TV10 Kannada Exclusive

ಸಭಾಧ್ಯಕ್ಷರ ಪೀಠಕ್ಕೆ ಅಗೌರವ ಆರೋಪ…10 ಬಿಜೆಪಿ ಶಾಸಕರಿಗೆ ಅಧಿವೇಶನದಲ್ಲಿ ಭಾಗವಹಿಸದಂತೆ ಅಮಾನತು…

ಬೆಂಗಳೂರು,ಜು19,Tv10 ಕನ್ನಡಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ ಹಿನ್ನಕೆ ಬಿಜೆಪಿಯ10 ಶಾಸಕರು ಅಧಿವೇಶನ ಪಾಲ್ಗೊಳ್ಳದಂತೆ ಅಮಾನತು ಪಡಿಸಿ ಆದೇಶ ಹೊರಡಿಸಲಾಗಿದೆ. ಅಶಿಸ್ತಿನಿಂದ ವರ್ತಿಸಿದ ಆರೋಪದ ಮೇರೆಗೆ ಬಿಜೆಪಿಯ 10 ಶಾಸಕರನ್ನು ಪ್ರಸಕ್ತ ಅಧಿವೇಶನ ಮುಗಿಯುವರೆಗೂ ವಿಧಾನಸಭೆ ಕಾರ್ಯಕಲಾಪದಲ್ಲಿ ಪಾಲ್ಗೊಳ್ಳದಂತೆ ಅಮಾನತ್ತು ಮಾಡಲಾಗಿದೆ.ಬಿಜೆಪಿ ಶಾಸಕರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ವಿ. ಸುನಿಲ್ ಕುಮಾರ್, ಆರ್.ಅಶೋಕ್, ಅರವಿಂದ ಬೆಲ್ಲದ್, ಧೀರಜ್ ಮುನಿರಾಜ್, ವೇದವ್ಯಾಸಕಾಮತ್, ಯಶಪಾಲ್ ಸುವರ್ಣ, ಉಮಾನಾಥ್ ಕೋಟ್ಯಾನ್, ಆರಗ ಜ್ಞಾನೇಂದ್ರ, ವೈ. ಭರತ್ ಶೆಟ್ಟಿ
Read More

ಸದನದಲ್ಲಿ ಮೊಳಗಿದ ಮಹಾಘಟಬಂಧನ್ ಸಭೆ ಎಫೆಕ್ಟ್…ಪ್ರತಿಪಕ್ಷಗಳ ಪ್ರತಿಭಟನೆ…

ಬೆಂಗಳೂರು,ಜು19,Tv10 ಕನ್ನಡಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಮಹಾಘಟಬಂಧನ್ ಸಭೆ ಪ್ರಕ್ರಿಯೆಯಲ್ಲಿ ಐಎಎಸ್ ಅಧಿಕಾರಿಗಳನ್ನ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ಪ್ರತಿಪಕ್ಷಗಳು ಸದನದಲ್ಲಿ ಪ್ರತಿಭಟನೆ ನಡೆಸಿದವು. ಎರಡು ದಿನಗಳ ಮಹಾಘಟಬಂಧನ್ ಸಭೆಗೆ ಬೇರೆ ರಾಜ್ಯಗಳಿಂದ ಬಂದಿದ್ದ ಗಣ್ಯರ ಅತಿಥಿ ಸೇವೆಗೆ ಐಎಎಸ್ ಅಧಿಕಾರಿಗಳನ್ನು ಬಳಸಿ ಕೊಳ್ಳಲಾಗಿದೆ ಎಂದು ಆರೋಪಿಸಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದರು.ಸದನ ಸಮಾವೇಶಗೊಂಡ ಕೂಡಲೇ ಬಿಜೆಪಿಯ ಆರ್ ಅಶೋಕ್ ಈ ವಿಷಯ ಪ್ರಸ್ತಾಪಿಸಿ ಕಾಂಗ್ರೆಸ್ ನೇತೃತ್ವದ ಸರ್ಕಾರ
Read More

ಪಿಟಿಸಿಎಲ್ ಕಾಯ್ದೆ ತಿದ್ದುಪಡಿಗೆ ವಿಶೇಷ ಸಚಿವ ಸಂಪುಟ ಸಭೆ.

