TV10 Kannada Exclusive

ಪಬ್ಲಿಕ್ ಸ್ಥಳಗಳಲ್ಲಿ ಸ್ಮೋಕಿಂಗ್ ವಿರುದ್ದ ಕುವೆಂಪುನಗರ ಠಾಣೆ ಪೊಲೀಸರ ಸಮರ…13,800 ರೂ ದಂಡ ವಸೂಲಿ…

ಪಬ್ಲಿಕ್ ಸ್ಥಳಗಳಲ್ಲಿ ಸ್ಮೋಕಿಂಗ್ ವಿರುದ್ದ ಕುವೆಂಪುನಗರ ಠಾಣೆ ಪೊಲೀಸರ ಸಮರ…13,800 ರೂ ದಂಡ ವಸೂಲಿ… ಮೈಸೂರು,ಜು21,Tv10 ಕನ್ನಡಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುತ್ತಾ ಮುಜುಗರ ತರುವ ಯುವಕರಿಗೆ ಕುವೆಂಪುನಗರ ಠಾಣೆ ಪೊಲೀಸರು ಬಿ ಸಿ ಮುಟ್ಟಿಸಿದ್ದಾರೆ. ಯುವಕರಿಗೆ ಟೀ ಕೊಟ್ಟು ಸಿಗರೇಟ್ ಸೇದಲು ಅವಕಾಶ ಕಲ್ಪಿಸಿಕೊಟ್ಟ ಚಾಯ್ ವಾಲಾಗಳಿಗೂ ಬಿಸಿ ಮುಟ್ಟಿಸಿದ್ದಾರೆ.ಸಿಗರೇಟ್ ಸೇದುತ್ತಾ ಕಾಲಹರಣ ಮಾಡುತ್ತಿದ್ದ ಯುವಕರಿಗೆ ದಂಡ ವಿಧಿಸಲಾಗಿದೆ.ಸ್ಮೋಕ್ ಮಾಡಿದವರಿಗೆ ತಲಾ 100 ರೂ ದಂಡ ವಿಧಿಸಿದರೆ.ಟೀ ಅಂಗಡಿ ಮಾಲೀಕರಿಗೆ
Read More

ಬಿರುಗಾಳಿಗೆ ಉರುಳಿಬಿದ್ದ ಭಾರಿ ಮರ…5 ವಿದ್ಯುತ್ ಕಂಬಗಳಿಗೆ ಹಾನಿ…

ಹುಣಸೂರು,ಜು21,Tv10 ಕನ್ನಡಬಿರುಗಾಳಿ ಹಿನ್ನಲೆ ಭಾರಿ ಮರ ವಿದ್ಯುತ್ ತಂತಿ ಮೇಲೆ ಉರುಳಿ ಬಿದ್ದಿದೆ.ಪರಿಣಾಮ 5 ವಿದ್ಯುತ್ ಕಂಬಗಳು ಧರೆಗುರುಳಿದೆ.ಕೂಡಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಅನಾಹುತ ತಪ್ಪಿಸಲಾಗಿದೆ.ಹುಣಸೂರು ತಾಲೂಕು ತೆಂಕನಕೊಪ್ಪಲು ಗ್ರಾಮದಲ್ಲಿ ಘಟನೆ ನಡೆದಿದೆ.ಕೆಲಕಾಲ ವಾಹನ ಸಂಚಾರ ಸ್ಥಗಿತಗೊಳಿಸಿ ಉರುಳಿಬಿದ್ದ ಮರವನ್ನ ತೆರುವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ…
Read More

*ವಿದ್ಯಾರ್ಥಿ ಜೀವನ ಮಹತ್ವ ಪೂರ್ಣವಾದ ಹಂತ- ಡಿ ಆರ್ ರಮೇಶ್

KR ಪೇಟೆ TV10 ಕನ್ನಡ.ವಿದ್ಯಾರ್ಥಿ ಜೀವನ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಮಹತ್ವವಾದ ಹಂತ .ಈ ಹಂತದಲ್ಲಿ ಶಿಸ್ತು, ಸಂಯಮ, ವಿಧೇಯತೆ , ಕಲಿಕೆ, ಮುಂತಾದ ಉದಾತ್ತ ಮೌಲ್ಯ ಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅಂತಹ ವಿದ್ಯಾರ್ಥಿಗಳು ಉನ್ನತ ಹಂತಕ್ಕೆ ಹೋಗಲು ಸಾಧ್ಯ ಎಂದು ಶ್ರೀ ಡಿ ಆರ್ ರಮೇಶ್ ಹಿರಿಯ ಉಪನ್ಯಾಸಕರು ಹಾಗೂ ಅಧ್ಯಕ್ಷರು ಕರ್ನಾಟಕ ರಾಜ್ಯ ಬಡ್ತಿ ಉಪನ್ಯಾಸಕರ ಸಂಘ ಇವರು ಸರ್ಕಾರಿ ಪದವಿ ಪೂರ್ವ ಕಾಲೇಜು ಬಲ್ಲೇನಹಳ್ಳಿ ಕೆ.ಆರ್ ಪೇಟೆ
Read More

