TV10 Kannada Exclusive

ಮುಡಾ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಸಸ್ಪೆಂಡ್…ತಾಂತ್ರಿಕ ಸಮಿತಿ ನೀಡಿದ ವರದಿ ಆಧಾರದ ಮೇಲೆ ಕ್ರಮ…ಸರ್ಕಾರದ ಅಧೀನ ಕಾರ್ಯದರ್ಶಿ ಉಮಾದೇವಿ

ಮೈಸೂರು,ಸೆ2,Tv10 ಕನ್ನಡ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆದ ಅಕ್ರಮಗಳಿಗೆ ಓರ್ವ ಅಧಿಕಾರಿ ತಲೆದಂಡವಾಗಿದೆ.ತನಿಖೆಗಾಗಿ ರಚಿಸಲಾದ ತಾಂತ್ರಿಕ ಸಮಿತಿ ನೀಡಿದ ವರದಿ ಆಧಾರದ ಮೇಲೆ ಹಿಂದಿನ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ರನ್ನ ಇಲಾಖಾ ವಿಚಾರಣೆಗೆ ಕಾಯ್ದಿರಿಸಿ ಅಮಾನತು ಪಡಿಸಲಾಗಿದೆ. ತಾಂತ್ರಿಕ ಸಮಿತಿ ಕಡತಗಳನ್ನ,ಸುತ್ತೋಲೆಗಳನ್ನ,ಮಾರ್ಗಸೂಚಿಗಳನ್ನ ಪರಿಶೀಲಿಸಿ ನಿಯಮಬಾಹಿರವಾಗಿ ಕೈಗೊಂಡ ಕ್ರಮಗಳ ಬಗ್ಗೆ ವಿಸ್ತೃತ ವರದಿಯನ್ನ ನೀಡಿರುವ ಆಧಾರದ ಮೇಲೆ ಸಸ್ಪೆಂಡ್ ಮಾಡಲಾಗಿದೆ. ಜಿ.ಟಿ.ದಿನೇಶ್ ಕುಮಾರ್ ರವರ ಆಡಳಿತಾವಧಿಯಲ್ಲಿ ನಡೆದ ಕೆಲವು ಸಭೆಗಳಲ್ಲಿ ಮಂಡಿಸಲಾದ
Read More

ಅಪರಾಧ ನಿಯಂತ್ರಣಕ್ಕೆ ಮೈಸೂರು ಖಾಕಿಪಡೆ ಸಮರ…ಮತ್ತಷ್ಟು ಬಿಗಿಯಾದ ನೈಟ್ ಬೀಟ್…ಹಿರಿಯ ಪೊಲೀಸ್ ಅಧಿಕಾರಿಗಳೂ ಭಾಗಿ…

ಮೈಸೂರು,ಆ2,Tv10 ಕನ್ನಡಮೈಸೂರಿನಲ್ಲಿ ಅಪರಾಧ ಪ್ರಕರಣಗಳ ನಿಯಂತ್ರಣಕ್ಕಾಗಿ ಪೊಲೀಸರು ವಿನೂತನ ಕ್ರಮ ಕೈಗೊಂಡಿದ್ದಾರೆ.ನೈಟ್ ಬೀಟ್ ಕಾರ್ಯವನ್ನ ಬಿಗಿಗೊಳಿಸಿದ್ದಾರೆ.ಪ್ರಮುಖ ರಸ್ತೆ ಪಾರ್ಕ್‌ಗಳಲ್ಲಿ ರಾತ್ರಿ ಗಸ್ತು ತಿರುಗಿ ಕಿಡಿಗೇಡಿಗಳಿಗೆ ಎಚ್ಚರಿಕೆ ಗಂಟೆ ನೀಡಿದ್ದಾರೆ.ಮೈಸೂರಿನ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಸ್ತು ಹೆಚ್ಚಿಸಲಾಗಿದೆ.ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಮಾರ್ಗದರ್ಶನದಲ್ಲಿ ವಿನೂತನ ಕಾರ್ಯಾಚರಣೆ ಆರಂಭವಾಗಿದೆ.ಡಿಸಿಪಿಗಳಾದ ಮುತ್ತುರಾಜ್ ಹಾಗೂ ಜಾನ್ಹವಿ ನೇತೃತ್ವದಲ್ಲಿ ಕಾರ್ಯಕ್ರಮಗಳಿಗೆ ಚುರುಕು ನೀಡಲಾಗಿದೆ.ಎಸಿಪಿಗಳು ಇನ್ಸಪೆಕ್ಟರ್‌ಗಳು ಸಬ್ ಇನ್ಸಪೆಕ್ಟರ್‌ ಸೇರಿ ಪೊಲೀಸ್ ಸಿಬ್ಬಂದಿಗಳು ಭಾಗಿಯಾಗಿದ್ದಾರೆ.ವಾಕಿಂಗ್ ಹಾಗೂ ಬೈಕ್
Read More

