ಪಬ್ಲಿಕ್ ಸ್ಥಳಗಳಲ್ಲಿ ಸ್ಮೋಕಿಂಗ್ ವಿರುದ್ದ ಕುವೆಂಪುನಗರ ಠಾಣೆ ಪೊಲೀಸರ ಸಮರ…13,800 ರೂ ದಂಡ ವಸೂಲಿ…

ಪಬ್ಲಿಕ್ ಸ್ಥಳಗಳಲ್ಲಿ ಸ್ಮೋಕಿಂಗ್ ವಿರುದ್ದ ಕುವೆಂಪುನಗರ ಠಾಣೆ ಪೊಲೀಸರ ಸಮರ…13,800 ರೂ ದಂಡ ವಸೂಲಿ…

ಮೈಸೂರು,ಜು21,Tv10 ಕನ್ನಡ
ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುತ್ತಾ ಮುಜುಗರ ತರುವ ಯುವಕರಿಗೆ ಕುವೆಂಪುನಗರ ಠಾಣೆ ಪೊಲೀಸರು ಬಿ ಸಿ ಮುಟ್ಟಿಸಿದ್ದಾರೆ. ಯುವಕರಿಗೆ ಟೀ ಕೊಟ್ಟು ಸಿಗರೇಟ್ ಸೇದಲು ಅವಕಾಶ ಕಲ್ಪಿಸಿಕೊಟ್ಟ ಚಾಯ್ ವಾಲಾಗಳಿಗೂ ಬಿಸಿ

ಮುಟ್ಟಿಸಿದ್ದಾರೆ.ಸಿಗರೇಟ್ ಸೇದುತ್ತಾ ಕಾಲಹರಣ ಮಾಡುತ್ತಿದ್ದ ಯುವಕರಿಗೆ ದಂಡ ವಿಧಿಸಲಾಗಿದೆ.ಸ್ಮೋಕ್ ಮಾಡಿದವರಿಗೆ ತಲಾ 100 ರೂ ದಂಡ ವಿಧಿಸಿದರೆ.ಟೀ ಅಂಗಡಿ ಮಾಲೀಕರಿಗೆ 200 ರೂ ದಂಡ ವಿಧಿಸಿದ್ದಾರೆ.ಕುವೆಂಪುನಗರ ಠಾಣಾ ವ್ಯಾಪ್ತಿಯ ಬಹುತೇಕ ಟೀ ಅಂಗಡಿಗಳ ಮುಂದೆ ನಿಂತು ಸಿಗರೇಟ್ ಸೇದಿದ ಯುವಕರು ದಂಡ ತೆತ್ತಿದ್ದಾರೆ.ಸುಮಾರು 15 ದಿನಗಳಲ್ಲಿ 127 ಪ್ರಕರಣಗಳು ದಾಖಲಾಗಿವೆ.ಸಧ್ಯ ಟೀ ಅಂಗಡಿ ಮಾಲೀಕರು ಹಾಗೂ ಸಿಗರೇಟ್ ಸೇವನೆ ಮಾಡಿದ ಯುವಕರು ಸೇರಿದಂತೆ 18,800/- ರೂ ದಂಡ ವಸೂಲಿ ಮಾಡಲಾಗಿದೆ. ಈ ಕಾರ್ಯಾಚರಣೆ ಮತ್ತಷ್ಟು ಮುಂದುವರೆಯಲಿದೆ.ಟೀ ಅಂಗಡಿ ಮುಂದೆ ನಿಂತು ಸಿಗರೇಟ್ ಸೇದುವ ಅಭ್ಯಾಸವಿದ್ದಲ್ಲಿ ಕೂಡಲೇ ಕೈ ಬಿಡಿ ಇಲ್ಲದಿದ್ದಲ್ಲಿ ಪೊಲೀಸರು ಹಾಜರಾಗುವುದು ಗ್ಯಾರೆಂಟಿ.

ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್,ಡಿಸಿಪಿ ಮುತ್ತುರಾಜ್ ಹಾಗೂ ಜಾಹ್ನವಿ ರವರ ಸೂಚನೆ ಮೇರೆಗೆ ಹಾಗೂ ಕೆ.ಆರ್.ಉಪವಿಭಾಗದ ಎಸಿಪಿ ಗಂಗಾಧರಸ್ವಾಮಿ ಮಾರ್ಗದರ್ಶನದಂತೆ ಕುವೆಂಪುನಗರ ಠಾಣೆ ಇನ್ಸ್ಪೆಕ್ಟರ್ ಎಲ್.ಅರುಣ್ ರವರು ಪಬ್ಲಿಕ್ ಪ್ಲೇಸ್ ನಲ್ಲಿ ಸ್ಮೋಕ್ ಮಾಡುವವರ ವಿರುದ್ದ ಸಮರ ಸಾರಿದ್ದಾರೆ…