ಆಕ್ರೋಶದ ಕೈಗೆ ಬುದ್ಧಿಕೊಟ್ಟು ಅನರ್ಥಕ್ಕೆ ಅವಕಾಶ ಬೇಡ…ಮಣಿಪುರ ಜನತೆಗೆ ಪೇಜಾವರ ಶ್ರೀ ಮನವಿ…

ಮೈಸೂರು,ಜು21,Tv10 ಕನ್ನಡ ದೇಶದ ಅವಿಭಾಜ್ಯಅಂಗವಾಗಿರುವ ಮಣಿಪುರ ರಾಜ್ಯದಲ್ಲಿ ಇತ್ತೀಚಿನ‌ ದಿನಗಳಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಬೆಳವಣಿಗೆಗಳಿಂದ ಮನಸ್ಸಿಗೆ ತುಂಬ ವಿಷಾದವಾಗಿದೆ .ಜಗತ್ತಿಗೇ ಅಹಿಂಸೆ ಶಾಂತಿಯ ಮಂತ್ರವನ್ನು ಅತ್ಯಂತ ಪರಿಣಾಮಕಾರಿಯಾಗಿ ಬೋಧಿಸಿದ ಭಾರತದ ಯಾವುದೇ ಭಾಗದಲ್ಲಿ ಇಂಥ ವಿಲಕ್ಷಣ ಬೆಳವಣಿಗೆಗಳು ನಡೆಯಬಾರದು. ಅದು ನಮಗೆ ಬದುಕು ಕೊಟ್ಟ ನೆಲಕ್ಕೆ ನಾವು ಮಾಡುವ ಅವಮಾನವಾಗುತ್ತದೆ .ಪ್ರಪಂಚದ ಸಮಗ್ರ ಇತಿಹಾಸವನ್ನು ಗಮನಿಸಿದರೆ ಹಿಂಸೆ ಆಕ್ರಮಣ ಅತ್ಯಾಚಾರಗಳಿಂದ ಯಾರೂ ಯಾವ ದೇಶವೂ ಏನನ್ನೂ ಸಾಧಿಸಿಲ್ಲ. ನಮ್ಮ ರಾಮಾಯಣ
Read More

ಬಾಲಕಾರ್ಮಿಕರ ರಕ್ಷಣೆಗೆ ಒತ್ತು…ಅಂಗಡಿ ಮುಂಗಟ್ಟುಗಳ ಮೇಲೆ ಅಧಿಕಾರಿಗಳು ಧಿಢೀರ್ ದಾಳಿ…

ಪಿರಿಯಾಪಟ್ಟಣ,ಜು21,Tv10 ಕನ್ನಡಬಾಲಕಾರ್ಮಿಕ ಪಿಡುಗನ್ನ ನಿರ್ಮೂಲನೆ ಮಾಡಲು ಕಾರ್ಮಿಕ ಇಲಾಖೆ ಅಧಿಕಾರಿಗಳು ಒತ್ತು ನೀಡಿದ್ದಾರೆ.ಇಂದು ಪಿರಿಯಾಪಟ್ಟಣದ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಬಾಲ ಕಾರ್ಮಿಕರನ್ನ ಬಳಸಿಕೊಳ್ಳುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು.ದಾಳಿ ವೇಳೆ ಬಾಲ ಕಾರ್ಮಿಕರು ಕಂಡು ಬಂದಿಲ್ಲ.ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಬರಿಗೈಲಿ ಹಿಂದಿರುಗಿದರು.ಹುಣಸೂರು ತಾಲೂಕು ಶಿರಸ್ತೇದಾರ್ ಶಕೀಲಾಬಾನು ಹಾಗೂ ಕಾರ್ಮಿಕ ಇಲಾಖೆ ನಿರೀಕ್ಷಕರಾದ ಆರ್.ರವಿ ನೇತೃತ್ವದಲ್ಲಿ ದಾಳಿ ಪ್ರಕ್ರಿಯೆ ನಡೆಯಿತು.ಬಾಲಕಾರ್ಮಿಕ ಯೋಜನಾ ಸಂಘದ ನಿರ್ದೇಶಕರಾದ ಕೆ.ಪಿ.ಮಲ್ಲಿಕಾರ್ಜುನ್,ಪಿರಿಯಾಪಟ್ಟಣ ಠಾಣೆ ಪಿಎಸ್ಸೂ ಸುರೇಶ್
Read More

