TV10 Kannada Exclusive

ಯದುವೀರ್ ದಂಪತಿಯಿಂದ ಮಹಾರಾಜ ಕಾಲೇಜು ಮೈದಾನ ಸ್ವಚ್ಛತೆ…ಸಾಥ್ ನೀಡಿದ ಅಭಿಮಾನಿಗಳು…

ಮೈಸೂರು,ಏ15,Tv10 ಕನ್ನಡ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಮ್ಮ ಪತ್ನಿ ತ್ರಿಶಿಖಾ ಒಡೆಯರ್ ಅವರೊಂದಿಗೆ ಸೇರಿ ಮಹಾರಾಜ ಕಾಲೇಜು ಮೈದಾನಕ್ಕೆ ಭೇಟಿ ನೀಡಿ ಸ್ವಚ್ಛಗೊಳಿಸಲು ಮುಂದಾದರು.ನಿನ್ನೆ ನಡೆದ ಮೋದಿ ರಾಲಿ ನಂತರ ಮೈದಾನದಲ್ಲಿ ತುಂಬಿದ ಜನಸಾಗರದಿಂದ ಕಸಮಯವಾಗಿತ್ತು.ಅಲ್ಲಲ್ಲಿ ಹರಡಿದ್ದ ಕಸವನ್ನು ಯದುವೀರ್ ತಮ್ಮ ಅಭಿಮಾನಿಗಳು ಹಾಗೂ ನಗರಪಾಲಿಕೆ ಸಿಬ್ಬಂದಿಗಳ ಜೊತೆ ಸೇರಿ ಸ್ವಚ್ಚಗೊಳಿಸಿದರು.ಇಂದು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದ ಕಾರ್ಮಿಕರಿಗೆ ಯದುವೀರ್ ಅವರು
Read More

ಮೈಸೂರು:ಗೊಡೌನ್ ನಲ್ಲಿ ಆಕಸ್ಮಿಕ ಬೆಂಕಿ…ಲಕ್ಷಾಂತರ ಮೌಲ್ಯದ ಪದಾರ್ಥಗಳು ನಾಶ…

ಮೈಸೂರು,ಏ15,Tv10 ಕನ್ನಡ ಸೆಂಟರಿಂಗ್ ಪದಾರ್ಥಗಳನ್ನ ಇರಿಸಲಾದ ಗೋದಾಮಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ಮೈಸೂರಿನ ಗೌಸಿಯಾನಗರದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.ಬೆಂಕಿಯ ಅವಘಢಕ್ಕೆ ಲಕ್ಷಾಂತರ ಮೌಲ್ಯದ ಪದಾರ್ಥಗಳು ಸುಟ್ಟು ಭಸ್ಮವಾಗಿದೆ.ಗೌಸಿಯಾನಗರದ ಈದ್ಗಾ ಮೈದಾನದ ಬಳಿ ಇರುವ ಗೋದಾಮಿನಲ್ಲಿ ಘಟನೆ ನಡೆದಿದೆ.ಮಾಹಿತಿ ಅರಿತ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ…
Read More

ಮೈಸೂರು: ಕೇಂದ್ರ ಕಾರಾಗೃಹ ಸಜಾಖೈದಿ ಬಳಿ ಮೊಬೈಲ್ ಫೋನ್ ಪತ್ತೆ…

ಮೈಸೂರು,ಏ14,Tv10 ಕನ್ನಡ ಮೈಸೂರು ಕೇಂದ್ರ ಕಾರಾಗೃಹದಲ್ಲಿರುವ ಸಜಾ ಖೈದಿ ಬಳಿ ಮೊಬೈಲ್ ಫೋನ್ ಪತ್ತೆಯಾಗಿದೆ.ಸಜಾಬಂಧಿಯಾಗಿ ಶಿಕ್ಷೆ ಅನುಭವಿಸುತ್ತಿರುವ ವಸೀಂ ಪಾಷಾ ಬಳಿ ಮೊಬೈಲ್ ಪತ್ತೆಯಾಗಿದೆ.ಹಲವಾರು ದಿನಗಳಿಂದ ಮೊಬೈಲ್ ಬಳಕೆ ಮಾಡುತ್ತಿರುವ ಬಗ್ಗೆ ಅನುಮಾನವಿದ್ದು ಹೊಂಚುಹಾಕಿದ ಕಾರಾಗೃಹ ಪೊಲೀಸರು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.ಈ ಸಂಭಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
Read More