ಬೆಂಗಳೂರು ಜುಲೈ,19,2023(tv10kannada ನುಡಿದಂತೆ ನಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದ್ಧತೆಗೆ ಮತ್ತೊಂದು ಸೇರ್ಪಡೆ “ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಮೀನು ಪರಭಾರೆ ನಿಷೇಧ (ತಿದ್ದುಪಡಿ) ಮಸೂದೆ.ಚುನಾವಣೆ ಪೂರ್ವ ಕೊಟ್ಟಿದ್ದ ಮಾತಿನಂತೆ ಮೊದಲ ಅಧಿವೇಶನದಲ್ಲೇ ತಿದ್ದುಪಡಿ ಮಸೂದೆ ಮಂಡಿಸಲು ವಿಶೇಷ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದಿದ್ದಾರೆ. ವಿಶೇಷ ಸಚಿವ ಸಂಪುಟ ಸಭೆ ನಡೆಸುವುದಕ್ಕೆ ಎರಡು ದಿನಗಳ ಮೊದಲು ದಲಿತ ಸಮುದಾಯಗಳ ಮುಖಂಡರು, ವಕೀಲರುಗಳ ಸಭೆ ನಡೆಸಿದ್ದರು. ಈ ಸಭೆಯಲ್ಲಿ
Read More

ಬೆಂಗಳೂರಿನಲ್ಲಿ ಐದು ಮಂದಿ ಶಂಕಿತ ಉಗ್ರರ ಬಂಧನ…ರಾಜಧಾನಿಯಲ್ಲಿ ಆತಂಕ…

ಬೆಂಗಳೂರು,ಜು19,Tv10 ಕನ್ನಡ ಎನ್.ಐ.ಎ.ಹಾಗೂ ಸಿಸಿಬಿ ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬೆಂಗಳೂರು ‌ಮಹಾನಗರದಲ್ಲಿಐದು ಮಂದಿ ಶಂಕಿತ ಉಗ್ರರ‌ಉ ಸೆರೆ ಸಿಕ್ಕಿದ್ದಾರೆ.ಶಂಕಿತರ ಬಂಧನ ಸುದ್ದಿ ಹರಡುತ್ತಿದ್ದಂತೆ ನಗರದ ಜನತೆ ಆತಂಕಕ್ಕೀಡಾಗಿದ್ದಾರೆ.ಉಗ್ರರ ಜೊತೆ ಸಂಪರ್ಕ ಸಾಧಿಸಿ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಸ್ಫೋಟಕ್ಕೆ ಸಂಚು ರೂಪಿಸಿದ್ದ ಐದು ಮಂದಿ ಶಂಕಿತ ಉಗ್ರರನ್ನು ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ಪೊಲೀಸ್
Read More

ಸಾರ್ವಜನಿಕರಿಗೆ ಅಭಯ…ಕಿಡಿಗೇಡಿಗಳಿಗೆ ಎಚ್ಚರಿಕೆ ಗಂಟೆ…ನೈಟ್ ಬೀಟ್ ಬಿಗಿಗೊಳಿಸಿದ ಉದಯಗಿರಿ ಠಾಣಾ ಪೊಲೀಸರು…

ಸಾರ್ವಜನಿಕರಿಗೆ ಅಭಯ…ಕಿಡಿಗೇಡಿಗಳಿಗೆ ಎಚ್ಚರಿಕೆ ಗಂಟೆ…ನೈಟ್ ಬೀಟ್ ಬಿಗಿಗೊಳಿಸಿದ ಉದಯಗಿರಿ ಠಾಣಾ ಪೊಲೀಸರು… ಮೈಸೂರು,ಜುಲೈ18,Tv10 ಕನ್ನಡರಾತ್ರಿ ವೇಳೆ ಕೈಚಳಕ ನಡೆಸುವ ಕಿಡಿಗೇಡಿಗಳಿಗೆ ಉದಯಗಿರಿ ಠಾಣಾ ಪೊಲೀಸರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.ರಾತ್ರಿ ಗಸ್ತನ್ನ ಬಿಗಿಗೊಳಿಸುವ ಮೂಲಕ ಸಾರ್ವಜನಿಕರಿಗೆ ಅಭಯ ನೀಡಿದ್ದಾರೆ.ಉದಯಗಿರಿಯ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಉದಯಗಿರಿ ಠಾಣಾ ಸಿಬ್ಬಂದಿಗಳಿಗೆ ದೇವರಾಜ ಉಪವಿಭಾಗದ ಎಸಿಪಿ ಶಾಂತಮಲ್ಲಪ್ಪ ರವರು ರಾತ್ರಿ ಗಸ್ತಿನ ಬಗ್ಗೆ ಖಡಕ್ ಸೂಚನೆ ನೀಡಿದ್ದಾರೆ.ತಮ್ಮ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ಬಗ್ಗೆ ಎಚ್ಚರಿಕೆ ವಹಿಸುವಂತೆ
Read More