ಲೋಕಸಭೆ ಅಧಿವೇಶನ…ದಿ.ಧ್ರುವನಾರಾಯಣ್ ಗೆ ಶ್ರದ್ಧಾಂಜಲಿ ಅರ್ಪಿಸಿ…ಸ್ಪೀಕರ್ ಗೆ ಸಂಸದ ಪ್ರತಾಪ್ ಸಿಂಹ ಪತ್ರ…

ಮೈಸೂರು,ಜು21,Tv10 ಕನ್ನಡ ಲೋಕಸಭೆ ಅಧಿವೇಶನ ಪ್ರಾರಂಭದ ದಿನ ಮೃತ ಮಾಜಿ ಮತ್ತು ಹಾಲಿ ಸಂಸದರಿಗೆ ಶ್ರದ್ಧಾಂಜಲಿ ಅರ್ಪಿಸುವುದು ವಾಡಿಕೆ. ಆದರೆ ನಿನ್ನೆ ಶ್ರದ್ಧಾಂಜಲಿ ಅರ್ಪಿಸುವಾಗ ಇತ್ತೀಚೆಗೆ ನಿಧನರಾದ ಮಾಜಿ ಸಂಸದ ಆರ್. ಧ್ರುವನಾರಾಯಣ್ ರವರ ಹೆಸರು ಬಿಟ್ಟು ಹೋಗಿತ್ತು. ಇಂದು ಸ್ಪೀಕರ್ ಅವರನ್ನು ಭೇಟಿಯಾದ ಸಂಸದ ಪ್ರತಾಪ್ ಸಿಂಹ ರವರು ಶ್ರದ್ಧಾಂಜಲಿ ಸಲ್ಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.ಈ ಬಗ್ಗೆ ಪತ್ರ ಬರೆದಿದ್ದಾರೆ…
Read More

ವಿಧ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಮೈಸೂರು ವಿವಿ…ಒಂದು ವಾರ ಪರೀಕ್ಷೆ ಮುಂದೂಡಿಕೆ…

ಮೈಸೂರು,ಜು21,Tv10 ಕನ್ನಡಪರೀಕ್ಷೆ ಮುಂದೂಡಿಕೆಗಾಗಿ ವಿಧ್ಯಾರ್ಥಿಗಳು ನಡೆಸಿದ ಪ್ರತಿಭಟನೆಗೆ ಮೈಸೂರು ವಿವಿ ಮಣಿದಿದೆ.ಪರೀಕ್ಷೆಗಳನ್ನ ಒಂದು ವಾರ ಕಾಲ ಮುಂದೂಡಿದೆ.ನಿನ್ನೆ ಮೈಸೂರು ವಿವಿ ಮುಂಭಾಗಪದವಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ‌ ನಡೆಸಿದ್ದರು.ಪದವಿ ಕಾಲೇಜುಗಳು ಕೇವಲ 2 ತಿಂಗಳಷ್ಟೇ ನಡೆದಿದೆ.ಸರಿಯಾಗಿ ಪಾಠ ಪ್ರವಚನ ನಡೆಸಿಲ್ಲ.ಕನಿಷ್ಠ 15ದಿನಗಳ ಕಾಲ ಪರೀಕ್ಷೆ ಮುಂದೂಡಬೇಕೆಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಮೈಸೂರು ವಿವಿ ಒಂದು ವಾರ ಪರೀಕ್ಷೆ ಮುಂದೂಡಿದೆ.24-7-2023ರಿಂದ ನಿಗದಿಯಾಗಿದ್ದ ಪರೀಕ್ಷಾ ವೇಳಾ ಪಟ್ಟಿ.1-8-2023ರಿಂದ 30-8-2023ರ ವರೆಗೆ ನಡೆಸಲು
Read More

ಜಿಂಕೆ ಮಾಂಸ ಸುಲಿದ ಪ್ರಕರಣ…7 ತಿಂಗಳಾದರೂ ಚೆಳ್ಳೆಹಣ್ಣು ತಿನ್ನಿಸುತ್ತಿರುವ ಆರೋಪಿಗಳು…ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶೇಮ್..ಶೇಮ್…

