TV10 Kannada Exclusive

ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಮನೆ ದೇವರ ಸೂಚನೆ…

ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಮನೆ ದೇವರ ಸೂಚನೆ… ಮಂಡ್ಯ,ಜ13,Tv10 ಕನ್ನಡಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಮನೆ ದೇವರು ಸೂಚಿಸಿದೆ.ರಾಜಕೀಯ ಭವಿಷ್ಯ ನುಡಿದಿರುವ ಮನೆ ದೇವರುಒಂದೇ ಕಡೆ ನಿಂತ್ರೆ ಬಲವಿಲ್ಲ, ಎರಡು ಕ್ಷೇತ್ರದಲ್ಲಿ ನಿಲ್ಲುವಂತೆ ದೇವಿ ಸೂಚನೆ‌ ನೀಡಿದೆ.ಆದಿನಾಡು ಚಿಕ್ಕಮ್ಮ ದೇವಿ ತಾಯಿಯಿಂದ ಸಿದ್ದು ಪುತ್ರ ಡಾ ಯತೀಂದ್ರಗೆ ಸೂಚನೆ ನೀಡಿದೆ.ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದಆದಿ ನಾಡು
Read More

ತೋಟದ ಮನೆಗೆ ಚಿರತೆ ಎಂಟ್ರಿ…ಸಿಸಿ ಕ್ಯಾಮರಾದಲ್ಲಿ ಸೆರೆ…

ತೋಟದ ಮನೆಗೆ ಚಿರತೆ ಎಂಟ್ರಿ…ಸಿಸಿ ಕ್ಯಾಮರಾದಲ್ಲಿ ಸೆರೆ… ಹುಣಸೂರು,ಜ12,Tv10 ಕನ್ನಡಹುಣಸೂರು ತಾಲೂಕು ರಾಮ ಪಟ್ಟಣ ಗ್ರಾಮ ದ ತೋಟದ ಮನೆಯೊಂದಕ್ಕೆ ಚಿರತೆಗಳು ದಾಳಿ ನಡೆಸಿವೆ. ಚಿಕ್ಕೇಗೌಡ ಎಂಬುವರ ತೋಟದ ಮನೆಗೆ ಎಂಟ್ರಿ ಕೊಟ್ಟಿವೆ.ಎರಡು ನಾಯಿಗಳನ್ನು ಹೊತ್ತೊಯ್ದಿವೆ.ಬೆಳಗಿನ ಜಾವ ಐದು ಗಂಟೆ ಸಮಯದಲ್ಲಿ ಪ್ರವೇಶಿಸಿವೆ. ತೋಟದಲ್ಲಿ ವಾಸವಾಗಿರುವ ನಿವಾಸಿಗಳಿಗೆ ಮತ್ತು ಗ್ರಾಮಸ್ಥರುಗಳಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ.ಅರಣ್ಯ ಅಧಿಕಾರಿಗಳು ಚಿರತೆ ಸೆರೆಗೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ…
Read More