ಕಡಲ ತೀರದಲ್ಲಿ ಅಪರೂಪದ ಆಕರ್ಷಕ ಬಣ್ಣದ ಅರೋಳಿ ಮೀನು ಪತ್ತೆ…

ಸೂರತ್ಕಲ್,ಜು18,Tv10 ಕನ್ನಡಬಲುಅಪರೂಪ ಹಾಗೂ ಆಕರ್ಷಕ ಬಣ್ಣದಿಂದ ರಚನೆಯಾದ ಆರೋಳಿ ಮೀನು ಪತ್ತೆಯಾಗಿದೆ.ಸುರತ್ಕಲ್ ಬಳಿ ಗುಡ್ಡೆ ಕೊಪ್ಪಳ ಬೀಚ್ ಬಳಿ ಪತ್ತೆಯಾಗಿದೆ.ಸಂಜೆಯಹೊತ್ತು ನಡೆದುಕೊಂಡು ಹೋಗುವಾಗ ಬಲು ಆಕರ್ಷಣೆಯ ಬಣ್ಣ ಹೊಂದಿದ ಆರೋಳಿ ಮೀನು ಅನುಪಮಾ ಶಿವರಾಂ ರವರ ಗಮನಕ್ಕೆ ಬಂದಿದೆ. ನೋಡಲು ಕನ್ನಡಿ ಹಾವಿನಂತಿದೆ. ಆದರೆ ಆರೋಳಿ ಮೀನು ಹೆಚ್ಚಾಗಿ ಕೆಂಪು ಬಣ್ಣದಿಂದ ಕೂಡಿರುತ್ತದೆ. ಈ ಮೀನು ಬಣ್ಣ ಮಾತ್ರ ಅಪರೂಪವಾಗಿದೆ.ಹೆಚ್ಚಾಗಿ ಮೀನಿನ ಬಗ್ಗೆ ಸ್ಥಳೀಯವಾಗಿ ಮಾಹಿತಿ ಇರುವ ಮಲ್ಪೆಯ ರೋಹಿತ್
Read More

ದೇವಾಲಯಗಳಲ್ಲಿ ಮೊಬೈಲ್ ಬಳಕೆಗೆ ನಿಷೇಧ…ಸರ್ಕಾರದಿಂದ ಮಹತ್ತರ ಆದೇಶ…

ಮೈಸೂರು,ಜು17,Tv10 ಕನ್ನಡಧಾರ್ಮಿಕದತ್ತಿ ಇಲಾಖೆಗೆ ಒಳಪಡುವ ದೇವಾಲಯಗಳಲ್ಲಿ ಮೊಬೈಲ್ ಬಳಕೆಗೆ ನಿಷೇಧ ಹೇರಲಾಗಿದೆ.ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಪಿ.ಹೇಮಂತರಾಜು ಸುತ್ತೋಲೆ ಹೊರಡಿಸಿದ್ದಾರೆ.ದೇವಾಲಯಗಳಲ್ಲಿ ದರುಶನಕ್ಕೆ ಬರುವ ಭಕ್ತರಿಗೆ ಏಕಮನಸ್ಸಿನಿಂದ ಧ್ಯಾನ ಪೂಜೆಗಳಿಗೆ ತೊಂದರೆಯಾಗುತ್ತಿರಯವ ಹಿನ್ನಲೆ ಮೊಬೈಲ್ ಬಳಕೆಗೆ ನಿಷೇಧಿಸಲಾಗಿದೆ.ಇಂದಿನಿಂದ ನಿಯಮ ಜಾರಿಗೆ ತರಲಾಗಿದೆ.ಇನ್ಮುಂದೆ ದೇವಾಲಯಗಳಿಗೆ ತೆರಳುವ ಭಕ್ತರು ಪ್ರವೇಶಕ್ಕೂ ಮುನ್ನ ಮೊಬೈಲ್ ಸ್ವಿಚ್ ಆಫ್ ಮಾಡುವಂತೆ ಸೂಚಿಸಲಾಗಿದೆ…
Read More

