TV10 Kannada Exclusive

ಬಾರ್ ಕ್ಯಾಷಿಯರ್ ಗೆ ಆವಾಜ್…ಬಿಯರ್ ಬಾಟಲ್ ಕೇಸ್ ಹೊತ್ತೊಯ್ದ ಪುಂಡರು…ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ…7 ಮಂದಿ ವಿರುದ್ದ FIR ದಾಖಲು…

ನಂಜನಗೂಡು,ಮಾ7,Tv10 ಕನ್ನಡ ಮಧ್ಯರಾತ್ರಿ ವೇಳೆ ಕಿಡಿಗೇಡಿ ಯುವಕರ ಗುಂಪೊಂದು ಮುಚ್ಚಿದ್ದ ಬಾರ್ ಬಲವಂತವಾಗಿ ಓಪನ್ ಮಾಡಿಸಿ ಕ್ಯಾಷಿಯರ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿ ಬಿಯರ್ ಬಾಟೆಲ್ ಕೇಸ್ ಹೊತ್ತೊಯ್ದ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಈ ಸಂಭಂಧ ಕ್ಯಾಷಿಯರ್ ವೆಂಕಟೇಶ್ ರವರು ಕಿಶೋರ್,ಚಂದನ್ ಸೇರಿದಂತೆ 7 ಮಂದಿ ವಿರುದ್ದ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹುಲ್ಲಹಳ್ಳಿಯಲ್ಲಿರುವ ನ್ಯೂ ಕಾರವಾನ್ ಬಾರ್
Read More

ಕಾಂಪೌಂಡ್ ನಿರ್ಮಾಣ ವಿಚಾರದಲ್ಲಿ ಕಿರಿಕ್…ವ್ಯಕ್ತಿಗೆ ಮಾರಣಾಂತಿಕ ಹಲ್ಲೆ…ಇನ್ಸ್ಪೆಕ್ಟರ್ ಸಹೋದರ ಸೇರಿದಂತೆ ಮೂವರ ವಿರುದ್ದ FIR ದಾಖಲು…

ಹುಣಸೂರು,ಮಾ7,Tv10 ಕನ್ನಡ ಕಾಂಪೌಂಡ್ ನಿರ್ಮಾಣ ವಿಚಾರದಲ್ಲಿ ಕ್ಯಾತೆ ತೆಗೆದ ಇನ್ಸ್ಪೆಕ್ಟರ್ ಸಹೋದರ ವ್ಯಕ್ತಿ ತಲೆಗೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ ಘಟನೆ ಹುಣಸೂರು ತಾಲೂಕು ಬಿಳಿಕೆರೆಯ ಕುಪ್ಪೆ ಗ್ರಾಮದಲ್ಲಿ ನಡೆದಿದೆ.ಕುಪ್ಪೆ ಗ್ರಾಮದ ಚಂದ್ರೇಗೌಡ ಎಂಬುವರು ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಬೆಂಗಳೂರುನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇನ್ಸ್ಪೆಕ್ಟರ್ ಮಂಜು ಎಂಬುವರ ಸಹೋದರ ರಾಜು,ಇವರ ಪತ್ನಿ ನೇತ್ರಾವತಿ ಹಾಗೂ ಭಾವ ಭಾಸ್ಕರ್ ಎಂಬುವರ ವಿರುದ್ದ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More

ಕನ್ನಡ ಕಲಾವಿದರಿಗೆಗೌರವ ಕೊಡಿ…ಡಿಕಶಿ ವಿರುದ್ದ ರೂಪಾ ಅಯ್ಯರ್ ವಾಗ್ಧಾಳಿ…ಕನ್ನಡ ಚಿತ್ರರಂಗದ ಕ್ಷಮೆ ಕೋರಲು ಒತ್ತಾಯ..

ಮೈಸೂರು,ಮಾ6,Tv10 ಕನ್ನಡ ಕನ್ನಡ ಚಿತ್ರರಂಗ ಹಾಗೂ ಕನ್ನಡ ಕಲಾವಿದರ ಬಗ್ಗೆ ನಟ್ಟು- ಬೋಲ್ಟು ಪದ ಉಪಯೋಗಿಸಿ ಅವಮಾನಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಖಂಡನೀಯವಾದದ್ದು ಎಂದು ಭಾರತೀಯ ಜನತಾ ಪಕ್ಷದ ಕಲೆ ಮತ್ತು ಸಂಸ್ಕೃತಿಕ ಪ್ರಕೋಷ್ಠ ರಾಜ್ಯ ಸಂಚಾಲಕಿ ಡಾ.ರೂಪ ಅಯ್ಯರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇತ್ತೀಚೆಗೆ ನಡೆದ ಸಿನಿಮೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ನಟ- ನಟಿಯರ ಕುರಿತು ಮಾಡಿದ ಭಾಷಣದ ವೇಳೆ ಕಲಾವಿದರ ನಟ್ಟು- ಬೋಲ್ಟು ಸರಿ ಮಾಡ್ತೇನೆ ಎಂಬ ಅಸಡ್ಡೆ ಹೇಳಿಕೆ
Read More