26ನೇ ರಾಷ್ಟ್ರೀಯ ಯುವಜನೋತ್ಸವ ವಿಶೇಷತೆಯುವಜನೋತ್ಸವದ ಜನಪ್ರಿಯತೆಗೆ ದೇಸಿಯ ಕ್ರೀಡೆಗಳ ಮೆರಗು

26ನೇ ರಾಷ್ಟ್ರೀಯ ಯುವಜನೋತ್ಸವ ವಿಶೇಷತೆಯುವಜನೋತ್ಸವದ ಜನಪ್ರಿಯತೆಗೆ ದೇಸಿಯ ಕ್ರೀಡೆಗಳ ಮೆರಗು ಧಾರವಾಡ ಜ.11: ಭಾರತ ರಾಷ್ಟ್ರ ಒಂದೇ ಆದರೂ ಹಲವು ಕ್ಷೇತ್ರಗಳಲ್ಲಿ ವಿಭಿನ್ನತೆ ಮತ್ತು ವೈಶಿಷ್ಟ್ಯತೆಯನ್ನು ಹೊಂದಿದೆ. ಭಾರತ ತನ್ನದೇ ಆದ ವಿಶೇಷತೆಗಳಿಂದ ವಿಭಿನ್ನವಾಗಿ ಕಾಣಿಸುತ್ತದೆ. ಅನೇಕ ಆಧುನಿಕ ಹಾಗೂ ಪಾಶ್ಚಿಮಾತ್ಯ ಆಟಗಳ ಮಧ್ಯದಲ್ಲೂ ಭಾರತದ ದೇಸಿಯ ಕ್ರೀಡೆಗಳು ತಮ್ಮ ಜನಪ್ರಿಯತೆ ಹಾಗೂ ಪಾವಿತ್ರ್ಯತೆಯನ್ನು ಇಂದಿಗೂ ಉಳಿಸಿಕೊಂಡು ಬಂದಿವೆ. ಶಿಕ್ಷಣದ ಕಾಶಿ ಧಾರವಾಡದಲ್ಲಿ ಜನವರಿ 12 ರಿಂದ 16 ರ
Read More

ದಮ್ಮನಕಟ್ಟೆ ಸಫಾರಿಯಲ್ಲಿ ಹುಲಿಗಳ ದರ್ಶನ…ಪ್ರವಾಸಿಗರು ಖುಷ್…

ದಮ್ಮನಕಟ್ಟೆ ಸಫಾರಿಯಲ್ಲಿ ಹುಲಿಗಳ ದರ್ಶನ…ಪ್ರವಾಸಿಗರು ಖುಷ್… ಎಚ್.ಡಿ.ಕೋಟೆ,ಜ12,Tv10 ಕನ್ನಡಎಚ್.ಡಿ.ಕೋಟೆ ತಾಲೋಕಿನ ದಮ್ಮನಕಟ್ಟೆ ಅರಣ್ಯದ ಸಫಾರಿಯಲ್ಲಿ ಇಂದು ಮುಂಜಾನೆ ಹುಲಿಗಳ ದರ್ಶನವಾಗಿದೆ.ತಾಯಿಯೊಂದಿಗಿದ್ದ ನಾಲ್ಕು ಹುಲಿ ಮರಿಗಳನ್ನು ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ.ಇಂದು ಬೆಳ್ಳಂಬೆಳಗ್ಗೆ ತಾಸುಗಟ್ಟಲೆ ಮರಿಗಳೊಂದಿಗೆ ದರ್ಶನ ನೀಡಿದ ಹುಲಿಗಳ ಆಟವನ್ನ ಸೆರೆಹಿಡಿದಿದ್ದಾರೆ. ಛಾಯಾಗ್ರಾಹಕ ಮನೋಜ್ ಘನ್ನ ಕ್ಯಾಮರಾದಲ್ಲಿ ದೃಶ್ಯಗಳು ಸೆರೆಯಾಗಿದೆ.ಕಳೆದ ವಾರದಿಂದ ಪ್ರವಾಸಿವರಿಗೆ ನಾಗರಹೊಳೆ ಸಫಾರಿ ಕಬಿನಿ ಹಿನ್ನೀರಿನಲ್ಲಿ ಹುಲಿಗಳು ದರ್ಶನ ನೀಡುತ್ತಿವೆ.ಜಿಂಕೆ ಬೇಟೆಯಾಡಿ ಮರಿ ಹುಲಿಗಳಿಗೆ ಆಹಾರ ಸಬರಾಜು ಮಾಡುತ್ತಿರುವ ತಾಯಿ
Read More

ಜ.15 ರಂದು ಯೋಗಾಥಾನ್…ಯಶಸ್ಸಿಗೆ ಸಜ್ಜಾಗುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕರೆ…

