TV10 Kannada Exclusive

ಮಲಿನವಾಗುತ್ತಿರುವ ಹುಲ್ಲಹಳ್ಳಿ ನಾಲೆ ನೀರು…ಕಾವೇರಿ ನೀರಾವರಿ ನಿಗಮದಿಂದ ದೇಬೂರು ಗ್ರಾ.ಪಂ. ಪಿಡಿಓ ಗೆ ಪತ್ರ…

ನಂಜನಗೂಡು,ಡಿ18,Tv10 ಕನ್ನಡ ನಂಜನಗೂಡು ತಾಲೂಕು ದೇಬೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಹುಲ್ಲಹಳ್ಳಿ ನಾಲೆಯ ಕೆಕವು ಭಾಗಗಳಲ್ಲಿ ನಾಲೆ ನೀರು ಮಲಿನವಾಗುತ್ತಿದೆ.ಕೆಲವು ಹಳ್ಳಿಗಳಿಂದ ಬರುತ್ತಿರುವ ಚರಂಡಿ ನೀರು ನಾಲೆಗೆ ಸೇರುತ್ತಿರುವುದರಿಂದ ಮಲಿನವಾಗುತ್ತಿದೆ.ಅಲ್ಲದೆ ಸರ್ವಿಸ್ ರಸ್ತೆಗಳ ಇಕ್ಕೆಲಗಳಲ್ಲಿ ತ್ಯಾಜ್ಯಗಳನ್ನ ಸುರಿಯಲಾಗುತ್ತಿದೆ.ಹೀಗಾಗಿ ಪರಿಸರ,ನೀರು, ಅಂತರ್ಜಲ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.ಹೀಗಾಗಿ ಕೂಡಲೇ ಸ್ವಚ್ಛತೆಗೆ ಆಧ್ಯತೆ ನೀಡುವಂತೆ ಪಿಡಿಓ ಗೆ ಕಾವೇರಿ ನೀರಾವರಿ ನಿಗಮದಿಂದ ಪತ್ರ ರವಾನೆಯಾಗಿದೆ.ಕಾವೇರಿ ನೀರಾವರಿ ಅಧಿನಿಯಮ 1965 ರ
Read More

ಕೇಂದ್ರ ಕಾರಾಗೃಹ ಆವರಣದಲ್ಲಿ ನಿಷೇಧಿತ ವಸ್ತುಗಳು ಪತ್ತೆ…ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…

ಮೈಸೂರು,ಡಿ18,Tv10 ಕನ್ನಡ ಮೈಸೂರು ಕೇಂದ್ರ ಕಾರಾಗೃಹದ ಆವರಣದಲ್ಲಿ ನಿಷೇಧತ ವಸ್ತುಗಳು ಪತ್ತೆಯಾಗಿದೆ.ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಕಪ್ಪು ಬಣ್ಣದ ಬಟ್ಟೆಯಿಂದ ಸುತ್ತಿದ್ದ ಪ್ಯಾಕೆಟ್ ಕಂಡು ಬಂದಿದೆ.ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲಿಸಿದಾಗ ಪ್ಯಾಕೆಟ್ ನಲ್ಲಿ ಒಂದು ಮೊಬೈಲ್,ಒಂದು ಬ್ಯಾಟರಿ,ಗಾಂಜಾ ಕಂಡು ಬಂದಿದೆ.ಸ್ಮಶಾನಕ್ಕೆ ಹೊಂದಿಕೊಂಡಂತೆ ಇರುವ ಕಾರಾಗೃಹದ ಗೋಡೆ ಒಳಗೆ ವಸ್ತುಗಳು ಪತ್ತೆಯಾಗಿದೆ.ಹೊರಗಿನಿಂದ ಅನಾಮಧೇಯ ವ್ಯಕ್ತಿಗಳು ಕಾರಾಗೃಹದ ಒಳಗೆ ಎಸೆದಿರಬಹುದೆಂದು ಶಂಕಿಸಲಾಗಿದೆ.ಈ ಸಂಭಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
Read More

ರಾಜಕೀಯವಾಗಿ ಬೆಳೆಯುತ್ತಿರುವುದಕ್ಕೆ ಅಸೂಯೆ…ಗುಂಪು ಕಟ್ಟಿಕೊಂಡು ದಂಪತಿ ಮೇಲೆ ಹಲ್ಲೆ…ಮಹಿಳೆ ಸೇರಿದಂತೆ 6 ಮಂದಿ ವಿರುದ್ದ FIR ದಾಖಲು…