ಪ್ರಾಣಿ ಪಕ್ಷಿಗಳ ಸಂಕುಲ ಉಳಿಸಿ…ನಟ ಪ್ರಜ್ವಲ್ ದೇವರಾಜ್ ಕರೆ…

ಮೈಸೂರು,ಮಾ6,Tv10 ಕನ್ನಡ ಮೂಕ ಸ್ಪಂದನ ಅಭಿಯಾನದ ಪೋಸ್ಟರ್ ಬಿಡುಗಡೆ ಪ್ರಾಣಿ ಪಕ್ಷಿ ಸಂಕುಲ ಉಳಿಸಲು ಕರೆ ನಟ ಪ್ರಜ್ವಲ್ ದೇವರಾಜ್ ಮನುಷ್ಯನ ಒಡನಾಡಿಯಾಗಿರುವ ಪ್ರಾಣಿ ಪಕ್ಷಿಗಳ ಜೀವ ಸಂಕುಲವನ್ನುಳಿಸಲು ಸಮಾಜದಲ್ಲಿರುವ ಸಹೃದಯಿ ನಾಗರಿಕರು ಮುಂದಾಗಬೇಕೆಂದು ಚಲನಚಿತ್ರ ನಟ ಪ್ರಜ್ವಲ್ ದೇವರಾಜ್ ಜನಸಾಮನ್ಯರಿಗೆ ಕರೆ ಕೊಟ್ಟಿದ್ದಾರೆ.ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ2 ತಿಂಗಳ ಕಾಲ ಮೂಕ ಸ್ಪಂದನೆ ಎಂಬ ‘ನೀರುಣಿಸಿ-ಜೀವವನ್ನುಳಿಸಿ ಎಂಬ ಅಭಿಯಾನ ಆರಂಭಿಸಿದ್ದು ಮೈಸೂರು ನಗರದ ಚಾಮುಂಡಿಪುರಂನ ಟ್ರಸ್ಟ್ ಕಚೇರಿಯಲ್ಲಿ ಸಾಮಗ್ರಿಗಳನ್ನು
Read More

ಮೈಸೂರು:ಬೀಗ ಮುರಿದಿಲ್ಲ…ಬಾಗಿಲು ಹೊಡೆದಿಲ್ಲ…ಮನೆಯಲ್ಲಿದ್ದ ನಗದು ಚಿನ್ನಾಭರಣ ಮಾಯ…

ಮೈಸೂರು,ಮಾ6,Tv10 ಕನ್ನಡ ಮನೆ ಬೀಗ ಮುರಿದಿಲ್ಲ,ಬಾಗಿಲು ಹೊಡೆದಿಲ್ಲ ಆದ್ರೂ ಮನೆಯಲ್ಲಿದ್ದ 3.5 ಲಕ್ಷ ನಗದು ಹಾಗೂ 25 ಗ್ರಾಂ ಚಿನ್ನಾಭರಣ ಕಳುವಾಗಿರುವ ಘಟನೆ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಂದಿನಿ ಲೇ ಔಟ್ ನಲ್ಲಿ ನಡೆದಿದೆ.ಸಿದ್ದರಾಮನಹುಂಡಿಯ ಸರ್ಕಾರಿ ಕಾಲೇಜ್ ರಿಟೈರ್ಡ್ ವೈಸ್ ಪ್ರಿನ್ಸಿಪಲ್ ಮಾಯಾಂಗ ಎಂಬುವರ ಮನೆಯಲ್ಲಿ ನಿಗೂಢವಾಗಿ ಕಳ್ಳತನವಾಗಿದೆ.ಕಾರ್ಯಕ್ರಮವೊಂದಕ್ಕೆ ಕುಟುಂಬ ಸಮೇತ ತೆರಳಿದ್ದ ಮಾಯಾಂಗ ರವರು ಮನೆಗೆ ಹಿಂದಿರುಗಿದಾಗ ವಾರ್ಡ್ ರೋಬ್ ನಲ್ಲಿದ್ದ ಹಣ 25 ಗ್ರಾಂ ಚಿನ್ನಾಭರಣ
Read More