ಜ.15 ರಂದು ಯೋಗಾಥಾನ್…ಯಶಸ್ಸಿಗೆ ಸಜ್ಜಾಗುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕರೆ… ಮೈಸೂರು,ಜ11,Tv10 ಕನ್ನಡಜನವರಿ 15 ರಂದು ಬೆಳಿಗ್ಗೆ 8 ಗಂಟೆಯಿಂದ ಮೈಸೂರಿನ ಚಾಮುಂಡಿ ಬೆಟ್ಟದ ಬಳಿ ಇರುವ ರೇಸ್ ಕೋರ್ಸ್ ಮೈದಾನದಲ್ಲಿ ಯೋಗಥಾನ್ ನಡೆಯಲಿದೆ.80 ಸಾವಿರ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕಾರ್ಯಕ್ರಮದ ಯಶಸ್ಸಿಗೆ ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ: ಕೆ.ವಿ.ರಾಜೇಂದ್ರ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ‌ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾಮತನಾಡಿದರು.
Read More

ಮಾರ್ಶಲ್ ಆರ್ಟ್ಸ್ ನಲ್ಲಿ ಸಾಧನೆ ಮಾಡಿದ ಕರಾಟೆಪಟುಗೆ ಎನ್.ಆರ್.ಠಾಣೆ ಪೊಲೀಸರಿಂದ ಸನ್ಮಾನ…

ಮಾರ್ಶಲ್ ಆರ್ಟ್ಸ್ ನಲ್ಲಿ ಸಾಧನೆ ಮಾಡಿದ ಕರಾಟೆಪಟುಗೆ ಎನ್.ಆರ್.ಠಾಣೆ ಪೊಲೀಸರಿಂದ ಸನ್ಮಾನ… ಮೈಸೂರು,ಜ10, Tv10 ಕನ್ನಡಮಾರ್ಶಲ್ ಆರ್ಟ್ಸ್ ನಲ್ಲಿ ಸಾಧನೆ ಮಾಡಿ ರಾಜ್ಯಕ್ಕೆ ಹಾಗೂ ದೇಶಕ್ಕೆ ಕೀರ್ತಿ ತಂದ ಸೌಜನ್ಯ ರವರನ್ನ ಎನ್.ಆರ್.ಪೊಲೀಸ್ ಠಾಣೆಯ ಎಸ್ಸೈ ಜೈಕೀರ್ತಿ ಹಾಗೂ ಸಿಬ್ಬಂದಿಗಳು ಗೌರವಿಸಿ ಸನ್ಮಾನಿಸಿದರು. ಮೈಸೂರು ವಿಶ್ವ ವಿದ್ಯಾನಿಲಯದ ಎಂ.ಎಸ್ಸಿ ವಿದ್ಯಾರ್ಥಿನಿ ಹಾಗೂ ಮೈಸೂರು ನಗರದ ರಾಜೇಂದ್ರ ನಗರ SGRR ಕರಾಟೆ & ಸ್ಪೋರ್ಟ್ಸ್ ಶಾಲೆಯ ಕರಾಟೆ ತರಬೇತುದಾರ ಲೋಕೇಶ್ ರವರಲ್ಲಿ
Read More

ಮೈಸೂರು ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಲ್. ನಾಗೇಂದ್ರರವರು, ಮೈಸೂರು ಮಹಾನಗರ ಪಾಲಿಕೆ ವಾರ್ಡ ಸಂ:25 ರ

ಮೈಸೂರು ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಲ್. ನಾಗೇಂದ್ರರವರು, ಮೈಸೂರು ಮಹಾನಗರ ಪಾಲಿಕೆ ವಾರ್ಡ ಸಂ:25 ರ ಸದಸ್ಯರಾದ ಶ್ರೀ ರಂಗಸ್ವಾಮಿ ರವರೊಂದಿಗೆ ಬೆಳಿಗ್ಗೆ: 10.00 ಕ್ಕೆ ವಾರ್ಡ ನಂ-25 ಕೈಲಾಸಪುರಂ, 2ನೇ ಕ್ರಾಸ್, 2ನೇ ಮೇನ್ ರಸ್ತೆ ಬಳಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಘಟಕ ಯೋಜನೆಯಡಿಯಲ್ಲಿ ಕೈಲಾಸಪುರಂ ಅಡ್ಡರಸ್ತೆಗಳನ್ನು ಅಭಿವೃದ್ದಿಗೊಳಿಸುವ & ಚರಂಡಿ ನಿರ್ಮಾಣ ಕಾಮಗಾರಿಯ ರೂ:50.00 ಲಕ್ಷದ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು,
Read More

