TV10 Kannada Exclusive

ಮನೆ ಹಿಂಬಾಗಿಲು ಮೀಟಿ ನಗದು ಚಿನ್ನಾಭರಣ ಕಳುವು…ಹಾಡುಹಗಲೇ ಒಂಟಿ ಮನೆಯಲ್ಲಿ ಕೃತ್ಯ…

ಹುಣಸೂರು,ಮಾ20,Tv10 ಕನ್ನಡ ಮನೆ ಹಿಂಬಾಗಿಲು ಮೀಟಿದ ಖದೀಮರು 1.09 ಲಕ್ಷ ನಗದು ಹಾಗೂ 13 ಗ್ರಾಂ ಚಿನ್ನ ಮತ್ತು ಬೆಳ್ಳಿ ಕಾಲು ಚೈನು ದೋಚಿ ಪರಾರಿಯಾಗಿದ್ದಾರೆ. ಹುಣಸೂರಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ದಲ್ಲಾಳ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.ಹಾಡುಹಗಲೇ ಒಂಟಿ ಮನೆಯಲ್ಲಿ ಖದೀಮರು ಕೈಚಳಕ ತೋರಿಸಿದ್ದಾರೆ.ತಿಮ್ಮೇಗೌಡ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ.ಇಂದು ಬೆಳಿಗ್ಗೆ ಸುಮಾರು 11 ಗಂಟೆ ವೇಳೆಯಲ್ಲಿ ಮನೆಯ ಮುಂಬಾಗಿಲು ಬೀಗ ಹಾಕಿದ ತಿಮ್ಮೇಗೌಡರು ದೇವಸ್ಥಾನಕ್ಕೆ ತೆರಳಿದ್ದಾರೆ.ಮನೆಗೆ ಹಿಂದಿರುಗುವಷ್ಟರಲ್ಲಿ
Read More

ಮೈಸೂರು: ಗುಬ್ಬಚ್ಚಿ ಹಬ್ಬ ಆಚರಣೆ…ಪ್ರಾಣಿ ಪಕ್ಷಿ ಸಂಕುಲ ಉಳಿವಿಗೆ ಒತ್ತು ನೀಡುವಂತೆ ಕರೆ…

ಗುಬ್ಬಚ್ಚಿ ದಿನಾಚರಣೆ ಅಂಗವಾಗಿ ಇಂದು ಮೈಸೂರಿನ ಕೃಷ್ಣಮೂರ್ತಿಪುರಂ ನಲ್ಲಿರುವ ಕಿರಿಯ ಪ್ರಾಥಮಿಕ ಶಾಲೆ(ಗುಬ್ಬಚ್ಚಿಶಾಲೆ)ಯಲ್ಲಿ ಕೆಎಂಪಿಕೆ ಟ್ರಸ್ಟ್ ವತಿಯಿಂದ ಪ್ರಾಣಿ ಪ್ರಿಯರು ಗುಬ್ಬಚ್ಚಿ ಹಬ್ಬ ಆಚರಿಸುವ ಮೂಲಕ ಅಳಿವಿನಂಚಿನಲ್ಲಿರುವ ಗುಬ್ಬಿ ಸಂತತಿಯನ್ನು ಮುಂದಿನ ಪೀಳಿಗೆಗೂ ಉಳಿಸುವಂತೆ ಸಂದೇಶ ಸಾರಿದರು. ಪಕ್ಷಿಗಳಿಗೆ ನೀರು ನೀಡುವ ಮೂಲಕ ಪಕ್ಷಿ ತಜ್ಞ ಸಪ್ತ ಗಿರೀಶ್ ಎಂ ಕೆ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿಇತ್ತೀಚಿನ ದಿನಗಳಲ್ಲಿ ಗುಬ್ಬಚ್ಚಿ ಅಳಿವಿನಂಚಿನಲ್ಲಿದೆ. ಗುಬ್ಬಚ್ಚಿ ಉಳಿದರೆ ಉತ್ತಮ ಪರಿಸರ ನೋಡಲು ಸಾಧ್ಯ. ನಾವು
Read More

