ಕಾಂಪೌಂಡ್ ನಿರ್ಮಾಣ ವಿಚಾರದಲ್ಲಿ ಕಿರಿಕ್…ವ್ಯಕ್ತಿಗೆ ಮಾರಣಾಂತಿಕ ಹಲ್ಲೆ…ಇನ್ಸ್ಪೆಕ್ಟರ್ ಸಹೋದರ ಸೇರಿದಂತೆ ಮೂವರ ವಿರುದ್ದ FIR ದಾಖಲು…
ಹುಣಸೂರು,ಮಾ7,Tv10 ಕನ್ನಡ ಕಾಂಪೌಂಡ್ ನಿರ್ಮಾಣ ವಿಚಾರದಲ್ಲಿ ಕ್ಯಾತೆ ತೆಗೆದ ಇನ್ಸ್ಪೆಕ್ಟರ್ ಸಹೋದರ ವ್ಯಕ್ತಿ ತಲೆಗೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ ಘಟನೆ ಹುಣಸೂರು ತಾಲೂಕು ಬಿಳಿಕೆರೆಯ ಕುಪ್ಪೆ ಗ್ರಾಮದಲ್ಲಿ ನಡೆದಿದೆ.ಕುಪ್ಪೆ ಗ್ರಾಮದ ಚಂದ್ರೇಗೌಡ ಎಂಬುವರು ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಬೆಂಗಳೂರುನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇನ್ಸ್ಪೆಕ್ಟರ್ ಮಂಜು ಎಂಬುವರ ಸಹೋದರ ರಾಜು,ಇವರ ಪತ್ನಿ ನೇತ್ರಾವತಿ ಹಾಗೂ ಭಾವ ಭಾಸ್ಕರ್ ಎಂಬುವರ ವಿರುದ್ದ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More