ಮೈಸೂರು ಅಪರ ಜಿಲ್ಲಾಧಿಕಾರಿಯಾಗಿ ಆರ್ . ಲೋಕನಾಥ್ ಅಧಿಕಾರ ಸ್ವೀಕಾರ

ಮೈಸೂರು ಅಪರ ಜಿಲ್ಲಾಧಿಕಾರಿಯಾಗಿ ಆರ್ . ಲೋಕನಾಥ್ ಅಧಿಕಾರ ಸ್ವೀಕಾರ ಮೈಸೂರು,ಜ10,Tv10 ಕನ್ನಡಮೈಸೂರು ನೂತನ ಅಪರ ಜಿಲ್ಲಾಧಿಕಾರಿಯಾಗಿ ಆರ್ . ಲೋಕನಾಧ್ ಅವರು ಇಂದು ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಅಪರ ಜಿಲ್ಲಾಧಿಕಾರಿ ಡಾ ಮಂಜುನಾಥ್ ಸ್ವಾಮಿ ಅವರಿಂದ ಅಧಿಕಾರ ವಹಿಸಿಕೊಂಡರು….
Read More

ಪೇಯಿಂಟ್ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ…ಲಕ್ಷಾಂತರ ಮೌಲ್ಯದ ಪದಾರ್ಥಗಳು ಭಸ್ಮ…

ಪೇಯಿಂಟ್ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ…ಲಕ್ಷಾಂತರ ಮೌಲ್ಯದ ಪದಾರ್ಥಗಳು ಭಸ್ಮ… ಕೊಡಗು,ಜ10,Tv10 ಕನ್ನಡಬೆಳ್ಳಂಬೆಳಗ್ಗೆ ಬೆಂಕಿ‌ ಆವಘಢದಿಂದ ಪೇಯಿಂಟ್ ಅಂಗಡಿ‌ ಸಂಪೂರ್ಣ ಭಸ್ಮವಾದ ಘಟನೆ ಕೊಡಗು ಜಿಲ್ಲೆಯ ಗೋಣಿಕೊಪ್ಪದಲ್ಲಿ ನಡೆದಿದೆ.ಭೇರು ಪೇಯಿಂಟ್ ಶಾಪ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ವಾಹನಗಳ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.ಅಕ್ಕಪಕ್ಕದ ಅಂಗಡಿಗಳಿಗೆ ಬೆಂಕಿ ಹರಡದಂತೆ ಅಗ್ನಿಶಾಮಕ ಸಿಬ್ಬಂದಿ ಹತೋಟಿಗೆ ತಂದಿದ್ದಾರೆ.ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ…
Read More

ವಿದ್ಯುತ್ ಕಂಬದ ಬಳಿ ಉರುಳಿಬಿದ್ದ ಟ್ರಕ್…ತಪ್ಪಿದ ಅನಾಹುತ…

ಹುಣಸೂರು,ಜ5,Tv10 ಕನ್ನಡಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ವಿದ್ಯುತ್ ಕಂಬದ ಬಳಿ ಉರುಳಿಬಿದ್ದ ಘಟನೆ ಹುಣಸೂರು ತಾಲೂಕಿನ ಬಸರಿಕಟ್ಟೆ ಬಳಿ ನಡೆದಿದೆ.ಕೇರಳಾ ದಿಂದ ಬೆಂಗಳೂರಿಗೆ ಕಬ್ಬಿಣದ ಶೀಟ್ ಗಳನ್ನ ಸಾಗಿಸುತ್ತಿದ್ದ ಟ್ರಕ್ ಉರುಳಿ ಬಿದ್ದಿದೆ.ಸಮೀಪದಲ್ಲೇ ವಿದ್ಯುತ್ ಕಂಬ ಇದ್ದರೂ ಸಂಪರ್ಕ ಸಾಧಿಸದ ಪರಿಣಾಮ ಅನಾಹುತ ತಪ್ಪಿದಂತಾಗಿದೆ.ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಬಿಳಿಕೆರೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲ‌ನೆ ನಡೆಸಿದ್ದಾರೆ…
Read More