Spread the love

Related post

ಫ್ಲೆಕ್ಸ್ ಗಳಲ್ಲಿ ರಾಜಕಾರಣಿಗಳನ್ನೇ ಮೀರಿಸುತ್ತಿರುವ ಮಂಡ್ಯ ಎಸ್ಪಿ ಡಾ.ಶೋಭಾರಾಣಿ…

ಫ್ಲೆಕ್ಸ್ ಗಳಲ್ಲಿ ರಾಜಕಾರಣಿಗಳನ್ನೇ ಮೀರಿಸುತ್ತಿರುವ ಮಂಡ್ಯ ಎಸ್ಪಿ ಡಾ.ಶೋಭಾರಾಣಿ…

ಫ್ಲೆಕ್ಸ್ ಗಳಲ್ಲಿ ರಾಜಕಾರಣಿಗಳನ್ನೇ ಮೀರಿಸುತ್ತಿರುವ ಮಂಡ್ಯ ಎಸ್ಪಿ ಡಾ.ಶೋಭಾರಾಣಿ… ಮಂಡ್ಯ,ಮಾ21,Tv10 ಕನ್ನಡ ಮಂಡ್ಯ ಜಿಲ್ಲಾ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ರವರು ಫ್ಲೆಕ್ಸ್ ಗಳಲ್ಲಿ ರಾಜಕಾರಿಣಿಗಳನ್ನೇ ಮೀರಿಸುತ್ತಿದ್ದಾರೆ.ಮಂಡ್ಯದ ವಿವಿದೆಡೆ ಯುಗಾದಿ ಹಬ್ಬದ…
ಡಿಜಿಟಲ್ ಅರೆಸ್ಟ್ ಭೀತಿ ಸೃಷ್ಟಿ…ವೃದ್ದರೊಬ್ಬರಿಗೆ 8.50 ಲಕ್ಷ ವಂಚನೆ…ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…

ಡಿಜಿಟಲ್ ಅರೆಸ್ಟ್ ಭೀತಿ ಸೃಷ್ಟಿ…ವೃದ್ದರೊಬ್ಬರಿಗೆ 8.50 ಲಕ್ಷ ವಂಚನೆ…ಸೆನ್ ಪೊಲೀಸ್ ಠಾಣೆಯಲ್ಲಿ…

ಡಿಜಿಟಲ್ ಅರೆಸ್ಟ್ ಭೀತಿ ಸೃಷ್ಟಿ…ವೃದ್ದರೊಬ್ಬರಿಗೆ 8.50 ಲಕ್ಷ ವಂಚನೆ…ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು… ಮೈಸೂರು,ಮಾ20,Tv10 ಕನ್ನಡ ಡಿಜಿಟಲ್ ಅರೆಸ್ಟ್ ಭೀತಿ ಸೃಷ್ಟಿಸಿ ವೃದ್ದರೊಬ್ಬರಿಗೆ 8,50,047/- ರೂ ವಂಚಿಸಿದ…
ರಮ್ಯಾ ಆರ್. ಮಹಿಳೆ ನ್ಯಾಯಾಧೀಶರಾಗಿ ಆಯ್ಕೆ ಮಹಿಳಾ ಸಬಲೀಕರಣಕ್ಕೆ ಹೊಸ ಮೈಲುಗಲ್ಲುಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಿರಗುಂದ ಗ್ರಾಮದ ರಾಜೇಂದ್ರ ಪ್ರಸಾದ್ MD(ಜಾನಪದ ಕಲಾವಿದರು

ರಮ್ಯಾ ಆರ್. ಮಹಿಳೆ ನ್ಯಾಯಾಧೀಶರಾಗಿ ಆಯ್ಕೆ ಮಹಿಳಾ ಸಬಲೀಕರಣಕ್ಕೆ ಹೊಸ ಮೈಲುಗಲ್ಲುಮೈಸೂರು…

ರಮ್ಯಾ ಆರ್. ಮಹಿಳೆ ನ್ಯಾಯಾಧೀಶರಾಗಿ ಆಯ್ಕೆ ಮಹಿಳಾ ಸಬಲೀಕರಣಕ್ಕೆ ಹೊಸ ಮೈಲುಗಲ್ಲುಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಿರಗುಂದ ಗ್ರಾಮದ ರಾಜೇಂದ್ರ ಪ್ರಸಾದ್ MD(ಜಾನಪದ ಕಲಾವಿದರು ) ಪಾರ್ವತಮ್ಮ N…

Leave a Reply

Your email address will not be published. Required fields are marked *