TV10 Kannada Exclusive

ರೈಲ್ವೆ ಹಳಿ ಬಳಿ ವಿಧ್ಯಾರ್ಥಿ ಶವ ಪತ್ತೆ…

ಕೊಲೆಯೋ..? ಆಕಸ್ಮಿಕವೋ…? ಮೈಸೂರು,ಆ21,Tv10 ಕನ್ನಡ ಮೈಸೂರಿನ ಉನ್ನತಿ ನಗರ ಬಡಾವಣೆಯ ರೈಲ್ವೇ ಹಳಿ ಬಳಿ ವಿದ್ಯಾರ್ಥಿ ಶವ ಪತ್ತೆಯಾಗಿದೆ.ಶಕ್ತಿ ನಗರದ ನಿವಾಸಿ ಹೃತ್ವಿಕ್ (17) ಶವ ಪತ್ತೆಯಾಗಿದೆ.ಮೈಸೂರಿನ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ.ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.ಹೃತ್ವಿಕ್ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರಾ ? ಅಥವಾ ಕೊಲೆಯಾಗಿದೆಯಾ ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದ್ದುತನಿಖೆ ಮುಂದುವರಿಸಿದ್ದಾರೆ…
Read More

ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿಗಳಿಂದ ಚಾಲನೆ…

ಮೈಸೂರು,ಆ21,Tv10 ಕನ್ನಡ Bh ದೇಶವು ಅಭಿವೃದ್ಧಿ ಹೊಂದಲು ಪ್ರತಿಯೊಬ್ಬರೂ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಂತರಾಗಿರಬೇಕು. ಈ ಉದ್ದೇಶದಿಂದ ಸರ್ಕಾರವು ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುತ್ತಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು. ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ವಾರಕ್ಕೆರಡು ಮೊಟ್ಟೆ ವಿತರಿಸುವ ಕಾರ್ಯಕ್ರಮಕ್ಕೆ ಸೋಮವಾರ ಮಹಾರಾಜ ಸರ್ಕಾರಿ ಪ್ರೌಢಶಾಲಾ
Read More

ಮಳೆಯಿಂದ ಹಾನಿಯಾದ ಮನೆಗಳಿಗೆ ಪರಿಹಾರ ವಿತರಿಸಲು ಕ್ರಮವಹಿಸಿ…ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ…

ಮೈಸೂರು,ಆ 21,Tv10 ಕನ್ನಡ ಅತಿಯಾದ ಮಳೆಯಿಂದ ಮನೆಗಳಿಗೆ ಹಾನಿಯಾಗಿರುವ ಸಂಬಂಧ ಅಧಿಕಾರಿಗಳು ಪರಿಶೀಲನೆ ನಡೆಸಿ ಪರಿಹಾರ ವಿತರಣೆಗೆ ಕೂಡಲೇ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ಸೂಚನೆ ನೀಡಿದ್ದಾರೆ.ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಪತ್ತು ನಿರ್ವಹಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಳೆ ಹಾನಿಯಿಂದ ಮನೆ ಬಿದ್ದು ಹೋಗಿರುವವರಿಗೆ ಪರಿಹಾರ ನೀಡಿ ಅವರಿಗೆ ಸೂರು ನಿರ್ಮಿಸಿ ಕೊಡಿ. ತಹಶೀಲ್ದಾರ್, ಕಾರ್ಯಪಾಲಕ ಅಭಿಯಂತರರು ಹಾಗೂ
Read More