ಅಂಬೇಡ್ಕರ್ ಪಾರ್ಕ್ ವಿಚಾರಕ್ಕೆ ಬಂದ್ರೆ ಕೊಲೆ ಮಾಡ್ತೀವಿ…ಪ್ರೊಫೆಸರ್ ಗೆ ಧಂಕಿ ಹಾಕಿ ಹಲ್ಲೆ ನಡೆಸಿದ ಗುಂಪು…4 ಮಂದಿ ವಿರುದ್ದ FIR…

ಮೈಸೂರು,ಮಾ6,Tv10 ಕನ್ನಡ ಅಶೋಕಾಪುರಂ ನ ಅಂಬೇಡ್ಕರ್ ಪಾರ್ಕ್ ಸ್ವಚ್ಛತೆ ಕಾಪಾಡುವಂತೆ ಪಾಲಿಕೆ ಸಿಬ್ಬಂದಿ ಗಮನಕ್ಕೆ ತಂದ ಪ್ರೊಫೆಸರ್ ಮನೆಗೆ ನುಗ್ಗಿದ ಯುವಕರ ಗುಂಪು ಹಿಗ್ಗಾಮುಗ್ಗ ಥಳಿಸಿ ಪಾರ್ಕ್ ತಂಟೆಗೆ ಬಂದ್ರೆ ಕೊಲೆ ಮಾಡ್ತೀವಿ ಎಂದು ಬೆದರಿಕೆ ಹಾಕಿದ ಘಟನೆ ಮೈಸೂರಿನ ಅಶೋಕಾಪುರಂ ನಲ್ಲಿ ನಡೆದಿದೆ.ಹಲ್ಲೆಗೊಳಗಾದ ಪ್ರೊಫೆಸರ್ ಪಾರ್ಕ್ ಮೇಂಟೈನನ್ಸ್ ಮಾಡುವ ವ್ಯಕ್ತಿ ಸೇರಿದಂತೆ ನಾಲ್ವರ ವಿರುದ್ದ ಅಶೋಕಾಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಧಾರವಾಡದ ಕರ್ನಾಟಕ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿರುವ
Read More

ಮೆದುಳಿನ ರಕ್ತಸ್ರಾವ… ಆಶ್ರಮ ಶಾಲಾ ವಿದ್ಯಾರ್ಥಿ ಸಾವು…

ಹುಣಸೂರು,ಮಾ6,Tv10 ಕನ್ನಡ ಮೆದುಳಿನ ರಕ್ತಸ್ರಾವದಿಂದ ಹುಣಸೂರಿನ ಗಿರಿಜನ ಆಶ್ರಮ ಶಾಲೆಯ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ನಾಗಾಪುರ ಆಶ್ರಮ ಶಾಲೆ8 ನೇ ತರಗತಿ ವಿದ್ಯಾರ್ಥಿ ಸೂರ್ಯ (14) ಸಾವನ್ನಪ್ಪಿದ್ದಾನೆ.ಕಲ್ಲೂರಪ್ಪನ ಬೆಟ್ಟದ ಬಳಿಯ ಶಂಕರಪುರ ಹಾಡಿಯ ಜಗನ್ನಾಥ್ ಹಾಗೂ ಲಕ್ಷ್ಮಿ ದಂಪತಿ ಪುತ್ರ ಸೂರ್ಯ.ಶಾಲಾ ಆವರಣದಲ್ಲಿ ಮಾ. 4 ರಂದು ವೇಳೆ ತಲೆಸುತ್ತು ಬಂದು ಬಿದಿದ್ದ ಸೂರ್ಯನಿಗೆನಂತರ ವಾಂತಿಯಾಗಿತ್ತು. ಸ್ಥಳದಲ್ಲಿದ್ದ ಶಿಕ್ಷಕರು ಪ್ರಾಥಮಿಕ ಚಿಕಿತ್ಸೆ ನೀಡಿದ್ದರು.ಮತ್ತೆ ಕೆಲ ಹೊತ್ತಿನ ಬಳಿಕ ವಾಂತಿ ಮಾಡಿದ್ದ ಸೂರ್ಯನನ್ನುತಕ್ಷಣವೇ
Read More