ಮೈಸೂರು,ಡಿ17,Tv10 ಕನ್ನಡ ರಾಜಕೀಯವಾಗಿ ಬೆಳೆಯುತ್ತಿರುವುದನ್ನ ಸಹಿಸದ ಮಹಿಳೆಯೊಬ್ಬಳು ಗುಂಪು ಕಟ್ಟಿಕೊಂಡು ಬಂದು ದಂಪತಿ ಮೇಲೆ ಗೂಂಡಾವರ್ತನೆ ನಡೆಸಿ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದ ಘಟನೆ ಮೈಸೂರಿನ ವಿವೇಕಾನಂದ ನಗರದಲ್ಲಿ ನಡೆದಿದೆ.ಘಟನೆಗೆ ಸಂಭಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ 6 ಮಂದಿ ವಿರುದ್ದ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚೆನ್ನಪಟ್ಟಣ ನಗರದ ಪವಿತ್ರಾ ಪ್ರಭಾಕರ್ ರೆಡ್ಡಿ ಹಾಗೂ ಇವರ ಸಹಚರರಾದ ರಂಗಪ್ಪ,ಕೆಂಡಗಣ್ಣ,ಅಭಿ,ಶ್ರೀನಿವಾಸ,ಶಿವು ಎಂಬುವರ ವಿರುದ್ದ ಪ್ರಕರಣ ದಾಖಲಾಗಿದೆ.ವಿವೇಕಾನಂದ ನಗರದ ನಾಗರತ್ನ
Read More

ಚಿರತೆ ದಾಳಿ…10 ಮೇಕೆಗಳು ಬಲಿ…ಗ್ರಾಮಸ್ಥರಲ್ಲಿ ಆತಂಕ…

ಮೈಸೂರು,ಡಿ17,Tv10 ಕನ್ನಡ ಚಿರತೆ ದಾಳಿಗೆ 10 ಮೇಕೆಗಳು ಬಲಿಯಾದ ಘಟನೆಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ಧನಗಳ್ಳಿಯಲ್ಲಿ ನಡೆದಿದೆ.ಧನಗಳ್ಳಿ ಗ್ರಾಮದ ರೈತ ಬಸವರಾಜು ಎಂಬುವರಿಗೆ ಸೇರಿದ ಮೇಕೆಗಳು ಬಲಿಯಾಗಿವೆ.ಮೇಕೆ ಸಾಕಾಣಿಕೆಯಿಂದ ಜೀವನ ಸಾಗಿಸುತ್ತಿದ್ದ ರೈತ ಬಸವರಾಜು ಕಂಗಾಲಾಗಿದ್ದಾರೆ.ಚಿರತೆ ದಾಳಿಯಿಂದಾಗಿ ಸುತ್ತಮುತ್ತಲಿನ ಜನರಲ್ಲಿ ಆತಂಕ ಮನೆ ಮಾಡಿದೆ.ಎಂದಿನಂತೆ ಗ್ರಾಮದ ಸಮೀಪದ ಕೆಎಚ್‌ಬಿ ಕಾಲೋನಿ ಬಳಿ ಮೇಕೆಗಳನ್ನು ಮೇಯಲು ಬಿಟ್ಟಿದ್ದ ಬಸವರಾಜುಸಂಜೆ ಮನೆಗೆ ಹೊಡೆದುಕೊಂಡು ಹೋಗಲು ಸ್ಥಳಕ್ಕೆ ಬಂದಾಗ ಏಳು ಮೇಕೆಗಳು ರಕ್ತಸಿಕ್ತವಾಗಿ ಸತ್ತು
Read More

ಪತಿಯ ಅನೈತಿಕ ಸಂಭಂಧ…ಪತ್ನಿ ಅನುಮಾನಾಸ್ಪದ ಸಾವು…ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…ಕೊಲೆ ಆರೋಪ…ಪತಿ,ಪ್ರಿಯತಮೆ,ಸಂಭಂಧಿಕರ ವಿರುದ್ದ ದೂರು…UDR ದಾಖಲು…