ಗಜಪಡೆಗೆ ಭಾರ ಹೊರುವ ತಾಲೀಮು…600 ಕೆಜಿ ಮರಳು ಮೂಟೆ ಹೊತ್ತು ಸಾಗಿದ ಅಭಿಮನ್ಯು…

ಮೈಸೂರು,ಸೆ1,Tv10 ಕನ್ನಡದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ.ಕಾಡಿನಿಂದ ನಾಡಿಗೆ ಬಂದ ಗಜಪಡೆ ದಸರಾ ಯಶಸ್ವಿಗೆ ಸಜ್ಜಾಗುತ್ತಿದೆ.ಈಗಾಗಲೇ ತಾಲೀಮು ಆರಂಭಿಸಿರುವ ಅಭಿಮನ್ಯು ಅಂಡ್ ಟೀಂ ಜಂಬೂಸವಾರಿಗೆ ಫಿಟ್ ಎಂದು ಹೇಳುತ್ತಿದೆ.ಇಂದು ಗಜಪಡೆಗೆ ಭಾರಹೊರೆಸಿ ತಾಲೀಮು ನಡೆಸಲಾಗಿದೆ.ಜಂಬೂಸವಾರಿ ಮೆರವಣಿಗೆ ದಿನ ಕ್ಯಾಪ್ಟನ್ ಅಭಿಮನ್ಯು 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡ ದೇವತೆ ಚಾಮುಂಡೇಶ್ವರಿಯನ್ನು ಹೊತ್ತು ಐದು ಕಿಲೋಮೀಟರ್ ದೂರ ಸಾಗಲಿದ್ದಾನೆ. ಈ ಹಿನ್ನೆಲೆಯಲ್ಲಿ ಅಭಿಮನ್ಯುಗೆ ಭಾರ ಹೊರೆಸಿ ತಾಲೀಮು ನೀಡಲಾಗಿದೆ.ಮೊದಲ ದಿನವಾದ ಇಂದು
Read More

ಬೀದಿ ಪಾಲಾಗಿದ್ದ ಸಾಧುಸಂತನ ನೆರವಿಗೆ ಧಾವಿಸಿದ SDPI ಮುಖಂಡರು…ಆಶ್ರಯ ಕಲ್ಪಿಸಿ ಮಾನವೀಯತೆ…

ಮೈಸೂರು,ಆ30,Tv10 ಕನ್ನಡ ಬಾಡಿಗೆ ನೀಡದ ಹಿನ್ನಲೆ ಮನೆಯಿಂದ ಹೊರದೂಡಿ ಬೀದಿ ಪಾಲಾಗಿದ್ದ ಸಾಧು ಸಂತನ ನೆರವಿಗೆ SDPI ಮುಖಂಡರು ಧಾವಿಸಿ ಆಶ್ರಯ ನೀಡಿ ಮಾನವೀಯತೆ ಪ್ರದರ್ಶಿಸಿದ ಪ್ರಕರಣ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.SDPI ಸಂಘಟನೆಯ ಮುಖಂಡರಾದ ಅಮೀನ್ ಸೇಠ್ ಹಾಗೂ ಜಭಿ ಎಂಬುವರು ಸಾಧುಸಂತನ ಪರಿಸ್ಥಿತಿಗೆ ಮರುಗಿ ನೆರವಿಗೆ ಧಾವಿಸಿದವರು.ಬೀದಿಪಾಲಾಗಿದ್ದ ವೃದ್ದ ಸಾಧುಸಂತನಿಗೆ ಮತ್ತೆ ಮನೆ ಮಾಲೀಕರ ಮನ ಒಲಿಸಿ ಆಶ್ರಯ ಕಲ್ಪಿಸುವ ಮೂಲಕ ಮಾನವೀಯತೆ ಪ್ರದರ್ಶಿಸಿದ್ದಾರೆ. ಮೈಸೂರಿನ ನೆಹರು ನಗರದಲ್ಲಿ
Read More

