒಂದು ಸಂಘಟನೆ ಪ್ರತಿಭಟನೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.ಇಂದು ಮಂಗಳಮುಖಿಯರು ಭಾಗವಹಿಸಿ ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ…
Read More

ಆಡಳಿತ ವಿಕೇಂದ್ರೀಕರಣ…ಸಾರ್ವಜನಿಕ ಕೆಲಸ ಕಾರ್ಯಗಳಿಗೆ ವಲಯ ಆಯುಕ್ತರುಗಳಿಗೇ ಅಧಿಕಾರ…

ಆಡಳಿತ ವಿಕೇಂದ್ರೀಕರಣ…ಸಾರ್ವಜನಿಕ ಕೆಲಸ ಕಾರ್ಯಗಳಿಗೆ ವಲಯ ಆಯುಕ್ತರುಗಳಿಗೇ ಅಧಿಕಾರ… ಮೈಸೂರು,ಡಿ12,Tv10 ಕನ್ನಡ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಸೇವಾ ಯೋಜನೆಗಳ ಕೆಲಸ ಕಾರ್ಯಗಳ ಅಧಿಕಾರವನ್ನ ವಲಯ ಕಚೇರಿ ಆಯುಕ್ತರುಗಳಿಗೆ ನೀಡಲಾಗಿದೆ.ಆಡಳಿತ ವಿಕೇಂದ್ರೀಕರಣಗೊಳಿಸಲಾಗಿದ್ದು ಇನ್ನುಮುಂದೆ ನೀರು ಸರಬರಾಜು,ಬೀದಿದೀಪ,ಒಳಚರಂಡಿ,ಸ್ವಚ್ಛತೆ,ರಸ್ತೆ ದುರಸ್ಥಿ,ಜನನ ಮರಣ ಪ್ರಮಾಣ ಪತ್ರ,ಖಾತಾ,ಕಂದಾಯ,ಕಟ್ಟಡ ರಹದಾರಿ,ಉದ್ದಿಮೆ ರಹದಾರಿ ಹಾಗೂ ಇತರೆ ಸರ್ಕಾರಿ ಸೇವಾ ಯೋಜನೆಗಳ ಕೆಲಸ ಕಾರ್ಯಗಳಿಗೆ ನೇರವಾಗಿ 9 ವಲಯ ಕಚೇರಿಗಳ ವಲಯ ಆಯಕ್ತರನ್ನ ನೇರವಾಗಿ ಭೇಟಿ ಮಾಡುವಂತೆ ಸೂಚಿಸಲಾಗಿದೆ…
Read More

ಸಫಾರಿ ವೇಳೆ ತಾಯಿ ಹುಲಿ ಹಾಗೂ ಮರಿಗಳ ದರುಶನ…ಪ್ರವಾಸಿಗರು ಖುಷ್…

ಹೆಚ್.ಡಿ.ಕೋಟೆ,ಡಿ12,Tv10 ಕನ್ನಡ ಸಫಾರಿ ವೇಳೆ ಪ್ರವಾಸಿಗರಿಗೆ ತಾಯಿ ಹುಲಿ ಹಾಗೂ ಮರಿಗಳ ದರುಶನವಾಗಿದೆ.ಹೆಚ್.ಡಿ ಕೋಟೆ ತಾಲೂಕಿನ ದಮ್ಮನಕಟ್ಟೆ ರೇಂಜಿನ ಸುಂಕದಕಟ್ಟೆಗೆ ತೆರಳುವ ಮಾರ್ಗದಲ್ಲಿ ಹುಲಿಮರಿಗಳು ತಾಯಿ ಜೊತೆ ಆಟವಾಡುವ ದೃಶ್ಯಗಳು ಸೆರೆಯಾಗಿದೆ.ನಬಿಲ್ ಖಾನ್ ಎಂಬುವರ ಕ್ಯಾಮರಾ ಕಣ್ಣಿಗೆ ತಾಯಿ ಹಾಗೂ ಹುಲಿಮರಿಗಳ ಚಿಣ್ಣಾಟ ಸೆರೆಯಾಗಿದೆ.ಪ್ರವಾಸಿಗರು ಖುಷಿಯಾಗಿದ್ದಾರೆ…
Read More