KRS:ಚಿರತೆ ಆಯ್ತು…ಇದೀಗ ನಾಯಿ ಹಾವಳಿ…15 ಪ್ರವಾಸಿಗರಿಗೆ ಕಚ್ಚಿದ ನಾಯಿ…

ಮಂಡ್ಯ : ಚಿರತೆ ಬಳಿಕ KRS ನಲ್ಲಿ KRS:ಚಿರತೆ ಆಯ್ತು…ಇದೀಗ ನಾಯಿ ಹಾವಳಿ…15 ಪ್ರವಾಸಿಗರಿಗೆ ಕಚ್ಚಿದ ನಾಯಿ… ಮಂಡ್ಯ,ಆ21,Tv10 ಕನ್ನಡ ಕೆಲವು ದಿನಗಳ ಹಿಂದಷ್ಟೆ KRS ನಲ್ಲಿ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿದ್ದ ಕೆ.ಆರ್.ಎಸ್.ನಲ್ಲಿ ಇದೀಗ ನಾಯಿ ಹಾವಳಿ ಪ್ರವಾಸಿಗರನ್ನ ಬೆಚ್ಚಿ ಬೀಳಿಸಿದೆ.ಬೃಂದಾವನದ ಸೊಬಗು ನೊಡಲು ಬಂದ 15 ನಾಯಿ ಜನಕ್ಕೆ ಕಚ್ಚಿದೆ.ನಿನ್ನೆ ರಾತ್ರಿ KRS ನ ಬೃಂದಾವನದಲ್ಲಿ ಘಟನೆ ನಡೆದಿದೆ.ವೀಕೆಂಡ್ ಹಿನ್ನೆಲೆ ನಿನ್ನೆ KRS ಗೆ ಪ್ರವಾಸಿಗರ ದಂಡು
Read More

ಜಮೀನಿನಲ್ಲಿ ಬಿದ್ದ ಚಾಲಕ ರಹಿತ ವಿಮಾನ…DRDO ಗೆ ಸೇರಿದ ತಪಸ್ ವಿಮಾನ

ಚಿತ್ರದುರ್ಗ,ಆ20,Tv10 ಕನ್ನಡ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವದ್ದಿಕೆರೆಯ ಜಮೀನೊಂದರಲ್ಲಿ ಚಾಲಕ ರಹಿತ ತಪಸ್ ವಿಮಾನ ದರೆಗೆ ಉರುಳಿದೆ.DRDO ಸಿದ್ಧಪಡಿಸಿದ್ದ ಚಾಲಕ ರಹಿತ ವಿಮಾನ ಇದಾಗಿದೆ.ಚಳ್ಳಕೆರೆ ತಾಲೂಕಿನ ಕುದಾಪುರ ಬಳಿಯಿರುವ ಡಿಆರ್ ಡಿಓ ಸಂಸ್ಥೆಯ ವಿಮಾನ ನಿಯಂತ್ರಣಕ್ಕೆ ಸಿಲುಕದೆ ಉರುಳಿ ಬಿದ್ದಿದೆ.ಪರಿಕ್ಷಾರ್ಥ ಹಾರಾಟ ನಡೆಸುತ್ತಿದ್ದ ಡ್ರೋಣ್ ಮಾದರಿ ವಿಮಾನ ಸಿಡಿದು ತುಂಡು ತುಂಡಾಗಿ ಬಿದ್ದಿದೆ.ಸ್ಥಳೀಯರು ಕುತೂಹಲದಿಂದ ಸೇರಿದ್ದಾರೆ…
Read More

ಶಾಲಾ ಬಾಲಕಿ ಅಪಹರಣ ಯತ್ನ…ಹುಲ್ಲಹಳ್ಳಿ ಠಾಣೆಯಲ್ಲಿ ದೂರು ದಾಖಲು…

ಶಾಲಾ ಬಾಲಕಿ ಅಪಹರಣ ಯತ್ನ…ಹುಲ್ಲಹಳ್ಳಿ ಠಾಣೆಯಲ್ಲಿ ದೂರು ದಾಖಲು… ನಂಜನಗೂಡು,ಆ19,Tv10 ಕನ್ನಡ ನಂಜನಗೂಡಿನ ಹುಲ್ಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿ ಅಪಹರಣ ಯತ್ನ ನಡೆದಿದೆ. ಎರಡನೇ ತರಗತಿಯ ಅನುಷಾ ಎಂಬಾಕೆಯನ್ನ ಅಪಹರಿಸುವ ಯತ್ನ ನಡೆದಿದೆ. ಶೌಚಾಲಯಕ್ಕೆ ತೆರಳಿದ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಅಪಹರಿಸಲು ಯತ್ನಿಸಿದ್ದಾರೆ. ಬಾಲಕಿಯ ಬಾಯಿಗೆ ಬಟ್ಟೆ ತುರುಕಿ ಅಪಹರಿಸಲು ಯತ್ನಿಸಿದಾಗ ಕಿರುಚಾಡಿದ್ದಾಳೆ.ಅನುಷಾ ಕಿರುಚಾಡಿದ ಶಬ್ದಕ್ಕೆ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರುಗಳು ದೌಡಾಯಿಸಿದಾಗ ಬಾಲಕಿಯನ್ನ
Read More

