ಹುಣಸೂರು:ಬೈಕ್ ಹಾಗೂ ಕ್ಯಾಂಟರ್ ನಡುವೆ ಢಿಕ್ಕಿ…ದಂಪತಿ ಸಾವು…
ಹುಣಸೂರು,ಮಾ2,Tv10 ಕನ್ನಡ ಬೈಕ್ ಕ್ಯಾಂಟರ್ ನಡುವೆ ನಡೆದಅಪಘಾತದಲ್ಲಿ ದಂಪತಿ ಸಾವನ್ನಪ್ಪಿದ ಘಟನೆಹುಣಸೂರು ಕನಕ ಭವನ ಬಳಿ ಸಂಭವಿಸಿದೆ.ಮಂಜುನಾಥ ಬಡಾವಣೆಯ ನಿವಾಸಿ ರಾಜು (64) ಹಾಗೂ ಅವರ ಪತ್ನಿ ಸುನಂದ (55) ಮೃತ ದುರ್ದೈವಿಗಳು.ಹುಣಸೂರು ಕಡೆಯಿಂದ ವೇಗವಾಗಿ ಬಂದ ಕ್ಯಾಂಟರ್ ಗೂಡ್ಸ್ ವಾಹನ ಬೈಕ್ ಗೆ ಢಿಕ್ಕಿ ಹೊಡೆದಿದೆ.ಅಪಘಾತ ನಡೆಸಿದ ಕ್ಯಾಂಟರ್ ಚಾಲಕ ಚಾಲಕ ಪರಾರಿಯಾಗಿದ್ದಾನೆ.ಸಾರ್ವಜನಿಕರೇ ಹಿಂಬಾಲಿಸಿ ವಾಹನ ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
Read More