TV10 Kannada Exclusive

ಹುಣಸೂರು:ಕುಸಿದುಬಿದ್ದ ವೃದ್ದೆ ಸಾವು…

ಹುಣಸೂರು,ಮಾ25,Tv10 ಕನ್ನಡ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಅಜ್ಜಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.ನಗರದ ಬಿಎಂ ರಸ್ತೆಯಲ್ಲಿ ಘಟನೆ ನಡೆದಿದೆ.ನೋಡುತ್ತಿದ್ದಂತೆಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.ವೃದ್ದೆಯ ಗುರುತು ಪತ್ತೆಯಾಗಿಲ್ಲ.ಪತ್ತೆಗಾಗಿ ಪೊಲೀಸರು ಮನವಿ ಮಾಡಿದ್ದಾರೆ. ಹುಣಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ…
Read More

ಚುನಾವಣಾ ರಾಯಭಾರಿಗಳಾಗಿ ಕೃಪಾಕರ ಸೇನಾನಿ,ಮಾಡೆಲ್ ತನಿಷ್ಕಾ ಆಯ್ಕೆ…

ಮೈಸೂರು,ಮಾ25,Tv10 ಕನ್ನಡ ಮೈಸೂರು ಜಿಲ್ಲೆಯ ಚುನಾವಣಾ ರಾಯಭಾರಿಗಳಾಗಿ ಜಿಲ್ಲಾಡಳಿತದಿಂದ ಆಯ್ಕೆಮಾಡೆಲಿಂಗ್ ಕ್ಷೇತ್ರದ ತನಿಷ್ಕಾ ಹಾಗೂ ಅಂತರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ – ಸೇನಾನಿ ಆಯ್ಕೆಯಾಗಿದ್ದಾರೆ.ಮತದಾನ ಜಾಗೃತಿ ಕಾರ್ಯಕ್ರಮಗಳಲ್ಲಿ ರಾಯಭಾರಿಗಳುಮತದಾರರರಿಗೆ ಅರಿವು ಮೂಡಿಸಲಿದ್ದಾರೆ…
Read More

ಯದುವೀರ್ ರೇಡಿಯೋ ಕಾರ್ಯಕ್ರಮ ನಿಲ್ಲಿಸುವಂತೆ ಕಾಂಗ್ರೆಸ್ ವಕ್ತಾರ ಹೆಚ್.ಎ.ವೆಂಕಟೇಶ್ ದೂರು…

ಮೈಸೂರು,ಮಾ26,Tv10 ಕನ್ನಡ ಯದುವೀರ್ ರೇಡಿಯೋ ಕಾರ್ಯಕ್ರಮ ನಿಲ್ಲಿಸುವಂತೆ ಕಾಂಗ್ರೆಸ್ ಪಕ್ಷದ ವತಿಯಿಂದ ವಕ್ತಾರ ಹೆಚ್.ಎ.ವೆಂಕಟೇಶ್ಕರ್ನಾಟಕ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.104.8 ರೇಡಿಯೋ ಮಿರ್ಚ್ ಚಾನೆಲ್ ನಲ್ಲಿ ಯದುವೀರ್ ಕಾರ್ಯಕ್ರಮರಾಜರ ಬಾಯಿಂದ ರಾಜರ ಕಥೆಗಳು ಹೆಸರಿನಲ್ಲಿ ಪ್ರಸಾರವಾಗುತ್ತಿದೆ. ಕಾರ್ಯಕ್ರಮಯದುವೀರ್ ಮೈಸೂರು ಕೊಡಗು ಬಿಜೆಪಿ ಅಭ್ಯರ್ಥಿ ಹಿನ್ನೆಲೆ ನಿರ್ಬಂಧನೆ ವಿಧಿಸಿರೇಡಿಯೋದಲ್ಲಿ ಮಾತನಾಡುವ ಬಗ್ಗೆ ಕ್ಷಣ ಕ್ಷಣಕ್ಕೂ ರೇಡಿಯೋದಲ್ಲಿ ಜಾಹೀರಾತು ಬರುತ್ತಿದೆ.ಒಬ್ಬ ವ್ಯಕ್ತಿಯಾಗಿ ರಾಜರ ಬಗ್ಗೆ ಮಾತನಾಡುವುದರಲ್ಲಿ ತಪ್ಪಿಲ್ಲ‌ಆದರೆ ದಿನಾಂಕ 26.04.2024 ರ ಲೋಕಸಭಾ
Read More