ಬೋನಿಗೆ ಬಿದ್ದ ಚಿರತೆ…ಗ್ರಾಮಸ್ಥರಲ್ಲಿ ನಿರಾಳ…

ಟಿ.ನರಸೀಪುರ,ಮಾ19,Tv10 ಕನ್ನಡ ಜಮೀನಿನಲ್ಲಿ ಇಡಲಾಗಿದ್ದ ಬೋನಿಗೆ ಚಿರತೆ ಸೆರೆಯಾಗಿದೆ.ಟಿ.ನರಸೀಪುರ ತಾಲೂಕು ನುಗ್ಗಹಳ್ಳಿ ಕೊಪ್ಪಲು ಗ್ರಾಮದಲ್ಲಿ ಚಿರತೆ ಸೆರೆಯಾಗಿದೆ.ಹಲವು ದಿನಗಳಿಂದ ಆಗಾಗ ಕಾಣಿಸಿಕೊಳ್ಳುತ್ತಾ ಗ್ರಾಮಸ್ಥರಲ್ಲಿ ಆತಂಕ ಹುಟ್ಟಿಸಿತ್ತು.ಸಾಕು ಪ್ರಾಣಿಗಳು ಬಲಿಯಾಗುತ್ತಿತ್ತು.ಚಿರತೆ ಸೆರೆಗೆ ಗ್ರಾಮಸ್ಥರು ಒತ್ತಾಯಿಸಿದ್ದರು.ಗ್ರಾಮದ ಹೊರವಲಯದ ಜಮೀನಿನಲ್ಲಿ ಇಡಲಾದ ಬೋನಿಗೆ ಚಿರತೆ ಸೆರೆಯಾಗಿದೆ.ಗ್ರಾಮಸ್ಥರಲ್ಲಿ ಆತಂಕ ದೂರವಾಗಿದೆ…
Read More

ಯುಟ್ಯೂಬ್ ಚಾನೆಲ್ ಪಾರ್ಟ್ನರ್ ಪತ್ನಿಗೆ ಲೈಂಗಿಕ ಕಿರುಕುಳ ಆರೋಪ…ನಾಲ್ವರ ವಿರುದ್ದ FIR ದಾಖಲು…

ಮೈಸೂರು,ಮಾ18,Tv10 ಕನ್ನಡ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ವ್ಯಕ್ತಿ ತನ್ನ ಪಾರ್ಟ್ನರ್ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ವಿನಯ್,ಈತನ ಪತ್ನಿ ಮಮತ ,ಕಾರಿನ ಚಾಲಕ ರಾಘು ಹಾಗೂ ಚೆಂಗಪ್ಪ ಎಂಬುವರ ಮೇಲೆ ನೊಂದ ಮಹಿಳೆ ಎಫ್.ಐ.ಆರ್.ದಾಖಲು ಮಾಡಿದ್ದಾರೆ. ನೊಂದ ಮಹಿಳೆಯ ಪತಿ ಚಂದು ಹಾಗೂ ವಿನಯ್ ಇಬ್ಬರೂ ಸೇರಿ ಉಖ ಖಿಗಿ ಕನ್ನಡ ಎಂಬ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ.ಚಾನೆಲ್
Read More

ಕೊಟ್ಟಿಗೆಯಲ್ಲಿ ನೇಣು ಬಿಗಿದು ಲಾರಿ ಡ್ರೈವರ್ ಆತ್ಮಹತ್ಯೆ…

ಪಿರಿಯಾಪಟ್ಟಣ,ಮಾ16,Tv10 ಕನ್ನಡ ಕೊಟ್ಟಿಗೆಯಲ್ಲಿ ಲಾರಿ ಡ್ರೈವರ್ ಒಬ್ಬ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಪಿರಿಯಾಪಟ್ಟಣದ ಮುತ್ತುರಾಯ ಸ್ವಾಮಿ ದೇವಸ್ಥಾನದ ಬಳಿ ನಡೆದಿದೆ.ತಮಿಳುನಾಡು ಮೂಲದ ಲಾರಿ ಡ್ರೈವರ್ ಎಂದು ಹೇಳಲಾಗಿದೆ. ರಸ್ತೆ ಬದಿ ಲಾರಿಯನ್ನ ನಿಲ್ಲಿಸಿ ನೇಣಿಗೆ ಶರಣಾಗಿದ್ದಾನೆ.ಲಾರಿ ನೊಂದಣಿ ಸಂಖ್ಯೆ TN60 AY 0164 ಆಗಿದೆ.ಮೃತ ಲಾರಿ ಡ್ರೈವರ್ ಕುರಿತಂತೆ ಮಾಹಿತಿ ಲಭ್ಯವಾಗಿಲ್ಲ…
Read More