ಅನೈತಿಕ ಸಂಭಂಧ ಶಂಕೆ…ಚಾಕುವಿನಿಂದ ಇರಿದು ಪತ್ನಿ ಕೊಲೆಗೆ ಯತ್ನಿಸಿದ ಪತಿ…

ಮೈಸೂರು,ಏ14,Tv10 ಕನ್ನಡ ಪರಪುರುಷನೊಂದಿಗೆ ಅನೈತಿಕ ಸಂಭಂಧ ಇಟ್ಟುಕೊಂಡಿರುವುದಾಗಿ ಆರೋಪಿಸಿ ದಿನನಿತ್ಯ ಪತ್ನಿಗೆ ಕಿರುಕುಳ ನೀಡುತ್ತಿದ್ದ ಪತಿರಾಯ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಪತಿಯಿಂದ ಹಲ್ಲೆಗೊಳಗಾದ ಪತ್ನಿ ಸುಮಾ ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದಾರೆ.ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಪತಿ ಕೃಷ್ಣ ತಲೆಮರೆಸಿಕೊಂಡಿದ್ದಾನೆ.ಸುಮ ಹಾಗೂ ಕೃಷ್ಣ ಪ್ರೀತಿಸಿ ಮದುವೆ ಆಗಿದ್ದರು.ಸುಮ 2 ಮಕ್ಕಳ ತಾಯಿ ಆಗಿದ್ದರು.ಕುಡಿತದ ಚಟ ಅಂಟಿಸಿಕೊಂಡ ಕೃಷ್ಣ ಪತ್ನಿ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ.ಇದೇ
Read More

ಕೂಲ್ ಡ್ರಿಂಕ್ಸ್ ಕುಡಿಯುತ್ತಿದ್ದ ಅಡ್ವೋಕೇಟ್ ಮೇಲೆ ಹಲ್ಲೆ…ಮೂವರ ವಿರುದ್ದ FIR ದಾಖಲು…

ಮೈಸೂರು,ಏ14,Tv10 ಕನ್ನಡ ಕೂಲ್ ಡ್ರಿಂಕ್ಸ್ ಕುಡಿಯುತ್ತಿದ್ದ ಅಡ್ವೋಕೇಟ್ ಮೇಲೆ ಮೂವರು ವ್ಯಕ್ತಿಗಳು ಗಲಾಟೆ ತಗಾದೆ ತೆಗೆದು ಹಲ್ಲೆ ನಡೆಸಿದ ಘಟನೆ ಅಶೋಕಾಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಜಯನಗರದಲ್ಲಿ ನಡೆದಿದೆ.ಘಟನೆಯಲ್ಲಿ ಅಡ್ವೊಕೇಟ್ ಸುನಿಲ್ ಕುಮಾರ್ ಗಾಯಗೊಂಡಿದ್ದಾರೆ.ನಂಜುಂಡ ಹಾಗೂ ಆತನ ಇಬ್ಬರು ಸ್ನೇಹಿತರು ಹಲ್ಲೆ ನಡೆಸಿದ್ದಾರೆ.ಸ್ನೇಹಿತರೊಂದಿಗೆ ಕೂಲ್ ಡ್ರಿಂಕ್ಸ್ ಕುಡಿಯುತ್ತಿದ್ದಾಗ ಏಕಾಏಕಿ ಬಂದ ನಂಜುಂಡ ಗಲಾಟೆ ತೆಗೆದು ತಳ್ಳಾಡಿ ಅವಾಚ್ಯಶಬ್ದಗಳಿಂದ ನಿಂದಿಸಿದ್ದಾರೆ.ತಾನು ಅಡ್ವೋಕೇಟ್ ಎಂದು ಹೇಳಿದ್ರೂ ಗಣನೆಗೆ ತೆಗೆದುಕೊಳ್ಳದೆ ಹಲ್ಲೆ ನಡೆಸಿದ್ದಾರೆ.ಗಾಯಗೊಂಡ ಸುನಿಲ್
Read More