ಮೈಸೂರು,ಡಿ16,Tv10 ಕನ್ನಡ ಪತಿಯ ಅನೈತಿಕ ಸಂಭಂಧದ ವಿಚಾರದಲ್ಲಿ ಗಲಾಟೆ ಮಾಡಿಕೊಂಡು ಮನೆ ಬಿಟ್ಟ ಗೃಹಿಣಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮೈಸೂರು ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೂರ ಗ್ರಾಮದಲ್ಲಿ ನಡೆದಿದೆ.ಗೃಹಿಣಿಯ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಸಂಭಂಧಿಕರು ಪತಿ,ಪ್ರಿಯತಮೆ ಹಾಗೂ ಇಬ್ಬರು ಸಂಭಂಧಿಕರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ತೆನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.ಸಧ್ಯ ಜಯಪುರ ಪೊಲೀಸ್ ಠಾಣೆಯಲ್ಲಿ UDR ದಾಖಲಾಗಿದೆ. ನಂಜನಗೂಡು ತಾಲೂಕು ಗೌಡರಹುಂಡಿ ಗ್ರಾಮದ ಸರೋಜಮ್ಮ
Read More

ಅಪರಾಧ ತಡೆ ಮಾಸಾಚರಣೆ…ಹಿರಿಯ ನಾಗರೀಕರಿಗೆ ಸೈಬರ್ ಕ್ರೈಂ ಕುರಿತು ಜಾಗೃತಿ…ಕುವೆಂಪುನಗರ ಠಾಣೆಯಲ್ಲಿ ಕಾರ್ಯಕ್ರಮ…

ಮೈಸೂರು,ಡಿ16,Tv10 ಕನ್ನಡ ಅಪರಾಧ ತಡೆ ಮಾಸಾಚರಣೆ ಹಿನ್ನಲೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಹಿರಿಯ ನಾಗರೀಕರಿಗೆ ಸೈಬರ್ ಕ್ರೈಂ ಸೇರಿದಂತೆ ಇತರ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಇತ್ತೀಚೆಗೆ ಹೆಚ್ಚಿನ ಲಾಭದ ಆಮಿಷ ನೀಡಿ ಸಾಮಾಜಿಕ ಜಾಲತಾಣಗಳ ಮೂಲಕ ಹಿರಿಯ ನಾಗರೀಕರನ್ನೇ ಗುರಿಯಾಗಿ ಇಟ್ಟುಕೊಂಡು ವಂಚಕರು ಲಕ್ಷಾಂತರ ರೂಗಳಿಗೆ ಪಂಗನಾಮ ಹಾಕುತ್ತಿರುವ ಪ್ರಕರಣಗಳು ದಾಖಲಾಗುತ್ತಿದೆ.ಈ ಹಿನ್ನಲೆ ಹಿರಿಯ ನಾಗರೀಕರಿಗೆ ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅಪರಾಧ ತಡೆ ಮಾಸಾಚರಣೆ
Read More

ದತ್ತಪೀಠದಲ್ಲಿ ಹನುಮ ಜಯಂತಿ ಸಂಭ್ರಮ…ಗಣಪತಿ ಶ್ರೀಗಳಿಂದ ಕಾರ್ಯಸಿದ್ದಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ…

ಮೈಸೂರು,ಡಿ13,Tv10 ಕನ್ನಡ ಹನುಮ ಜಯಂತಿ ಹಿನ್ನಲೆ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ಅವಧೂತ ದತ್ತ ಪೀಠದಲ್ಲಿ ಕಾರ್ಯಸಿದ್ದ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆಗಳು ನೆರವೇರಿದವು. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಇಂದು ವಿಶೇಷ ಪೂಜೆ ಸಲ್ಲಿಸಿದರು.ಸಾವಿರಾರು ಭಕ್ತರು ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು…
Read More

11 ವರ್ಷಗಳ ನಂತರ ಬಾಗಿಲು ತೆರೆದ ಮಾರಮ್ಮನ ದೇವಾಲಯ…ತಹಸೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಯಶಸ್ವಿ ಶಾಂತಿಸಭೆ…ಗ್ರಾಮದಲ್ಲಿ ಸಂತಸ…