ಮಂಡ್ಯ: ಪಟಾಕಿ ದುರಂತ…ಓರ್ವ ಸಾವು…ಇಬ್ಬರಿಗೆ ಗಾಯ…

ಮಂಡ್ಯ: ಪಟಾಕಿ ದುರಂತ…ಓರ್ವ ಸಾವು…ಇಬ್ಬರಿಗೆ ಗಾಯ… ಮಂಡ್ಯ,ಮಾ25,Tv10 ಕನ್ನಡ ಪಟಾಕಿ ಸ್ಫೋಟಗೊಂಡ ಪರಿಣಾಮ ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದು ಮತ್ತಿಬ್ಬರುಗಂಭೀರ ಗಾಯಗೊಂಡ ಘಟನೆಮಂಡ್ಯ ತಾಲೂಕಿನ ಜಿ.ಕೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ ತಮಿಳುನಾಡು ಮೂಲದ ರಮೇಶ್ (67) ಮೃತ ದುರ್ದೈವಿ.ನಾಗಲಿಂಗ ಹಾಗೂ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡುಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ಗ್ರಾಮದಲ್ಲಿ ಕಾಲಭೈರವೇಶ್ವರ ಹಬ್ಬಕ್ಕೆಂದು ಪಟಾಕಿ ಸಿಡಿಸಲು ತಮಿಳುನಾಡಿನಿಂದ ನಾಲ್ವರು ಆಗಮಿಸಿದ್ದರು.ನಿನ್ನೆ ರಾತ್ರಿ ಗ್ರಾಮದಲ್ಲಿ ಅದ್ದೂರಿಯಾಗಿ ಹಬ್ಬ ನೆರವೇರಿದೆ.ಗ್ರಾಮದ ಆಲೆಮನೆಯೊಂದರಲ್ಲಿ ನಾಲ್ವರು ಕಾರ್ಮಿಕರು ತಂಗಿದ್ದರು.ಇಂದು ಬೇರೊಂದು
Read More

ತಾಯಿ ಮಗಳು ಆತ್ಮಹತ್ಯೆ…ಪತಿಯ ಅಗಲಿಕೆಯಿಂದ ಮನನೊಂದಿದ್ದ ಪತ್ನಿ…ಸಾವಿನಲ್ಲಿ ಒಂದಾದ ಮಗಳು…

ಸರಗೂರು,ಮಾ25,Tv10 ಕನ್ನಡ ಪತಿಯ ಅಗಲಿಕೆಯಿಂದ ಮನನೊಂದ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಸಾವಿನಲ್ಲಿ ಮಗಳೂ ಸಹ ಒಂದಾದ ಮನಕಲಕುವ ಘಟನೆ ಸರಗೂರು ತಾಲೂಕಿನ ಶಂಖಹಳ್ಳಿ ಗ್ರಾಮದಲ್ಲಿ ನಡೆದಿದೆ.ಗೀತಾ(40) ಮಗಳು ಪೂರ್ಣಿಮ(15) ಮೃತ ದುರ್ದೈವಿಗಳು.ಕೆಲವು ದಿನಗಳ ಹಿಂದೆ ಗೀತಾ ಪತಿ ರಾಜನಾಯಕ ಅನಾರೋಗ್ಯದಿಂದ ಮೃತಪಟ್ಟಿದ್ದರು.ಪತಿಯ ಅಗಲಿಕೆಯ ನೋವಿನಿಂದ ಗೀತಾ ಹೊರಬಂದಿರಲಿಲ್ಲ.ತವರು ಮನೆಯವರು ಸಾಕಷ್ಟು ಆತ್ಮಸ್ಥೈರ್ಯ ತುಂಬಿದ್ದರು.ಹೋಗಿದ್ದೂ ಪತಿಯ ಅಗಲಿಕೆಯಿಂದ ಬೇಸತ್ತಿದ್ದ ಗೀತಾ ವಿಷಪದಾರ್ಥ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ತಾಯಿ ಸಾವಿನಲ್ಲಿ ಮಗಳು ಪೂರ್ಣಿಮ ಸಹ ಜೊತೆಯಾಗಿದ್ದಾರೆ.ಈ
Read More

ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಕಗ್ಗಂಟು ಇಲ್ಲ…ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ…

ಮೈಸೂರು,ಮಾ24,Tv10 ಕನ್ನಡ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿಯಾವ ಕಗ್ಗಂಟು ಆಗಿಲ್ಲ,ಎಳೆದಾಟವೂ ಆಗಿಲ್ಲ.ನಾಳೆ ಅಥವಾ ನಾಳಿದ್ದು ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.ಇಪ್ಪತ್ತು ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ.ಬಿಜೆಪಿಯವರ ರೀತಿ ನಾವು ಸುಳ್ಳು ಹೇಳಲ್ಲ.ಅವ್ರು 28 ಕ್ಷೇತ್ರ ಗೆಲ್ಲುತ್ತೇವೆ ಅಂತಾರೆ ಸಾಧ್ಯನಾ…?ಬಿಜೆಪಿ ಜೆಡಿಎಸ್ ಮೈತ್ರಿಯಿಂದ ನಮಗೆ ಅನುಕೂಲವಾಗಿದೆ.ಈ ಹಿಂದೆ ಜೆಡಿಎಸ್ ಜೊತೆ ಮೈತ್ರಿ ಆಗಿದ್ದಾಗ ನಮಗೆ ಅನಾನುಕೂಲ ಆಗಿದೆ.ಅದರಂತೆ ಇವರ ಮೈತ್ರಿಯೂ ಅವರಿಗೆ ಅನುಕೂಲ
Read More

ಯದುವೀರ್ ಗೆ ತುಲಾಭಾರ…ಗೋವುಗಳಿಗೆ ಪೂಜೆ ಸಲ್ಲಿಸಿ ಹುಟ್ಟುಹಬ್ಬ ಆಚರಣೆ…

ಮೈಸೂರು,ಮಾ24,Tv10 ಕನ್ನಡ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರಿಗೆ ಹುಟ್ಟುಹಬ್ಬವನ್ನ ಇಂದು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಪಿಂಜರ್ ಫೋಲ್‌ನಲ್ಲಿ ವಿಶೇಷವಾಗಿ ಆಚರಿಸಲಾಯಿತು. ಗೋವುಗಳಿಗೆ ಪೂಜೆ ಸಲ್ಲಿಸಿ ಹಾಗೂ ತುಲಾಭಾರ ಮಾಡುವ ಮೂಲಕ ಆಚರಿಸಲಾಯಿತು.ಶಾಸಕ ಶ್ರೀವತ್ಸ ಸೇರಿದಂತೆ ಹಲವು ಬಿಜೆಪಿ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು…
Read More

ಮದುವೆ ಆಗುವಂತೆ ಒತ್ತಾಯಿಸಿ ಪ್ರೇಯಸಿಯನ್ನ ಕೊಂದ ಆರೋಪ ಸಾಬೀತು…ಹಂತಕನಿಗೆ ಜೀವಾವಧಿ ಶಿಕ್ಷೆ…

ಮೈಸೂರು,ಮಾ22,Tv10 ಕನ್ನಡ ಮದುವೆ ಆಗುವಂತೆ ಒತ್ತಾಯಿಸುತ್ತಿದ್ದ ಪ್ರೇಯಸಿಯ ಉಸಿರುಗಟ್ಟಿಸಿ ಕೊಲೆಗೈದ ಆರೋಪ ಸಾಬೀತಾದ ಹಿನ್ನಲೆ ಹಂತಕನಿಗೆ ಮೈಸೂರು ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.ನಂಜನಗೂಡು ತಾಲೂಕು ಹುಲ್ಲಹಳ್ಳಿ ಹೋಬಳಿಯ ಹಾಡ್ಯಾ ಗ್ರಾಮದ ನಾಗೇಶ್ ಶಿಕ್ಷೆಗೆ ಒಳಗಾದ ಹಂತಕ.ಮೈಸೂರಿನ 3 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಭಾಗ್ಯ ರವರು ತೀರ್ಪು ನೀಡಿದ್ದಾರೆ.2019 ರಲ್ಲಿ ಲಕ್ಷ್ಮಿ ಎಂಬಾಕೆಯನ್ನ ಕೊಲೆ ಮಾಡಿದ ಆರೋಪ
Read More