ಲಾರಿ ಬೈಕ್ ನಡುವೆ ಢಿಕ್ಕಿ…ಬೈಕ್ ಸವಾರ ಸಾವು…

ಹುಣಸೂರು,ಮಾ6,Tv10 ಕನ್ನಡ ಲಾರಿ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಣಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿಬೈಕ್‌ಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ.ಹುಣಸೂರು ಹೆದ್ದಾರಿಯ ಬೈಪಾಸ್ ನಲ್ಲಿ ಘಟನೆ ನಡೆದಿದೆ.ಕೊತ್ತೆಗಾಲದ ಗ್ರಾಮದ ಮಲ್ಲೇಶ್ (49) ಸಾವನ್ನಪ್ಪಿದ್ದಾರೆ.ಪರಿವರ್ತನ ಸಂಸ್ಥೆಯ ಸ್ವ ಸಹಾಯ ಸಂಘಗಳ ಲೆಕ್ಕ ಪರಿಶೋಧಕರಾಗಿದ್ದ ಮಲ್ಲೇಶ್ಕುಶಾಲನಗರದಿಂದ ಮೈಸೂರಿಗೆ ತೆರಳುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.ಅಪಘಾತದ ನಂತರ ಲಾರಿ ಚಾಲಕ ಪರಾರಿಯಾಗಿದ್ದಾನೆ.ಹುಣಸೂರು ನಗರ ಠಾಣೆಯಲ್ಲಿ
Read More

ಪುರೋಹಿತ ಕಾರ್ಮಿಕ ಫೆಡರೇಷನ್‌ ಅಸ್ತಿತ್ವಕ್ಕೆ… ಕಚೇರಿ ಉದ್ಘಾಟನೆ…

ಮೈಸೂರು,ಮಾ5,Tv10 ಕನ್ನಡ ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕ ಫೆಡರೇಷನ್‌ನ ಮೈಸೂರು ಜಿಲ್ಲಾ ಮತ್ತು ತಾಲೂಕು ಘಟಕದ ಕಚೇರಿ ಅಸ್ತಿತ್ವಕ್ಕೆ ಬಂದಿದೆ.ಮೈಸೂರಿನ ವಿದ್ಯಾರಣ್ಯಪುರಂನ ಅಂದಾನಿ ವೃತ್ತದ ಸಮೀಪದಲ್ಲಿ ಆರಂಭಿ ಸಿರುವ ಕಚೇರಿಯನ್ನ ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಮ.ವಿ.ರಾಮ್ ಪ್ರಸಾದ್ ಉದ್ಘಾಟಿಸಿದ್ದಾರೆ.ನಂತರ ಮಾತನಾಡಿ ಪುರೋಹಿತರು ಎಂದರೆ ಹಿಂದೆ ಪುರದಹಿತ ಕಾಯು ವವರು ಎನ್ನುತ್ತಿದ್ದರು. ಈ ನಿಟ್ಟಿನಲ್ಲಿ ಒಕ್ಕೂಟ ಹೆಜ್ಜೆ ಇಡಬೇಕು. ಪುರೋ ಹಿತರು ಜನರೊಂದಿಗೆ ನಿಕಟ ಸಂಪರ್ಕ ಹೊಂದಬೇಕು
Read More

ಹುಣಸೂರು:ವೃದ್ದ ದಂಪತಿ ಭೀಕರ ಕೊಲೆ…ಹಾಡುಹಗಲೇ ತೋಟದ ಮನೆಯಲ್ಲಿ ಘಟನೆ…

ಹುಣಸೂರು,ಮಾ3Tv10 ಕನ್ನಡ ಹಾಡುಹಗಲೇ ತೋಟದ ಮನೆಯಲ್ಲಿ ವೃದ್ದ ದಂಪತಿಯನ್ನ ಭೀಕರವಾಗಿ ಕೊಲೆ ಮಾಡಿರುವ ಘಟನೆಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ನಾಡಪ್ಪನ ಹಳ್ಳಿಯಲ್ಲಿ ನಡೆದಿದೆ. ಖಾರ ಆಡಿಸುವ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ.ಬಿಳಿಕೆರೆ ಹೋಬಳಿಯ ನಾಡಪ್ಪನಹಳ್ಳಿ ಗ್ರಾಮದ ರಂಗಸ್ವಾಮಿಗೌಡ(65) ಇವರ ಪತ್ನಿ ಶಾಂತಮ್ಮ (52)ಮೃತಪಟ್ಟವರು.ಇವರಿಗೆ ಗ್ರಾಮ‌ ಪಂಚಾಯ್ತಿ ಸದಸ್ಯ ದೇವರಾಜ್ ಸೇರಿದಂತೆ ಇಬ್ಬರು ಗಂಡು ಓರ್ವ ಮಗಳಿದ್ದಾರೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ.ಇಂದು ಸಂಜೆ ಶುಂಠಿ ತುಂಬಿಕೊಳ್ಳಲು ಕುಕ್ಕೆ ತರಲು ಕಾರ್ಮಿಕ
Read More