ಶಾಲಾ‌ವಾಹನ,ಕಾರು,ಕ್ಯಾಂಟರ್ ನಡುವೆ ಡಿಕ್ಕಿ…ತಪ್ಪಿದ ದುರಂತ…

ಮಂಡ್ಯ,ಆ30,Tv10 ಕನ್ನಡಶಾಲಾವಾಹನ,ಕಾರು ಮತ್ತು ಕ್ಯಾಂಟರ್ ನಡುವೆ ನಡೆದ ಅಪಘಾತದಲ್ಲಿ ಕಾರು ಮತ್ತು ಶಾಲಾ ವಾಹನದಲ್ಲಿದ್ದವರು ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ದರಸಗುಪ್ಪೆ ಬಳಿ ನಡೆದಿದೆ. ಘಟನೆಯಲ್ಲಿ ಶಾಲಾ ವಾಹನದಲ್ಲಿದ್ದ ಶಿಕ್ಷಕಿಯರಿಗೆ ಹಾಗೂ ಕಾರಿನಲ್ಲಿದ್ದ ಓರ್ವ ಪ್ರಯಾಣಿಕ ಗಾಯಗೊಂಡಿದ್ದಾರೆ.ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರೂ ಸ್ವಲ್ಪದರಲ್ಲೇ ಬಾರಿ ದುರಂತ ತಪ್ಪಿದಂತಾಗಿದೆ.ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಒಡೆತನಕ್ಕೆ ಸೇರಿದ ಎಸ್‌ಟಿಜಿ ಶಾಲಾ ವಾಹನ ಎಂದು ಹೇಳಲಾಗಿದೆ.ರಸ್ತೆ ಕಿರಿದಾಗಿರುವುದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.ಶ್ರೀರಂಗಪಟ್ಟಣ ಗ್ರಾಮಾಂತರ
Read More

ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಪ್ರಕರಣ…ಮೈಸೂರು ಜೈಲಿಗೆ ಹಿರಿಯ ಅಧಿಕಾರಿಗಳು ಧಿಢೀರ್ ಭೇಟಿ…

ಮೈಸೂರು,ಆ27,Tv10 ಕನ್ನಡಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಪ್ರಕರಣ ಹಿನ್ನಲೆಮೈಸೂರು ಜೈಲಿನಲ್ಲಿ ದಿಢೀರ್ ಕಾರ್ಯಾಚರಣೆ ನಡೆದಿದೆ.ಮೈಸೂರು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.ಡಿಸಿಪಿಗಳಾದ ಮುತ್ತುರಾಜ್,ಜಾಹ್ನವಿ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ.ಬೆಳಿಗ್ಗೆ 5 ಗಂಟೆ ವೇಳೆಗೆ ಕಾರ್ಯಾಚರಣೆ ನಡೆದಿದೆ.ಐದಕ್ಕೂ ಹೆಚ್ಚು ಇನ್ಸಪೆಕ್ಟರ್‌ಗಳಿಂದ ಕಾರ್ಯಾಚರಣೆ ನಡೆದಿದೆ.ಈ ವೇಳೆ ಯಾವುದೇ ವಸ್ತುಗಳು ಲಭ್ಯವಾಗದೆ ಬರಿಕೈಲಿ ಅಧಿಕಾರಿಗಳು ಹಿಂದಿರುಗಿದ್ದಾರೆ…
Read More