ಪ್ಲಾಸ್ಟಿಕ್ ಚೀಲದಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ…ಕಪಿಲಾ ನದಿ ದಂಡೆಯಲ್ಲಿ ಗೋಚರ…

ನಂಜನಗೂಡು,ಮಾ22,Tv10 ಕನ್ನಡ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಶವ ಪತ್ತೆಯಾಗಿದೆ.ನಂಜನಗೂಡಿನ ಕಪಿಲಾ ನದಿಯಲ್ಲಿ ಪತ್ತೆಯಾಗಿದೆ.ಸುಮಾರು 40 ರಿಂದ 45 ವರ್ಷ ವಯಸ್ಸಿನ ಅಪರಿಚಿತ ಪುರುಷನನ್ನ ಬೇರೆಡೆ ಕೊಲೆ ಮಾಡಿ ನದಿಯಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಕೈಯಲ್ಲಿ ರೇಖಾ ಎನ್ನುವ ಹಚ್ಚೆ ಹಾಕಲಾಗಿದೆ. ಕಳೆದ ಎರಡು ದಿನಗಳ ಹಿಂದೆ ದುಷ್ಕರ್ಮಿಗಳು ಅಪರಿಚಿತ ವ್ಯಕ್ತಿಯನ್ನು ಕೊಲೆಗೈದು, ಮೊದಲು ಬೆಡ್ ಶೀಟ್ ನಲ್ಲಿ ಸುತ್ತಿ ನಂತರ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಕಪಿಲಾ ನದಿಯ
Read More

ತೆರೆದ ಸಂಪಿಗೆ ಬಿದ್ದು ಮಗು ಸಾವು…ಅಂಗನವಾಡಿ ಕೇಂದ್ರದಲ್ಲಿ ಘಟನೆ…

ಎಚ್.ಡಿ.ಕೋಟೆ,ಮಾ22,Tv10 ಕನ್ನಡ ಎಚ್.ಡಿ.ಕೋಟೆ ತಾಲೋಕಿನ ಅಂತರಸಂತೆ ಸಮೀಪದ ಬಂಗ್ಲಿಹುಂಡಿ : ಅಂಗನವಾಡಿಯಲ್ಲಿ ಬಾಯ್ತೆರೆದಿದ್ದ ನೀರಿನ ಸಂಪಿಗೆ ಬಿದ್ದು ಮಗುವೊಂದು ಸಾವನ್ನಪ್ಪಿರುವ ಮನಕಲಕುವ ಘಟನೆ ನಡೆದಿದೆ. ಸ್ವಾಮಿ ಮತ್ತು ಅಂಜು ದಂಪತಿಗಳ ಪುತ್ರಿ ಸನ್ನಿಧಿ (3) ಮೃತದುರ್ದೈವಿ.ಸಂಜೆ ಎಂದಿನಂತೆ ಆಟವಾಡುತ್ತಿದ್ದ ವೇಳೆ ಅಂಗನವಾಡಿ ಕೇಂದ್ರದ ಸಂಪಿನ ಬಳಿ ಹೋಗಿದೆ. ಸಂಪಿನ ಬಾಗಿಲು ತೆರೆದಿದ್ದ ಪರಿಣಾಮ ಆಯತಪ್ಪಿ ಮಗು ಸಂಪಿನ ಒಳಗೆ ಬಿದ್ದಿದೆ.ಕತ್ತಲಾಗುತ್ತಿದ್ದರು ಮಗು ಮನೆಗೆ ಬಾರದಿದ್ದನ್ನು ಕಂಡು ಗಾಬರಿಗೊಂಡ ಪೋಷಕರು ಹುಡುಕಾಟ
Read More