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ವಿರೋಧ…ರೈತರ ಬಂಧನ…

ಟಿ.ನರಸೀಪುರ,ಆ19,Tv10 ಕನ್ನಡ ತಮಿಳುನಾಡಿಗೆ ನೀರು ಬಿಡುವುದನ್ನ ವಿರೋಧಿಸಿ ಟಿ ನರಸೀಪುರದಲ್ಲಿ ಅನ್ನದಾತರು ರಾಷ್ಟ್ರೀಯ ಹೆದ್ದಾರಿ ರಸ್ತೆತಡೆ ಚಳುವಳಿ ನಡೆಸಿದರು.ಪ್ರತಿಭಟನಾ ನಿರತ ರೈತರನ್ನ ಪೊಲೀಸರು ಬಂಧಿಸಿದರು.ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಕಬ್ಬುಬೆಳೆಗಾರರ ಸಂಘ.ಟಿ ನರಸೀಪುರ ತಾಲೂಕು ಘಟಕದ ವತಿಯಿಂದ ನೂರಾರು ರೈತರು ಪ್ರತಿಭಟನೆ ನಡೆಸಿದರು ರಾಷ್ಟ್ರೀಯ ಹೆದ್ದಾರಿ ಬಿಂದಿಗೆ ಫ್ಯಾಕ್ಟರಿ ಹತ್ತಿರ ರೈತರು ಸುಮಾರು ಒಂದು ಗಂಟೆ ಕಾಲ ರಸ್ತೆ ಬಂದ್ ಮಾಡಿ ಆಕ್ರೋಷ ವ್ಯಕ್ತಪಡಿಸಿದರು. ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು
Read More

ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ…ಆಶ್ರಯ ಯೋಜನೆಗೆ ಮೀಸಲಾದ ಜಮೀನು ಒತ್ತುವರಿ ತೆರುವು…ಮಳೆಯಲ್ಲೂ ಕಾರ್ಯಾಚರಣೆ…

ಮೈಸೂರು,ಆ19,Tv10 ಕನ್ನಡ ಬೆಳ್ಳಂಬೆಳಗ್ಗೆ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿದ್ದವರಿಗೆ ಮೈಸೂರು ತಾಲೂಕು ತಹಸೀಲ್ದಾರ್ ಬಿ.ಎನ್.ಗಿರೀಶ್ ಶಾಕ್ ಕೊಟ್ಟಿದ್ದಾರೆ.ಆಶ್ರಯ ಯೋಜನೆಗಾಗಿ ಮಂಜೂರಾಗಿದ್ದ ಸರ್ಕಾರಿ ಗೋಮಾಳ ರಕ್ಷಿಸಿದ್ದಾರೆ.ಸರ್ಕಾರಿ ಜಮೀನಿನಲ್ಲಿ ನಿರ್ಮಿಸಲಾದ ಹಸು ಕೊಟ್ಟಿಗೆಗಳನ್ನ ನೆಲಸಮ ಮಾಡಿ ತೆರುವುಗೊಳಿಸಿದ್ದಾರೆ.ಮಳೆಯನ್ನೂ ಲೆಕ್ಕಿಸದ ತಹಸೀಲ್ದಾರ್ ತೆರುವು ಕಾರ್ಯಾಚರಣೆ ನಡೆಸಿದ್ದಾರೆ. ಮೈಸೂರು ತಾಲೂಕು ಇಲವಾಲ ಹೋಬಳಿ ಆನಂದೂರು ಗ್ರಾಮದ ಸರ್ವೆ ನಂ 6 ಮೂಲತಃ ಸರ್ಕಾರಿ ಗೋಮಾಳ.1996 ರಲ್ಲಿ ಆಶ್ರಯ ಯೋಜನೆಗಾಗಿ 4 ಎಕ್ರೆ ಮಂಜೂರಾಗಿತ್ತು.ಸದರಿ ಜಮೀನಿನಲ್ಲಿ ಆನಂದೂರು
Read More