ಕೆಲಸವನ್ನು ನಿರ್ವಹಿಸಬೇಕಾದರೆ ಶಿಸ್ತು ಅತಿಮುಖ್ಯ : ಡಾ.ಕುಮಾರ

ಮಂಡ್ಯ,ಜು,17:-ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವುದು ಭಾಗ್ಯ ಮತ್ತು ಪುಣ್ಯದ ಕೆಲಸವಾಗಿದ್ದು ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವವರು ಬಹಳ ಶಿಸ್ತಿನಿಂದ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ರವರು ಹೇಳಿದರು ಜಿಲ್ಲಾಡಳಿತ ಇವರ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳಿಗೆ ಇಂದಿನಿಂದ ಜುಲೈ28 ರವರೆಗೆ ನಡೆಸಲಾಗುತ್ತಿರುವವೃತ್ತಿ ಬುನಾದಿ ತರಬೇತಿ ಕಾರ್ಯಕ್ರಮವನ್ನುಉದ್ಘಾಟಿಸಿ ಅವರು ಮಾತನಾಡಿದರು. ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಸಿಗುವ ಗೌರವಕ್ಕಿಂತ ಹೆಚ್ಚಿನ ಗೌರವವನ್ನು
Read More

ಚಿರತೆ ಸೆರೆಹಿಡಿದು ಬೈಕ್ ನಲ್ಲಿ ಹೊತ್ತೊಯ್ದ ಯುವಕ…ವಿಡಿಯೋ ವೈರಲ್…

ಚಿರತೆ ಸೆರೆಹಿಡಿದು ಬೈಕ್ ನಲ್ಲಿ ಹೊತ್ತೊಯ್ದ ಯುವಕ…ವಿಡಿಯೋ ವೈರಲ್… ಹಾಸನ,ಜು15,Tv10 ಕನ್ನಡತನ್ನ ಮೇಲೆ ದಾಳಿ ನಡೆಸಲು ಬಂದ ಚಿರತೆಯನ್ನ ಸೆರೆಹಿಡಿದ ಯುವಕನೋರ್ವ ತನ್ನ ಬೈಕ್ ನಲ್ಲಿ ಕಟ್ಟಿಕೊಂಡು ಹೊತ್ತೊಯ್ದ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಬಾಗಿವಾಳು ಗ್ರಾಮದಲ್ಲಿ ನಡೆದಿದೆ.ಬೈಕ್ ನಲ್ಲಿ ಕಟ್ಟಿ ಸಾಗಿಸಿದ ವಿಡಿಯೋ ವೈರಲ್ ಆಗಿದೆ. ಸೆರೆ ಹಿಡಿದ ಚಿರತೆಯನ್ನ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾನೆ.ವೇಣುಗೋಪಾಲ್ ಅಲಿಯಾಸ್ ಮುತ್ತು ಚಿರತೆ ಹಿಡಿದ ಯುವಕನಾಗಿದ್ದಾನೆ.ಬೆಳಗ್ಗೆ ತಮ್ಮ‌ಜಮೀನಿಗೆ ಹೋಗಿದ್ದ ವೇಳೆ ಚಿರತೆ
Read More

ಮೈಸೂರು:ಗುಮ್ನಾಜ್ ಉರುಸ್ ಸಂಭ್ರಮಾಚರಣೆ…ಶಾಸಕ ತನ್ವೀರ ಸೇಠ್ ಭಾಗಿ…

ಮೈಸೂರು:ಗುಮ್ನಾಜ್ ಉರುಸ್ ಸಂಭ್ರಮಾಚರಣೆ…ಶಾಸಕ ತನ್ವೀರ ಸೇಠ್ ಭಾಗಿ… ಮೈಸೂರು,ಜು15,Tv10 ಕನ್ನಡಬಮ್ನಿಮಂಟಪದ ಗುಮ್ನಾಜ್ ದರ್ಗಾದಲ್ಲಿ ಉರುಸ್ ಸಂಭ್ರಮಾಚರಣೆ ಮನೆ ಮಾಡಿದೆ.ಸಹಸ್ರಾರು ಮುಸ್ಲಿಂ ಭಾಂಧವರು ದರ್ಗಾಗೆ ಆಗಮಿಸಿ ದರುಶನ ಪಡೆದರು.ಮೈಸೂರು ಜಿಲ್ಲೆಯ ವಿವಿದೆಡೆಯಿಂದ ಬಂದ ಮುಸ್ಲಿಂ ಸಮುದಾಯದವರು ವಿಶೇಷ ಆಚರಣೆಯಲ್ಲಿ ಭಾಗಿಯಾದರು.ನಿನ್ನೆ ಸಂಜೆ 7 ಗಂಟೆಗೆ ಆರಂಭವಾದ ಕಾರ್ಯಕ್ರಮ ಮುಂಜಾನೆ ವರೆಗೂ ಸಾಗಿತು.ವಿಶೇಷವಾಗಿ ಕವ್ಬಾಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಯುವಜನಾಂಗ ಕುಣಿದು ಸಂಭ್ರಮಿಸಿದರು…
Read More