ಕೊರಗಜ್ಜ ದೇವಸ್ಥಾನ ತೆರುವು…ರಾಜಾಕಾಲುವೆ ಮೇಲೆ ನಿರ್ಮಾಣವಾಗಿದ್ದ ದೇವಸ್ಥಾನ…ಜಿಲ್ಲಾಡಳಿತ ಕಾರ್ಯಾಚರಣೆ…

ಮೈಸೂರು,ಆ26,Tv10 ಕನ್ನಡ ಬೆಳ್ಳಂಬೆಳಗ್ಗೆ ಮೈಸೂರು ತಾಲೂಕು ಕೇರ್ಗಳ್ಳಿ ಗ್ರಾಮದಲ್ಲಿ ಜೆಸಿಬಿಘರ್ಜಿಸಿದೆ.ರಾಜಾಕಾಲುವೆ ಮೇಲೆ ನಿರ್ಮಿಸಲಾಗಿದ್ದ ಪವಾಡ ಪುರುಷ ಕೊರಗಜ್ಜ ದೇವಾಲಯವನ್ನ ಜಿಲ್ಲಾಡಳಿತ ನೆಲಸಮ ಮಾಡಿದೆ.ದಾಖಲೆಗಳನ್ನ ಪರಿಶೀಲಿಸಿದ ಉಪವಿಭಾಗಾಧಿಕಾರಿ ಕೆ. R ರಕ್ಷಿತ್ ರವರ ಆದೇಶದಂತೆ ತಹಸೀಲ್ದಾರ್ ಕೆ.ಎಂ.ಮಹೇಶ್ ಕುಮಾರ್ ಕಾರ್ಯಾಚರಣೆ ನಡೆಸಿ ದೇವಾಲಯವನ್ನ ಡೆಮಾಲಿಷ್ ಮಾಡಿದ್ದಾರೆ.ಕೇರ್ಗಳ್ಳಿ ಗ್ರಾಮದ ಸ ನಂ. 60 ರಲ್ಲಿ ಹಾದುಹೋಗಿದ್ದ ರಾಜ ಕಾಲುವೆ ಒತ್ತುವರಿ ಆಗಿದೆ ಎಂಬ ದೂರು ತಾಲೂಕು ಆಡಳಿತಕ್ಕೆ ಬಂದಿತ್ತು.ಅಕ್ರಮವಾಗಿ ದೇವಾಲಯ ನಿರ್ಮಿಸಲಾಗಿದೆ ಎಂಬ
Read More

ಗಜಪಡೆಗೆ ತೂಕ ಪರಿಶೀಲನೆ…ಕ್ಯಾಪ್ಟನ್ ಅಭಿಮನ್ಯು ತೂಕದಲ್ಲೂ ಲೀಡರ್…

ಮೈಸೂರು,ಆ24,Tv10 ಕನ್ನಡಮೈಸೂರು ನಾಡ ಹಬ್ಬ ದಸರಾ ಮಹೋತ್ಸವ 2024 ಹಿನ್ನಲೆ ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆಗೆ ತೂಕ ಪರಿಶೀಲನೆ ಕಾರ್ಯ ನೆರವೇರಿತು. ಆಗಸ್ಟ್ 21ರಂದುಕಾಡಿನಿಂದ ನಾಡಿಗೆ ಆಗಮಿಸಿರುವಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳಿಗೆ ತೂಕ ಹಾಕಲಾಯಿತು.ನಗರದ ಧನ್ವಂತ್ರಿ ರಸ್ತೆಯಲ್ಲಿರೋ ಶ್ರೀನಿವಾಸ ವೇ ಬ್ರಿಡ್ಜ್‌ನಲ್ಲಿ ಆನೆಗಳ ತೂಕ ಪರಿಶೀಲನೆ ನಡೆಯಿತು.ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಆನೆಗಳ ತೂಕ ಹಾಕುವುದು ಒಂದು ಪ್ರಕ್ರಿಯೆ.ನಂತರ ಆನೆಗಳಿಗೆ ಪ್ರತಿನಿತ್ಯ ಪೌಷ್ಟಿಕ ಆಹಾರ ಪದಾರ್ಥ ನೀಡಲಾಗುತ್ತದೆ.ಜಂಬೂ ಸವಾರಿ ಮೆರವಣಿಗೆಗಾಗಿ
Read More