ನಗರ ಪಾಲಿಕೆ ಆಯುಕ್ತೆ ಡಾ.ಮಧುಪಾಟೀಲ್ ರಿಂದ ಮತದಾನ ಜಾಗೃತಿ…ಬಲೂನ್ ಹಾರಿಸುವ ಮೂಲಕ ಚಾಲನೆ…

ಮೈಸೂರು,ಏ14,Tv10 ಕನ್ನಡ ಲೋಕಸಭಾ ಚುನಾವಣೆ ಸನಿಹವಾಗುತ್ತಿದೆ.ಏಪ್ರಿಲ್ 26 ಮತದಾರರಿಗೆ ತಮ್ಮ ಹಕ್ಕನ್ನ ಚಲಾಯಿಸುವ ಮಹತ್ವದ ದಿನ.ಚುನಾವಣೆ ಹಿನ್ನಲೆ ಸ್ವೀಪ್ ಕಾರ್ಯಕ್ರಮದಡಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಮತದಾರರಿಗೆ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ವಲಯ ಕಚೇರಿ 06 ರ ವ್ಯಾಪ್ತಿ ಯಲ್ಲಿ ಬರುವ ಪುರಭವನದ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಮುಂದೆ ಸಾರ್ವಜನಿಕರಿಗೆ ಮತದಾನ ಮಾಡುವಂತೆ ಪ್ರೇರೇಪಿಸುವ ಕಾರ್ಯಕ್ರಮಕ್ಕೆ ಪಾಲಿಕೆ ಆಯುಕ್ತರಾದ ಡಾ.ಮಧುಪಾಟೀಲ್ ಚಾಲನೆ ನೀಡಿದ್ದಾರೆ. ಮತದಾನ ಜಾಗೃತಿಯ ಬಲೂನ್
Read More

ಸಾಂಸ್ಕೃತಿಕ ನಗರಿ ಮೈಸೂರಿಗೆ ಇಂದು ಪ್ರಧಾನಿ ಮೋದಿ…ಸಕಲ ಸಿದ್ದತೆ…ಭಾರಿ ಭದ್ರತೆ…

ಮೈಸೂರು,ಏ14,Tv10 ಕನ್ನಡ ಸಾಂಸ್ಕೃತಿಕ ನಗರಿ ಮೈಸೂರಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ.ಕಾರ್ಯಕರ್ತರನ್ನುದ್ದೇಶಿಸಿ ಬಹಿರಂಗ ಭಾಷಣ ಮಾಡಲಿದ್ದಾರೆ.ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.ಮೋದಿ ಶಗಮನ ಹಿನ್ನಲೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಸಂಜೆ 4 ಗಂಟೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶದಲ್ಲಿ ಮೋದಿಯವರು ಭಾಷಣ ಮಾಡಲಿದ್ದಾರೆ.ಮೋದಿ ಆಗಮಿಸುವ ರಸ್ತೆಗಳು ಹಾಗೂ ಮಹಾರಾಜ ಕಾಲೇಜು ಸುತ್ತ,ಮುತ್ತ ಭಾರೀ ಬಂದೋಬಸ್ತ್ ಮಾಡಲಾಗಿದೆ,ಇಂದು ಬೆಳಗಿನಿಂದಲೇ ಹಿರಿಯ ಪೊಲೀಸ್ ಅಧಿಕಾರಿಗಳು
Read More

ಚುನಾವಣಾ ಕರ್ತವ್ಯದಲ್ಲಿ ಲೋಪ…ಪಾಲಿಕೆ ಎಇಇ ಅಮಾನತು…ವಿದ್ಯುನ್ಮಾನ ಮತ ಯಂತ್ರಗಳ ಸ್ಟ್ರಾಂಗ್ ರೂಂ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಆರೋಪ…

ಮೈಸೂರು,ಏ13,Tv10 ಕನ್ನಡ ಲೋಕಸಭೆ ಚುನಾವಣಾ ಕರ್ತವ್ಯಕ್ಕೆ ಸಂಭಂಧಿಸಿದಂತೆ ವಿದ್ಯುನ್ಮಾನ ಮತಯಂತ್ರಗಳ ಸ್ಟ್ರಾಂಗ್ ರೂಂ ನಿರ್ವಹಣೆಯಲ್ಲಿ ಲೋಪವೆಸಗಿದ ಆರೋಪದ ಮೇಲೆ ಮೈಸೂರು ಮಹಾನಗರ ಪಾಲಿಕೆ ಸಹಾಯಕ ಕಾರ್ಯಪಾಲ ಅಭಿಯಂತರರು ಹಾಗೂ ಸ್ಟ್ರಾಂಗ್ ರೂಂ ಮತ್ತು ಮ್ಯಾನ್ ಪವರ್ ನೂಡಲ್ ಅಧಿಕಾರಿ ರಾಜೀವ್ ನಾಥ್ ರನ್ನ ಅಮಾನತುಪಡಿಸಿ ಆದೇಶ ಹೊರಡಿಸಲಾಗಿದೆ.ಮೈಸೂರು ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳೂ ಆದ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ನರಸಿಂಹರಾಜ ವಿಧಾನಸಭಾ ಕ್ಷೇತ್ರದ ವಿದ್ಯನ್ಮಾನ ಮತಯಂತ್ರಗಳ ವಾಹನವನ್ನ ಜೆ.ಎಸ್.ಎಸ್.ಕಲಾ ಮತ್ತು ವಿಜ್ಞಾನ
Read More