ಅಪರಾಧ ತಡೆ ಮಾಸಾಚರಣೆ…ಬೈಕ್ ರಾಲಿ ಮೂಲಕ ಪೊಲೀಸರಿಂದ ಜಾಗೃತಿ…

ಹುಣಸೂರು,ಡಿ10,Tv10 ಕನ್ನಡ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಹುಣಸೂರು ತಾಲೂಕಿನ ಬಿಳಿಕರೆ ಪೊಲೀಸರು ಬೈಕ್ ರಾಲಿ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಅಪರಿಚಿತ ವ್ಯಕ್ತಿಗಳು ಹಾಗೂ ವಂಚಕರ ಬಗ್ಗೆ ಎಚ್ಚರಿಕೆ ವಹಿಸಬೇಕು, ಬಾಲ್ಯ ವಿವಾಹ,ಒಬ್ಬಂಟಿ ಮಹಿಳೆಯರು ಸಂಚರಿಸುವಾಗ ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸುವುದು, ತಮ್ಮ ಆಭರಣಗಳ ಬಗ್ಗೆ ನಿಗಾವಹಿಸುವುದು, ವೃದ್ಧರ ಬಳಿ ಚಿನ್ನ ಪಾಲಿಶ್ ಮಾಡುವ ನೆಪದಲ್ಲಿ ಮೋಸ ಮಾಡುವುದು ಅಲ್ಲದೆ ಪೋಕ್ಸೊ ಕಾಯಿದೆ ಬಗ್ಗೆ, ಸಂಚಾರಿ
Read More

ಪಾನಮತ್ತ ಯುವಕರ ಗಲಾಟೆ…ಪ್ರಶ್ನೆ ಮಾಡಿದ ಪೊಲೀಸರಿಗೆ ವರ್ಗಾವಣೆ ಶಿಕ್ಷೆ…!!

ಕೆ.ಆರ್.ನಗರ,ಡಿ10,Tv10 ಕನ್ನಡ ಕುಡಿದು ಗಲಾಟೆ ಮಾಡಿದ ಯುವಕರನ್ನ ಪ್ರಶ್ನೆ ಮಾಡಿದ ಪೊಲೀಸರಿಗೆ ವರ್ಗಾವಣೆ ಶಿಕ್ಷೆಯಾಗಿದೆ.ಮೈಸೂರು ಜಿಲ್ಲೆ ಕೆ ಆರ್ ನಗರದಲ್ಲಿ ಘಟನೆ ಬೆಳಕಿಗೆ ಬಂದಿದೆ.ಕೆ.ಆರ್.ನಗರ ಪೊಲೀಸ್ ಠಾಣೆಪೊಲೀಸ್ ಕಾನ್ಸಟೇಬಲ್ ಪುನೀತ್ ಹಾಗೂ ಹರೀಶ್‌ಗೆ ವರ್ಗಾವಣೆ ಶಿಕ್ಷೆಯಾಗಿದೆ.ಐದು ದಿನದ ಹಿಂದೆ ಕೆ ಆರ್ ನಗರ ಪಟ್ಟಣದಲ್ಲಿ ಗಲಾಟೆ ನಡೆದಿತ್ತು.ಸಾರ್ವಜನಿಕ ಸ್ಥಳದಲ್ಲಿ ಕುಡಿಯುತ್ತಿದ್ದ ಯುವಕರನ್ನ ಕಾನ್ಸಟೇಬಲ್‌ಗಳಾದ ಪುನೀತ್ ಹಾಗೂ ಹರೀಶ್ ಪ್ರಶ್ನೆ ಮಾಡಿದ್ದಾರೆ.ಈ ವೇಳೆ ಪೊಲೀಸರ ಜೊತೆ ಯುವಕರ ಮಾತಿನ ಚಕಮಕಿ ನಡೆಸಿ
Read More