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯಕ್ಕೆ ದುರ್ದೆಸೆ ಪ್ರಾರಂಭವಾಗಿದೆ…ಮಾಜಿ ಸಚಿವ ಸಿ.ಟಿ.ರವಿ…

ಮೈಸೂರು,ಆ18,Tv10 ಕನ್ನಡ ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಹೋಗುತ್ತಾರೆ ಎಂಬ ವಿಚಾರಕ್ಕೆ ಮೈಸೂರಿನಲ್ಲಿ ಮಾಜಿ ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸ್ಅಧಿಕಾರ ಬಂದಾಗಿನಿಂದ ರಾಜ್ಯಕ್ಕೆ ದುರ್ದೆಸೆ ಶುರುವಾಗಿದೆ.ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕೆ.ಆರ್.ಎಸ್ ಭರ್ತಿಯಾಗದ ಸ್ಥಿತಿ ಇರಲಿಲ್ಲ.ಈಗ ರೈತರಿಗೆ ನೀರಿಲ್ಲ, ಜಲಾಶಯ ಖಾಲಿಯಾಗಿದೆ.ಪವರ್ ಕಟ್, ಲೋಡ್ ಶೆಡಿಂಗ್ ಶುರುವಾಗಿದೆ.ಶೂನ್ಯ ಬಿಲ್ ಅಂತಾರೆ, ಕರೆಂಟೇ ಇಲ್ಲದ ಮೇಲೆ ಶೂನ್ಯ ಬಿಲ್ ಬರುತ್ತೆ.ಇಂತಹ‌ ದುರ್ದೆಸೆ ಇರುವ ಸಂಧರ್ಭದಲ್ಲಿ ಕಾಂಗ್ರೆಸ್ ಗೆ ಶಾಸಕರು ಹೋಗುತ್ತಾರೆ ಎಂದು ನಂಬಲು
Read More

ತಮಿಳುನಾಡಿಗೆ ನೀರು…ನದಿಗೆ ಇಳಿದು ಪ್ರತಿಭಟನೆಗೆ ಮುಂದಾದ ರೈತರು…

ಟಿ.ನರಸೀಪುರ,ಆ18,Tv10 ಕನ್ನಡತಮಿಳುನಾಡಿಗೆ ಕಾವೇರಿ ನದಿ ನೀರು ಬಿಟ್ಟ ಹಿನ್ನೆಲೆಜಿಲ್ಲೆಯಾದ್ಯಂತ ರೈತರು ಪ್ರತಿಭಟನೆಗೆ ಇಳಿದಿದ್ದಾರೆ.ಕಾವೇರಿ ನದಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ.ಟಿ.ನರಸೀಪುರ ತಾಲ್ಲೂಕಿನ ತ್ರಿವೇಣಿಸಂಗಮದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಷ ವ್ಯಕ್ತಪಡಿಸಿದ್ದಾರೆ.ಕರ್ನಾಟಕ ರಾಜ್ಯ ರೈತ ಸಂಘಟನೆಯಿಂದ ಪ್ರತಿಭಟನೆ ನಡೆದಿದೆ.ರಾಜ್ಯ ಸರ್ಕಾರ ಮತ್ತು ತಮಿಳುನಾಡು ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದ್ದಾರೆ.ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರು ರೈತರ ಬಗ್ಗೆ ಕಾಳಜಿ ತೋರುತ್ತಿಲ್ಲ.ರೈತರ ಹಿತ ಕಾಪಾಡುವಲ್ಲಿ ಎಲ್ಲಾ ಸರ್ಕಾರಗಳು ವಿಫಲವಾಗಿವೆ.ಕಾವೇರಿ ನೀರು ಬಿಡುಗಡೆ ವಿಚಾರದ ಬಗ್ಗೆ ವಿಪಕ್ಷಗಳು ಕೂಡ
Read More