ಶ್ರೀನಿವಾಸ್ ಪ್ರಸಾದ್- ಸಿದ್ದು ಭೇಟಿ…ಮುನಿಸು ಮರೆತ ಉಭಯ ನಾಯಕರು…ನಮ್ಮ ಪಕ್ಷದ ಬಗ್ಗೆ ಸಿಂಪತಿ ಇರಲಿ ಎಂದ ಸಿಎಂ…

ಮೈಸೂರು,ಏ13,Tv10 ಕನ್ನಡ ಕೊನೆಗೂ ಲೋಕಸಭಾ ಚುನಾವಣೆ ಇಬ್ಬರು ನಾಯಕರನ್ನ ಮುಖಾಮುಖಿ ಭೇಟಿ ಮಾಡಿಸುವ ವಾತಾವರಣ ಕಲ್ಪಿಸಿದೆ.ಕೆಲವು ರಾಜಕೀಯ ಬೆಳವಣಿಗೆ ಹಿನ್ನಲೆ ಆಪ್ತಸ್ನೇಹಿತರಾಗಿದ್ದ ಸಿದ್ದರಾಮಯ್ಯ ಹಾಗೂ ಶ್ರೀನಿವಾಸ್ ಪ್ರಸಾದ್ ಇಬ್ಬರೂ ಮುನಿಸಿಕೊಂಡಿದ್ದರು.ಸುಮಾರು ಆರು ವರ್ಷಗಳ ಕಾಲ ಪರಸ್ಪರ ಹೇಳಿಕೆಗಳನ್ನ ನೀಡುವ ಮೂಲಕ ಬಹಿರಂಗವಾಗಿ ಕಿತ್ತಾಡಿದ್ದರು.ಇದೀಗ ಲೋಕಸಭಾ ಚುನಾವಣೆ ಸಮೀಪವಾಗುತ್ತಿದ್ದಂತೆಯೇ ಮುನಿಸು ಮರೆತ ರಾಜಕೀಯ ದಿಗ್ಗಜರು ಭೇಟಿ ಮಾಡಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದಾರೆ.ಇಂದು ಶ್ರೀನಿವಾಸ್ ಪ್ರಸಾದ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ
Read More

ಬಸ್ ತಂಗುದಾಣವನ್ನೇ ನುಂಗಿದ ಅಪಘಾತಕ್ಕೆ ಸಿಲುಕಿದ ವಾಹನ…ಕಣ್ಮುಚ್ಚಿ ಕುಳಿತ ಸಂಚಾರಿ ಪೊಲೀಸರು…

ಮೈಸೂರು,ಏ13,Tv10 ಕನ್ನಡ ಅಪಘಾತಕ್ಕೆ ಸಿಲುಕಿ ನಜ್ಜುಗುಜ್ಜಾದ ಲಾರಿಯೊಂದು ಬಸ್ ತಂಗುದಾಣವನ್ನ ಆವರಿಸಿಕೊಂಡು ಬಸ್ ಗಾಗಿ ಕಾದುನಿಂತ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಮೈಸೂರಿನ ವಿವಿ ಪುರಂ ಸಂಚಾರಿ ಪೊಲೀಸ್ ಠಾಣೆ ಸಮೀಪವಿರುವ ಬಸ್ ತಂಗುದಾಣದ ಬಳಿ ಈ ದೃಶ್ಯ ಕಂಡು ಬಂದಿದೆ.ಬಸ್ ಪ್ರಯಾಣಿಕರು ಬಸ್ ಗಾಗಿ ಕಾಯುವ ಉದ್ದೇಶದಿಂದ ವಿವಿ ಪುರಂ ಸಂಚಾರಿ ಠಾಣೆ ಸಮೀಪ ಮೈಸೂರು ಮಹಾನಗರ ಪಾಲಿಕೆ ತಂಗುದಾಣ ನಿರ್ಮಿಸಿದೆ.ಆದರೆ ಈ ಬಸ್ ತಂಗುದಾಣವನ್ನ ಅಪಘಾತಕ್ಕೆ ಸಿಲುಕಿ
Read More