ಮೈಸೂರು,ಡಿ13,Tv10 ಕನ್ನಡ 11 ವರ್ಷಗಳ ನಂತರ ಮುಚ್ಚಿದ ಮಾರಮ್ಮನ ದೇವಸ್ಥಾನದ ಬಾಗಿಲು ಇಂದು ತೆರೆಯಲಾಯಿತು.ಮೈಸೂರು ತಾಲೂಕು ತಹಸೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ತೆಗೆದು ಕೊಂಡ ತೀರ್ಮಾನದಂತೆ ಇಂದು ಬಾಗಿಲು ತೆರೆದು ವಿಶೇಷ ಪೂಜೆ ನೆರವೇರಿಸಲಾಯಿತು. ಮೈಸೂರು ತಾಲೂಕು ಜಯಪುರ ಹೋಬಳಿ ಮಾರ್ಬಳ್ಳಿ ಗ್ರಾಮದ ಮಾರಮ್ಮ ದೇವಾಲಯದಲ್ಲಿ ಇಂದಿನಿಂದ ಎಂದಿನಂತೆ ಪೂಜಾ ಕೈಂಕರ್ಯಗಳ ನೆರವೇರಲಿದೆ.ಸುಮಾರು 11 ವರ್ಷಗಳ ಹಿಂದೆ ದಲಿತರ ಪ್ರವೇಶಕ್ಕೆ ನಿರ್ಭಂಧ ಹೇರಿದ ಹಿನ್ನಲೆಯಲ್ಲಿ ಭಾರಿ
Read More

ಹನುಮ ಜಯಂತಿ ಹಿನ್ನಲೆ…ಹುಣಸೂರು ಪಟ್ಟಣದಾದ್ಯಂತ ಮೂರು ದಿನಗಳ ಕಾಲ ಮಧ್ಯ ಮಾರಾಟ ನಿಷೇಧ…

ಹುಣಸೂರು,ಡಿ12,Tv10 ಕನ್ನಡ ಹನುಮ ಜಯಂತಿ ಹಿನ್ನಲೆ ಡಿ.13 ರಿಂದ ಹುಣಸೂರು ತಾಲೂಕಿನಾದ್ಯಂತ ಹಾಗೂ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಗ್ರಾಮ ಮತ್ತು ಹೆಚ್.ಡಿ.ಕೋಟೆಚತಾಲೂಕಿನ ಅಣ್ಣೂರು ಗ್ರಾಮದಲ್ಲಿ ಮಧ್ಯ ಮಾರಾಟ ನಿಷೇಧಿಸಲಾಗಿದೆ. ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಆದೇಶ ಹೊರಡಿಸಿದ್ದಾರೆ.ಡಿ13 ಸಂಜೆ 6 ಗಂಟೆಯಿಂದ ಡಿ.15 ಮಧ್ಯರಾತ್ರಿ 12 ರ ವರೆಗೆ ಮಧ್ಯದ ಅಂಗಡಿಗಳಲ್ಲಿ ಮಧ್ಯ ಮಾರಾಟ ನಿಷೇಧಿಸಲಾಗಿದೆ.ಮೂರು ದಿನಗಳ ಕಾಲ ಹನುಮ ಜಯಂತಿವಹಿನ್ನಲೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು,ಹೋಮ ಹವನಗಳು,ವಿಶೇಷ ಪೂಜೆಗಳು ಹಾಗೂ ಅದ್ದೂರಿ
Read More

ಅಂಗಡಿ ಮುಂದೆ ಗಲಾಟೆ ಮಾಡಬೇಡಿ ಅಂದಿದ್ದಕ್ಕೆ ಚಾಕುವಿನಿಂದ ಇರಿತ…ಇಬ್ಬರ ವಿರುದ್ದ FIR ದಾಖಲು…

ನಂಜನಗೂಡು,ಡಿ12,Tv10 ಕನ್ನಡ ಅಂಗಡಿ ಮುಂದೆ ಗಲಾಟೆ ಮಾಡಬೇಡಿ ಅಂದಿದ್ದಕ್ಕೆ ಮಾಲೀಕನ ತಲೆಗೆ ಚಾಕುವಿನಿಂದ ಇರಿದ ಘಟನೆ ನಂಜನಗೂಡಿನ ವಾಸುಕಿ ಪೆಟ್ರೋಲ್ ಬಂಕ್ ಬಳಿ ನಡೆದಿದೆ.ಇರಿತಕ್ಕೆ ಒಳಗಾದ ಗಿರೀಶ್ ರನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.ಶಂಕರಪುರ ಗ್ರಾಮದ ಯೋಗಿ ಹಾಗೂ ಹರ್ಷಿತ್ ಕಿರಣ್ ಮತ್ತು ಇತರರ ಮೇಲೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟೀ ಅಂಗಡಿ ಮುಂದೆ ಬಂದ ಯೋಗಿ ಹಾಗೂ ಇತರರು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡುತ್ತಿದ್ದರು.ಅಂಗಡಿ ಮುಂದೆ
Read More