ನೀರಿನಲ್ಲಿ ವಿಷ ಬೆರೆಸಿ ಅಣ್ಣನ ಮಗನ ಕೊಲೆ ಯತ್ನ ಆರೋಪ…ಚಿಕ್ಕಪ್ಪ ಸೇರಿದಂತೆ ಐವರ ವಿರುದ್ದ FIR ದಾಖಲು…

ಮೈಸೂರು,ಮಾ16,Tv10 ಕನ್ನಡ ಸಾಲದ ಹಣ ಕೇಳಲು ಮನೆಗೆ ಬಂದ ಅಣ್ಣನ ಮಗನನ್ನ ಚಿಕ್ಕಪ್ಪ ಹಾಗೂ ಕುಟುಂಬಸ್ಥರು ನೀರಿನಲ್ಲಿ ವಿಷ ಬೆರೆಸಿ ಕೊಲೆಗೆ ಯತ್ನಿಸಿದ ಘಟನೆ ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳವಾಡಿ ಗ್ರಾಮದಲ್ಲಿ ನಡೆದಿದೆ.ಈ ಸಂಭಂಧ ಚಿಕ್ಕಪ್ಪ ಸೇರಿತೆ 5 ಮಂದಿ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಆರೋಪ ಪ್ರಕರಣ ದಾಖಲಾಗಿದೆ.ಬೆಳವಾಡಿಯ ಪ್ರಭಾಕರ್ ಎಂಬುವರನ್ನ ಕೊಲೆಗೆ ಯತ್ನಿಸಿದ ಆರೋಪದಡಿ ಚಿಕ್ಕಪ್ಪ ಶ್ರೀನಿವಾಸ,ಪತ್ನಿ ಗೀತಾ,ಮಕ್ಕಳಾದ ಸಂಜು,ರಂಜು ಹಾಗೂ
Read More

ಜೈನತೀರ್ಥಂಕರ ವಿಗ್ರಹಗಳನ್ನ ಮಾಡಿಕೊಡುವುದಾಗಿ ವಂಚನೆ…ಜಬಲ್ ಪುರದ ಮಾರ್ಬಲ್ ವ್ಯಾಪಾರಿ ವಿರುದ್ದ ಪ್ರಕರಣ ದಾಖಲು…

ಮೈಸೂರು,ಮಾ15,Tv10 ಕನ್ನಡ ಜೈನತೀರ್ಥಂಕರ ವಿಗ್ರಹಗಳನ್ನ ಮಾಡಿಕೊಡುವುದಾಗಿ ನಂಬಿಸಿ ಮಧ್ಯಪ್ರದೇಶ ಜಬಲ್ ಪುರದ ಮಾರ್ಬಲ್ ವ್ಯಾಪಾರಿಯೊಬ್ಬ ಮೈಸೂರಿನ ಶಾಂತಿನಾಥ ಸೇವಾ ಸಮಿತಿ ಪದಾಧಿಕಾರಿಗಳನ್ನ ವಂಚಿಸಿದ್ದಾನೆ.ವ್ಯಾಪಾರಿಯ ಮಾತುಗಳನ್ನ ನಂಬಿ ಪದಾಧಿಕಾರಿಗಳು 3.31 ಲಕ್ಷ ಹಣ ಕೊಟ್ಟು ವಂಚನೆಗೆ ಒಳಗಾಗಿದ್ದಾರೆ.ಈ ಸಂಭಂಧ ಕೆ.ಆರ್.ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಮಧ್ಯಪ್ರದೇಶದ ಜಬಲ್ ಪುರದ ಮಹಾವೀರ್ ಮಾರ್ಬಲ್ ಮತ್ತು ಮೂರ್ತಿ ಆರ್ಟ್ ನ ಮಾಲೀಕ ವಿಕಾಸ್ ಜೈನ್ ಎಂಬಾತನ ವಿರುದ್ದ ವಂಚನೆ ಪ್ರಕರಣ ದಾಖಲಾಗಿದೆ.ಶಾಂತಿನಾಥ ಸೇವಾ
Read More

ಸ್ನೇಹಿತೆಗೆ ಆಮಿಷವೊಡ್ಡಿ ಧೋಖಾ…21 ಲಕ್ಷ ನಗದು ಹಾಗೂ ಕಾರು ಜೊತೆ ವಂಚಕ ನಾಪತ್ತೆ…ಮೂವರ ವಿರುದ್ದ FIR ದಾಖಲು…