ಸಂಭ್ರಮದ ಶ್ರೀನಿವಾಸ ಕಲ್ಯಾಣೋತ್ಸವ…ಭಕ್ತರಿಂದ ಸ್ವರ್ಣ ಲೇಪಿತ ಕವಚ ಸಮರ್ಪಣೆ…

ನಂಜನಗೂಡು,ಆ23,Tv10 ಕನ್ನಡ ದಕ್ಷಿಣ ಕಾಶಿ ನಂಜನಗೂಡಿನ ಚಾಮುಂಡಿ ಟೌನ್‌ಶಿಪ್‌ನಲ್ಲಿರುವ ಶ್ರೀ ಶ್ರೀನಿವಾಸ ಪೆರುಮಾಳ್ ದೇವಸ್ಥಾನದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವ ಸಂಭ್ರಮದಿಂದ ನೆರವೇರಿತು.ನೂರಾರು ಭಕ್ತರ ಸಮ್ಮುಖದಲ್ಲಿ ಶ ಪ್ರೊ.ಡಾ.ಭಾಷ್ಯಂ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಕಲ್ಯಾಣೋತ್ಸವದಲ್ಲಿ ವಿವಿಧ ವಿಶೇಷ ಪೂಜಾ ಕೈಂಕರ್ಯಗಳು ನಡೆಯಿತು.ಇದೇ ವೇಳೆ ಟೌನ್‌ಶಿಪ್ ಹಾಗೂ ದುರ್ಗಾ ಏಜೆನ್ಸಿ ಮುಖ್ಯಸ್ಥರಾದ ತಿರುಮಲೈಸ್ವಾಮಿ ತಂಬು ರವರು ದೇವರಿಗೆ ಸ್ವರ್ಣಲೇಪಿತ ಕವಚವನ್ನು ಕೊಡುಗೆಯಾಗಿ ಸಮರ್ಪಿಸಿ, ಕುಟುಂಬ ಸಮೇತ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು.ಅಲ್ಲದೇ ನೂರಾರು ಭಕ್ತರು
Read More

ಅರಮನೆ ಅಂಗಳಕ್ಕೆ ಗಜಪಡೆ ಗ್ರ್ಯಾಂಡ್ ಎಂಟ್ರಿ…ಜಿಲ್ಲಾಡಳಿತದಿಂದ ಅದ್ದೂರಿ ಸ್ವಾಗತ…

ಮೈಸೂರು,ಆ23,Tv10 ಕನ್ನಡವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2024 ರಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಬಂದ ಗಜಪಡೆ ಇಂದು ಅರಮನೆ ಆವರಣ ಪ್ರವೇಶಿಸಿತು.ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿ ವತಿಯಿಂದ ಅಭಿಮನ್ಯು ಅಂಡ್ ಟೀಂ ಗೆ ಅದ್ದೂರಿ ಸ್ವಾಗತ ಕೋರಲಾಯಿತು.ಆನೆಗಳ ಆಗಮನದಿಂದ ದಸರೆಯ ವೈಭವ ಸಾಂಸ್ಕೃತಿಕ ನಗರಿಯಲ್ಲಿ ಕಳೆಗಟ್ಟಿದಂತಾಗಿದೆ.ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಗಜಪಡೆಗೆ ಬೆಳಿಗ್ಗೆ 10.10 ರಿಂದ 10.30 ರೊಳಗೆ ಸಲ್ಲುವ ಶುಭಗಳಿಗೆಯಲ್ಲಿಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು.ಮೈಸೂರಿನ ಅಶೋಕಪುರಂನ
Read More