ರಸ್ತೆ ಅಪಘಾತ…ಸ್ಥಳದಲ್ಲೇ ಮೂವರ ದುರ್ಮರಣ…
ಮಂಡ್ಯ,ಜೂ20,Tv10 ಕನ್ನಡಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಗೆಜ್ಜಲಗೆರೆ ಕಾಲೋನಿ ಬಳಿ ಭೀಕರ ಅಪಘಾತ ನಡೆದಿದೆ.ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ.ಮುಂದೆ ಚಲಿಸುತ್ತಿದ್ದ ಟಾಟಾ ನೆಕ್ಸಾನ್ ಕಾರಿಗೆ ಹಿಂದಿನಿಂದ ಬಂದ ಮಾರುತಿ ಡಿಸೈರ್ ಕಾರು ಡಿಕ್ಕಿಹೊಡೆದಿದೆ ಮಾರುತಿ ಡಿಸೈರ್ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಟಾಟಾ ನೆಕ್ಸಾನ್ ಕಾರಿನಲ್ಲಿದ್ದವರು ಗಾಯಗೊಂಡಿದ್ದಾರೆ.ಗಾಯಾಳುಗಳನ್ನ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಮೃತರಲ್ಲಿ ಓರ್ವನ ಗುರುತು ಪತ್ತೆಯಾಗಿದ್ದುಧೀರಜ್ ಕುಮಾರ್ ಎಂದು ಹೇಳಲಾಗಿದೆ.ಮದ್ದೂರು ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ…
Read More