ಮೈಸೂರು,ಮಾ15,Tv10 ಕನ್ನಡ ಕುಟುಂಬಸ್ಥರಿಗೆ ಸರ್ಕಾರಿ ಕೆಲಸ ಕೊಡಿಸುವುದು ಸೇರಿದಂತೆ ಹಲವು ಆಮಿಷವೊಡ್ಡಿದ ಯುವಕ ತನ್ನ ಸ್ನೇಹಿತೆಯನ್ನ ವಂಚಿಸಿದ ಪ್ರಕರಣವೊಂದು ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳವಾಡಿಯಲ್ಲಿ ಬೆಳಕಿಗೆ ಬಂದಿದೆ.ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಯುವತಿ ಸುಪ್ರಿಯಾ ಎಂಬುವರಿಗೆ ಬರೋಬರಿ ವಿವಿದ ಹಂತಗಳಲ್ಲಿ 21 ಲಕ್ಷ ನಗದು ಹಾಗೂ ಕಾರು ಪಡೆದು ವಂಚಿಸಿದ್ದಾನೆ.ಸಂದೀಪ್ ಕುಮಾರ್ ಹಾಗೂ ಈತನ ಸ್ನೇಹಿತರಾದ ಮನೋಜ್ ಕುಮಾರ್ ಮತ್ತು ಪುನೀತ್ ಎಂಬುವರ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ
Read More

ಮುಡಾ ನಗರ ಯೋಜಕ ಸದಸ್ಯ ಆರ್.ಶೇಷ ರವರಿಗೆ ಅಧೀಕ್ಷಕ ಅಭಿಯಂತರರು ಪ್ರಭಾರ ಆಗಿ ನೇಮಕ..

ಮೈಸೂರು,ಮಾ15,Tv10 ಕನ್ನಡ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ನಗರ ಯೋಜಕ ಸದಸ್ಯರಾಗಿರುವ ಆರ್.ಶೇಷ ರವರನ್ನ ಅಧೀಕ್ಷಕ ಅಭಿಯಂತರರು ಪ್ರಭಾರ ಆಗಿ ನೇಮಕ ಮಾಡಲಾಗಿದೆ. ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಎನ್.ಬಿ.ಚೆನ್ನಕೇಶವ ರವರನ್ನ ಬಿಡುಗಡೆಗೊಳಿಸಿ ಆದೇಶಿಸಲಾಗಿದೆ.ಅಧೀಕ್ಷಕ ಅಭಿಯಂತರ ಅಧಿಕ ಪ್ರಭಾರ ಹುದ್ದೆಯನ್ನ ಆರ್.ಶೇಷ ರವರಿಗೆ ವಹಿಸಿ ಮುಡಾ ಆಯುಕ್ತರಾದ ದಿನೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ…
Read More

ಪ್ರೀತ್ಸೇ..ಪ್ರೀತ್ಸೇ..ಎಂದು ಯುವತಿಗೆ ಟಾರ್ಚರ್…ಖಾಸಗಿ ಫೋಟೂ ತೆಗೆದು ಬ್ಲಾಕ್ ಮೇಲ್…ಸೈಕೋ ವಿರುದ್ದ FIR…

ಮೈಸೂರು,ಮಾ11,Tv10 ಕನ್ನಡ ಪ್ರೀತ್ಸೇ ಪ್ರೀತ್ಸೇ ಎಂದು ಯುವತಿಯನ್ನ ಪೀಡಿಸುತ್ತಿರುವ ಸೈಕೋ ವಿರುದ್ದ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನೊಂದ ಯುವತಿ ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ.ವಿಜಯನಗರ ಬಡಾವಣೆಯ ನಿಖಿಲ್ ಹಾಗೂ ಈತನ ತಂದೆ ಸುಂದರ್ ಮತ್ತು ತಾಯಿ ಸರೋಜ ವಿರುದ್ದ ವಿಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪಕ್ಕದ ಮನೆಯಲ್ಲಿ ವಾಸವಿರುವ ನಿಖಿಲ್ ಕಳೆದ ಮೂರ್ನಾಲ್ಕು ವರ್ಷಗಳಿಂದ ಯುವತಿಯ ಹಿಂದೆ ಬಿದ್ದು ನನ್ನನ್ನೇ ಪ್ರೀತಿಸುವಂತೆ ಬೆದರಿಸಿದ್ದಾನೆ.ಪ್ರೀತಿಸದಿದ್ದರೆ ಕೊಲೆ ಮಾಡುವುದಾಗಿ
Read More