- May 26, 2023
ವ್ಯಾಪಾರದಲ್ಲಿ ನಷ್ಟ…ಅತ್ತೆ ಮನೆಯಲ್ಲಿ ನೇಣಿಗೆ ಶರಣಾದ ಅಳಿಯ…

ಮೈಸೂರು,ಮೇ26,Tv10 ಕನ್ನಡ
ವ್ಯಾಪಾರದಲ್ಲಿ ನಷ್ಟ ಉಂಟಾದ ಹಿನ್ನಲೆ ಅತ್ತೆ ಮನೆಯಲ್ಲಿ ಅಳಿಯ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ವಿದ್ಯಾರಣ್ಯಪುರಂ ನಲ್ಲಿ ನಡೆದಿದೆ.ಉಬೇದ್(32) ಆತ್ಮಹತ್ಯೆಗೆ ಶರಣಾದ ದುರ್ದೈವಿ.ಬನ್ನಿಮಂಟಪದ ನೊವಾಸಿ ಉಬೇದ್ ಕಂಪ್ಯೂಟರ್ ಬಿಡಿ ಬಾಗಗಳ ವ್ಯಾಪಾರ ಮಾಡುತ್ತಿದ್ದು ನಷ್ಟ ಅನುಭವಿಸಿದ್ದ.ನಂತರ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ.ಸಾಕಷ್ಟು ಹಣ ಕಳೆದುಕೊಂಡಿದ್ದ ಉಬೇದ್ ಖಿನ್ನತೆಗೆ ಒಳಗಾಗಿ ತಾಯಿಯ ಸಲಹೆ ಮೇರೆಗೆ ವಿದ್ಯಾರಣ್ಯಪುರಂ ನಲ್ಲಿರುವ ಅತ್ತೆಮನೆಗೆ ಬಂದು ತಂಗಿದ್ದ.ವ್ಯಾಪಾರದಲ್ಲಿ ನಷ್ಟ ಅನುಭವಿಸಿ ಮನನೊಂದ ಉಬೇದ್ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…