ಜಿಂಕೆ ಮಾಂಸ ಸುಲಿದ ಪ್ರಕರಣ…7 ತಿಂಗಳಾದರೂ ಚೆಳ್ಳೆಹಣ್ಣು ತಿನ್ನಿಸುತ್ತಿರುವ ಆರೋಪಿಗಳು…ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶೇಮ್..ಶೇಮ್… ನಂಜನಗೂಡು,ಜು20,Tv10 ಕನ್ನಡನಂಜನಗೂಡು ತಾಲೂಕು ದೊಡ್ಡಕವಲಂದೆ ಅರಣ್ಯ ಪ್ರದೇಶದಲ್ಲಿ ಜಿಂಕೆ ಮಾಂಸ ಸುಲಿದ ಆರೋಪಿಗಳನ್ನ 7 ತಿಂಗಳಾದರೂ ಪತ್ತೆ ಹಚ್ಚುವಲ್ಲಿ ಅರಣ್ಯಾಧಿಕಾರಿಗಳು ವಿಫಲರಾಗಿದ್ದಾರೆ.18-02-2023 ರಲ್ಲಿ ಪ್ರಕರಣ ದಾಖಲಾಗಿತ್ತು.ರಾತ್ರಿ ಗಸ್ತು ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದರು.ಇಲಾಖೆಯ ವಾಹನ ಕಂಡ ತಕ್ಷಣ ಆರೋಪಿಗಳು ಎಸ್ಕೇಪ್ ಆಗಿದ್ದರು.ಸ್ಥಳದಲ್ಲಿ ಚರ್ಮ ಸುಲಿದ ಜಿಂಕೆ ಕಳೇಬರ,ಮಹೀಂದ್ರ ಜೀಪ್,ಚರ್ಮ ಸುಲಿಯಲು ಬಳಸಿದ
Read More

ಗ್ರಾಮ ಆಡಳಿತ ಅಧಿಕಾರಿಗಳ ಕರ್ತವ್ಯ ನಿಯೋಜನೆ ಆದೇಶ ರದ್ದುಪಡಿಸುವುದನ್ನ ತಡೆಹಿಡಿಯಿರಿ…ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ

ಗ್ರಾಮ ಆಡಳಿತ ಅಧಿಕಾರಿಗಳ ಕರ್ತವ್ಯ ನಿಯೋಜನೆ ಆದೇಶ ರದ್ದುಪಡಿಸುವುದನ್ನ ತಡೆಹಿಡಿಯಿರಿ…ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ಮನವಿ… ಬೆಂಗಳೂರು,ಜು19,Tv10 ಕನ್ನಡನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ,ಕಂದಾಯ ಇಲಾಖೆ ಇತರೆ ಅಧಿಕಾರಿಗಳ ಹಾಗೂ ನೌಕರರ ನಿಯೋಜನೆ ಆದೇಶ ರದ್ದುಪಡಿಸಿ ಮೂಲ ಸ್ಥಾನಕ್ಕೆ ವರದಿ ಮಾಡಿಕೊಳ್ಳಲು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹೊರಡಿಸಿರುವ ಆದೇಶವನ್ನ ತಡೆಹಿಡಿಯುವಂತೆ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಅಧ್ಯಕ್ಷರು
Read More

ಮಂಡ್ಯ ಉಪವಿಭಾಗಾಧಿಕಾರಿಯಾಗಿ ಎಂ.ಶಿವಮೂರ್ತಿ ನೇಮಕ

ಮಂಡ್ಯ: ಮಂಡ್ಯ ಉಪವಿಭಾಗಾಧಿಕಾರಿಯಾಗಿ ಎಂ.ಶಿವಮೂರ್ತಿ ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಮಂಡ್ಯ ಉಪವಿಭಾಗಾಧಿಕಾರಿ (ಪ್ರಭಾರಿ) ಯಾಗಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಕೃಷ್ಣಕುಮಾರ್ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ಸ್ಥಾನಕ್ಕೆ ಎಂ.ಶಿವಮೂರ್ತಿ ಅವರಿಗೆ ಪದೋನ್ನತಿ ನೀಡಿ ಮಂಡ್ಯ ಉಪವಿಭಾಗಾಧಿಕಾರಿಯಾಗಿ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ. ಎಂ.ಶಿವಮೂರ್ತಿ ಅವರು ಈ ಹಿಂದೆ ಕೆ.ಆರ್.ಪೇಟೆಯಲ್ಲಿ ಮೂರು ವರ್ಷ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ನಂಜನಗೂಡಿನಲ್ಲಿ ತಹಶಿಲ್ದಾರ್ ಆಗಿ ಕೆಲಸ
Read More